ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಟೇರ ನಿರ್ದೇಶಕ, ನಟ ತರುಣ್ ಸುಧೀರ್
ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೆಸ್ನಲ್ಲಿ ನಟೆದ ಅದ್ಧೂರಿ ಮದುವೆ
ಎಲ್ಲರೂ ತಮ್ಮನ ಥರ, ಕುಟುಂಬದ ಥರ ಬಂದು ಹಾರೈಸಿದ್ದು ಖುಷಿ ತಂದಿದೆ
ಚೌಕ, ರಾಬರ್ಟ್, ಕಾಟೇರ ನಿರ್ದೇಶಕ ತರುಣ್ ಸುಧೀರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಸೋನಲ್ ಮೊಂತೆರೊ ಅವರನ್ನು ವರಿಸಿರೋ ನಟ ತರುಣ್ ಸುಧೀರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸ್ಟಾರ್ ಜೋಡಿಯ ಮದುವೆಯೂ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೆಸ್ನಲ್ಲಿ ಬಹಳ ಅದ್ಧೂರಿಯಾಗಿ ನಡೆದಿದೆ.
ಇದನ್ನೂ ಓದಿ: ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್ ಸುಧೀರ್- ಸೋನಲ್; ಸ್ಟಾರ್ ಜೋಡಿ ಮದುವೆಗೆ ಯಾರೆಲ್ಲಾ ಭಾಗಿ?
ಇನ್ನು, ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ತರುಣ್ ಸುಧೀರ್ ಅವರು ಸುದ್ದಿಗಾರರೊಂದಿಗೆ ಮಾತಾಡಿದ್ದಾರೆ. ಇವತ್ತಿನಿಂದ ನನಗೆ ಹೊಸ ಜೀವನ. ಒಂದು ಹುರುಪಿದೆ ನನಗೆ. ಇಷ್ಟು ದಿನದವರೆಗೂ ಕಾದಿದ್ದಕ್ಕೆ ದೇವರು ಕರುಣೆ ತೋರಿ ನನಗೆ ಅದ್ಭುತವಾದ ಸೋನಲ್ ಅವರನ್ನು ಕೊಟ್ಟಿದ್ದಾನೆ. ಎಲ್ಲರೂ ಬಂದು ನನಗೆ ಹಾಗೂ ಸೋನಲ್ ಅವರಿಗೆ ವಿಶ್ ಮಾಡಿದ್ದಾರೆ. ತುಂಬಾ ಜನ ಬಂದು ವಿಶ್ ಮಾಡಿದ್ರು. ಎಲ್ಲರೂ ತಮ್ಮನ ಥರ, ಕುಟುಂಬದ ಥರ ಬಂದು ಹಾರೈಸಿದ್ರು.
ದರ್ಶನ್ ಅನುಪಸ್ಥಿತಿ ಬಗ್ಗೆ ಹೇಳಿದ್ದೇನು?
ಲಗ್ನ ಪತ್ರಿಕೆ ಬರೆಸುವ ಮುಂಚೆ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದ್ವೆ ಮಾಡ್ಕೊ ಅಂತ ದರ್ಶನ್ ಅವರು ಹೇಳಿದ್ರು. ಆಗಸ್ಟ್ 11 ಡೇಟ್ ಕೊಟ್ಟಿದ್ವಿ. ದರ್ಶನ್ ಅವ್ರ ಅನುಪಸ್ಥಿತಿ ಬೇಸರ ತಂದಿದೆ ಅಂತ ಭಾವುಕರಾದ ತರುಣ್ ಸುಧೀರ್ ಮಾತಾಡಿದ್ದಾರೆ. ನನ್ನ ತಾಯಿ ಬಿಟ್ಟರೇ ದರ್ಶನ್ ಬಾಸ್ ಅವರು ಮದುವೆ ಮಾಡಿಕೋ ಅಂತ ಹೇಳುತ್ತಲೇ ಇದ್ದರು. ಆದರೆ ನಮ್ಮ ಮದುವೆಗೆ ನಮ್ಮ ಆತ್ಮೀಯರೇ ಇಲ್ಲ ಅಂದ್ರೆ ಬೇಸರ ಆಗುತ್ತದೆ. ಮದುವೆ ಕಲಸ ಮುಗಿದ ಕೂಡಲೇ ದರ್ಶನ್ ಅವರನ್ನು ಭೇಟಿ ಆಗಿ ಆಶೀರ್ವಾದ ಪಡೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ.
ಇನ್ನು, ಇಂದು ನಟಿ ಸೋನಲ್ ಮೊಂತೆರೊ ಅವರ ಹುಟ್ಟು ಹಬ್ಬದ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ವಿಚಾರವಾಗಿ ಮಾತಾಡಿದ ನಟಿ ಸೋನಲ್ ಮೊಂತೆರೊ, ಹೊಸ ಜೀವನ ಶುರು ಮಾಡುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನನಗೆ ತುಂಬಾನೆ ಮುಖ್ಯ. ನನ್ನ ಹುಟ್ಟು ಹಬ್ಬ ಇದೆ ಅಂತ ಮದುವೆ ಮಾಡಿಕೊಂಡಿಲ್ಲ. ಈ ದಿನ ತುಂಬ ವಿಶೇಷ ಅಂತ ಮದುವೆ ಆಗಿದ್ದೇವೆ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಟೇರ ನಿರ್ದೇಶಕ, ನಟ ತರುಣ್ ಸುಧೀರ್
ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೆಸ್ನಲ್ಲಿ ನಟೆದ ಅದ್ಧೂರಿ ಮದುವೆ
ಎಲ್ಲರೂ ತಮ್ಮನ ಥರ, ಕುಟುಂಬದ ಥರ ಬಂದು ಹಾರೈಸಿದ್ದು ಖುಷಿ ತಂದಿದೆ
ಚೌಕ, ರಾಬರ್ಟ್, ಕಾಟೇರ ನಿರ್ದೇಶಕ ತರುಣ್ ಸುಧೀರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಸೋನಲ್ ಮೊಂತೆರೊ ಅವರನ್ನು ವರಿಸಿರೋ ನಟ ತರುಣ್ ಸುಧೀರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸ್ಟಾರ್ ಜೋಡಿಯ ಮದುವೆಯೂ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೆಸ್ನಲ್ಲಿ ಬಹಳ ಅದ್ಧೂರಿಯಾಗಿ ನಡೆದಿದೆ.
ಇದನ್ನೂ ಓದಿ: ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್ ಸುಧೀರ್- ಸೋನಲ್; ಸ್ಟಾರ್ ಜೋಡಿ ಮದುವೆಗೆ ಯಾರೆಲ್ಲಾ ಭಾಗಿ?
ಇನ್ನು, ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ತರುಣ್ ಸುಧೀರ್ ಅವರು ಸುದ್ದಿಗಾರರೊಂದಿಗೆ ಮಾತಾಡಿದ್ದಾರೆ. ಇವತ್ತಿನಿಂದ ನನಗೆ ಹೊಸ ಜೀವನ. ಒಂದು ಹುರುಪಿದೆ ನನಗೆ. ಇಷ್ಟು ದಿನದವರೆಗೂ ಕಾದಿದ್ದಕ್ಕೆ ದೇವರು ಕರುಣೆ ತೋರಿ ನನಗೆ ಅದ್ಭುತವಾದ ಸೋನಲ್ ಅವರನ್ನು ಕೊಟ್ಟಿದ್ದಾನೆ. ಎಲ್ಲರೂ ಬಂದು ನನಗೆ ಹಾಗೂ ಸೋನಲ್ ಅವರಿಗೆ ವಿಶ್ ಮಾಡಿದ್ದಾರೆ. ತುಂಬಾ ಜನ ಬಂದು ವಿಶ್ ಮಾಡಿದ್ರು. ಎಲ್ಲರೂ ತಮ್ಮನ ಥರ, ಕುಟುಂಬದ ಥರ ಬಂದು ಹಾರೈಸಿದ್ರು.
ದರ್ಶನ್ ಅನುಪಸ್ಥಿತಿ ಬಗ್ಗೆ ಹೇಳಿದ್ದೇನು?
ಲಗ್ನ ಪತ್ರಿಕೆ ಬರೆಸುವ ಮುಂಚೆ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದ್ವೆ ಮಾಡ್ಕೊ ಅಂತ ದರ್ಶನ್ ಅವರು ಹೇಳಿದ್ರು. ಆಗಸ್ಟ್ 11 ಡೇಟ್ ಕೊಟ್ಟಿದ್ವಿ. ದರ್ಶನ್ ಅವ್ರ ಅನುಪಸ್ಥಿತಿ ಬೇಸರ ತಂದಿದೆ ಅಂತ ಭಾವುಕರಾದ ತರುಣ್ ಸುಧೀರ್ ಮಾತಾಡಿದ್ದಾರೆ. ನನ್ನ ತಾಯಿ ಬಿಟ್ಟರೇ ದರ್ಶನ್ ಬಾಸ್ ಅವರು ಮದುವೆ ಮಾಡಿಕೋ ಅಂತ ಹೇಳುತ್ತಲೇ ಇದ್ದರು. ಆದರೆ ನಮ್ಮ ಮದುವೆಗೆ ನಮ್ಮ ಆತ್ಮೀಯರೇ ಇಲ್ಲ ಅಂದ್ರೆ ಬೇಸರ ಆಗುತ್ತದೆ. ಮದುವೆ ಕಲಸ ಮುಗಿದ ಕೂಡಲೇ ದರ್ಶನ್ ಅವರನ್ನು ಭೇಟಿ ಆಗಿ ಆಶೀರ್ವಾದ ಪಡೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ.
ಇನ್ನು, ಇಂದು ನಟಿ ಸೋನಲ್ ಮೊಂತೆರೊ ಅವರ ಹುಟ್ಟು ಹಬ್ಬದ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ವಿಚಾರವಾಗಿ ಮಾತಾಡಿದ ನಟಿ ಸೋನಲ್ ಮೊಂತೆರೊ, ಹೊಸ ಜೀವನ ಶುರು ಮಾಡುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನನಗೆ ತುಂಬಾನೆ ಮುಖ್ಯ. ನನ್ನ ಹುಟ್ಟು ಹಬ್ಬ ಇದೆ ಅಂತ ಮದುವೆ ಮಾಡಿಕೊಂಡಿಲ್ಲ. ಈ ದಿನ ತುಂಬ ವಿಶೇಷ ಅಂತ ಮದುವೆ ಆಗಿದ್ದೇವೆ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ