‘ಅಣ್ಣ ತಮ್ಮಂದಿರ ಹಾಗೇ ನಾವು ಇದ್ವಿ’.. ಬ್ಯಾಂಕ್ ಜನಾರ್ಧನ್ ಸಾವಿನ ಬಗ್ಗೆ ಕಂಬನಿ ಮಿಡಿದ ನಟ ಟೆನ್ನಿಸ್ ಕೃಷ್ಣ

author-image
Veena Gangani
Updated On
‘ಅಣ್ಣ ತಮ್ಮಂದಿರ ಹಾಗೇ ನಾವು ಇದ್ವಿ’.. ಬ್ಯಾಂಕ್ ಜನಾರ್ಧನ್ ಸಾವಿನ ಬಗ್ಗೆ ಕಂಬನಿ ಮಿಡಿದ ನಟ ಟೆನ್ನಿಸ್ ಕೃಷ್ಣ
Advertisment
  • ಬ್ಯಾಂಕ್ ಜನಾರ್ಧನ್​ ಬಗ್ಗೆ ನಟ ಟೆನ್ನಿಸ್ ಕೃಷ್ಣ ಹೇಳಿದ್ದೇನು?
  • ಸಾವಿನ ಅರ್ಧ ಗಂಟೆ ಹಿಂದೆ ನೆನಪಿಸಿಕೊಂಡೆ ಎಂದ ನಟ
  • ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್‌ ಜನಾರ್ಧನ್‌ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಬ್ಯಾಂಕ್‌ ಜನಾರ್ಧನ್‌ (76) ಅವರು ನಿಧನರಾಗಿದ್ದಾರೆ. ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಬ್ಯಾಂಕ್‌ ಜನಾರ್ಧನ್‌ ಅವರು ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ನಟ ಬ್ಯಾಂಕ್‌ ಜನಾರ್ಧನ್‌ ಅವರ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ನ್ಯೂಸ್ ಫಸ್ಟ್​ಗೆ ಬ್ಯಾಂಕ್ ಜನಾರ್ಧನ್ ಪುತ್ರ ಗುರುಪ್ರಸಾದ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 3 ಬಾರಿ ಹೃದಯಾಘಾತ.. 500ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದ ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ವಿಧಿವಶ

publive-image

ಈ ಬಗ್ಗೆ ನ್ಯೂಸ್​ ಫಸ್ಟ್​ ದೂರವಾಣಿ ಕರೆಯಲ್ಲಿ ಮಾತಾಡಿದ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು, ಎಲ್ಲ ನಟರ ಜೊತೆಗೆ ಪಾತ್ರ ಮಾಡಿದ್ದಾರೆ. ನಾನು ಕೂಡ ಬಹಳಷ್ಟು ಸಿನಿಮಾ ಮಾಡಿದ್ದೇನೆ. ಬಹಳ ವರ್ಷಗಳ ಹಿಂದೆ ಓಪನ್ ಹಾರ್ಟ್​ ಸರ್ಜರಿ ಆಗಿತ್ತು. ಆನಂತರ ಚೇತರಿಸಿಕೊಂಡಿದ್ದರು. ಸಾವಿನ ಅರ್ಧ ಗಂಟೆ ಹಿಂದಷ್ಟೇ ಅವರನ್ನು ನೆನಪಿಸಿಕೊಂಡೆ. ಯಾವುದಾದರೂ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಬಹುದಾ ಅಂತ ಯೋಚಿಸಿದ್ದೇ. ಕಡೆಯಾಗಿ ಕಾರ್ಯಕ್ರಮಲ್ಲಿ ಭೇಟಿಯಾಗಿದ್ದೇವು. ಅಣ್ಣ ತಮ್ಮಂದಿರ ಹಾಗೇ ನಾವು ಇದ್ವಿ. ಒಳ್ಳೆ ಕಲಾವಿದರನ್ನು ಕಳೆದುಕೊಂಡಿದ್ದೇವೆ. ಕಳೆದ ವರ್ಷ ಸ್ನೇಹಿತರೆಲ್ಲಾ ಅವರ ಮನೆಗೆ ಹೋಗಿದ್ದೀವಿ. ಮನೆ ಹತ್ರಾನೇ ಇದೆ ಬಾರೋ ಅಂತ ಹೇಳಿದ್ರು ಆದ್ರೆ ಈಗ ಅವರು ಇಲ್ಲ ಅಂತ ಬೇಸರ ಹೊರ ಹಾಕಿದ್ದಾರೆ.

publive-image

ಇನ್ನೂ, ಚಿತ್ರರಂಗಕ್ಕೆ ಪಾದಾರ್ಪನೆ ಮಾಡಿದ ಸಂದರ್ಭದಲ್ಲಿ ನಟ ಜಗ್ಗೇಶ್​ ಜತೆ ಬ್ಯಾಂಕ್ ಜನಾರ್ಧನ್ ಹೆಚ್ಚು ಕಾಲ ಕಳೆದಿದ್ದರು. ಜಗ್ಗೇಶ್ ಬಹುತೇಕ ಚಿತ್ರಗಳಲ್ಲಿ ನಟಿಸಿರುವ ಬ್ಯಾಂಕ್ ಜನಾರ್ಧನ್ ನಟಿಸಿದ್ದಾರೆ. ಜಗ್ಗೇಶ್​​ಗೆ ತಂದೆಯಾಗಿ ನಟಿಸಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದವು. ಸೂಪರ್​ನನ್ ಮಗ, ತರ್ಲೆ ನನ್ ಮಗ ಚಿತ್ರದಲ್ಲಿ ತಂದೆಯಾಗಿ ನಟಸಿದ್ದರು. ಹಾಸ್ಯಕ್ಕೆ ಕನ್ನಡದಲ್ಲಿ ಮುಸರಿ ಕೃಷ್ಣಮೂರ್ತಿ, ನರಸಿಂಹರಾಜು ಬಳಿಕ ಅವರ ಸ್ಥಾನವನ್ನ ತುಂಬಿದ್ದರು. ಬ್ಯಾಂಕ್ ಜನಾರ್ಧನ್ ಅವರು ಸತತ 20 ವರ್ಷಗಳ ಕಾಲ ಕಾಮಿಡಿ ಪಾತ್ರಗಳಲ್ಲಿ ಬ್ಯುಸಿಯಾಗಿದ್ದರು. ಜಗ್ಗೇಶ್​ ಹಾಗೂ ಬ್ಯಾಂಕ್ ಜನಾರ್ಧನ್ ಅವಕಾಶಕ್ಕಾಗಿ ಬೆಂಗಳೂರಿನಲ್ಲಿ ಒಟ್ಟಿಗೆ ಓಡಾಡುತ್ತಿದ್ದರಂತೆ.

publive-image

ಜಗ್ಗೇಶ್ ಸಿನಿಮಾ ಬಂದರೆ ಬ್ಯಾಂಕ್ ಜನಾರ್ಧನ್ ಒಂದು ಪಾತ್ರ ಮೀಸಲಿಡಲಾಗುತ್ತಿತ್ತು. ಉಪೇಂದ್ರ, ಕೆವಿ ರಾಜು, ರವಿಚಂದ್ರನ್, ಎಸ್ ಮಹೇಂದರ್, ಪಣಿ ರಾಮಚಂದ್ರ, ಮಲ್ಲೇಶ್ ರಂತ ನಿರ್ದೇಶಕರ ಆಕ್ಷನ್ ಕಟ್​ಗೆ ನಟಿಸಿ ಸೈ ಎನಿಸಿಕೊಂಡಿದ್ದರು ನಟ ಬ್ಯಾಂಕ್ ಜನಾರ್ಧನ್. ಕನ್ನಡ ರಾಜ್ಯೋತ್ಸವ, ಅಣ್ಣಮ್ಮ ದೇವಿ, ಗಣೇಶ ಕಾರ್ಯಕ್ರಮಗಳಿಗೆ ತಮ್ಮದೇ ತಂಡದ ಮೂಲಕ ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಿದ್ದರು. ಶಂಕರ್​ನಾಗ್ ಹಾಗೂ ಅನಂತ್​ನಾಗ್​ ಅಚ್ಚುಮೆಚ್ಚಿನ ನಟರಾಗಿದ್ದರು. ಮುಖ್ಯಮಂತ್ರಿ ಚಂದ್ರುಗೆ ಒಡನಾಡಿಯಾಗಿದ್ದರು. ಟೈಗರ್ ಪ್ರಭಾಕರ್​ಗೂ ಕೂಡ ಆತ್ಮೀಯರಾಗಿದ್ದರು ಬ್ಯಾಂಕ್ ಜನಾರ್ಧನ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment