ಮಹಿಳೆಯರ ಗೌರವ, ಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಆಕ್ರೋಶ
ತೆಲುಗು ನಟಿ ರಶ್ಮಿ ಅವರು ಮಾಡಿದ ಒಂದು ಪೋಸ್ಟ್ ಫುಲ್ ವೈರಲ್
ಹಾಸನ ಅಶ್ಲೀಲ ಪೆನ್ಡ್ರೈವ್ ಪ್ರಕರಣದ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆ
ಹಾಸನ ಅಶ್ಲೀಲ ಪೆನ್ಡ್ರೈವ್ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಮಹಿಳೆಯರ ಗೌರವ, ಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಹಲವು ಈ ಘಟನೆಯನ್ನು ಖಂಡಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತೆಲುಗು ನಟಿ ರಶ್ಮಿ ಅವರು ಒಂದು ಪೋಸ್ಟ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಗಂಡು ಮಕ್ಕಳು ಒಳ್ಳೆಯವರೇ ಆಗಿದ್ದರೆ ವೇಶ್ಯಾವಾಟಿಕೆ ಅನ್ನೋದೇ ಇರುತ್ತಾ ಇರಲಿಲ್ಲ. ಬಡ ಮಹಿಳೆ ಹಸಿದಾಗ ಅವರ ಬಾಯಿಗೆ ಆಹಾರವನ್ನು ಹಾಕಬೇಕೇ ಹೊರೆತು ಅದನ್ನ ಅಲ್ಲ ಅನ್ನೋ ಸಾಲುಗಳನ್ನ ನಟಿ ರಶ್ಮಿ ಅವರು ಪೋಸ್ಟ್ ಮಾಡಿದ್ದಾರೆ.
ರಶ್ಮಿ ಅವರು ಮಾಡಿರುವ ಈ ಪೋಸ್ಟ್ ಖ್ಯಾತ ಲೇಖಕಿ, ಪ್ರೊಫೆಸರ್ ರಾಚೆಲ್ ಮೊರಾನ್ ಅವರು ಮಹಿಳೆಯರ ಬಗ್ಗೆ ಬರೆದ ಸಾಲುಗಳಾಗಿವೆ. ಈ ಕೋಟ್ ಅನ್ನು ಪೋಸ್ಟ್ ಮಾಡಿರುವ ರಶ್ಮಿ ಅವರು ನೆಟ್ಟಿಗರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ‘ಕರ್ನಾಟಕಕ್ಕೆ ಕಳಂಕ, ಮಾನವ ಕುಲಕ್ಕೆ ಅಪಮಾನ’- ಹಾಸನ ಅಶ್ಲೀಲ ವಿಡಿಯೋ ಬಗ್ಗೆ ಎಸ್ ನಾರಾಯಣ್ ಆಕ್ರೋಶ
ತೆಲುಗು ನಟಿ ರಶ್ಮಿ ಅವರು ಇನ್ಸ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಈ ಪೋಸ್ಟ್ ಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಅವರ ಕೇಸ್ ಬಗ್ಗೆ ಆಕ್ರೋಶ ಹೊರಹಾಕಿರುವ ಪೋಸ್ಟ್ ಇದಾಗಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಹಿಳೆಯರ ಗೌರವ, ಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಆಕ್ರೋಶ
ತೆಲುಗು ನಟಿ ರಶ್ಮಿ ಅವರು ಮಾಡಿದ ಒಂದು ಪೋಸ್ಟ್ ಫುಲ್ ವೈರಲ್
ಹಾಸನ ಅಶ್ಲೀಲ ಪೆನ್ಡ್ರೈವ್ ಪ್ರಕರಣದ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆ
ಹಾಸನ ಅಶ್ಲೀಲ ಪೆನ್ಡ್ರೈವ್ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಮಹಿಳೆಯರ ಗೌರವ, ಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಹಲವು ಈ ಘಟನೆಯನ್ನು ಖಂಡಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತೆಲುಗು ನಟಿ ರಶ್ಮಿ ಅವರು ಒಂದು ಪೋಸ್ಟ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಗಂಡು ಮಕ್ಕಳು ಒಳ್ಳೆಯವರೇ ಆಗಿದ್ದರೆ ವೇಶ್ಯಾವಾಟಿಕೆ ಅನ್ನೋದೇ ಇರುತ್ತಾ ಇರಲಿಲ್ಲ. ಬಡ ಮಹಿಳೆ ಹಸಿದಾಗ ಅವರ ಬಾಯಿಗೆ ಆಹಾರವನ್ನು ಹಾಕಬೇಕೇ ಹೊರೆತು ಅದನ್ನ ಅಲ್ಲ ಅನ್ನೋ ಸಾಲುಗಳನ್ನ ನಟಿ ರಶ್ಮಿ ಅವರು ಪೋಸ್ಟ್ ಮಾಡಿದ್ದಾರೆ.
ರಶ್ಮಿ ಅವರು ಮಾಡಿರುವ ಈ ಪೋಸ್ಟ್ ಖ್ಯಾತ ಲೇಖಕಿ, ಪ್ರೊಫೆಸರ್ ರಾಚೆಲ್ ಮೊರಾನ್ ಅವರು ಮಹಿಳೆಯರ ಬಗ್ಗೆ ಬರೆದ ಸಾಲುಗಳಾಗಿವೆ. ಈ ಕೋಟ್ ಅನ್ನು ಪೋಸ್ಟ್ ಮಾಡಿರುವ ರಶ್ಮಿ ಅವರು ನೆಟ್ಟಿಗರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ‘ಕರ್ನಾಟಕಕ್ಕೆ ಕಳಂಕ, ಮಾನವ ಕುಲಕ್ಕೆ ಅಪಮಾನ’- ಹಾಸನ ಅಶ್ಲೀಲ ವಿಡಿಯೋ ಬಗ್ಗೆ ಎಸ್ ನಾರಾಯಣ್ ಆಕ್ರೋಶ
ತೆಲುಗು ನಟಿ ರಶ್ಮಿ ಅವರು ಇನ್ಸ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಈ ಪೋಸ್ಟ್ ಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಅವರ ಕೇಸ್ ಬಗ್ಗೆ ಆಕ್ರೋಶ ಹೊರಹಾಕಿರುವ ಪೋಸ್ಟ್ ಇದಾಗಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ