newsfirstkannada.com

ಮೇಲುಕೋಟೆ ರೀಲ್ಸ್ ಟೀಚರ್ ಮರ್ಡರ್‌ ಕೇಸ್; ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್

Share :

Published January 24, 2024 at 12:53pm

Update January 24, 2024 at 12:54pm

    30 ಗಂಟೆಯಲ್ಲೇ ತಲೆಮರೆಸಿಕೂಂಡಿದ್ದ ಆರೋಪಿ ನಿತೀಶ್‌ ಬಂಧನ

    ಮಾಣಿಕ್ಯನಹಳ್ಳಿ ಗ್ರಾಮದ ಶಿಕ್ಷಕಿ ದೀಪಿಕಾ (28) ಕೊಲೆಯಾಗಿದ್ದರು

    ಮೇಲುಕೋಟೆಯಲ್ಲಿ ದೀಪಿಕಾಳನ್ನ ಎಳೆದಾಡಿದ್ದ ಆರೋಪಿ ಪರಾರಿ

ಮಂಡ್ಯ: ಮೇಲುಕೋಟೆ ಶಿಕ್ಷಕಿ ಮರ್ಡರ್ ಕೇಸ್‌ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ 30 ಗಂಟೆಯಲ್ಲೇ ತಲೆಮರೆಸಿಕೂಂಡಿದ್ದ ಆರೋಪಿ 22 ವರ್ಷದ ನಿತೀಶ್‌ ಅನ್ನು ಬಂಧಿಸಲಾಗಿದೆ.

ಆರೋಪಿ ನಿತೀಶ್‌ ಕೊಲೆಯಾದ ಟೀಚರ್ ದೀಪಿಕಾ ಜೊತೆ ಸಲುಗೆಯಿಂದ ಇದ್ದ. ಅಕ್ಕ, ಅಕ್ಕ ಎನ್ನುತ್ತಲೇ ಕೊಲೆ ಮಾಡಿ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶಿಕ್ಷಕಿಯನ್ನು ಶವ ಹೂತಿಟ್ಟಿದ್ದಾನೆ ಎನ್ನಲಾಗಿದೆ.
ಕಳೆದ ಜನವರಿ 20ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದ ಶಿಕ್ಷಕಿ ದೀಪಿಕಾ (28) ಕೊಲೆಯಾಗಿದ್ದರು. ಶನಿವಾರ ಮಧ್ಯಾಹ್ನ ಶಾಲೆಯಿಂದ ತೆರಳಿದ್ದ ದೀಪಿಕಾ ನಿಗೂಢವಾಗಿ ನಾಪತ್ತೆಯಾಗಿದ್ದರು. ಅಂದು ಸಂಜೆ ಬೆಟ್ಟದ ಹಿಂಭಾಗದ ರಸ್ತೆ ಸಮೀಪ ದೀಪಿಕಾ ಸ್ಕೂಟರ್ ಪತ್ತೆಯಾಗಿತ್ತು.

ಮೇಲುಕೋಟೆಯಲ್ಲಿ ದೀಪಿಕಾಳನ್ನ ಎಳೆದಾಡುತ್ತಿದ್ದ ದೃಶ್ಯವನ್ನ ಬೆಟ್ಟದ ಮೇಲಿಂದ ಪ್ರವಾಸಿಗೊಬ್ಬರು ವಿಡಿಯೋ ಮಾಡಿದ್ದರು. ಆರೋಪಿ ನಿತೀಶ್ ಅವರು ದೀಪಿಕಾಗೆ ಕಡೆಯದಾಗಿ ಫೋನ್ ಮಾಡಿದ್ದರು. ಕಳೆದ ಸೋಮವಾರ ಸಂಜೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಪತ್ತೆಯಾಗಿತ್ತು. ಶವ ಪತ್ತೆಯಾಗುತ್ತಿದ್ದಂತೆ ನಿತೀಶ್ ಗ್ರಾಮದಿಂದ ಎಸ್ಕೇಪ್ ಆಗಿದ್ದರು. ಆತನೇ ಕೊಲೆಗಾರ ಎಂದು ದೀಪಿಕಾ ಪತಿ ಲೋಕೇಶ್ ಆರೋಪಿಸಿದ್ದರು.

ಇದನ್ನೂ ಓದಿ: ರೀಲ್ಸ್ ಟೀಚರ್‌ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್; ದೀಪಿಕಾ ಕುಟುಂಬಸ್ಥರ ಮೇಲೂ ಪೊಲೀಸರಿಗೆ ಅನುಮಾನ

ದೀಪಿಕಾ ಮೃತದೇಹ ಸಿಕ್ಕ 30 ಗಂಟೆಯಲ್ಲಿ ಆರೋಪಿ ನಿತೀಶ್ ಅನ್ನು ಪೊಲೀಸರು ಬಂಧಿಸಿದ್ದಾರೆ. DSYP ಮುರುಳಿ ನೇತೃತ್ವದಲ್ಲಿ ಹಂತಕರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿ ನಿತೀಶ್ ಅನ್ನು ಬಂಧಿಸಿರುವ ಪೊಲೀಸರು ಇಂದೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಬಳಿಕ ರೀಲ್ಸ್ ಟೀಚರ್ ಕೊಲೆಗೆ ಕಾರಣವೇನು ಅನ್ನೋದರ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಲುಕೋಟೆ ರೀಲ್ಸ್ ಟೀಚರ್ ಮರ್ಡರ್‌ ಕೇಸ್; ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್

https://newsfirstlive.com/wp-content/uploads/2024/01/Melukote-Teacher-Murder.jpg

    30 ಗಂಟೆಯಲ್ಲೇ ತಲೆಮರೆಸಿಕೂಂಡಿದ್ದ ಆರೋಪಿ ನಿತೀಶ್‌ ಬಂಧನ

    ಮಾಣಿಕ್ಯನಹಳ್ಳಿ ಗ್ರಾಮದ ಶಿಕ್ಷಕಿ ದೀಪಿಕಾ (28) ಕೊಲೆಯಾಗಿದ್ದರು

    ಮೇಲುಕೋಟೆಯಲ್ಲಿ ದೀಪಿಕಾಳನ್ನ ಎಳೆದಾಡಿದ್ದ ಆರೋಪಿ ಪರಾರಿ

ಮಂಡ್ಯ: ಮೇಲುಕೋಟೆ ಶಿಕ್ಷಕಿ ಮರ್ಡರ್ ಕೇಸ್‌ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ 30 ಗಂಟೆಯಲ್ಲೇ ತಲೆಮರೆಸಿಕೂಂಡಿದ್ದ ಆರೋಪಿ 22 ವರ್ಷದ ನಿತೀಶ್‌ ಅನ್ನು ಬಂಧಿಸಲಾಗಿದೆ.

ಆರೋಪಿ ನಿತೀಶ್‌ ಕೊಲೆಯಾದ ಟೀಚರ್ ದೀಪಿಕಾ ಜೊತೆ ಸಲುಗೆಯಿಂದ ಇದ್ದ. ಅಕ್ಕ, ಅಕ್ಕ ಎನ್ನುತ್ತಲೇ ಕೊಲೆ ಮಾಡಿ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶಿಕ್ಷಕಿಯನ್ನು ಶವ ಹೂತಿಟ್ಟಿದ್ದಾನೆ ಎನ್ನಲಾಗಿದೆ.
ಕಳೆದ ಜನವರಿ 20ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದ ಶಿಕ್ಷಕಿ ದೀಪಿಕಾ (28) ಕೊಲೆಯಾಗಿದ್ದರು. ಶನಿವಾರ ಮಧ್ಯಾಹ್ನ ಶಾಲೆಯಿಂದ ತೆರಳಿದ್ದ ದೀಪಿಕಾ ನಿಗೂಢವಾಗಿ ನಾಪತ್ತೆಯಾಗಿದ್ದರು. ಅಂದು ಸಂಜೆ ಬೆಟ್ಟದ ಹಿಂಭಾಗದ ರಸ್ತೆ ಸಮೀಪ ದೀಪಿಕಾ ಸ್ಕೂಟರ್ ಪತ್ತೆಯಾಗಿತ್ತು.

ಮೇಲುಕೋಟೆಯಲ್ಲಿ ದೀಪಿಕಾಳನ್ನ ಎಳೆದಾಡುತ್ತಿದ್ದ ದೃಶ್ಯವನ್ನ ಬೆಟ್ಟದ ಮೇಲಿಂದ ಪ್ರವಾಸಿಗೊಬ್ಬರು ವಿಡಿಯೋ ಮಾಡಿದ್ದರು. ಆರೋಪಿ ನಿತೀಶ್ ಅವರು ದೀಪಿಕಾಗೆ ಕಡೆಯದಾಗಿ ಫೋನ್ ಮಾಡಿದ್ದರು. ಕಳೆದ ಸೋಮವಾರ ಸಂಜೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಪತ್ತೆಯಾಗಿತ್ತು. ಶವ ಪತ್ತೆಯಾಗುತ್ತಿದ್ದಂತೆ ನಿತೀಶ್ ಗ್ರಾಮದಿಂದ ಎಸ್ಕೇಪ್ ಆಗಿದ್ದರು. ಆತನೇ ಕೊಲೆಗಾರ ಎಂದು ದೀಪಿಕಾ ಪತಿ ಲೋಕೇಶ್ ಆರೋಪಿಸಿದ್ದರು.

ಇದನ್ನೂ ಓದಿ: ರೀಲ್ಸ್ ಟೀಚರ್‌ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್; ದೀಪಿಕಾ ಕುಟುಂಬಸ್ಥರ ಮೇಲೂ ಪೊಲೀಸರಿಗೆ ಅನುಮಾನ

ದೀಪಿಕಾ ಮೃತದೇಹ ಸಿಕ್ಕ 30 ಗಂಟೆಯಲ್ಲಿ ಆರೋಪಿ ನಿತೀಶ್ ಅನ್ನು ಪೊಲೀಸರು ಬಂಧಿಸಿದ್ದಾರೆ. DSYP ಮುರುಳಿ ನೇತೃತ್ವದಲ್ಲಿ ಹಂತಕರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿ ನಿತೀಶ್ ಅನ್ನು ಬಂಧಿಸಿರುವ ಪೊಲೀಸರು ಇಂದೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಬಳಿಕ ರೀಲ್ಸ್ ಟೀಚರ್ ಕೊಲೆಗೆ ಕಾರಣವೇನು ಅನ್ನೋದರ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More