ಇಂದಿನಿಂದ ಬಜೆಟ್ ಅಧಿವೇಶನ ಆರಂಭ
ಸಾರೋಟಿನಲ್ಲಿ ನೂತನ ಸಂಸತ್ ಭವನಕ್ಕೆ ಆಗಮಿಸಿ ರಾಷ್ಟ್ರಪತಿ
ಜಂಟಿ ಸದನವನ್ನ ಉದ್ದೇಶಿಸಿ ಮಾತನಾಡಿದ ದ್ರೌಪದಿ ಮುರ್ಮು
ದೆಹಲಿ: ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾರೋಟಿನಲ್ಲಿ ನೂತನ ಸಂಸತ್ ಭವನಕ್ಕೆ ಆಗಮಿಸಿದ್ದಾರೆ. ಈ ವೇಳೆ ರಾಷ್ಟ್ರಪತಿಯನ್ನ ಎರಡು ಸದನದ ಸ್ಪೀಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸದಿಯ ಸಚಿವ ಪ್ರಲ್ಹಾದ್ ಜೋಶಿ ಸ್ವಾಗತಿಸಿದ್ದಾರೆ.
ಇನ್ನು ಜಂಟಿ ಸದನವನ್ನ ಉದ್ದೇಶಿಸಿ ನೂತನ ಪಾರ್ಲಿಮೇಂಟ್ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದಾರೆ. ಈ ವೇಳೆ ಮಹಿಳಾ ಮೀಸಲಾತಿ ಕಾನೂನು ಜಾರಿಗೆ ತಂದ ಸಂಸದರನ್ನು ಅವರು ಅಭಿನಂದಿಸಿದರು. ಏಷ್ಯನ್ ಕ್ರೀಡಾಕೂಟದಲ್ಲಿ ಅತ್ಯಧಿಕ ಪದಕಗಳು, ಚಂದ್ರಯಾನ-3 ಯಶಸ್ಸು ಮತ್ತು ರಾಮಮಂದಿರದ ನಿರ್ಮಾಣದ ಕನಸು ನನಸಾಗಿರೋದನ್ನ ಪ್ರಸ್ತಾಪಿಸಿದರು.
ರಾಮ ಮಂದಿರದ ಬಗ್ಗೆ ದ್ರೌಪದಿ ಮುರ್ಮು ಮಾತನಾಡಿದಾಗ, ನೆರೆದಿದ್ದ ಸಂಸದರು ಮೇಜು ಬಡಿದು ಅಭಿನಂದಿಸಿದರು. ರಾಮಮಂದಿರಕ್ಕೆ ಶತಮಾನಗಳಿಂದಲೂ ಆಶಯವಿದ್ದು, ಅದು ಈ ವರ್ಷ ಈಡೇರಿದೆ. ಗುಲಾಮಗಿರಿಯ ಯುಗದಲ್ಲಿ ಮಾಡಿದ ಕಾನೂನು ಈಗ ಇತಿಹಾಸದ ಭಾಗವಾಗಿದೆ. ತ್ರಿವಳಿ ತಲಾಖ್ ಎಂಬ ಅನಿಷ್ಟ ಪದ್ದತಿಯನ್ನು ಸರ್ಕಾರ ಕಟ್ಟುನಿಟ್ಟಿನ ಕಾನೂನು ನಿಬಂಧನೆ ಮಾಡಿದೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದಿನಿಂದ ಬಜೆಟ್ ಅಧಿವೇಶನ ಆರಂಭ
ಸಾರೋಟಿನಲ್ಲಿ ನೂತನ ಸಂಸತ್ ಭವನಕ್ಕೆ ಆಗಮಿಸಿ ರಾಷ್ಟ್ರಪತಿ
ಜಂಟಿ ಸದನವನ್ನ ಉದ್ದೇಶಿಸಿ ಮಾತನಾಡಿದ ದ್ರೌಪದಿ ಮುರ್ಮು
ದೆಹಲಿ: ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾರೋಟಿನಲ್ಲಿ ನೂತನ ಸಂಸತ್ ಭವನಕ್ಕೆ ಆಗಮಿಸಿದ್ದಾರೆ. ಈ ವೇಳೆ ರಾಷ್ಟ್ರಪತಿಯನ್ನ ಎರಡು ಸದನದ ಸ್ಪೀಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸದಿಯ ಸಚಿವ ಪ್ರಲ್ಹಾದ್ ಜೋಶಿ ಸ್ವಾಗತಿಸಿದ್ದಾರೆ.
ಇನ್ನು ಜಂಟಿ ಸದನವನ್ನ ಉದ್ದೇಶಿಸಿ ನೂತನ ಪಾರ್ಲಿಮೇಂಟ್ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದಾರೆ. ಈ ವೇಳೆ ಮಹಿಳಾ ಮೀಸಲಾತಿ ಕಾನೂನು ಜಾರಿಗೆ ತಂದ ಸಂಸದರನ್ನು ಅವರು ಅಭಿನಂದಿಸಿದರು. ಏಷ್ಯನ್ ಕ್ರೀಡಾಕೂಟದಲ್ಲಿ ಅತ್ಯಧಿಕ ಪದಕಗಳು, ಚಂದ್ರಯಾನ-3 ಯಶಸ್ಸು ಮತ್ತು ರಾಮಮಂದಿರದ ನಿರ್ಮಾಣದ ಕನಸು ನನಸಾಗಿರೋದನ್ನ ಪ್ರಸ್ತಾಪಿಸಿದರು.
ರಾಮ ಮಂದಿರದ ಬಗ್ಗೆ ದ್ರೌಪದಿ ಮುರ್ಮು ಮಾತನಾಡಿದಾಗ, ನೆರೆದಿದ್ದ ಸಂಸದರು ಮೇಜು ಬಡಿದು ಅಭಿನಂದಿಸಿದರು. ರಾಮಮಂದಿರಕ್ಕೆ ಶತಮಾನಗಳಿಂದಲೂ ಆಶಯವಿದ್ದು, ಅದು ಈ ವರ್ಷ ಈಡೇರಿದೆ. ಗುಲಾಮಗಿರಿಯ ಯುಗದಲ್ಲಿ ಮಾಡಿದ ಕಾನೂನು ಈಗ ಇತಿಹಾಸದ ಭಾಗವಾಗಿದೆ. ತ್ರಿವಳಿ ತಲಾಖ್ ಎಂಬ ಅನಿಷ್ಟ ಪದ್ದತಿಯನ್ನು ಸರ್ಕಾರ ಕಟ್ಟುನಿಟ್ಟಿನ ಕಾನೂನು ನಿಬಂಧನೆ ಮಾಡಿದೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ