ಬರೋಬ್ಬರಿ 14 ವರ್ಷಗಳ ಬಳಿಕ ಕೇರಳಕ್ಕೆ ಎಂಟ್ರಿ
ವಿಜಯ್ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಅತಿರೇಕದ ವರ್ತನೆ
GOAT ಚಿತ್ರೀಕರಣವೇ ಸದ್ಯಕ್ಕೆ ಸ್ಥಗಿತಗೊಳಿಸಿದ ಚಿತ್ರತಂಡ
ದಳಪತಿ ವಿಜಯ್ ಟೀಂ ನಿನ್ನೆ ಕೇರಳದ ತಿರುವನಂತಪುರಂಗೆ ಭೇಟಿ ಬಂದಿತ್ತು. ಈ ವೇಳೆ ಅಭಿಮಾನಿಗಳು ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ನೂಕು ನುಗ್ಗಲು ಆಗಿದೆ. ಮಾತ್ರವಲ್ಲ, ವಿಮಾನ ನಿಲ್ದಾಣದಿಂದ ಅವರು ತಂಗುವ ಹೋಟೆಲ್ ವರೆಗೂ ಫಾಲೋ ಮಾಡಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ.
the road is so mapped
video 📷📷📷#VIJAYStormHitsKerala pic.twitter.com/764HXv5EYB— Vijay (@IthayaThalapati) March 18, 2024
ಮಾತ್ರವಲ್ಲ, ಅಭಿಮಾನಿಗಳಿಂದ ವಿಜಯ್ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಪರಿಣಾಮ ಕಾರಿನ ಗಾಜು ಜಖಂಗೊಂಡಿದೆ. ಬರೋಬ್ಬರಿ 14 ವರ್ಷಗಳ ಬಳಿಕ ವಿಜಯ್ ಕೇರಳಕ್ಕೆ ಹೋಗಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಅವರನ್ನು ಆತ್ಮೀಯವಾಗಿ ಸ್ವಾಗತಿಸುವ ಬರದಲ್ಲಿ ಅಭಿಮಾನಿಗಳು ಅನಾಹುತ ಮಾಡಿದ್ದಾರೆ. ಪರಿಣಾಮ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಲಾಠಿಚಾರ್ಜ್ ಕೂಡ ಮಾಡಿದ್ದಾರೆ.
#VijayStormhitskerala #ThalapathyVijay #TVKVijay Thalapathy Vijay Car broken by rush of huge Kerala fans pic.twitter.com/Vdd9NVO9I9
— Mervin Raj (@MervinR80838445) March 18, 2024
ಯಾಕೆ ವಿಜಯ್ ಕೇರಳಕ್ಕೆ ಭೇಟಿ..?
ವರದಿಗಳ ಪ್ರಕಾರ ವಿಜಯ್ ತಮ್ಮ ಮುಂದಿನ ಸಿನಿಮ GOAT (The Greatest of All Time) ಸಿನಿಮಾದ ಶೂಟಿಂಗ್ಗಾಗಿ ತೆರಳಿದ್ದರು. ಸದ್ಯ ಅಭಿಮಾನಿಗಳ ದಾಂಧಲೆಯಿಂದಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದಾರೆ ಎಂದು ವರದಿಯಾಗಿದೆ. GOAT ಚಿತ್ರತಂಡವು ಒಂದು ವಾರಗಳ ಕಾಲ ಕೇರಳದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿತ್ತು. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರವು ಮುಂದಿನ ವರ್ಷ ತೆರೆಗೆ ಬರಲು ಸಿದ್ಧತೆ ನಡೆಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬರೋಬ್ಬರಿ 14 ವರ್ಷಗಳ ಬಳಿಕ ಕೇರಳಕ್ಕೆ ಎಂಟ್ರಿ
ವಿಜಯ್ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಅತಿರೇಕದ ವರ್ತನೆ
GOAT ಚಿತ್ರೀಕರಣವೇ ಸದ್ಯಕ್ಕೆ ಸ್ಥಗಿತಗೊಳಿಸಿದ ಚಿತ್ರತಂಡ
ದಳಪತಿ ವಿಜಯ್ ಟೀಂ ನಿನ್ನೆ ಕೇರಳದ ತಿರುವನಂತಪುರಂಗೆ ಭೇಟಿ ಬಂದಿತ್ತು. ಈ ವೇಳೆ ಅಭಿಮಾನಿಗಳು ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ನೂಕು ನುಗ್ಗಲು ಆಗಿದೆ. ಮಾತ್ರವಲ್ಲ, ವಿಮಾನ ನಿಲ್ದಾಣದಿಂದ ಅವರು ತಂಗುವ ಹೋಟೆಲ್ ವರೆಗೂ ಫಾಲೋ ಮಾಡಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ.
the road is so mapped
video 📷📷📷#VIJAYStormHitsKerala pic.twitter.com/764HXv5EYB— Vijay (@IthayaThalapati) March 18, 2024
ಮಾತ್ರವಲ್ಲ, ಅಭಿಮಾನಿಗಳಿಂದ ವಿಜಯ್ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಪರಿಣಾಮ ಕಾರಿನ ಗಾಜು ಜಖಂಗೊಂಡಿದೆ. ಬರೋಬ್ಬರಿ 14 ವರ್ಷಗಳ ಬಳಿಕ ವಿಜಯ್ ಕೇರಳಕ್ಕೆ ಹೋಗಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಅವರನ್ನು ಆತ್ಮೀಯವಾಗಿ ಸ್ವಾಗತಿಸುವ ಬರದಲ್ಲಿ ಅಭಿಮಾನಿಗಳು ಅನಾಹುತ ಮಾಡಿದ್ದಾರೆ. ಪರಿಣಾಮ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಲಾಠಿಚಾರ್ಜ್ ಕೂಡ ಮಾಡಿದ್ದಾರೆ.
#VijayStormhitskerala #ThalapathyVijay #TVKVijay Thalapathy Vijay Car broken by rush of huge Kerala fans pic.twitter.com/Vdd9NVO9I9
— Mervin Raj (@MervinR80838445) March 18, 2024
ಯಾಕೆ ವಿಜಯ್ ಕೇರಳಕ್ಕೆ ಭೇಟಿ..?
ವರದಿಗಳ ಪ್ರಕಾರ ವಿಜಯ್ ತಮ್ಮ ಮುಂದಿನ ಸಿನಿಮ GOAT (The Greatest of All Time) ಸಿನಿಮಾದ ಶೂಟಿಂಗ್ಗಾಗಿ ತೆರಳಿದ್ದರು. ಸದ್ಯ ಅಭಿಮಾನಿಗಳ ದಾಂಧಲೆಯಿಂದಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದಾರೆ ಎಂದು ವರದಿಯಾಗಿದೆ. GOAT ಚಿತ್ರತಂಡವು ಒಂದು ವಾರಗಳ ಕಾಲ ಕೇರಳದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿತ್ತು. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರವು ಮುಂದಿನ ವರ್ಷ ತೆರೆಗೆ ಬರಲು ಸಿದ್ಧತೆ ನಡೆಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ