ಕರ್ನಾಟಕ ಬಂದ್: ಇನ್ನೂ ನಿರ್ಧಾರಕ್ಕೆ ಬಾರದ ಶಿಕ್ಷಣ ಇಲಾಖೆ.. ಪರೀಕ್ಷೆ ಬರೆಯುವ ಮಕ್ಕಳಿಗೆ ಟೆನ್ಷನ್..!

author-image
Veena Gangani
Updated On
ಕರ್ನಾಟಕ ಬಂದ್‌ನಿಂದ SSLC ವಿದ್ಯಾರ್ಥಿಗಳಿಗೆ ಆತಂಕ; ಮಾರ್ಚ್‌ 3ರಿಂದಲೇ ಹೋರಾಟ!
Advertisment
  • ಮೌಲ್ಯಾಂಕನ ಪರೀಕ್ಷೆ ಬಗ್ಗೆ ಶಿಕ್ಷಣ ಇಲಾಖೆ ಹೇಳುವುದು ಏನು?
  • ಕರ್ನಾಟಕ ಬಂದ್​ ಹಿನ್ನಲೆಯಲ್ಲಿ ಪರೀಕ್ಷೆ ಮುಂದೂಡಿಕೆ ಆಗುತ್ತಾ?
  • ಇಂದು 4, 5, 6 ಮತ್ತೆ 7ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಪರೀಕ್ಷೆ

ಬೆಂಗಳೂರು: ಮಾರ್ಚ್​ 21ರಿಂದ ರಾಜ್ಯದಲ್ಲಿ SSLC ಪರೀಕ್ಷೆ ಶುರುವಾಗಿದೆ. ಇತ್ತ 4, 5, 6 ಮತ್ತು 7ನೇ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿವೆ. ಈ ಮಧ್ಯೆ ಇಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೋರಾಟಗಾರರು ಪ್ರತಿಭಟನೆಗೆ ಇಳಿದಿದ್ದಾರೆ.

ಇದನ್ನೂ ಓದಿ:ನಾಳೆ ಓಲಾ, ಉಬರ್ ರಸ್ತೆಗೆ ಇಳಿಯಲ್ಲ.. ಕರ್ನಾಟಕ ಬಂದ್​ಗೆ ಯಾರೆಲ್ಲ ಬೆಂಬಲ ಕೊಟ್ಟವ್ರೆ..?

publive-image

ಈ ಹಿಂದೆ ಪರೀಕ್ಷೆ ವಿಚಾರಕ್ಕೆ ಬಂದ್​​ಗೆ ಹಲವು ಸಂಘಟನೆಗಳ ವಿರೋಧ ವ್ಯಕ್ತಪಡಿಸಿದ್ದವು. ಇದೇ ಕಾರಣಕ್ಕೆ ಬಂದ್ ದಿನಾಂಕ ಮುಂದೂಡಿಕೆ ಮಾಡಲು ಸಹ ಆಗ್ರಹಿಸಿದ್ದರು. ಹೀಗಾಗಿ ಸಾಕಷ್ಟು ಮಂದಿ ಕರ್ನಾಟಕ್​ ಬಂದ್​ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಸಾಕಷ್ಟು ವಿದ್ಯಾರ್ಥಿಗಳು ಕರ್ನಾಟಕ ಬಂದ್​ ಹಿನ್ನಲೆಯಲ್ಲಿ ಪರೀಕ್ಷೆ ಮುಂದೂಡಿಕೆ ಆಗುತ್ತಾ ಅಂತ ಗೊಂದಲದಲ್ಲಿದ್ದರು.

publive-image

ಸದ್ಯದ ಮಾಹಿತಿ ಪ್ರಕಾರ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪೂರ್ವ ನಿಗದಿಯಂತೆ ಮೌಲ್ಯಾಂಕನ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳಿಂದ ನ್ಯೂಸ್ ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ 4, 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಪರೀಕ್ಷೆ ನಡೆಯಲಿದೆ. ಒಂದು ವೇಳೆ ಬಂದ್​ನಿಂದ ತೀರಾ ಅಡಚಣೆಯಾದರೆ ಮಾತ್ರ ಪರೀಕ್ಷೆ ಸಮಯ ಅಥವಾ ದಿನ ಬದಲಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment