ಕರ್ನಾಟಕದಲ್ಲಿ ಬಿಜೆಪಿ -ಜೆಡಿಎಸ್ ಮ್ರೈತಿಯಾಗಿ ಸ್ಪರ್ಧೆ
ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಪುಟ್ಟರಾಜುಗೆ ಬಹುತೇಕ ಫಿಕ್ಸ್
ಮಾಜಿ ಸಿಎಂ ಎಸ್ಎಂಕೆ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ
ಮಂಡ್ಯ: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಈಗಾಗಲೇ ಬಿಜೆಪಿ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದೆ. ಇತ್ತ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಸ್ಪರ್ಧಿಸಲು ಮುಂದಾಗಿದೆ. ಹೀಗಿರುವಾಗ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮೈತ್ರಿ ಟಿಕೆಟ್ ಖಚಿತದ ಬೆನ್ನಲ್ಲೇ ಅಲರ್ಟ್ ಆಗಿದ್ದಾರೆ. ಇದೇ ಸಂತಸದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನ ಭೇಟಿ ಮಾಡಿದ್ದಾರೆ.
ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಪುಟ್ಟರಾಜುಗೆ ಬಹುತೇಕ ಫಿಕ್ಸ್ ಆಗಿದೆ. ಟಿಕೆಟ್ ಖಾತರಿಯಾಗ್ತಿದ್ದಂತೆ ಜಿಲ್ಲೆಯ ಪ್ರಮುಖ ನಾಯಕರ ವಿಶ್ವಾಸಗಳಿಸುವ ಯತ್ನ ನಡೆಸಯುತ್ತಿದೆ. ಸದ್ಯ ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ಪುಟ್ಟರಾಜು ಭೇಟಿ ಮಾಡಿದ್ದಾರೆ. ಪೇಟ, ಶಾಲು, ಹೂಮಾಲೆ ಹಾಕಿ ಸನ್ಮಾಸಿದ್ದಾರೆ.
ಮಾಜಿ ಸಿಎಂ ಎಸ್ ಎಂ ಕೃಷ್ಣ ರಾಜಕೀಯದಿಂದ ದೂರವಿದ್ದರೂ ಮಂಡ್ಯದಲ್ಲಿ ಅಪಾರ ಬೆಂಬಲಿಗರು, ಅಭಿಮಾನಿಗಳನ್ನ ಹೊಂದಿದ್ದಾರೆ. ಆ ಹಿನ್ನಲೆ ಎಸ್.ಎಂ.ಕೆ ಬೆಂಬಲಿಗರ ವಿಶ್ವಾಸಗಳಿಸಲು ಸಿ.ಎಸ್.ಪುಟ್ಟರಾಜು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರಿನ ನಿವಾಸದಲ್ಲಿ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪುಟ್ಟರಾಜು ಜಿಲ್ಲಾ ರಾಜಕಾರಣದ ಬಗ್ಗೆ ಉಭಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತನಗೆ ಬೆಂಬಲ ನೀಡುವೆ ಎಸ್.ಎಂ.ಕೃಷ್ಣರಲ್ಲಿ ಪುಟ್ಟರಾಜು ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕರ್ನಾಟಕದಲ್ಲಿ ಬಿಜೆಪಿ -ಜೆಡಿಎಸ್ ಮ್ರೈತಿಯಾಗಿ ಸ್ಪರ್ಧೆ
ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಪುಟ್ಟರಾಜುಗೆ ಬಹುತೇಕ ಫಿಕ್ಸ್
ಮಾಜಿ ಸಿಎಂ ಎಸ್ಎಂಕೆ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ
ಮಂಡ್ಯ: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಈಗಾಗಲೇ ಬಿಜೆಪಿ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದೆ. ಇತ್ತ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಸ್ಪರ್ಧಿಸಲು ಮುಂದಾಗಿದೆ. ಹೀಗಿರುವಾಗ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮೈತ್ರಿ ಟಿಕೆಟ್ ಖಚಿತದ ಬೆನ್ನಲ್ಲೇ ಅಲರ್ಟ್ ಆಗಿದ್ದಾರೆ. ಇದೇ ಸಂತಸದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನ ಭೇಟಿ ಮಾಡಿದ್ದಾರೆ.
ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಪುಟ್ಟರಾಜುಗೆ ಬಹುತೇಕ ಫಿಕ್ಸ್ ಆಗಿದೆ. ಟಿಕೆಟ್ ಖಾತರಿಯಾಗ್ತಿದ್ದಂತೆ ಜಿಲ್ಲೆಯ ಪ್ರಮುಖ ನಾಯಕರ ವಿಶ್ವಾಸಗಳಿಸುವ ಯತ್ನ ನಡೆಸಯುತ್ತಿದೆ. ಸದ್ಯ ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ಪುಟ್ಟರಾಜು ಭೇಟಿ ಮಾಡಿದ್ದಾರೆ. ಪೇಟ, ಶಾಲು, ಹೂಮಾಲೆ ಹಾಕಿ ಸನ್ಮಾಸಿದ್ದಾರೆ.
ಮಾಜಿ ಸಿಎಂ ಎಸ್ ಎಂ ಕೃಷ್ಣ ರಾಜಕೀಯದಿಂದ ದೂರವಿದ್ದರೂ ಮಂಡ್ಯದಲ್ಲಿ ಅಪಾರ ಬೆಂಬಲಿಗರು, ಅಭಿಮಾನಿಗಳನ್ನ ಹೊಂದಿದ್ದಾರೆ. ಆ ಹಿನ್ನಲೆ ಎಸ್.ಎಂ.ಕೆ ಬೆಂಬಲಿಗರ ವಿಶ್ವಾಸಗಳಿಸಲು ಸಿ.ಎಸ್.ಪುಟ್ಟರಾಜು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರಿನ ನಿವಾಸದಲ್ಲಿ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪುಟ್ಟರಾಜು ಜಿಲ್ಲಾ ರಾಜಕಾರಣದ ಬಗ್ಗೆ ಉಭಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತನಗೆ ಬೆಂಬಲ ನೀಡುವೆ ಎಸ್.ಎಂ.ಕೃಷ್ಣರಲ್ಲಿ ಪುಟ್ಟರಾಜು ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ