/newsfirstlive-kannada/media/post_attachments/wp-content/uploads/2025/06/Ravi-Kumar-Chowdary.jpg)
ತೆಲುಗು ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಎಎಸ್ ರವಿಕುಮಾರ್ ನಿಧನರಾಗಿದ್ದಾರೆ. ರವಿಕುಮಾರ್ ಅವರು ಕಳೆದ ಕೆಲ ತಿಂಗಳಿನಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು, ನಿನ್ನೆ ತಡರಾತ್ರಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಇದನ್ನೂ ಓದಿ: ಇಂದಿನಿಂದ 4 ದಿನ ರಾಜ್ಯದಲ್ಲಿ ಭಾರೀ ಮಳೆ.. ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್!
ಎಎಸ್ ರವಿಕುಮಾರ್ ಅವರು ಟಾಲಿವುಡ್ನಲ್ಲಿ ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿದ್ದರು. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಎಎಸ್ ರವಿಕುಮಾರ್ ನಿಧನರಾಗಿದ್ದಾರೆ. ಇವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ರವಿಕುಮಾರ್ ಅವರಿಗೆ ಪತ್ನಿ ಮತ್ತು ಮಕ್ಕಳಿದ್ದರೂ ಸಹ ಕೆಲ ವರ್ಷಗಳಿಂದ ಅವರು ಒಬ್ಬರೇ ಜೀವನ ಸಾಗಿಸುತ್ತಿದ್ದಂತೆ.
ಎಎಸ್ ರವಿಕುಮಾರ್ ಅವರು ನಂದಮೂರಿ ಬಾಲಕೃಷ್ಣ, ಗೋಪಿಚಂದ್, ನಿತಿನ್ ಇನ್ನೂ ಕೆಲವು ತೆಲುಗಿನ ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದಾರೆ. ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದ ಗೋಪಿಚಂದ್ ಅವರನ್ನು ‘ಯಜ್ಞಂ’ ಸಿನಿಮಾ ಮೂಲಕ ನಾಯಕ ನಟನನ್ನಾಗಿ ಮಾಡಿದ್ದು ಎಎಸ್ ರವಿಕುಮಾರ್. ಆ ನಂತರ ಮೆಗಾಸ್ಟಾರ್ ಕುಟುಂಬದ ಸಾಯಿ ದುರ್ಗ ತೇಜ್ ಅವರ ಮೊದಲ ಸಿನಿಮಾ ‘ಪಿಲ್ಲಾ ನೂವು ಲೇನಿ ಜೀವತಂ’ ಅನ್ನು ರವಿಕುಮಾರ್ ನಿರ್ದೇಶನ ಮಾಡಿದ್ದರು.
ಅಷ್ಟೇ ಅಲ್ಲದೇ ನಟ ನಂದಮೂರಿ ಬಾಲಕೃಷ್ಣ ನಟನೆಯ ‘ವೀರಭದ್ರ’ ಸಿನಿಮಾವನ್ನು ರವಿಕುಮಾರ್ ನಿರ್ದೇಶಿಸಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ನಿತಿನ್ ಜೊತೆಗೆ ‘ಆಟಾಡಿಸ್ತ’ ಸಿನಿಮಾ ಮಾಡಿದ್ದರು. ಗೋಪಿಚಂದ್ ನಟನೆಯ ‘ಶೌಖ್ಯಂ’ ಸಿನಿಮಾ ಮಾಡಿದ್ದರು. ರಾಜ್ ತರುಣ್ ನಟನೆಯ ‘ತಿರಗಬಡರಾ ಸಾಮಿ’ ರವಿಕುಮಾರ್ ಅವರ ಕೊನೆಯ ಸಿನಿಮಾ. ಎಎಸ್ ರವಿಕುಮಾರ್ ನಿಧನಕ್ಕೆ ತೆಲುಗು ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ