ಅರ್ಧ ಎಕರೆ ಜಮೀನಿನಲ್ಲಿದ್ದ ಅಡಿಕೆ ಗಿಡಗಳಿಗೆ ಹಾನಿ
ರಂಧ್ರ ಕೊರೆದು ವಿಷಕಾರಿ ದ್ರಾವಣ ತುಂಬಿದ ಕಿಡಿಗೇಡಿಗಳು
ಪರಿಚಯಸ್ಥರೇ ರಾಸಯನಿಕ ವಿಷ ತುಂಬಿಸಿ ವಿಕೃತಿ ಮೆರೆದಿರುವ ಶಂಕೆ
ಹಾವೇರಿ: ಅಡಿಕೆ ಗಿಡಗಳಿಗೆ ರಂಧ್ರ ಕೊರೆದು ವಿಷಕಾರಿ ದ್ರಾವಣ ತುಂಬಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಚಿಕ್ಕೌಂಶಿ ಹೊಸೂರು ಗ್ರಾಮದಲ್ಲಿ ನಡೆದಿದೆ. ಯುವ ರೈತ ರಾಜೇಶ್ ಪಾಟೀಲ್ಗೆ ಸೇರಿದ ಸುಮಾರು ಅರ್ಧ ಎಕರೆ ಜಮೀನಿನಲ್ಲಿ ಬೆಳೆದಿದ್ದ 130 ಅಡಿಕೆ ಗಿಡಗಳನ್ನ ಕಿಡಿಗೇಡಿಗಳು ಹಾಳು ಮಾಡಿದ್ದಾರೆ.
ಜಮೀನು ವ್ಯಾಜ್ಯದ ಹಿನ್ನೆಲೆ ಪರಿಚಯಸ್ಥರೇ ಅಡಿಕೆಗಿಡಗಳನ್ನು ಹಾಳು ಮಾಡಿರುವ ಶಂಕೆ ವ್ಯಕ್ತವಾಗಿದೆ. ರೈತ ರಾಜೇಶ್ ಪಾಟೀಲ್ ಮೂರು ದಿನ ತಿರುಪತಿ ಪ್ರವಾಸದಲ್ಲಿದ್ರು. ಹೀಗಾಗಿ, ಊರಲ್ಲಿ ರೈತ ರಾಜೇಶ್ ಇಲ್ಲ ಎಂಬುದು ಗೊತ್ತಾಗ್ತಿದ್ದಂತೆ ಕಿಡಿಗೇಡಿಗಳು ಅಡಿಕೆ ಗಿಡಗಳಿಗೆ ರಾತ್ರೋರಾತ್ರಿ ಹೋಲ್ ಮಾಡಿ ರಾಸಾಯನಿಕ ವಿಷ ತುಂಬಿಸಿ ವಿಕೃತಿ ಮೆರೆದಿದ್ದಾರೆ.
ಇನ್ನು, ರೈತ ರಾಜೇಶ್ ಪಾಟೀಲ್, ಹಾನಗಲ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅರ್ಧ ಎಕರೆ ಜಮೀನಿನಲ್ಲಿದ್ದ ಅಡಿಕೆ ಗಿಡಗಳಿಗೆ ಹಾನಿ
ರಂಧ್ರ ಕೊರೆದು ವಿಷಕಾರಿ ದ್ರಾವಣ ತುಂಬಿದ ಕಿಡಿಗೇಡಿಗಳು
ಪರಿಚಯಸ್ಥರೇ ರಾಸಯನಿಕ ವಿಷ ತುಂಬಿಸಿ ವಿಕೃತಿ ಮೆರೆದಿರುವ ಶಂಕೆ
ಹಾವೇರಿ: ಅಡಿಕೆ ಗಿಡಗಳಿಗೆ ರಂಧ್ರ ಕೊರೆದು ವಿಷಕಾರಿ ದ್ರಾವಣ ತುಂಬಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಚಿಕ್ಕೌಂಶಿ ಹೊಸೂರು ಗ್ರಾಮದಲ್ಲಿ ನಡೆದಿದೆ. ಯುವ ರೈತ ರಾಜೇಶ್ ಪಾಟೀಲ್ಗೆ ಸೇರಿದ ಸುಮಾರು ಅರ್ಧ ಎಕರೆ ಜಮೀನಿನಲ್ಲಿ ಬೆಳೆದಿದ್ದ 130 ಅಡಿಕೆ ಗಿಡಗಳನ್ನ ಕಿಡಿಗೇಡಿಗಳು ಹಾಳು ಮಾಡಿದ್ದಾರೆ.
ಜಮೀನು ವ್ಯಾಜ್ಯದ ಹಿನ್ನೆಲೆ ಪರಿಚಯಸ್ಥರೇ ಅಡಿಕೆಗಿಡಗಳನ್ನು ಹಾಳು ಮಾಡಿರುವ ಶಂಕೆ ವ್ಯಕ್ತವಾಗಿದೆ. ರೈತ ರಾಜೇಶ್ ಪಾಟೀಲ್ ಮೂರು ದಿನ ತಿರುಪತಿ ಪ್ರವಾಸದಲ್ಲಿದ್ರು. ಹೀಗಾಗಿ, ಊರಲ್ಲಿ ರೈತ ರಾಜೇಶ್ ಇಲ್ಲ ಎಂಬುದು ಗೊತ್ತಾಗ್ತಿದ್ದಂತೆ ಕಿಡಿಗೇಡಿಗಳು ಅಡಿಕೆ ಗಿಡಗಳಿಗೆ ರಾತ್ರೋರಾತ್ರಿ ಹೋಲ್ ಮಾಡಿ ರಾಸಾಯನಿಕ ವಿಷ ತುಂಬಿಸಿ ವಿಕೃತಿ ಮೆರೆದಿದ್ದಾರೆ.
ಇನ್ನು, ರೈತ ರಾಜೇಶ್ ಪಾಟೀಲ್, ಹಾನಗಲ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ