newsfirstkannada.com

ಹೀನಾಯ ಸೋಲಿನಿಂದ ಬೇಸರ.. RCB ಮಾಲೀಕತ್ವ ಬದಲಾಯಿಸಲು ಒತ್ತಾಯಿಸಿದ ಭಾರತೀಯ ಟೆನ್ನಿಸ್​ ತಾರೆ!

Share :

Published April 16, 2024 at 4:49pm

Update April 16, 2024 at 4:51pm

    ನಿನ್ನೆ ಆಡಿದ ಪಂದ್ಯದಲ್ಲೂ ಸೋಲು ಕಂಡ ಆರ್​ಸಿಬಿ ತಂಡ

    ಭಾರತೀಯ ಟೆನ್ನಿಸ್​ ತಾರೆ ಆರ್​ಸಿಬಿ ಬಗ್ಗೆ ಏನಂದ್ರು ಗೊತ್ತಾ?

    ಮಹೇಶ್​ ಭೂಪತಿ ಆರ್​ಬಿಸಿ ಮ್ಯಾನೇಜ್ಮೆಂಟ್​ ಬಗ್ಗೆ ಬಿಸಿಸಿಐಗೆ ಎನು ಹೇಳಿದ್ರು?

ಸತತ ಏಳು ಪಂದ್ಯ ಎದುರಿಸಿ ಆರು ಪಂದ್ಯದಲ್ಲಿ ಸತತ ಸೋಲು ಎಣಿಸುತ್ತಾ ಬಂದಿರುವ ಆರ್​ಸಿಬಿ ವಿರುದ್ಧ ಅನೇಕರು ಕೆಂಡಕಾರುತ್ತಿದ್ದಾರೆ. ಆರ್​ಸಿಬಿ ಮ್ಯಾನೇಜ್​ಮೆಂಟ್​ ಕುರಿತು ಬೈಗುಳದ ಸುರಿಮಳೆ ಸುರಿಸುತ್ತಿದ್ದಾರೆ.

ನಿನ್ನೆ ನಡೆದ ಸನ್​​ರೈಸರ್ಸ್​ ಹೈದರಾಬಾದ್​ ವಿರುದ್ಧ ಕೂಡ ಆರ್​ಸಿಬಿ ಸೋಲುಂಡಿದೆ. 25 ರನ್​ಗೆ ತಲೆಬಾಗಿದೆ. ಇದು ಅಭಿಮಾನಿಗಳಿಗೆ ಬೇಸರಕ್ಕೆ ಕಾರಣವಾಗಿದೆ. ಇದರ ಜೊತೆಗೆ ಹಿರಿಯ ಆಟಗಾರರು, ಕ್ರೀಡಾಭಿಮಾನಿಗಳಿಗೂ ನೋವು ತಂದಿದೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆರ್​ಸಿಬಿ ಮ್ಯಾನೇಜ್ಮೆಂಟ್​ ಕುರಿತು ಬರೆದು ಹಾಕುತ್ತಿದ್ದಾರೆ. ತಂಡದ ಬದಲಾವಣೆ ಅಗತ್ಯ ಎಂಬುದನ್ನು ಸಾರುತ್ತಿದ್ದಾರೆ.

ಭಾರತೀಯ ಟೆನ್ನಿಸ್​ ತಾರೆ ಏನಂದ್ರು?

ಭಾರತೀಯ ಟೆನ್ನಿಸ್​ ತಾರೆ ಮಹೇಶ್​ ಭೂಪತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಆರ್​ಸಿಬಿ ಸೋಲಿನ ಬಗ್ಗೆ ಬರೆದು ಹಾಕಿದ್ದಾರೆ. ‘ಕ್ರೀಡೆ, ಐಪಿಎಲ್​, ಅಭಿಮಾನಿಗಳು ಮತ್ತು ಆಟಗಾರ ಸಹ ತಮ್ಮ ಫ್ರಾಂಚೈಸಿಗಳನ್ನು ನಿರ್ವಹಿಸಿದಂತೆ ಯಶಸ್ವಿ ಪ್ರಾಂಚೈಸಿಯನ್ನು ಮಾಡಲು ಹೊಸ ಮಾಲೀಕರಿಗೆ ಆರ್​ಸಿಬಿಯನ್ನು ಮಾರಾಟ ಮಾಡಲು ಬಿಸಿಸಿಐ ಒತ್ತಾಯಿಸಬೇಕು’ ಎಂದು ಹೇಳಿದ್ದಾರೆ.

 

ಆರ್​ಸಿಬಿ ತಂಡದ ಸೋಲು ಅಭಿಮಾನಿಗಳಿಗಂತೂ ಭಾರೀ ಬೇಸರತರಿಸಿದೆ. ಅದರಲ್ಲೂ ಪಾಯಿಂಟ್​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿ ಆರ್​ಸಿಬಿ ಕಾಣಿಸಿಕೊಂಡಿದೆ. ಜೊತೆಗೆ ಕೊನೆಯ 5 ಪಂದ್ಯ ಸತತ ಸೋಲು ಕಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೀನಾಯ ಸೋಲಿನಿಂದ ಬೇಸರ.. RCB ಮಾಲೀಕತ್ವ ಬದಲಾಯಿಸಲು ಒತ್ತಾಯಿಸಿದ ಭಾರತೀಯ ಟೆನ್ನಿಸ್​ ತಾರೆ!

https://newsfirstlive.com/wp-content/uploads/2024/04/Mahesh-Bhupati.jpg

    ನಿನ್ನೆ ಆಡಿದ ಪಂದ್ಯದಲ್ಲೂ ಸೋಲು ಕಂಡ ಆರ್​ಸಿಬಿ ತಂಡ

    ಭಾರತೀಯ ಟೆನ್ನಿಸ್​ ತಾರೆ ಆರ್​ಸಿಬಿ ಬಗ್ಗೆ ಏನಂದ್ರು ಗೊತ್ತಾ?

    ಮಹೇಶ್​ ಭೂಪತಿ ಆರ್​ಬಿಸಿ ಮ್ಯಾನೇಜ್ಮೆಂಟ್​ ಬಗ್ಗೆ ಬಿಸಿಸಿಐಗೆ ಎನು ಹೇಳಿದ್ರು?

ಸತತ ಏಳು ಪಂದ್ಯ ಎದುರಿಸಿ ಆರು ಪಂದ್ಯದಲ್ಲಿ ಸತತ ಸೋಲು ಎಣಿಸುತ್ತಾ ಬಂದಿರುವ ಆರ್​ಸಿಬಿ ವಿರುದ್ಧ ಅನೇಕರು ಕೆಂಡಕಾರುತ್ತಿದ್ದಾರೆ. ಆರ್​ಸಿಬಿ ಮ್ಯಾನೇಜ್​ಮೆಂಟ್​ ಕುರಿತು ಬೈಗುಳದ ಸುರಿಮಳೆ ಸುರಿಸುತ್ತಿದ್ದಾರೆ.

ನಿನ್ನೆ ನಡೆದ ಸನ್​​ರೈಸರ್ಸ್​ ಹೈದರಾಬಾದ್​ ವಿರುದ್ಧ ಕೂಡ ಆರ್​ಸಿಬಿ ಸೋಲುಂಡಿದೆ. 25 ರನ್​ಗೆ ತಲೆಬಾಗಿದೆ. ಇದು ಅಭಿಮಾನಿಗಳಿಗೆ ಬೇಸರಕ್ಕೆ ಕಾರಣವಾಗಿದೆ. ಇದರ ಜೊತೆಗೆ ಹಿರಿಯ ಆಟಗಾರರು, ಕ್ರೀಡಾಭಿಮಾನಿಗಳಿಗೂ ನೋವು ತಂದಿದೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆರ್​ಸಿಬಿ ಮ್ಯಾನೇಜ್ಮೆಂಟ್​ ಕುರಿತು ಬರೆದು ಹಾಕುತ್ತಿದ್ದಾರೆ. ತಂಡದ ಬದಲಾವಣೆ ಅಗತ್ಯ ಎಂಬುದನ್ನು ಸಾರುತ್ತಿದ್ದಾರೆ.

ಭಾರತೀಯ ಟೆನ್ನಿಸ್​ ತಾರೆ ಏನಂದ್ರು?

ಭಾರತೀಯ ಟೆನ್ನಿಸ್​ ತಾರೆ ಮಹೇಶ್​ ಭೂಪತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಆರ್​ಸಿಬಿ ಸೋಲಿನ ಬಗ್ಗೆ ಬರೆದು ಹಾಕಿದ್ದಾರೆ. ‘ಕ್ರೀಡೆ, ಐಪಿಎಲ್​, ಅಭಿಮಾನಿಗಳು ಮತ್ತು ಆಟಗಾರ ಸಹ ತಮ್ಮ ಫ್ರಾಂಚೈಸಿಗಳನ್ನು ನಿರ್ವಹಿಸಿದಂತೆ ಯಶಸ್ವಿ ಪ್ರಾಂಚೈಸಿಯನ್ನು ಮಾಡಲು ಹೊಸ ಮಾಲೀಕರಿಗೆ ಆರ್​ಸಿಬಿಯನ್ನು ಮಾರಾಟ ಮಾಡಲು ಬಿಸಿಸಿಐ ಒತ್ತಾಯಿಸಬೇಕು’ ಎಂದು ಹೇಳಿದ್ದಾರೆ.

 

ಆರ್​ಸಿಬಿ ತಂಡದ ಸೋಲು ಅಭಿಮಾನಿಗಳಿಗಂತೂ ಭಾರೀ ಬೇಸರತರಿಸಿದೆ. ಅದರಲ್ಲೂ ಪಾಯಿಂಟ್​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿ ಆರ್​ಸಿಬಿ ಕಾಣಿಸಿಕೊಂಡಿದೆ. ಜೊತೆಗೆ ಕೊನೆಯ 5 ಪಂದ್ಯ ಸತತ ಸೋಲು ಕಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More