/newsfirstlive-kannada/media/post_attachments/wp-content/uploads/2024/09/TEAM-INDIA-1.jpg)
ಇತ್ತೀಚೆಗೆ ನಡೆದ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. 2-0 ಅಂತರದಿಂದ ಸೀರೀಸ್​ ಗೆದ್ದಿದ್ದು, ಸದ್ಯದಲ್ಲೇ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಈ ಸೀರೀಸ್​ಗೆ ಇನ್ನೂ ಟೀಮ್​​ ಇಂಡಿಯಾ ಪ್ರಕಟ ಆಗಿಲ್ಲ. ಇದಕ್ಕೂ ಮುನ್ನವೇ ಟೀಮ್​ ಇಂಡಿಯಾದ ಯುವ ಬ್ಯಾಟರ್​​ ಸರ್ಫರಾಜ್​ ಖಾನ್​​ ಬಿಸಿಸಿಐ ಆಯ್ಕೆ ಸಮಿತಿ ಕದ ತಟ್ಟಿದ್ದಾರೆ.
ಬಾಂಗ್ಲಾ ವಿರುದ್ಧದ ಟೆಸ್ಟ್​ ಸೀರೀಸ್​ಗೆ ಸರ್ಫರಾಜ್​ ಖಾನ್​ ಅವರನ್ನು ಆಯ್ಕೆ ಮಾಡಲಾಗಿತ್ತಾದ್ರೂ ಕೆ.ಎಲ್​ ರಾಹುಲ್​​, ರಿಷಬ್​ ಪಂತ್​ ಇದ್ದ ಕಾರಣ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಟೆಸ್ಟ್​ ಸರಣಿ ಮಧ್ಯೆಯೇ ಸರ್ಫರಾಜ್​ ಖಾನ್​ ಅವರನ್ನು ಇರಾನಿ ಕಪ್​ ಆಡಲು ಕಳಿಸಿತ್ತು. ಈಗ ಇವರು ಇರಾನಿ ಕಪ್​ನಲ್ಲಿ ಮಿಂಚಿದ್ದಾರೆ. ದ್ವಿಶತಕ ಸಿಡಿಸುವ ಮೂಲಕ ನ್ಯೂಜಿಲೆಂಡ್​ ವಿರುದ್ಧ ಟೆಸ್ಟ್​​ ಸರಣಿಗೂ ಆಯ್ಕೆ ಮಾಡಿ ಅನ್ನೋ ಸಂದೇಶ ಸಾರಿದ್ದಾರೆ.
ಲಕ್ನೋದ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ಮುಂಬೈ ಮತ್ತು ರೆಸ್ಟ್​ ಆಫ್​ ಇಂಡಿಯಾ ಮಧ್ಯೆ ಇರಾನಿ ಕಪ್​​​ 2024ರ ಮಹತ್ವದ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್​ ಇಂಡಿಯಾದ ಯುವ ಬ್ಯಾಟರ್​​​ ಸರ್ಫರಾಜ್ ಖಾನ್ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಇರಾನಿ ಕಪ್ನಲ್ಲಿ ಮುಂಬೈ ಪರ ಬ್ಯಾಟ್​​ ಬೀಸಿದ ಸರ್ಫರಾಜ್ ಡಬಲ್ ಸೆಂಚುರಿ ಬಾರಿಸಿದ್ರು. ಮಹತ್ವದ ಪಂದ್ಯದ 2ನೇ ದಿನದಂದು ಮುಂಬೈ ಪರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿದ ಸರ್ಫರಾಜ್ ರೆಸ್ಟ್​ ಇಂಡಿಯಾ ಬೌಲರ್​ಗಳ ಬೆವರಿಳಿಸಿದ್ರು.
25 ಫೋರ್​​, 4 ಭರ್ಜರಿ ಸಿಕ್ಸರ್​​!
ರೆಸ್ಟ್ ಆಫ್ ಇಂಡಿಯಾದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಸರ್ಫರಾಜ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಬಲ ಪ್ರದರ್ಶಿಸಿದ್ರು. ತಾನು ಎದುರಿಸಿದ 272 ಎಸೆತಗಳಲ್ಲಿ ಬರೋಬ್ಬರಿ 25 ಫೋರ್​ ಮತ್ತು 4 ಸಿಕ್ಸರ್​​​ನಿಂದ ಅಜೇಯ 219 ರನ್ಗಳಿಸಿ ಆಟ ಮುಂದುರೆಸಿದ್ದಾರೆ. ದ್ವಿಶತಕ ಸಿಡಿಸುವ ಮೂಲಕ ಯುವ ಬ್ಯಾಟರ್​ ಸರ್ಫರಾಜ್​ ಖಾನ್​​ ಭಾರತದ ದಿಗ್ಗಜ ಕ್ರಿಕೆಟರ್ಸ್​ ಆದ ಸಚಿನ್​ ಮತ್ತು ರಾಹುಲ್​ ದ್ರಾವಿಡ್​ ದಾಖಲೆ ಮುರಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ