RTC ಡ್ರೈವರ್ ವೇಷದಲ್ಲಿ ಬಂದು ಡ್ರೈವ್ ಮಾಡೇ ಬಿಟ್ಟ..!
ಹೆಂಗೆಂಗೋ ಡ್ರೈವ್ ಮಾಡಿದ, ಪ್ರಯಾಣಿಕರು ಕಕ್ಕಾಬಿಕ್ಕಿ..!
ಬದುಕಿತು ಜೀವ ಅನ್ನೋಷ್ಟರಲ್ಲಿ ಕಳ್ಳ ಹೋಗಿದ್ದೆಲ್ಲಿಗೆ..!?
ತೆಲಂಗಾಣದ ಸಿರಿಸಿಲ್ಲ ಜಿಲ್ಲೆಯ ಸಾರಂಪಲ್ಲಿಯಲ್ಲಿ ನೀವು ಯಾರೂ ಊಹಿಸಿರದ ಪ್ರಸಂಗವೊಂದು ನಡೆದಿದೆ. ಕಿಲಾಡಿ ಕಳ್ಳನೊಬ್ಬ ಪ್ರಯಾಣಿಕರಿದ್ದ TSRTC ಬಸ್ಸನ್ನೇ ಕದ್ದೊಯ್ದು ಆತಂಕ ಸೃಷ್ಟಿಸಿದ್ದ.
ಕಳೆದ ಭಾನುವಾರ ರಾತ್ರಿ ಈ ಕೃತ್ಯ ನಡೆಸಿದ್ದಾನೆ. ರಾಜ್ಯದ ಸಿದ್ದಿಪೇಟ್ ಡಿಪೋಗೆ ಸೇರಿದ TSRTC ಬಸ್ಸನ್ನು ಎಗರಿಸಿದ್ದ. ಜುಬಿಲಿ ಬಸ್ ನಿಲ್ದಾಣದಲ್ಲಿ ಡ್ರೈವರ್, ಬಸ್ ನಿಲ್ಲಿಸಿ ಆಹಾರ ಸೇವನೆಗೆ ಹೋಗಿದ್ದ. ಇದೇ ಸಮಯಕ್ಕಾಗಿ ಕಾದು ಕೂತಿದ್ದ ಕಳ್ಳ, ಆರ್ಟಿಸಿ ಡ್ರೈವರ್ನಂತೆ ವೇಷ ಧರಿಸಿ ಡ್ರೈವರ್ ಸೀಟ್ ಮೇಲೆ ಕೂತಿದ್ದಾನೆ. ಬಸ್ ಸ್ಟಾರ್ಟ್ ಮಾಡಿದ ಆತ, ನಂತರ ಬಸ್ಸಿನಲ್ಲಿ ಕೂತಿದ್ದ ಪ್ರಯಾಣಿಕರಿಗೆ ಟಿಕೆಟ್ ನೀಡಿ ಹಣವನ್ನು ಎತ್ತಿದ್ದಾನೆ. ನಂತರ ಬಸ್ ನಿಲ್ದಾಣದಿಂದ ಸ್ಟಾರ್ಟ್ ಮಾಡಿಕೊಂಡು ಹೋಗಿದ್ದಾನೆ. ಆದರೆ ಕಳ್ಳನಿಗೆ ಬಸ್ ಚಾಲನೆ ಮಾಡಲು ಸರಿಯಾಗಿ ಬಂದಿರಲಿಲ್ಲ. ಅಡ್ಡಾದಿಡ್ಡಿ ಓಡಿಸುತ್ತಿದ್ದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿ ಆತನ ಪ್ರಶ್ನೆ ಮಾಡಿದ್ದಾರೆ.
ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಲು ಶುರು ಮಾಡಿದ ಬೆನ್ನಲ್ಲೇ ಕಳ್ಳನಿಗೆ ಭಯ ಶುರುವಾಗಿದೆ. ನಂತರ ಡ್ರೈವರ್ ಸೀಟ್ನಿಂದ ಜಿಗಿದು ಎಸ್ಕೇಪ್ ಆಗಿದ್ದಾನೆ. ವಿಚಾರ ಗೊತ್ತಾಗುತ್ತಿದ್ದಂತೆಯೇ ಆರ್ಟಿಸಿ ಅಧಿಕಾರಿಗಳು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿದ್ದಿಪೇಟೆ ಪೊಲೀಸರು ಕಳ್ಳನಿಗಾಗಿ ಹುಡುಕಾಟ ನಡೆಸಿದ್ದಾರೆ. ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
బస్సు ఎత్తుకుపొయిన దొంగ
ఓ వ్యక్తి ఏకంగా ఆర్టీసీ బస్సునే ఎత్తుకెళ్లిన ఘటన సిరిసిల్ల జిల్లా సారంపల్లిలో జరిగింది.
సిద్దిపేటలో ప్రయాణికులతో రెడీగా ఉన్న బస్సును ఓ వ్యక్తి స్టార్ట్ చేసుకొని వేములవాడకు వెళ్లాడు. అక్కడ్నుంచి మళ్లీ సిద్దిపేటకు వెళ్తుండగా.. డీజిల్ అయిపోవడంతో బస్సును… pic.twitter.com/WRCdla7lbW
— Telugu Scribe (@TeluguScribe) September 11, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
RTC ಡ್ರೈವರ್ ವೇಷದಲ್ಲಿ ಬಂದು ಡ್ರೈವ್ ಮಾಡೇ ಬಿಟ್ಟ..!
ಹೆಂಗೆಂಗೋ ಡ್ರೈವ್ ಮಾಡಿದ, ಪ್ರಯಾಣಿಕರು ಕಕ್ಕಾಬಿಕ್ಕಿ..!
ಬದುಕಿತು ಜೀವ ಅನ್ನೋಷ್ಟರಲ್ಲಿ ಕಳ್ಳ ಹೋಗಿದ್ದೆಲ್ಲಿಗೆ..!?
ತೆಲಂಗಾಣದ ಸಿರಿಸಿಲ್ಲ ಜಿಲ್ಲೆಯ ಸಾರಂಪಲ್ಲಿಯಲ್ಲಿ ನೀವು ಯಾರೂ ಊಹಿಸಿರದ ಪ್ರಸಂಗವೊಂದು ನಡೆದಿದೆ. ಕಿಲಾಡಿ ಕಳ್ಳನೊಬ್ಬ ಪ್ರಯಾಣಿಕರಿದ್ದ TSRTC ಬಸ್ಸನ್ನೇ ಕದ್ದೊಯ್ದು ಆತಂಕ ಸೃಷ್ಟಿಸಿದ್ದ.
ಕಳೆದ ಭಾನುವಾರ ರಾತ್ರಿ ಈ ಕೃತ್ಯ ನಡೆಸಿದ್ದಾನೆ. ರಾಜ್ಯದ ಸಿದ್ದಿಪೇಟ್ ಡಿಪೋಗೆ ಸೇರಿದ TSRTC ಬಸ್ಸನ್ನು ಎಗರಿಸಿದ್ದ. ಜುಬಿಲಿ ಬಸ್ ನಿಲ್ದಾಣದಲ್ಲಿ ಡ್ರೈವರ್, ಬಸ್ ನಿಲ್ಲಿಸಿ ಆಹಾರ ಸೇವನೆಗೆ ಹೋಗಿದ್ದ. ಇದೇ ಸಮಯಕ್ಕಾಗಿ ಕಾದು ಕೂತಿದ್ದ ಕಳ್ಳ, ಆರ್ಟಿಸಿ ಡ್ರೈವರ್ನಂತೆ ವೇಷ ಧರಿಸಿ ಡ್ರೈವರ್ ಸೀಟ್ ಮೇಲೆ ಕೂತಿದ್ದಾನೆ. ಬಸ್ ಸ್ಟಾರ್ಟ್ ಮಾಡಿದ ಆತ, ನಂತರ ಬಸ್ಸಿನಲ್ಲಿ ಕೂತಿದ್ದ ಪ್ರಯಾಣಿಕರಿಗೆ ಟಿಕೆಟ್ ನೀಡಿ ಹಣವನ್ನು ಎತ್ತಿದ್ದಾನೆ. ನಂತರ ಬಸ್ ನಿಲ್ದಾಣದಿಂದ ಸ್ಟಾರ್ಟ್ ಮಾಡಿಕೊಂಡು ಹೋಗಿದ್ದಾನೆ. ಆದರೆ ಕಳ್ಳನಿಗೆ ಬಸ್ ಚಾಲನೆ ಮಾಡಲು ಸರಿಯಾಗಿ ಬಂದಿರಲಿಲ್ಲ. ಅಡ್ಡಾದಿಡ್ಡಿ ಓಡಿಸುತ್ತಿದ್ದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿ ಆತನ ಪ್ರಶ್ನೆ ಮಾಡಿದ್ದಾರೆ.
ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಲು ಶುರು ಮಾಡಿದ ಬೆನ್ನಲ್ಲೇ ಕಳ್ಳನಿಗೆ ಭಯ ಶುರುವಾಗಿದೆ. ನಂತರ ಡ್ರೈವರ್ ಸೀಟ್ನಿಂದ ಜಿಗಿದು ಎಸ್ಕೇಪ್ ಆಗಿದ್ದಾನೆ. ವಿಚಾರ ಗೊತ್ತಾಗುತ್ತಿದ್ದಂತೆಯೇ ಆರ್ಟಿಸಿ ಅಧಿಕಾರಿಗಳು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿದ್ದಿಪೇಟೆ ಪೊಲೀಸರು ಕಳ್ಳನಿಗಾಗಿ ಹುಡುಕಾಟ ನಡೆಸಿದ್ದಾರೆ. ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
బస్సు ఎత్తుకుపొయిన దొంగ
ఓ వ్యక్తి ఏకంగా ఆర్టీసీ బస్సునే ఎత్తుకెళ్లిన ఘటన సిరిసిల్ల జిల్లా సారంపల్లిలో జరిగింది.
సిద్దిపేటలో ప్రయాణికులతో రెడీగా ఉన్న బస్సును ఓ వ్యక్తి స్టార్ట్ చేసుకొని వేములవాడకు వెళ్లాడు. అక్కడ్నుంచి మళ్లీ సిద్దిపేటకు వెళ్తుండగా.. డీజిల్ అయిపోవడంతో బస్సును… pic.twitter.com/WRCdla7lbW
— Telugu Scribe (@TeluguScribe) September 11, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ