/newsfirstlive-kannada/media/post_attachments/wp-content/uploads/2024/11/Darshan_Actor.jpg)
ಮೈಸೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರು ಸದ್ಯ ರೆಗ್ಯೂಲರ್ ಜಾಮೀನು ಮೇಲೆ ಹೊರಗಿದ್ದಾರೆ. ಆದರೆ ಅವರಿಗೆ ಬೆನ್ನು ನೋವಿನ ಸಮಸ್ಯೆ ಇನಷ್ಟು ಜಾಸ್ತಿ ಆಗಿದೆ. ಈ ಬಗ್ಗೆ ಡಾಕ್ಟರ್​​ರೊಬ್ಬರು ಮಾತನಾಡಿದ್ದು ಅನಿವಾರ್ಯ ಬಿದ್ದರೇ ದರ್ಶನ್​ಗೆ ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್ ಫಸ್ಟ್ ಜೊತೆ ಮೈಸೂರಿನಲ್ಲಿ ಮಾತನಾಡಿದ ಖ್ಯಾತ ಮೂಳೆತಜ್ಞ ಡಾ.ಅಜಯ್ ಹೆಗ್ಡೆ ಅವರು, ದರ್ಶನ್ ಅವರು ಬೆನ್ನಿನ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. L5s ಇದು ಮೊದಲ ಸ್ಟೇಜ್​​ನಲ್ಲಿತ್ತು. ಆದರೆ ಇದರ ತೀವ್ರತೆ ಈಗ ಹೆಚ್ಚಾಗಿದ್ದು 2ನೇ ಹಂತಕ್ಕೆ ಜಾರಿದೆ. ಮೊದಲಿಗಿಂತ ಈಗ ದರ್ಶನ್ ಅವರ ದೇಹದ ತೂಕ ಹೆಚ್ಚಾಗಿದೆ. ಹೀಗಾಗಿ ಅವರಿಗೆ ನಿತ್ಯ ಫಿಜಿಯೋ ಥೆರಪಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಮುಝಾಫರ್ ಅಸ್ಸಾದಿ ಇನ್ನಿಲ್ಲ.. ಸಿಎಂ ಸಂತಾಪ
/newsfirstlive-kannada/media/post_attachments/wp-content/uploads/2024/11/DARSHAN_NEW.jpg)
ದರ್ಶನ್​ಗೆ ಪ್ರತಿದಿನ ಮಾತ್ರೆಗಳನ್ನ ನೀಡಲಾಗುತ್ತಿದೆ. L5s ತೊಂದರೆ ಜೊತೆಗೆ ನರದ ತೊಂದರೆ ಕೂಡ ಅವರಿಗಿದೆ. ಸದ್ಯಕ್ಕೆ ದರ್ಶನ್​ಗೆ ಮೈಸೂರು ಮೂಲದ ನರತಜ್ಞ ಡಾ.ನವೀನ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಜೊತೆ ನಾನು ಕೂಡ ಸಂಪರ್ಕದಲ್ಲಿದ್ದು ಆರೋಗ್ಯ ಕುರಿತು ಮಾಹಿತಿ ಹಂಚಿಕೊಳ್ಳುತ್ತೇವೆ. ನಮ್ಮದೇ ನುರಿತ ವೈದ್ಯರ ತಂಡ ಅವರಿಗೆ ಫಿಜಿಯೋ ಥೆರಪಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us