newsfirstkannada.com

ಟ್ಯೂಷನ್‌ನಲ್ಲಿ ಶಿಕ್ಷಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ; ಪೋಷಕರ ಕಣ್ಣೀರು

Share :

Published January 22, 2024 at 6:01pm

Update January 22, 2024 at 6:06pm

    ಟ್ಯೂಷನ್‌ನಲ್ಲಿ ಶಿಕ್ಷಕರು ಜೋರಾಗಿ ಗದರಿದ್ದಕ್ಕೆ ಎಸ್ಕೇಪ್ ಆದ

    ಮನೆ ಬಿಟ್ಟು 24 ಗಂಟೆಯಾದರೂ ವಿದ್ಯಾರ್ಥಿಯ ಸುಳಿವೇ ಇಲ್ಲ

    ದಯವಿಟ್ಟು ಸಹಾಯ ಮಾಡಿ ಎಂದು ಬೇಡಿಕೊಂಡ ಪೋಷಕರು

ಬೆಂಗಳೂರು: ಟ್ಯೂಷನ್‌ನಲ್ಲಿ ಪಾಠ ಮಾಡುವ ಶಿಕ್ಷಕರು ಜೋರಾಗಿ ಗದರಿದ್ದಕ್ಕೆ ಬಾಲಕನೊಬ್ಬ ಮನೆ ಬಿಟ್ಟು ಹೋಗಿರೋ ಘಟನೆ ನಗರದಲ್ಲಿ ನಡೆದಿದೆ. 6ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಮನೆ ಬಿಟ್ಟು 24 ಗಂಟೆಯಾದರೂ ಇನ್ನೂ ಪತ್ತೆಯಾಗಿಲ್ಲ. ಬಾಲಕನಿಗಾಗಿ ಹುಡುಕಾಟ ನಡೆಸುತ್ತಿರುವ ಪೋಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಾಪತ್ತೆಯಾಗಿರುವ ಬಾಲಕನನ್ನು ಪರಿಣವ್ ಎಂದು ಗುರುತಿಸಲಾಗಿದೆ. ಈತನಿಗೆ ಇನ್ನೂ 12 ವರ್ಷ ವಯಸ್ಸು. ವೈಟ್‌ಫೀಲ್ಡ್‌ನ ಡೀನ್ಸ್ ಅಕಾಡೆಮಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾನೆ. ಟ್ಯೂಷನ್‌ನಲ್ಲಿ ಬೈದಿದ್ದಕ್ಕೆ ಬಾಲಕ ಮನೆ ಬಿಟ್ಟು ಹೋಗಿದ್ದಾನೆ ಎಂದು ಪೋಷಕರು ಹೇಳಿದ್ದಾರೆ.

 

ನೀವು ಈ ಮಗುವಿನ ಬಗ್ಗೆ ಯಾವುದೇ ಮಾಹಿತಿ ಪಡೆದರೆ ದಯವಿಟ್ಟು ತಂದೆ, ತಾಯಿಯನ್ನು ಸಂಪರ್ಕಿಸಿ. ದಯವಿಟ್ಟು ತಮ್ಮ ಮಗ ನಮ್ಮೊಂದಿಗೆ ಒಂದಾಗಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಕಳೆದ ಜನವರಿ 21ರಂದು ಪರಿಣವ್ ಮನೆ ಬಿಟ್ಟು ಹೋಗಿದ್ದಾನೆ. ಮಾರತಹಳ್ಳಿ ಮಾರುಕಟ್ಟೆಯಿಂದ ದೊಮ್ಮಲೂರು, ಹಳೆಯ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಪಿಜ್ಜಾ ಹಟ್, ಗೋಲ್ಡನ್ ಎನ್‌ಕ್ಲೇವ್‌, ಮಣಿಪಾಲ್ ಆಸ್ಪತ್ರೆ, ಡೈಮಂಡ್ ಡಿಸ್ಟ್ರಿಕ್ಟ್‌, ಹಳೆಯ ವಿಮಾನ ನಿಲ್ದಾಣದ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಅದು ಸಹಾಯಕವಾಗುತ್ತದೆ ಎಂದು ಕೋರಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ಯೂಷನ್‌ನಲ್ಲಿ ಶಿಕ್ಷಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ; ಪೋಷಕರ ಕಣ್ಣೀರು

https://newsfirstlive.com/wp-content/uploads/2024/01/Bangalore-Missing.jpg

    ಟ್ಯೂಷನ್‌ನಲ್ಲಿ ಶಿಕ್ಷಕರು ಜೋರಾಗಿ ಗದರಿದ್ದಕ್ಕೆ ಎಸ್ಕೇಪ್ ಆದ

    ಮನೆ ಬಿಟ್ಟು 24 ಗಂಟೆಯಾದರೂ ವಿದ್ಯಾರ್ಥಿಯ ಸುಳಿವೇ ಇಲ್ಲ

    ದಯವಿಟ್ಟು ಸಹಾಯ ಮಾಡಿ ಎಂದು ಬೇಡಿಕೊಂಡ ಪೋಷಕರು

ಬೆಂಗಳೂರು: ಟ್ಯೂಷನ್‌ನಲ್ಲಿ ಪಾಠ ಮಾಡುವ ಶಿಕ್ಷಕರು ಜೋರಾಗಿ ಗದರಿದ್ದಕ್ಕೆ ಬಾಲಕನೊಬ್ಬ ಮನೆ ಬಿಟ್ಟು ಹೋಗಿರೋ ಘಟನೆ ನಗರದಲ್ಲಿ ನಡೆದಿದೆ. 6ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಮನೆ ಬಿಟ್ಟು 24 ಗಂಟೆಯಾದರೂ ಇನ್ನೂ ಪತ್ತೆಯಾಗಿಲ್ಲ. ಬಾಲಕನಿಗಾಗಿ ಹುಡುಕಾಟ ನಡೆಸುತ್ತಿರುವ ಪೋಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಾಪತ್ತೆಯಾಗಿರುವ ಬಾಲಕನನ್ನು ಪರಿಣವ್ ಎಂದು ಗುರುತಿಸಲಾಗಿದೆ. ಈತನಿಗೆ ಇನ್ನೂ 12 ವರ್ಷ ವಯಸ್ಸು. ವೈಟ್‌ಫೀಲ್ಡ್‌ನ ಡೀನ್ಸ್ ಅಕಾಡೆಮಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾನೆ. ಟ್ಯೂಷನ್‌ನಲ್ಲಿ ಬೈದಿದ್ದಕ್ಕೆ ಬಾಲಕ ಮನೆ ಬಿಟ್ಟು ಹೋಗಿದ್ದಾನೆ ಎಂದು ಪೋಷಕರು ಹೇಳಿದ್ದಾರೆ.

 

ನೀವು ಈ ಮಗುವಿನ ಬಗ್ಗೆ ಯಾವುದೇ ಮಾಹಿತಿ ಪಡೆದರೆ ದಯವಿಟ್ಟು ತಂದೆ, ತಾಯಿಯನ್ನು ಸಂಪರ್ಕಿಸಿ. ದಯವಿಟ್ಟು ತಮ್ಮ ಮಗ ನಮ್ಮೊಂದಿಗೆ ಒಂದಾಗಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಕಳೆದ ಜನವರಿ 21ರಂದು ಪರಿಣವ್ ಮನೆ ಬಿಟ್ಟು ಹೋಗಿದ್ದಾನೆ. ಮಾರತಹಳ್ಳಿ ಮಾರುಕಟ್ಟೆಯಿಂದ ದೊಮ್ಮಲೂರು, ಹಳೆಯ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಪಿಜ್ಜಾ ಹಟ್, ಗೋಲ್ಡನ್ ಎನ್‌ಕ್ಲೇವ್‌, ಮಣಿಪಾಲ್ ಆಸ್ಪತ್ರೆ, ಡೈಮಂಡ್ ಡಿಸ್ಟ್ರಿಕ್ಟ್‌, ಹಳೆಯ ವಿಮಾನ ನಿಲ್ದಾಣದ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಅದು ಸಹಾಯಕವಾಗುತ್ತದೆ ಎಂದು ಕೋರಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More