/newsfirstlive-kannada/media/post_attachments/wp-content/uploads/2024/04/BRIDGE.jpg)
ತೆಲಂಗಾಣದ ಪೆದ್ದಪ್ಪಲ್ಲಿ ಜಿಲ್ಲೆಯಲ್ಲಿ ಕಳೆದ 8 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಗಾಳಿಗೆ ಕುಸಿದು ಬಿದ್ದ ಘಟನೆ ಬೆಳಕಿಗೆ ಬಂದಿದೆ. 2016ರಲ್ಲಿ ಮನೈರ್​ ನದಿಗೆ ಅಡ್ಡಲಾಗಿ ಈ 1 ಕಿಮೀ ಉದ್ದದ ಸೇತುವೆ ನಿರ್ಮಾಣಕ್ಕೆ ಚಾಲನೆ ಕೊಡಲಾಗಿತ್ತು.
ಎರಡು ವರ್ಷದಲ್ಲಿ ಕಾರಣಾಂತರದಿಂದ ಗುತ್ತಿಗೆದಾರ ಕೆಲಸ ನಿಲ್ಲಿಸಿದ್ದ. ಇದೇ ಗುತ್ತಿಗೆದಾರ ನಿರ್ಮಿಸಿದ್ದ ಮತ್ತೊಂದು ಸೇತುವೆ 2021ರಲ್ಲಿ ಮಹಾಮಳೆಗೆ ಕೊಚ್ಚಿಹೋಗಿತ್ತು. ಈಗ ಸೇತುವೆ ಎರಡು ಪಿಲ್ಲರ್ ನಡುವೆ ಇದ್ದ 5 ಕಾಂಕ್ರೀಟ್ ಸ್ಲ್ಯಾಬ್​ಗಳ ಪೈಕಿ 2 ಸ್ಲ್ಯಾಬ್​​ಗಳು ಕುಸಿದಿವೆ. ಬಲವಾಗಿ ಗಾಳಿ ಬೀಸಿದ ಪರಿಣಾಮ ನಿರ್ಮಾಣ ಹಂತದ ಈ ಸೇತುವೆ ಭಾಗಶಃ ಕುಸಿದಿರುವುದು ಗೊತ್ತಾಗಿದೆ.
ಈ ಸೇತುವೆ ಕುಸಿಯುವ ಒಂದು ನಿಮಿಷ ಮುಂಚೆಯಷ್ಟೇ ಬಸ್ಸೊಂದು ಕೆಳಗೆ ಹಾದು ಹೋಗಿತ್ತು. ಮದುವೆ ಕಾರ್ಯಕ್ರಮದ ಈ ಬಸ್ಸಿನಲ್ಲಿ 65 ಜನರು ಪ್ರಯಾಣಿಸುತ್ತಿದ್ದರು. ಅದೃಷ್ಟಕ್ಕೆ ಈ ಬಸ್ ಸಾಗಿ ಹೋದ ಬಳಿಕ ಸೇತುವೆ ಕುಸಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us