/newsfirstlive-kannada/media/post_attachments/wp-content/uploads/2025/03/3-CAPITALS.jpg)
ಭಾರತವನ್ನು ವೈವಿದ್ಯಮಯವಾದ ಸಂಸ್ಕೃತಿ ಹಾಗೂ ಧರ್ಮಗಳನ್ನು ಒಳಗೊಂಡ ನೆಲವೆಂದು ಜಗತ್ತು ಗುರುತಿಸುತ್ತದೆ. ನಮ್ಮ ದೇಶದಲ್ಲಿ ಒಟ್ಟು 28 ರಾಜ್ಯಗಳಿವೆ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿವೆ. ಈ ಎಲ್ಲವನ್ನೂ ಒಳಗೊಂಡ ಭಾರತ ವಿಭಿನ್ನ ಸಂಸ್ಕೃತಿ ಪರಂಪರೆ ಹಾಗೂ ಕಲೆಗಳ ತವರಾಗಿ ನಿಂತಿದೆ. ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರಾದೇಶಿಕ ಮೌಲ್ಯವನ್ನು ಹೊಂದಿದೆ. ವಿಶಿಷ್ಟತೆ ಹಾಗೂ ಸ್ಥಳೀಯತೆಯಿಂದಲೇ ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತವೆ. ಆದರೆ ಈ ಒಂದು ರಾಜ್ಯ ಮಾತ್ರ ಈ ಎಲ್ಲಾ ಆಡಳಿತಗಳ ವ್ಯವಸ್ಥೆಗಳ ಆಚೆ ನಿಂತುಕೊಂಡಿದೆ. ಆ ರಾಜ್ಯ ಆಂಧ್ರಪ್ರದೇಶ.
ಇದನ್ನೂ ಓದಿ:ತಡರಾತ್ರಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ಗೆ ಎದೆ ನೋವು.. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಒಂದು ವಿಷಯದಲ್ಲಿ ಮಾತ್ರ ಈ ಒಂದು ರಾಜ್ಯ ಉಳಿದ ರಾಜ್ಯಗಳಿಗಿಂತ ಭಾರತದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಮೂರು ರಾಜಧಾನಿಗಳನ್ನು ಹೊಂದಿದ ಭಾರತದ ಏಕೈಕ ರಾಜ್ಯವಾಗಿ ಆಂಧ್ರಪ್ರದೇಶ ಗುರುತಿಸಲಾಗುತ್ತದೆ. ಈ ರಾಜ್ಯಕ್ಕೆ ವಿಶಾಖಪಟ್ಟಣಂ, ಅಮರಾವತಿ ಹಾಗೂ ಕರ್ನೂಲ್ ಎಂಬ ಮೂರು ರಾಜಧಾನಿಗಳು ಇವೆ
ಆಂಧ್ರಪ್ರದೇಶವೇಕೆ 3 ರಾಜಧಾನಿಗಳನ್ನು ಹೊಂದಿದೆ.
ಅಖಂಡ ಆಂಧ್ರಪ್ರದೇಶ 2014ರಲ್ಲಿ ಎರಡು ರಾಜ್ಯಗಳಾಗಿ ಭಾಗವಾಯಿತು. ಒಂದು ತೆಲಂಗಾಣವಾಗಿ ಹೆಸರು ಪಡೆದುಕೊಂಡರೆ ಮತ್ತೊಂದು ಆಂಧ್ರಪ್ರದೇಶವೆಂಬ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿಕೊಂಡಿತು. ಈ ಸಮಯದಲ್ಲಿ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2014ರ ಪ್ರಕಾರ ಅಮರಾವತಿಯನ್ನು ಗ್ರ್ಯಾಂಡ್ ಕ್ಯಾಪಿಟಲ್ ಎಂದು ಗುರುತಿಸಲಾಯ್ತು. ಅಮರಾವತಿ ಆಂಧ್ರಪ್ರದೇಶದ ಶಾಸಕಾಂಗ ರಾಜಧಾನಿಯಾಗಿ ಉಳಿದುಕೊಂಡರೆ ಕಾರ್ಯನಿರ್ವಾಹಕ ರಾಜಧಾನಿಯಾಗಿ ವಿಶಾಖಪಟ್ಟಣಂ ಗುರುತಿಸಿಕೊಂಡಿತು. ಮತ್ತೊಂದು ನಗರಿ ಕರ್ನೂಲ್ ಜಿಲ್ಲೆ ಆಂಧ್ರಪ್ರದೇಶದ ನ್ಯಾಯಾಂಗ ರಾಜಧಾನಿಯಾಗಿ ಪರಿಚಯಗೊಂಡಿತು.
/newsfirstlive-kannada/media/post_attachments/wp-content/uploads/2025/03/3-CAPITALS-1.jpg)
ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ನೇಮಕ ಮಾಡಲು ಕಾರಣವೇನೆಂದರೆ ರಾಜ್ಯದ ಅಭಿವೃದ್ಧಿಯ ವೇಗ ಹೆಚ್ಚಿಸಲು ಹಾಗೂ ಅಧಿಕಾರದ ಕೇಂದ್ರೀಕರಣ ಮಾಡಲು ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ರಾಜ್ಯವು ಒಟ್ಟು ಮೂರು ರಾಜಧಾನಿಗಳನ್ನು ಹೊಂದುವುದಾಗಿ ಘೋಷಿಸಿಕೊಂಡಿತು.
/newsfirstlive-kannada/media/post_attachments/wp-content/uploads/2025/03/3-CAPITALS-2.jpg)
ಅಂದ್ರೆ ಈ ರಾಜ್ಯದ ಇತಿಹಾಸ, ಪರಂಪರೆ, ನೈಸರ್ಗಿಕ ಚೆಲುವಿನ ಒಟ್ಟಾರೆಯ ಕೂಡಿಕೊಳ್ಳುವಿಕೆಯ ಒಂದು ಭಾಗವಾಗುವ ಉದ್ದೇಶದಿಂದ ಈ ಒಂದು ನಿರ್ಧಾರವನ್ನು ಕೈಗೊಳ್ಳಲಾಯಿತು. ಆಂಧ್ರಪ್ರದೇಶದಲ್ಲಿ ಪ್ರಾಚೀನ ಕಾಲದ ದೇಗುಲಗಳಿವೆ, ಅದ್ಭುತ ಕಡಲ ತೀರಗಳಿವೆ. ಸೊಂಪಾದ ಕಣಿವೆಗಳಿವೆ. ಒಂದು ವೇಳೆ ನೀವು ಆಂಧ್ರಪ್ರದೇಶ ಸೌಂದರ್ಯವನ್ನು ಸವಿಯಲೇ ಬೇಕಾಗಿದ್ದರೆ ಈ ಮೂರು ರಾಜಧಾನಿಗಳ ಕೆಲವು ಪ್ರದೇಶಗಳಿಗೆ ಭೇಟಿ ನೀಡುವ ಅನಿವಾರ್ಯತೆ ಬರುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ ಜೊತೆಗೆ ರಾಜಧಾನಿಗಳಿಂದ ಬರುವ ಆದಾಯಗಳು ಕೂಡ ಹೆಚ್ಚಾಗುತ್ತದೆ.. ಅದು ಮಾತ್ರವಲ್ಲ ಹೊಸ ಹೊಸ ಉದ್ಯಮಗಳು ಹಾಗೂ ಐಟಿ ಬಿಟಿ ಕಂಪನಿಗಳನ್ನು ಸೆಳೆಯಲು ಕೂಡ ಈ ಒಂದು ವ್ಯವಸ್ಥೆಯನ್ನು ರೂಪಿಸಲಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us