/newsfirstlive-kannada/media/post_attachments/wp-content/uploads/2024/04/BNG_CHILD_DIED.jpg)
ಆ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಅವರೆಲ್ಲರೂ ಕುಟುಂಬ ಸಮೇತರಾಗಿ ಸಂಬಂಧಿ ಮದ್ವೆ ಮುಗಿಸಿ ವಾಪಾಸ್ಸಾಗಿದ್ರು. ಎಲ್ಲವೂ ಅಂದುಕೊಂಡಂತೆ ನಡೀತು ಅನ್ನುವಷ್ಟರಲ್ಲಿ ಆ ಕಂದಮ್ಮನ ಪಾಲಿಗೆ ತಂದೆಯೇ ಯಮನಾಗಿ ಎಂಟ್ರಿ ಕೊಟ್ಟಿದ್ದ. ಎತ್ತಿ, ಮುದ್ದಾಡಿದ್ದ ತಂದೆಯೇ ಆ ಮುಗುವಿನ ಉಸಿರನ್ನೇ ನಿಲ್ಲಿಸಿದ್ದ. ಆಟವಾಡ್ತಿದ್ದ ಮಗುವಿನ ಮೇಲೆ ಕಾರು ಹರಿದು ಬಿಟ್ಟಿದೆ. ನೋಡ್ ನೋಡ್ತಿದ್ದಂತೆ ಮಗು ಸಾವನ್ನಪ್ಪಿದೆ. ಹೀಗೆ ಕಾರು ಹತ್ತಿಸಿ ಆ ಕಂದಮ್ಮ ಸಾವಿಗೆ ಕಾರಣವಾಗಿದ್ದು ಬೇಱರು ಅಲ್ಲ, ಸ್ವಂತ ತಂದೆ.
/newsfirstlive-kannada/media/post_attachments/wp-content/uploads/2024/04/BNG_CHILD_DIED_1.jpg)
ಏಪ್ರಿಲ್ 21ರ ರಾತ್ರಿ 11 ಗಂಟೆ 26 ನಿಮಿಷಕ್ಕೆ ಸಿಲಿಕಾನ್ ಸಿಟಿಯ ಹೆಚ್.ಎಸ್.ಆರ್ ಲೇಔಟ್​​ನ ಅಗರದ ಮನೆಯೊಂದರ ಗೇಟ್​ ಬಳಿ ನಿಂತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಕಂದಮ್ಮ ಶೈಹಾ ಜನ್ನತ್​​ ಸಾವನ್ನಪ್ಪಿದೆ. ತನಗೇ ಗೊತ್ತಿಲ್ಲದ್ದಂತೆ ತಂದೆಯೇ ತನ್ನ ಮಗುವಿನ ಮೇಲೆ ಕಾರು ಹತ್ತಿಸಿ ಜೀವ ತೆಗೆದು ಬಿಟ್ಟಿದ್ದನು.
ವಿಧಿಯ ಆಟವೇ ಘೋರ!
- ಮೃತ ಶೈಹಾ ಜನ್ನತ್​ ಮನೆಯಲ್ಲಿ ಮದ್ವೆ ಸಂಭ್ರಮ ಜೋರಾಗಿತ್ತು
- ಸಂಬಂಧಿ ಮದುವೆಗೆ ಚನ್ನಪಟ್ಟಣಕ್ಕೆ ತೆರಳಿ ಕುಟುಂಬಸ್ಥರು ವಾಪಾಸ್​​
- ಕಾರು ಗೇಟ್​ ಬಳಿ ನಿಂತಿತ್ತು, ಕುಟುಂಬಸ್ಥರು ಮನೆಯೊಳಗೆ ಹೋಗಿದ್ರು
- ಮಗುವಿನ ತಂದೆ ಕಾರಿನಲ್ಲಿದ್ದ ಲಗೇಜ್ ಅನ್ನ ಮನೆಯೊಳಗೆ ಇಡ್ತಿದ್ರು
- ಅಷ್ಟೊತ್ತಿಗೆ ಎಲ್ಲೋ ಹೋಗೋದಕ್ಕೆ ಮಗುವಿನ ತಂದೆ ರೆಡಿಯಾಗಿದ್ರು
- ಕಾರು ಸ್ಟಾರ್ಟ್​ ಮಾಡೋಣ ಅನ್ನುವಷ್ಟರಲ್ಲಿ ಓಡೋಡಿ ಬಂದ ಮಗು
- ಕಾರ್​ನ ಡೋರ್​ ಬಳಿಯೇ ನಿಂತಿದ್ದ ಕಂದಮ್ಮ ಶೈಹಾ ಜನ್ನತ್
- ಮಗಳನ್ನ ಗಮನಿಸದೆ ಕಾರನ್ನ ಸ್ಟಾರ್ಟ್​​ ಮಾಡಿದ ಮಗುವಿನ ತಂದೆ
- ಮಗುವಿನ ಮೇಲೆ ಕಾರು ಹರಿದು ಕಂದಮ್ಮನ ಉಸಿರನ್ನೇ ನಿಲ್ಲಿಸಿತ್ತು
/newsfirstlive-kannada/media/post_attachments/wp-content/uploads/2024/04/BNG_CHILD_DIED_2.jpg)
ಸದ್ಯ ಘಟನೆ ಸಂಬಂಧ ಹೆಚ್.ಎಸ್.ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇನೆ ಹೇಳಿ ಕೈ ತುತ್ತು ತಿನ್ನಿಸಿ, ಪ್ರೀತಿಯಿಂದ ಸಾಕಿ ಸಲುಹಿದ್ದ ತಂದೆಯ ಕೈಯಿಂದ್ಲೇ ಮಗು ಹೀಗೆ ಸಾವನ್ನಪ್ಪಿದ್ದು, ನಿಜಕ್ಕೂ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us