/newsfirstlive-kannada/media/post_attachments/wp-content/uploads/2024/10/Team-India_Win.jpg)
ಇತ್ತೀಚೆಗೆ ಅರುಣ್​​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್​ ಇಂಡಿಯಾ 86 ರನ್​ಗಳಿಂದ ಗೆದ್ದು ಬೀಗಿದೆ. ಈ ಮೂಲಕ 2-0 ಅಂತರದಿಂದ ಸರಣಿಯನ್ನು ಭಾರತ ತಂಡ ವಶಪಡಿಸಿಕೊಂಡಿದೆ. 2ನೇ ಟಿ20 ಪಂದ್ಯ ಗೆಲ್ಲಲು ಪ್ರಮುಖ ಕಾರಣ ಟೀಮ್​ ಇಂಡಿಯಾದ ಯುವ ಆಲ್​ರೌಂಡರ್​​.
ಟೀಮ್​ ಇಂಡಿಯಾ ಕೈ ಹಿಡಿದ ನಿತೀಶ್​​ ರೆಡ್ಡಿ
ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್​ ಇಂಡಿಯಾಗೆ ಸ್ಟಾರ್​ ಆಲ್​ರೌಂಡರ್​​ ನಿತೀಶ್​ ರೆಡ್ಡಿ ​ನೆರವಾದರು. ಬಾಂಗ್ಲಾದೇಶ ಬೌಲರ್​ಗಳ ಬೆಂಡೆತ್ತಿದ ನಿತೀಶ್​ ಅಬ್ಬರಿಸಿದ್ರು. ತಾನು ಎದುರಿಸಿದ 34 ಬಾಲ್​ನಲ್ಲಿ ಬರೋಬ್ಬರಿ 74 ರನ್​ ಗಳಿಸೋ ಮೂಲಕ ಮೇಡಿನ್​ ಫಿಫ್ಟಿ ಮಾಡಿದ್ರು. ಬರೋಬ್ಬರಿ 7 ಸಿಕ್ಸರ್​​, 4 ಫೋರ್​ ಚಚ್ಚಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 215ಕ್ಕೂ ಹೆಚ್ಚು ಇತ್ತು. ಇವರ ಸಹಾಯದಿಂದ ಟೀಮ್​ ಇಂಡಿಯಾದ ಸ್ಕೋರ್​ 200ರ ಗಡಿ ದಾಟಿತ್ತು.
/newsfirstlive-kannada/media/post_attachments/wp-content/uploads/2024/10/NITISH_REDDY.jpg)
ಹಾರ್ದಿಕ್​​ ಪಾಂಡ್ಯ ಸ್ಥಾನಕ್ಕೆ ಬಂತು ಕುತ್ತು
ಟೀಮ್​ ಇಂಡಿಯಾದ ಸ್ಟಾರ್​​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ. ಇವರು ಪಂದ್ಯಗಳಲ್ಲೂ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಆದರೆ, ಈಗ ಹಾರ್ದಿಕ್​ ಪಾಂಡ್ಯ ಸ್ಥಾನಕ್ಕೆ ನಿತೀಶ್​ ರೆಡ್ಡಿಯಿಂದಲೇ ಕುತ್ತು ಬಂದಿದೆ. ಇದಕ್ಕೆ ಕಾರಣ ನಿತೀಶ್​ ರೆಡ್ಡಿ ಬೌಲಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ಮಾಡಿದ ಕಮಾಲ್​​. ಹಾರ್ದಿಕ್​ ಪಾಂಡ್ಯ ಒಂದು ವೇಳೆ ಬೌಲಿಂಗ್​ ಮತ್ತು ಬ್ಯಾಟಿಂಗ್​​ ವಿಭಾಗದಲ್ಲಿ ಹಿಂದೆ ಬಿದ್ದರೆ, ನಿತೀಶ್​ ರೆಡ್ಡಿ ಇವರ ಬದಲಿಗೆ ಟೀಮ್​ ಇಂಡಿಯಾದಲ್ಲಿ ಖಾಯಂ ಸದಸ್ಯರು ಆಗುವುದು ಕನ್ಫರ್ಮ್​​ ಆಗಿದೆ.
ಇದನ್ನೂ ಓದಿ: ಬಾಂಗ್ಲಾದೇಶಕ್ಕೆ 86 ರನ್​ಗಳ ಹೀನಾಯ ಸೋಲು; ಭಾರತ ತಂಡಕ್ಕೆ ರೋಚಕ ಜಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us