newsfirstkannada.com

ತವರು ಮನೆಗೆ ಬಂದಿದ್ದ ಹೆಂಡತಿ.. ಸಲಾಕೆಯಿಂದ ಹೊಡೆದು ಕೊಲೆ ಮಾಡಿದ ಪಾಪಿ ಗಂಡ

Share :

Published February 19, 2024 at 8:38am

    ಹೆಚ್ಚಾಗಿ ಮೊಬೈಲ್​ ಬಳಕೆಯಿಂದ ಈ ಕೊಲೆ ನಡೆಯಿತಾ?

    ಎರಡು ಕುಟುಂಬಸ್ಥರ ನಡುವೆ ಆಗಾಗ ಜಗಳ ನಡೀತಿತ್ತು

    ತವರು ಮನೆಗೆ ಬಂದರೂ ಹೆಂಡತಿಯನ್ನು ಬಿಡಲಿಲ್ಲ ಪಾಪಿ

ವಿಜಯಪುರ: ಶೀಲ ಶಂಕಿಸಿ ತನ್ನ ಪತ್ನಿಯನ್ನೇ ಪಾಪಿ ಗಂಡ ಕೊಲೆ ಮಾಡಿರುವ ಘಟನೆ ತಿಕೋಟಾ ತಾಲೂಕಿನ ಹುಬನೂರ ತಾಂಡಾದಲ್ಲಿ ನಡೆದಿದೆ.

25 ವರ್ಷದ ರೇಷ್ಮಾ ರಾಠೋಡ್ ಕೊಲೆಯಾದ ದುರ್ದೈವಿ. ಪತಿ ಅಶೋಕ್ ರಾಠೋಡ್ ಸಲಾಕೆಯಿಂದ ಹೊಡೆದು ಪತ್ನಿಯ ಕೊಲೆ ಮಾಡಿದ್ದಾನೆ. ಪತ್ನಿ ರೇಷ್ಮಾ ಹಾಗೂ ಪತಿ ಅಶೋಕ್ ಕುಟುಂಬಸ್ಥರ ಮಧ್ಯೆ ಜಗಳವಾಗುತ್ತಿತ್ತು. ಈ ಕಾರಣಕ್ಕಾಗಿ ಎರಡು ತಿಂಗಳ ಹಿಂದೆ ರೇಷ್ಮಾ ತವರೂರಿಗೆ ಬಂದಿದ್ದಳು.

ಮನೆಯಲ್ಲಿರುವಾಗ ರೇಷ್ಮಾ ಹೆಚ್ಚಾಗಿ ಮೊಬೈಲ್​​ ಬಳಸುತ್ತಿದ್ದಳು. ಹೀಗಾಗಿ ಪತಿ ಶೀಲ ಶಂಕಿಸುತ್ತಿದ್ದರಿಂದ ಕುಟುಂಬದಲ್ಲಿ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಮಹಿಳೆ ತವರು ಮನೆ ಸೇರಿದ್ದಳು. ಆದರೆ ತವರು ಮನೆಗೆ ಬಂದ ಗಂಡ ಸಲಕಿಯಿಂದ ಹೊಡೆದು ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತವರು ಮನೆಗೆ ಬಂದಿದ್ದ ಹೆಂಡತಿ.. ಸಲಾಕೆಯಿಂದ ಹೊಡೆದು ಕೊಲೆ ಮಾಡಿದ ಪಾಪಿ ಗಂಡ

https://newsfirstlive.com/wp-content/uploads/2024/02/VIJ_Wife_Murder.jpg

    ಹೆಚ್ಚಾಗಿ ಮೊಬೈಲ್​ ಬಳಕೆಯಿಂದ ಈ ಕೊಲೆ ನಡೆಯಿತಾ?

    ಎರಡು ಕುಟುಂಬಸ್ಥರ ನಡುವೆ ಆಗಾಗ ಜಗಳ ನಡೀತಿತ್ತು

    ತವರು ಮನೆಗೆ ಬಂದರೂ ಹೆಂಡತಿಯನ್ನು ಬಿಡಲಿಲ್ಲ ಪಾಪಿ

ವಿಜಯಪುರ: ಶೀಲ ಶಂಕಿಸಿ ತನ್ನ ಪತ್ನಿಯನ್ನೇ ಪಾಪಿ ಗಂಡ ಕೊಲೆ ಮಾಡಿರುವ ಘಟನೆ ತಿಕೋಟಾ ತಾಲೂಕಿನ ಹುಬನೂರ ತಾಂಡಾದಲ್ಲಿ ನಡೆದಿದೆ.

25 ವರ್ಷದ ರೇಷ್ಮಾ ರಾಠೋಡ್ ಕೊಲೆಯಾದ ದುರ್ದೈವಿ. ಪತಿ ಅಶೋಕ್ ರಾಠೋಡ್ ಸಲಾಕೆಯಿಂದ ಹೊಡೆದು ಪತ್ನಿಯ ಕೊಲೆ ಮಾಡಿದ್ದಾನೆ. ಪತ್ನಿ ರೇಷ್ಮಾ ಹಾಗೂ ಪತಿ ಅಶೋಕ್ ಕುಟುಂಬಸ್ಥರ ಮಧ್ಯೆ ಜಗಳವಾಗುತ್ತಿತ್ತು. ಈ ಕಾರಣಕ್ಕಾಗಿ ಎರಡು ತಿಂಗಳ ಹಿಂದೆ ರೇಷ್ಮಾ ತವರೂರಿಗೆ ಬಂದಿದ್ದಳು.

ಮನೆಯಲ್ಲಿರುವಾಗ ರೇಷ್ಮಾ ಹೆಚ್ಚಾಗಿ ಮೊಬೈಲ್​​ ಬಳಸುತ್ತಿದ್ದಳು. ಹೀಗಾಗಿ ಪತಿ ಶೀಲ ಶಂಕಿಸುತ್ತಿದ್ದರಿಂದ ಕುಟುಂಬದಲ್ಲಿ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಮಹಿಳೆ ತವರು ಮನೆ ಸೇರಿದ್ದಳು. ಆದರೆ ತವರು ಮನೆಗೆ ಬಂದ ಗಂಡ ಸಲಕಿಯಿಂದ ಹೊಡೆದು ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More