ಗಂಡನನ್ನ ಹೆಣ್ಣಾಗಿ ಕಂಡು ಮೂರ್ಛೆ ಹೋದ ಪತ್ನಿ!
ಆರು ವರ್ಷಗಳ ಬಳಿಕ ಲಕ್ಷ್ಮಣ್ ರಾವ್ ಸುಳಿವು ಪತ್ತೆ
ನಾನವನಲ್ಲ.. ನಾನವನಲ್ಲ ಹೇಳುತ್ತಾ ಪೊಲೀಸರ ಕೈಗೆ ಸಿಕ್ಕಿಬಿದ್ದ
ಗಂಡು ಅಂದ್ರೆ ಶಿವ. ಹೆಣ್ಣು ಅಂದ್ರೆ ಶಕ್ತಿ. ಗಂಡು-ಹೆಣ್ಣು ಸೇರಿದ್ರೆ ಮಂಗಳಮುಖಿ. ಅಂದ್ರೆ ಶಿವಶಕ್ತಿ ಎಂದು ಕರೆಯುತ್ತೇವೆ. ಆದರೆ ಇಲ್ಲೊಂದು ಸ್ಟೋರಿ ಮಾತ್ರ ಕೊಂಚ ವಿಭಿನ್ನ. ಅದೇನಂದ್ರೆ ಮದುವೆಯಾದ ಗಂಡ ಹೆಣ್ಣಾಗಿ ಬದಲಾದ ಕತೆ.
ನಾಪತ್ತೆ ಆಗಿದ್ದ ಪತಿರಾಯ, ಹೆಣ್ಣಾಗಿ ಪ್ರತ್ಯಕ್ಷ
ಈ ಫೋಟೋದಲ್ಲಿ ಕಾಣ್ತಾ ಇರೋ ಈತ ಲಕ್ಷ್ಮಣರಾವ್. ಈ ಫೋಟೋದಲ್ಲಿ ಕಾಣ್ತಾ ಇರೋ ಈಕೆ ವಿಜಯಲಕ್ಷ್ಮಿ. ಕನ್ಫ್ಯೂಸ್ ಆಗಬೇಡಿ. ಇವರಿಬ್ಬರು ಒಬ್ಬರೇ. ಇದೊಂದು ತಮಿಳು ಸೂಪರ್ ಸ್ಟಾರ್ ವಿಜಯ್ ಸೇತುಪತಿ ಅಭಿನಯದ ಸೂಪರ್ ಡಿಲಕ್ಸ್ ಚಿತ್ರದ ಕಥೆಯಂತೇ ಇದೆ. ಇಂಥಾದೊಂದು ವಿಚಿತ್ರ ಪ್ರಕರಣ ರಾಮನಗದಲ್ಲಿ ನಡೆದಿದೆ.
ಲಕ್ಷ್ಮಣರಾವ್ ಎಂಬಾತ ವಿಜಯಲಕ್ಷ್ಮಿ ಆಗಿ ಬದಲಾದ ಕತೆಯಿದು. ಸುಮಾರು ಆರೇಳು ವರ್ಷಗಳ ಹಿಂದೆ ನಾಪತ್ತೆ ಆಗಿದ್ದ ಗಂಡ ಮುತೈದೆ ರೀತಿ ಹೆಣ್ಣಾಗಿ ಪತ್ತೆ ಆಗಿದ್ದಾನೆ. ಗಂಡನನ್ನು ಹೆಣ್ಣಾಗಿ ಕಂಡು ಪತ್ನಿ ಮೂರ್ಛೆ ಹೋಗಿದ್ದಾಳೆ. ರಾಮನಗರ ಪಟ್ಟಣದಲ್ಲಿ ನಡೆದ ಈ ವಿಚಿತ್ರ ಘಟನೆಗೆ ಪೊಲೀಸರೇ ಶಾಕ್ ಆಗಿದ್ದಾರೆ.
ಗಂಡ ಹೆಣ್ಣಾದ ಕಥೆ
ಚಿಕನ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಲಕ್ಷ್ಮಣ್ ರಾವ್ 2015ರಲ್ಲಿ ಮದುವೆಯೂ ಆಗಿದ್ದ. ರಾಮನಗರ ಪಟ್ಟಣದಲ್ಲಿ ಪತ್ನಿ ಜೊತೆ ವಾಸವಿದ್ದ. ಇವರಿಬ್ಬರ ದಾಂಪತ್ಯಕ್ಕೆ ಇಬ್ಬರು ಗಂಡು ಮಕ್ಕಳು ಕೂಡ ಜನಿಸಿದ್ದರು. ಸಾಲ ಮಾಡಿಕೊಂಡ ವಿಚಾರಕ್ಕೆ ಜಿಗುಪ್ಸೆಗೊಂಡಿದ್ದ ಲಕ್ಷ್ಮಣ್ ರಾವ್ ಮದುವೆಯಾದ ಎರಡು ವರ್ಷಕ್ಕೆ ಅಂದ್ರೆ. 2017 ಮಾರ್ಚ್ನಲ್ಲಿ ಮನೆ ಬಿಟ್ಟು ತೆರಳಿನಾಪತ್ತೆ ಆಗಿದ್ದನಂತೆ. ದಿನಗಳು ಕಳೆದರೂ ಪತಿ ಮನಗೆ ವಾಪಸ್ ಬರದ ಕಾರಣ ಪತ್ನಿ ಪತಿ ಲಕ್ಷ್ಮಣ್ ರಾವ್ ಕಾಣೆಯಾಗಿದ್ದಾರೆ ಹುಡುಕಿ ಕೊಡಿ ಎಂದು ದೂರನ್ನ ದಾಖಲಿಸಿದ್ರು. ನಾಪತ್ತೆಯಾದ ಕುರಿತು ರಾಮನಗರ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಇಬ್ಬರು ಗಂಡು ಮಕ್ಕಳನ್ನು ಹೊತ್ತು ಹುಡುಕಾಡಿದ್ದ ಪತ್ನಿಗೆ ಆರು ವರ್ಷಗಳ ಬಳಿಕ ಪತಿ ಲಕ್ಷ್ಮಣ್ ರಾವ್ ಸುಳಿವು ಪತ್ತೆಯಾಗಿದೆ.
ಬಿಗ್ಬಾಸ್ ಸ್ಪರ್ಧಿಯ ಫೋಟೋದಿಂದ ಸಿಗ್ತು ಸುಳಿವು
ಬರೊಬ್ಬರಿ ಆರು ವರ್ಷಗಳ ಬಳಿಕ ಲಕ್ಷ್ಮಣ್ ರಾವ್ ಸುಳಿವು ಪತ್ತೆಯಾಗಿದೆ. ಆತ ಸಿಕ್ಕಿದ್ದೇ ರೋಚಕ ಎಂದು ಹೇಳಲಾಗಿದೆ.
ಸ್ಪರ್ಧಿ ನೀತೂ ಸ್ವಾಗತಕ್ಕೆ ತೆರಳಿದ್ದ ತೃತೀಯ ಲಿಂಗಿಗಳು
ಬಿಗ್ ಬಾಸ್ ಕಾರ್ಯಕ್ರಮದಿಂದ ಲಕ್ಷ್ಮಣ್ ಸುಳಿವು ಪತ್ತೆ ಆಗಿದೆ. ಬಿಗ್ಬಾಸ್ ಸ್ಪರ್ಧಿ ನೀತೂ ಸ್ವಾಗತಕ್ಕೆ ತೃತೀಯ ಲಿಂಗಿಗಳು ತೆರಳಿದ್ದರು.. ಬಿಗ್ ಬಾಸ್ನ ನೀತೂಗೆ ನಡೆದಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ತೃತೀಯ ಲಿಂಗಿ ರಶ್ಮಿಕಾ ರೀಲ್ಸ್ನಲ್ಲಿ ಲಕ್ಷ್ಮಣ್ ಕಾಣಿಸಿಕೊಂಡಿದ್ದ. ವೈರಲ್ ಆಗಿದ್ದ ರೀಲ್ಸ್ನಲ್ಲಿ ಲಕ್ಷ್ಮಣ್ ಮುಖ ಹೋಲಿಕೆ ಆಗಿತ್ತು. ಕುಟುಂಬಸ್ಥರಿಗೂ ಲಕ್ಷ್ಮಣ್ ರಾವ್ ಇರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಕೂಡಲೇ ಐಜೂರು ಪೊಲೀಸರು ರಶ್ಮಿಕಾ ಮಾಹಿತಿ ಪಡೆದು ಆಕೆಯನ್ನು ವಿಚಾರಿಸಿದ್ದಾರೆ. ನನಗೆ ಲಕ್ಷ್ಮಣ್ ಹಿನ್ನೆಲೆ ಗೊತ್ತಿಲ್ಲ ಎಂದು ವಿಳಾಸ ಕೊಟ್ಟಿದ್ದಾಳೆ.
ಕೊನೆ ಕ್ಷಣದಲ್ಲಿ ಕೆಲಸ ಮಾಡಿದ ಇನ್ಸ್ ಪೆಕ್ಟರ್ ಐಡಿಯಾ
ರಶ್ಮಿಕಾ ವಿಳಾಸಕ್ಕೆ ಹೋಗಿ ನೋಡಿದಾಗ ಪೊಲೀಸರಿಗೆ ಶಾಕ್ ಆಗಿದೆ. ಅವರ ಬಳಿ ಇದ್ದ ಲಕ್ಷ್ಮಣ್ ರಾವ್ ಫೋಟೋ ಗೂ ಎದುರಿಗಿದ್ದ ಹೆಣ್ಣಿಗೂ ಅಜಾಗಜಾಂತರ ವ್ಯತ್ಯಾಸವಿತ್ತು. ಆದರೆ ಮುಖ ಮಾತ್ರ ಲಕ್ಷ್ಮಣ್ ರಾವ್ ರೀತಿ ಹೋಲಿಕೆ ಆಗಿತ್ತು. ನೀನು ಲಕ್ಷ್ಮಣ್ ರಾವ್ ಅಲ್ಲವೇ ಅಂತ ಪೊಲೀಸರ ಕೇಳಿದಾಗ, ನಾನು ಲಕ್ಷ್ಮಣ್ ರಾವ್ ಅಲ್ಲ, ನಾನು ವಿಜಯಲಕ್ಷ್ಮಿ ಎಂದಿದ್ದ ಲಕ್ಷ್ಮಣ್. ಇನ್ನು ಪೊಲೀಸರು ಕೂಡ ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ ಹೊರಡಲು ಸಿದ್ದರಾಗಿದ್ರು. ಆಗ ಇನ್ಸ್ಪೆಕ್ಟರ್ರ ಐಡಿಯಾ ವರ್ಕೌಟ್ ಆಗಿದೆ.
ಕಾರಲ್ಲಿ ಹೋಗುವಾಗ ಲಕ್ಷ್ಮಣ್ ಅಂತ ಕೂಗಿದ್ದ ಇನ್ಸ್ಪೆಕ್ಟರ್
ಕಾರಲ್ಲಿ ಹೋಗುವಾಗ ಇನ್ಸ್ಪೆಕ್ಟರ್ ಲಕ್ಷ್ಮಣ್ ಅಂತ ಕೂಗಿದ್ದಾರೆ. ಕೂಡಲೇ ಆತ ಹಾಂ ಅಂತ ತಿರುಗಿ ಉತ್ತರ ಕೊಟ್ಟಿದ್ದಾನೆ. ಆತ ಲಕ್ಷ್ಮಣ್ ಅನ್ನೋದು ಕನ್ಫರ್ಮ್ ಆಗ್ತಿದ್ದಂತೆ, ಪೊಲೀಸರು ರಾಮನಗರದ ಐಜೂರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿನಗೆ ಹೆಂಡತಿ ಮಕ್ಕಳು ಬೇಕಿಲ್ಲವಾ ಅಂತ ಪೊಲೀಸರ ಪ್ರಶ್ನಿಸಿದ್ದಾರೆ. ಆಗ ಆತ ನನಗೆ ಹೆಂಡತಿ ಬೇಡ, ಮಕ್ಕಳು ಬೇಡ ಎಂದಿದು ಕೊಟ್ಟ ಉತ್ತರ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಒಟ್ಟಾರೆ, ಪತಿ ಸಿಕ್ಕ ಖುಷಿಯಲ್ಲಿದ್ದ ಪತ್ನಿ, ಆತನ ವರ್ತನೆ ನೋಡಿ ಮೂರ್ಚೆ ಹೋಗಿದ್ದಾಳೆ. ನನ್ನ ಮಗಳ ಬಾಳು ಹಾಳು ಮಾಡಿ ಬಿಟ್ಟೆ ಅಂತಾ ಮಾನ ಕಣ್ಣೀರಿಟ್ಟಿದ್ದಾರೆ. ಸದ್ಯ ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ನಾಪತ್ತೆ ಪ್ರಕರಣವನ್ನ ಇತ್ಯರ್ಥಗೊಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗಂಡನನ್ನ ಹೆಣ್ಣಾಗಿ ಕಂಡು ಮೂರ್ಛೆ ಹೋದ ಪತ್ನಿ!
ಆರು ವರ್ಷಗಳ ಬಳಿಕ ಲಕ್ಷ್ಮಣ್ ರಾವ್ ಸುಳಿವು ಪತ್ತೆ
ನಾನವನಲ್ಲ.. ನಾನವನಲ್ಲ ಹೇಳುತ್ತಾ ಪೊಲೀಸರ ಕೈಗೆ ಸಿಕ್ಕಿಬಿದ್ದ
ಗಂಡು ಅಂದ್ರೆ ಶಿವ. ಹೆಣ್ಣು ಅಂದ್ರೆ ಶಕ್ತಿ. ಗಂಡು-ಹೆಣ್ಣು ಸೇರಿದ್ರೆ ಮಂಗಳಮುಖಿ. ಅಂದ್ರೆ ಶಿವಶಕ್ತಿ ಎಂದು ಕರೆಯುತ್ತೇವೆ. ಆದರೆ ಇಲ್ಲೊಂದು ಸ್ಟೋರಿ ಮಾತ್ರ ಕೊಂಚ ವಿಭಿನ್ನ. ಅದೇನಂದ್ರೆ ಮದುವೆಯಾದ ಗಂಡ ಹೆಣ್ಣಾಗಿ ಬದಲಾದ ಕತೆ.
ನಾಪತ್ತೆ ಆಗಿದ್ದ ಪತಿರಾಯ, ಹೆಣ್ಣಾಗಿ ಪ್ರತ್ಯಕ್ಷ
ಈ ಫೋಟೋದಲ್ಲಿ ಕಾಣ್ತಾ ಇರೋ ಈತ ಲಕ್ಷ್ಮಣರಾವ್. ಈ ಫೋಟೋದಲ್ಲಿ ಕಾಣ್ತಾ ಇರೋ ಈಕೆ ವಿಜಯಲಕ್ಷ್ಮಿ. ಕನ್ಫ್ಯೂಸ್ ಆಗಬೇಡಿ. ಇವರಿಬ್ಬರು ಒಬ್ಬರೇ. ಇದೊಂದು ತಮಿಳು ಸೂಪರ್ ಸ್ಟಾರ್ ವಿಜಯ್ ಸೇತುಪತಿ ಅಭಿನಯದ ಸೂಪರ್ ಡಿಲಕ್ಸ್ ಚಿತ್ರದ ಕಥೆಯಂತೇ ಇದೆ. ಇಂಥಾದೊಂದು ವಿಚಿತ್ರ ಪ್ರಕರಣ ರಾಮನಗದಲ್ಲಿ ನಡೆದಿದೆ.
ಲಕ್ಷ್ಮಣರಾವ್ ಎಂಬಾತ ವಿಜಯಲಕ್ಷ್ಮಿ ಆಗಿ ಬದಲಾದ ಕತೆಯಿದು. ಸುಮಾರು ಆರೇಳು ವರ್ಷಗಳ ಹಿಂದೆ ನಾಪತ್ತೆ ಆಗಿದ್ದ ಗಂಡ ಮುತೈದೆ ರೀತಿ ಹೆಣ್ಣಾಗಿ ಪತ್ತೆ ಆಗಿದ್ದಾನೆ. ಗಂಡನನ್ನು ಹೆಣ್ಣಾಗಿ ಕಂಡು ಪತ್ನಿ ಮೂರ್ಛೆ ಹೋಗಿದ್ದಾಳೆ. ರಾಮನಗರ ಪಟ್ಟಣದಲ್ಲಿ ನಡೆದ ಈ ವಿಚಿತ್ರ ಘಟನೆಗೆ ಪೊಲೀಸರೇ ಶಾಕ್ ಆಗಿದ್ದಾರೆ.
ಗಂಡ ಹೆಣ್ಣಾದ ಕಥೆ
ಚಿಕನ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಲಕ್ಷ್ಮಣ್ ರಾವ್ 2015ರಲ್ಲಿ ಮದುವೆಯೂ ಆಗಿದ್ದ. ರಾಮನಗರ ಪಟ್ಟಣದಲ್ಲಿ ಪತ್ನಿ ಜೊತೆ ವಾಸವಿದ್ದ. ಇವರಿಬ್ಬರ ದಾಂಪತ್ಯಕ್ಕೆ ಇಬ್ಬರು ಗಂಡು ಮಕ್ಕಳು ಕೂಡ ಜನಿಸಿದ್ದರು. ಸಾಲ ಮಾಡಿಕೊಂಡ ವಿಚಾರಕ್ಕೆ ಜಿಗುಪ್ಸೆಗೊಂಡಿದ್ದ ಲಕ್ಷ್ಮಣ್ ರಾವ್ ಮದುವೆಯಾದ ಎರಡು ವರ್ಷಕ್ಕೆ ಅಂದ್ರೆ. 2017 ಮಾರ್ಚ್ನಲ್ಲಿ ಮನೆ ಬಿಟ್ಟು ತೆರಳಿನಾಪತ್ತೆ ಆಗಿದ್ದನಂತೆ. ದಿನಗಳು ಕಳೆದರೂ ಪತಿ ಮನಗೆ ವಾಪಸ್ ಬರದ ಕಾರಣ ಪತ್ನಿ ಪತಿ ಲಕ್ಷ್ಮಣ್ ರಾವ್ ಕಾಣೆಯಾಗಿದ್ದಾರೆ ಹುಡುಕಿ ಕೊಡಿ ಎಂದು ದೂರನ್ನ ದಾಖಲಿಸಿದ್ರು. ನಾಪತ್ತೆಯಾದ ಕುರಿತು ರಾಮನಗರ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಇಬ್ಬರು ಗಂಡು ಮಕ್ಕಳನ್ನು ಹೊತ್ತು ಹುಡುಕಾಡಿದ್ದ ಪತ್ನಿಗೆ ಆರು ವರ್ಷಗಳ ಬಳಿಕ ಪತಿ ಲಕ್ಷ್ಮಣ್ ರಾವ್ ಸುಳಿವು ಪತ್ತೆಯಾಗಿದೆ.
ಬಿಗ್ಬಾಸ್ ಸ್ಪರ್ಧಿಯ ಫೋಟೋದಿಂದ ಸಿಗ್ತು ಸುಳಿವು
ಬರೊಬ್ಬರಿ ಆರು ವರ್ಷಗಳ ಬಳಿಕ ಲಕ್ಷ್ಮಣ್ ರಾವ್ ಸುಳಿವು ಪತ್ತೆಯಾಗಿದೆ. ಆತ ಸಿಕ್ಕಿದ್ದೇ ರೋಚಕ ಎಂದು ಹೇಳಲಾಗಿದೆ.
ಸ್ಪರ್ಧಿ ನೀತೂ ಸ್ವಾಗತಕ್ಕೆ ತೆರಳಿದ್ದ ತೃತೀಯ ಲಿಂಗಿಗಳು
ಬಿಗ್ ಬಾಸ್ ಕಾರ್ಯಕ್ರಮದಿಂದ ಲಕ್ಷ್ಮಣ್ ಸುಳಿವು ಪತ್ತೆ ಆಗಿದೆ. ಬಿಗ್ಬಾಸ್ ಸ್ಪರ್ಧಿ ನೀತೂ ಸ್ವಾಗತಕ್ಕೆ ತೃತೀಯ ಲಿಂಗಿಗಳು ತೆರಳಿದ್ದರು.. ಬಿಗ್ ಬಾಸ್ನ ನೀತೂಗೆ ನಡೆದಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ತೃತೀಯ ಲಿಂಗಿ ರಶ್ಮಿಕಾ ರೀಲ್ಸ್ನಲ್ಲಿ ಲಕ್ಷ್ಮಣ್ ಕಾಣಿಸಿಕೊಂಡಿದ್ದ. ವೈರಲ್ ಆಗಿದ್ದ ರೀಲ್ಸ್ನಲ್ಲಿ ಲಕ್ಷ್ಮಣ್ ಮುಖ ಹೋಲಿಕೆ ಆಗಿತ್ತು. ಕುಟುಂಬಸ್ಥರಿಗೂ ಲಕ್ಷ್ಮಣ್ ರಾವ್ ಇರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಕೂಡಲೇ ಐಜೂರು ಪೊಲೀಸರು ರಶ್ಮಿಕಾ ಮಾಹಿತಿ ಪಡೆದು ಆಕೆಯನ್ನು ವಿಚಾರಿಸಿದ್ದಾರೆ. ನನಗೆ ಲಕ್ಷ್ಮಣ್ ಹಿನ್ನೆಲೆ ಗೊತ್ತಿಲ್ಲ ಎಂದು ವಿಳಾಸ ಕೊಟ್ಟಿದ್ದಾಳೆ.
ಕೊನೆ ಕ್ಷಣದಲ್ಲಿ ಕೆಲಸ ಮಾಡಿದ ಇನ್ಸ್ ಪೆಕ್ಟರ್ ಐಡಿಯಾ
ರಶ್ಮಿಕಾ ವಿಳಾಸಕ್ಕೆ ಹೋಗಿ ನೋಡಿದಾಗ ಪೊಲೀಸರಿಗೆ ಶಾಕ್ ಆಗಿದೆ. ಅವರ ಬಳಿ ಇದ್ದ ಲಕ್ಷ್ಮಣ್ ರಾವ್ ಫೋಟೋ ಗೂ ಎದುರಿಗಿದ್ದ ಹೆಣ್ಣಿಗೂ ಅಜಾಗಜಾಂತರ ವ್ಯತ್ಯಾಸವಿತ್ತು. ಆದರೆ ಮುಖ ಮಾತ್ರ ಲಕ್ಷ್ಮಣ್ ರಾವ್ ರೀತಿ ಹೋಲಿಕೆ ಆಗಿತ್ತು. ನೀನು ಲಕ್ಷ್ಮಣ್ ರಾವ್ ಅಲ್ಲವೇ ಅಂತ ಪೊಲೀಸರ ಕೇಳಿದಾಗ, ನಾನು ಲಕ್ಷ್ಮಣ್ ರಾವ್ ಅಲ್ಲ, ನಾನು ವಿಜಯಲಕ್ಷ್ಮಿ ಎಂದಿದ್ದ ಲಕ್ಷ್ಮಣ್. ಇನ್ನು ಪೊಲೀಸರು ಕೂಡ ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ ಹೊರಡಲು ಸಿದ್ದರಾಗಿದ್ರು. ಆಗ ಇನ್ಸ್ಪೆಕ್ಟರ್ರ ಐಡಿಯಾ ವರ್ಕೌಟ್ ಆಗಿದೆ.
ಕಾರಲ್ಲಿ ಹೋಗುವಾಗ ಲಕ್ಷ್ಮಣ್ ಅಂತ ಕೂಗಿದ್ದ ಇನ್ಸ್ಪೆಕ್ಟರ್
ಕಾರಲ್ಲಿ ಹೋಗುವಾಗ ಇನ್ಸ್ಪೆಕ್ಟರ್ ಲಕ್ಷ್ಮಣ್ ಅಂತ ಕೂಗಿದ್ದಾರೆ. ಕೂಡಲೇ ಆತ ಹಾಂ ಅಂತ ತಿರುಗಿ ಉತ್ತರ ಕೊಟ್ಟಿದ್ದಾನೆ. ಆತ ಲಕ್ಷ್ಮಣ್ ಅನ್ನೋದು ಕನ್ಫರ್ಮ್ ಆಗ್ತಿದ್ದಂತೆ, ಪೊಲೀಸರು ರಾಮನಗರದ ಐಜೂರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿನಗೆ ಹೆಂಡತಿ ಮಕ್ಕಳು ಬೇಕಿಲ್ಲವಾ ಅಂತ ಪೊಲೀಸರ ಪ್ರಶ್ನಿಸಿದ್ದಾರೆ. ಆಗ ಆತ ನನಗೆ ಹೆಂಡತಿ ಬೇಡ, ಮಕ್ಕಳು ಬೇಡ ಎಂದಿದು ಕೊಟ್ಟ ಉತ್ತರ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಒಟ್ಟಾರೆ, ಪತಿ ಸಿಕ್ಕ ಖುಷಿಯಲ್ಲಿದ್ದ ಪತ್ನಿ, ಆತನ ವರ್ತನೆ ನೋಡಿ ಮೂರ್ಚೆ ಹೋಗಿದ್ದಾಳೆ. ನನ್ನ ಮಗಳ ಬಾಳು ಹಾಳು ಮಾಡಿ ಬಿಟ್ಟೆ ಅಂತಾ ಮಾನ ಕಣ್ಣೀರಿಟ್ಟಿದ್ದಾರೆ. ಸದ್ಯ ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ನಾಪತ್ತೆ ಪ್ರಕರಣವನ್ನ ಇತ್ಯರ್ಥಗೊಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ