ಮಹಾ ಕುಂಭಮೇಳದಿಂದ ವಾಪಾಸ್ ಆಗೋವಾಗ ಭೀಕರ ಅಪಘಾತ; ಉಸಿರು ಚೆಲ್ಲಿದ 6 ಮಂದಿ

author-image
Veena Gangani
Updated On
ಮಹಾ ಕುಂಭಮೇಳದಿಂದ ವಾಪಾಸ್ ಆಗೋವಾಗ ಭೀಕರ ಅಪಘಾತ; ಉಸಿರು ಚೆಲ್ಲಿದ 6 ಮಂದಿ
Advertisment
  • ಸರಣಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ 17 ಮಂದಿ
  • ಕ್ಯಾಂಟರ್, ಟಿಟಿ ಹಾಗೂ ಬೈಕ್ ನಡುವೆ ನಡೆದ ಸರಣಿ ಅಪಘಾತ
  • ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸ್​ ಅಧಿಕಾರಿಗಳಿಂದ ಪರಿಶೀಲನೆ

ಬೆಳಗಾವಿ: ಮಹಾಕುಂಭಮೇಳದಿಂದ ವಾಪಾಸ್ ಆಗುವ ವೇಳೆ ಭೀಕರ ರಸ್ತೆ ಅಪಘಾತದ ಸಂಭವಿಸಿದೆ. ಪರಿಣಾಮ 6 ಮಂದಿ ಉಸಿರು ಚೆಲ್ಲಿದ ಘಟನೆ ಮಧ್ಯಪ್ರದೇಶ ಇಂದೋರ್ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ವಿಶ್ವ ಗೆದ್ದ ಅಲೆಕ್ಸಾಂಡರ್​​ನ ಕುದುರೆಯ ಹೆಸರೇನು? ತನ್ನ ಕುದುರೆಯ ಹೆಸರಲ್ಲಿ ಒಂದು ನಗರವನ್ನೇ ಸೃಷ್ಟಿಸಿದ್ದ ಸಿಕಂದರ್​!

publive-image

ಕ್ಯಾಂಟರ್, ಟಿಟಿ ಹಾಗೂ ಬೈಕ್ ನಡುವೆ ಸರಣಿ ಅಪಘಾತದಲ್ಲಿ 6 ಜನರ ಸಾವನ್ನಪ್ಪಿದ್ದಾರೆ. ಈ ಸರಣಿ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ರೆ, ಉಳಿದ 17 ಜನರಿಗೆ ಗಂಭೀರ ಗಾಯಗಳಾಗಿವೆ. ಮೃತ ಇಬ್ಬರು ಮಹಿಳೆಯರು ಬೆಳಗಾವಿ ಮೂಲದವರು ಎಂದು ಹೇಳಲಾಗುತ್ತಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment