ನೀರಿಲ್ಲದೆ ನರಳುವ ಮೊದಲ ನಗರ.. 2030ಕ್ಕೆ ಸಂಪೂರ್ಣ ಒಣಗಿ ಹೋಗುವ ರಾಜಧಾನಿ ಇದೇ!

author-image
admin
Updated On
ನೀರಿಲ್ಲದೆ ನರಳುವ ಮೊದಲ ನಗರ.. 2030ಕ್ಕೆ ಸಂಪೂರ್ಣ ಒಣಗಿ ಹೋಗುವ ರಾಜಧಾನಿ ಇದೇ!
Advertisment
  • 5 ವರ್ಷಗಳಲ್ಲಿ ಈ ಮಹಾನಗರ ಒಣಗಿ ಹೋಗುವ ಸಾಧ್ಯತೆ
  • ನೀರಿನ ಕೊರತೆ ಈ ದೇಶಕ್ಕೆ ಅತ್ಯಂತ ಕಠಿಣ ಸಮಸ್ಯೆಯಾಗಿದೆ
  • ನೀರನ್ನೂ ಪ್ರತಿದಿನದ ದಿನಸಿಗಳಂತೆ ಕೊಂಡುಕೊಳ್ಳುವ ಸ್ಥಿತಿ ನಿರ್ಮಾಣ

ಒಂದು ಪಡೆದರೆ ಮತ್ತೊಂದು ಕಳೆದುಕೊಳ್ಳುವ ಪರಿಸ್ಥಿತಿ, ಪಾಕಿಸ್ತಾನದ ನೆರೆ ದೇಶಕ್ಕೆ ಬಂದಿದೆ. 10 ವರ್ಷಗಳ ಸಮಯದಲ್ಲಿ, ವೇಗವಾಗಿ ಅಭಿವೃದ್ಧಿಯಾಗಿರೋ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ಗೆ ಜಲ ಸಂಕಷ್ಟ ಎಂದುರಾಗಿದೆ. ಇನ್ನೊಂದು 5 ವರ್ಷಗಳಲ್ಲಿ ಈ ಮಹಾನಗರ ಒಣಗಿ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

ಕಾಬೂಲ್ ನಗರದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಒಂದು ಮಾರಕದಂತೆ ಬಾಧಿಸುತ್ತಿದೆ. ಜನ ಕ್ಯಾನ್​ಗಳನ್ನ ಹಿಡಿದು ತಳ್ಳುವ ಗಾಡಿಗಳಲ್ಲಿ ನೀರಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಕಾಬೂಲ್​ನಲ್ಲಿರುವ ತೋಟಗಳು, ಹೂವು, ಹಣ್ಣಿನ ಮರಗಳೆಲ್ಲಾ ಒಣಗಿ ಹೋಗಿವೆ. ಈಗಾಗಲೇ ನಗರದ ಅರ್ಧದಷ್ಟು ಬೋರ್‌ವೆಲ್‌ಗಳು ಬತ್ತಿಹೋಗಿವೆ. ಸದ್ಯಕ್ಕೆ ಅಫ್ಘಾನಿಸ್ತಾನ ಬಹಳಷ್ಟು ಸಮಸ್ಯೆಗಳನ್ನ ಎದುರಿಸುತ್ತಿದೆ. ಆದರೆ ​ಈ ನೀರಿನ ಕೊರತೆ ಮಾತ್ರ ಆ ದೇಶಕ್ಕೆ ಅತ್ಯಂತ ಕಠಿಣವಾದ ಸಮಸ್ಯೆಯಾಗಿದೆ.

publive-image

ಅಫ್ಘಾನಿಸ್ತಾನಕ್ಕೆ ನೀರಿನ ಕೊರತೆ ಉಂಟಾಗಿದ್ದೇಗೆ?
ಮೊದಲನೆಯದಾಗಿ ಇಲ್ಲಿ ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಅದಕ್ಕಿಂತ ಮುಖ್ಯವಾಗಿ ಇಲ್ಲಿನ ಜನ ಸಂಖ್ಯೆ ವಿಪರೀತವಾಗಿ ಬೆಳೆದಿದೆ. 2001ರಲ್ಲಿ ಕಾಬೂಲ್​​ನಲ್ಲಿ 1 ಮಿಲಿಯನ್‌ಗಿಂತಲೂ ಕಡಿಮೆ ಜನರಿದ್ದರು. ಆದರೆ ಆ ಸಂಖ್ಯೆ ಈಗ 7 ಪಟ್ಟು ಹೆಚ್ಚಾಗಿದೆ. ಇದರಿಂದ ಸಾಮಾನ್ಯವಾಗಿ ನೀರಿನ ಖರ್ಚು ಕೂಡ ಹೆಚ್ಚಾಗಿದೆ. ಇಲ್ಲಿನ ನೀರನ್ನೂ ಪ್ರತಿದಿನದ ದಿನಸಿಗಳಂತೆ ಕೊಂಡುಕೊಳ್ಳುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಯಾಕೆಂದರೆ ಕಾಬೂಲ್‌ನ ಎಲ್ಲಾ ಜಲಚರಗಳಲ್ಲಿ ನೀರಿನ ಮಟ್ಟ 30 ಮೀಟರ್‌ಗಳಷ್ಟು ಕಡಿಮೆಯಾಗಿದೆ ಎಂದು ವರದಿಯಾಗಿದೆ.

publive-image

ಕಾಬೂಲ್​ನಲ್ಲಿ 80% ರಷ್ಟು ಅಂತರ್ಜಲ ಇದೆ. ಆದರೆ​ ಆ ನೀರು ಮಾಲಿನ್ಯದಿಂದ ಕೂಡಿದೆ. ಇಲ್ಲಿ ಹೆಚ್ಚಿನ ಮಟ್ಟದಲ್ಲಿ ಒಳಚರಂಡಿ, ಲವಣಾಂಶ ಮತ್ತು ಆರ್ಸೆನಿಕ್ ಸೇರಿರುವ ನೀರೇ ಇದೆ. ಇದು ಕುಡಿಯಲು, ಕೊನೆ ಪಕ್ಷ ಕೃಷಿಗೂ ಸಹ ಉಪಯೋಗವಲ್ಲದ ನೀರಾಗಿದೆ. ಈಗಾಗಲೇ ಕಾಬೂಲ್​ನ ಜನ ನೀರಿನ ಪರದಾಟದಿಂದ ವಲಸೆ ದಾರಿ ಹಿಡಿದಿದ್ದಾರಂತೆ.

ಇದನ್ನೂ ಓದಿ: RCB ಬ್ಯಾನ್ ಆಗುತ್ತಾ..? ಇಂಥ ದೊಡ್ಡ ನಿರ್ಧಾರವನ್ನು ಬಿಸಿಸಿಐ ಹೇಗೆ ತೆಗೆದುಕೊಳ್ಳಬಹುದು..? 

ಕಾಬೂಲ್​ಗೆ ನೀರು ಬೇಕೆಂದರೇ ಇರೋದು ಒಂದೇ ದಾರಿ
ಪಂಜ್‌ಶೀರ್ ನದಿ ಪೈಪ್‌ಲೈನ್.. ಈ ಒಂದು ಯೋಜನೆ ಅಫ್ಗಾನಿಸ್ತಾನದ ರಾಜಧಾನಿಗೆ ನೀರು ತರುವ ಸಾಮರ್ಥ್ಯ ಇದೆ. ಆದರೆ​​ ಅದಿನ್ನೂ ಕಾಮಾಗಾರಿಯಲ್ಲೇ ಇದೆ. ಒಂದು ವೇಳೆ ಆ ಯೋಜನೆ ಪೂರ್ತಿಯಾದರೆ ನಗರದ ಅಂತರ್ಜಲ ಮಟ್ಟ ಬೆಳೆಯುವ ಅವಕಾಶ ಇದೆ. ಆದರೆ ಈ ಯೋಜನೆ ಬಜೆಟ್​ ಅನುಮೋದನೆಗಾಗಿ ಕಾಯುತ್ತಿದೆ.

publive-image

ಕಾಬೂಲ್ ನಗರ, ಈ ಬಾರಿಯ ಬರಗಾಲಕ್ಕೆ ತುತ್ತಾಗಿರುವ ಮೊದಲ ರಾಜಧಾನಿಯಾಗಿದೆ. ಇದು ಹೀಗೆ ಮುಂದುವರಿದರೆ, ಕಾಬೂಲ್‌ನ ಎಲ್ಲಾ ನೀರಿನ ಸ್ಥಳಗಳು 2030 ರ ವೇಳೆಗೆ ಬತ್ತಿ ಹೋಗುತ್ತವೆ. ಇಡೀ ನಗರ ಒಣಗಿ ಹೋಗಲಿದೆ. ಏಳು ಮಿಲಿಯನ್ ಜನರಿಗೆ ನರಕ ದರ್ಶನ ಕೊಡಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment