/newsfirstlive-kannada/media/post_attachments/wp-content/uploads/2024/12/ALLU-ARJUN1.jpg)
ಪುಷ್ಪ-2 ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದ ಅಲ್ಲು ಅರ್ಜುನ್ ಬಂಧನ ದೇಶಾದ್ಯಂತ ಸಂಚಲನ ಸಷ್ಟಿಸಿತ್ತು. ಇಂದು ಬೆಳ್ಳಂಬೆಳಗ್ಗೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಬೆಳಗ್ಗೆ 6.30ರ ಸುಮಾರಿಗೆ ಜೈಲಿನಿಂದ ಐಕಾನ್ ಸ್ಟಾರ್ ರಿಲೀಸ್ ಆಗಿದ್ದಾರೆ.
ಪೊಲೀಸ್ ಬಿಗಿ ಭದ್ರತೆಯೊಂದಿಗೆ ಚಂಚಲಗೂಡ ಸೆಂಟ್ರಲ್ ಜೈಲಿನ ಹಿಂಬದಿ ಗೇಟ್ನಿಂದ ನಟ ಅಲ್ಲು ಅರ್ಜುನ್ ಅವರನ್ನು ರಿಲೀಸ್ ಮಾಡಲಾಗಿದೆ. 4 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಿನ್ನೆಯೇ ಬೇಲ್ ಸಿಕ್ಕರೂ ಕೂಡ ಅಲ್ಲು ಅರ್ಜುನ್ ಜೈಲಿನಲ್ಲಿ ಒಂದು ರಾತ್ರಿ ಕಳೆಯುವಂತಾಗಿತ್ತು.
ಇದನ್ನೂ ಓದಿ: ಮೆಹಂದಿ ಮಾಸುವ ಮುನ್ನವೇ ಶೂಟಿಂಗ್ ಸೆಟ್ಗೆ ಬಂದ ಚಿನ್ನುಮರಿ ಜಾಹ್ನವಿ; ಫ್ಯಾನ್ಸ್ ಫುಲ್ ಖುಷ್
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅರೆಸ್ಟ್ ವಿಚಾರ ಪುಷ್ಪ-2 ಚಿತ್ರದ ಕತೆಯನ್ನೇ ಮೀರಿಸಿದೆ. ನಿನ್ನೆ ಬೆಳಗ್ಗೆ ಅರೆಸ್ಟ್ ಆದ ಅಲ್ಲು ಅರ್ಜುನ್ ಮಧ್ಯಾಹ್ನ ಜೈಲು ಸೇರಿದ್ರು. ಸಂಜೆ ಬಳಿಕ ಹೈಕೋರ್ಟ್ ಮೆಟ್ಟಿಲೇರಿ ಜಾಮೀನು ಪಡೆದ್ರೂ, ಬೇಲ್ ಕಾಪಿ ಜೈಲಾಧಿಕಾರಿಗೆ ಸಿಗದ ಕಾರಣ ಜೈಲಿನಲ್ಲಿ ರಾತ್ರಿ ಕಳೆದ್ರು. ಇದೀಗ ಬೆಳಗ್ಗೆ 6.35ಕ್ಕೆ ಜೈಲಿನಿಂದ ರಿಲೀಸ್ ಆಗಿದ್ದಾರೆ. ಅಲ್ಲು ಅರ್ಜುನ್ಗೆ ರಿಲೀಸ್ ಆಗುತ್ತಿದ್ದಂತೆ ಅಲ್ಲು ಅರ್ಜುನ್ ಮನೆಯಲ್ಲಿ ದುಃಖದ ಜೊತೆ ಸಂತಸವೂ ಮನೆ ಮಾಡಿದೆ.
ಆದರೆ ನಿನ್ನೆ ಜಾಮೀನು ಸಿಕ್ಕ ಕೂಡಲೇ ಅಪ್ಪ ಮನೆಗೆ ಬರ್ತಾರೇ ಅಂತ ಅಲ್ಲು ಪುತ್ರಿ ಅರ್ಹಾ ಮನೆಯ ಕಿಟಿಕಿಯಿಂದಲೇ ಹೊರ ನೊಡುತ್ತಾ ಕಾದುಕಾದು ಸುಸ್ತಾದ್ರು. ಅಲ್ಲು ಅರ್ಜುನ್ ಬಂಧನದ ನಂತರ ಹಲವಾರು ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಅಲ್ಲು ಪರವಾಗಿ ನಿಂತಿದ್ದಾರೆ. ಜೊತೆಗೆ ಅಲ್ಲು ಅರ್ಜುನ್ ಅರೆಸ್ಟ್ ಆಗಿರೋ ಸುದ್ದಿ ಕೇಳಿದ ಮೆಗಾ ಸ್ಟಾರ್ ಚಿರಂಜೀವಿ ಶೂಟಿಂಗ್ ಕ್ಯಾನ್ಸಲ್ ಮಾಡಿ ಅಲ್ಲು ನಿವಾಸಕ್ಕೆ ಓಡೋಡಿ ಬಂದ್ರು. ಅತ್ತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕೂಡ ಸ್ಪೆಷಲ್ ಫ್ಲೈಟ್ ಮೂಲಕ ಹೈದ್ರಾಬಾದ್ಗೆ ಧಾವಿಸಿ ಅಲ್ಲು ಫ್ಯಾಮಿಲಿಗೆ ಧೈರ್ಯ ತುಂಬಿದ್ರು.
ನಟ ಅಲ್ಲು ಅರ್ಜುನ್ ಅರೆಸ್ಟ್ ಆದ ಸುದ್ದಿ ಕಾಡ್ಗಿಚ್ಚಿನಂತೆ ದೇಶದೆಲ್ಲೆಡೆ ದೊಡ್ಡ ಸಂಚಲನ ಸೃಷ್ಟಿಸಿತ್ತು. ಈ ಬಂಧನ ರಾಜಕೀಯ ಜಟಾಪಟಿಗೂ ಕಾರಣ ಆಗಿದೆ. ಆಂಧ್ರ ಮಾಜಿ ಸಿಎಂ ಜಗನ್, ತೆಲಂಗಾಣ ಮಾಜಿ ಡಿಸಿಎಂ ಕೆಟಿಆರ್, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಖಂಡಿಸಿದ್ದಾರೆ. ಅಲ್ಲು ಅರ್ಜುನ್ ಬಂಧನದ ಹಿಂದೆ ರಾಜಕೀಯ ಕೈವಾಡವಿದೆ ಅಂತ ಆರೋಪಿಸಿದ್ದಾರೆ. ಆದ್ರೆ ಈ ಆರೋಪವನ್ನ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತಳ್ಳಿಹಾಕಿದ್ದಾರೆ
ಕಾನೂನು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಪ್ರಕರಣದ ತನಿಖೆಯಲ್ಲಿ ಯಾರೂ ಮಧ್ಯಪ್ರವೇಶಿಸುವುದಿಲ್ಲ.
ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ಪುಷ್ಪ-2 ಸಕ್ಸಸ್ ಅಲೆಯಲ್ಲಿ ತೇಲ್ತಿದ್ದ ಅಲ್ಲು ಅರ್ಜುನ್ ಸದ್ಯ ಜೈಲಿನ ಸಂಕಷ್ಟದಿಂದ ಪಾರಾಗಿದ್ದಾರೆ. ಆದ್ರೆ ಗೊತ್ತಿದ್ದೂ ಗೊತ್ತಿಲ್ಲದೇನೋ ಮಾಡಿದ ತಪ್ಪಿಗೆ ಅಲ್ಲು ಅರ್ಜುನ್ ಶಿಕ್ಷೆ ಅನುಭವಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ