ದರ್ಶನ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್​.. ಖ್ಯಾತ ಮೂಳೆ‌ತಜ್ಞ ಹೇಳಿರುವುದು ಏನು?

author-image
Bheemappa
Updated On
ನಟ ದರ್ಶನ್​​ಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್​; ಆದೇಶ ಪ್ರತಿಯಲ್ಲೇನಿದೆ?
Advertisment
  • ಜಾಮೀನು ಮೇಲೆ ಹೊರಗೆ ಇರುವ ಆರೋಪಿ ನಟ ದರ್ಶನ್
  • ದರ್ಶನ್​ ಆರೋಗ್ಯ ನೋಡಿಕೊಳ್ಳುತ್ತಿರುವ ಡಾಕ್ಟರ್​ ಇವರು
  • ದರ್ಶನ್ ಬೆನ್ನು ನೋವಿನ ಕುರಿತು ವೈದ್ಯರು ಮಾತನಾಡಿದ್ದೇನು?

ಮೈಸೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರು ಸದ್ಯ ರೆಗ್ಯೂಲರ್ ಜಾಮೀನು ಮೇಲೆ ಹೊರಗಿದ್ದಾರೆ. ಆದರೆ ಅವರಿಗೆ ಬೆನ್ನು ನೋವಿನ ಸಮಸ್ಯೆ ಇನಷ್ಟು ಜಾಸ್ತಿ ಆಗಿದೆ. ಈ ಬಗ್ಗೆ ಡಾಕ್ಟರ್​​ರೊಬ್ಬರು ಮಾತನಾಡಿದ್ದು ಅನಿವಾರ್ಯ ಬಿದ್ದರೇ ದರ್ಶನ್​ಗೆ ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ನ್ಯೂಸ್ ಫಸ್ಟ್ ಜೊತೆ ಮೈಸೂರಿನಲ್ಲಿ ಮಾತನಾಡಿದ ಖ್ಯಾತ ಮೂಳೆ‌ತಜ್ಞ ಡಾ.ಅಜಯ್ ಹೆಗ್ಡೆ ಅವರು, ದರ್ಶನ್ ಅವರು ಬೆನ್ನಿನ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. L5s ಇದು ಮೊದಲ ಸ್ಟೇಜ್​​ನಲ್ಲಿತ್ತು. ಆದರೆ ಇದರ ತೀವ್ರತೆ ಈಗ ಹೆಚ್ಚಾಗಿದ್ದು 2ನೇ ಹಂತಕ್ಕೆ ಜಾರಿದೆ. ಮೊದಲಿಗಿಂತ ಈಗ ದರ್ಶನ್ ಅವರ ದೇಹದ ತೂಕ ಹೆಚ್ಚಾಗಿದೆ. ಹೀಗಾಗಿ ಅವರಿಗೆ ನಿತ್ಯ ಫಿಜಿಯೋ ಥೆರಪಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮೈಸೂರು ವಿಶ್ವವಿದ್ಯಾಲಯದ ಹಂಗಾಮಿ‌ ಕುಲಪತಿ ಪ್ರೊ.ಮುಝಾಫರ್ ಅಸ್ಸಾದಿ ಇನ್ನಿಲ್ಲ.. ಸಿಎಂ ಸಂತಾಪ

publive-image

ದರ್ಶನ್​ಗೆ ಪ್ರತಿದಿನ ಮಾತ್ರೆಗಳನ್ನ ನೀಡಲಾಗುತ್ತಿದೆ. L5s ತೊಂದರೆ ಜೊತೆಗೆ ನರದ ತೊಂದರೆ ಕೂಡ ಅವರಿಗಿದೆ. ಸದ್ಯಕ್ಕೆ ದರ್ಶನ್​ಗೆ ಮೈಸೂರು ಮೂಲದ ನರತಜ್ಞ ಡಾ.ನವೀನ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಜೊತೆ ನಾನು ಕೂಡ ಸಂಪರ್ಕದಲ್ಲಿದ್ದು ಆರೋಗ್ಯ ಕುರಿತು ಮಾಹಿತಿ ಹಂಚಿಕೊಳ್ಳುತ್ತೇವೆ. ನಮ್ಮದೇ ನುರಿತ ವೈದ್ಯರ ತಂಡ ಅವರಿಗೆ ಫಿಜಿಯೋ ಥೆರಪಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment