newsfirstkannada.com

ಬೆಂಗಳೂರಲ್ಲಿ ಒಂದು ವಾರ ಭೀಕರ ಬಿಸಿಲು; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯೇನು?

Share :

Published March 28, 2024 at 9:13pm

Update March 28, 2024 at 9:28pm

    ಈ ವರ್ಷ ಬೆಂಗಳೂರು ಬಹುದಿನಗಳ ಕಾಲ ಸಖತ್‌ ಹಾಟ್ ಸಿಟಿ ಆಗುತ್ತೆ

    ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 40 ಡಿಗ್ರಿ ಉಷ್ಣಾಂಶ ದಾಖಲಾಗೋ ಸಾಧ್ಯತೆ

    ಮುಂದಿನ 2 ತಿಂಗಳು ಬಿಸಿಲ ಬೇಗೆಯಿಂದ ಬಳಲುವ ವಾತಾವರಣ ಗ್ಯಾರಂಟಿ

ಸಿಲಿಕಾನ್ ಸಿಟಿ ಬೆಂಗಳೂರು ವರ್ಷ ಪೂರ್ತಿ ಒಂದೇ ರೀತಿಯ ವಾತಾವರಣ ಇರುವ ಸುಂದರ ನಗರ. ಅದಕ್ಕೆ ಇದನ್ನ ಗಾರ್ಡನ್ ಸಿಟಿ ಅಂತ ಕರೆಯಲಾಗುತ್ತೆ. ಆದ್ರೀಗ ಉದ್ಯಾನನಗರಿ ಸಖತ್‌ ಹಾಟ್ ಸಿಟಿಯಾಗಿ ಬದಲಾಗುತ್ತಿದೆ. ಈ ವರ್ಷ ಬೆಂಗಳೂರು ಬಹುದಿನಗಳ ನಿರಂತರ ಶಾಖದ ಅಲೆಗೆ ಸಾಕ್ಷಿಯಾಗುತ್ತಿದೆ. ಹವಾಮಾನ ಇಲಾಖೆ ಬೆಂಗಳೂರಿನ ಭಾರೀ ಬಿಸಿಲಿನ ವಾತಾವರಣದ ಬಗ್ಗೆ ಎಚ್ಚರಿಕೆ ನೀಡಿದೆ.

ಮುಂದಿನ ಒಂದು ವಾರ ರಾಜಧಾನಿ ಬೆಂಗಳೂರಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇಷ್ಟು ದಿನ ಬಿಸಿಲ ವಾತಾವರಣ ಇರುವ ನಗರಿಗೆ ಇನ್ಮುದೆ ಬಿಸಿ ಗಾಳಿ ಸೃಷ್ಟಿಯಾಗುತ್ತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬರೀ ಒಂದು ವಾರ ಅಷ್ಟೇ ಅಲ್ಲ ಮುಂದಿನ ಎರಡು ತಿಂಗಳು ಬಿಸಿಲ ಬೇಗೆಯಿಂದ ಬಳಲು ಸಿಲಿಕಾನ್ ಸಿಟಿಯ ಜನ ಸಿದ್ಧರಾಗಬೇಕು ಎನ್ನಲಾಗಿದೆ.

ಮುಂದಿನವಾರ ಹೇಗಿರಲಿದೆ ಉಷ್ಣಾಂಶ?
ಮಾರ್ಚ್ 28ರ ಗುರುವಾರ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಬೆಂಗಳೂರಿನಲ್ಲಿತ್ತು. ಮಾರ್ಚ್‌ 29ರ ಶುಕ್ರವಾರ 35 ಡಿಗ್ರಿಯಷ್ಟು ಬಿಸಿಲು ಮುಂದುವರಿಯಲಿದೆ. ಶನಿವಾರ ಮಾರ್ಚ್ 30ರಿಂದ ಏಪ್ರಿಲ್ 02ರವರೆಗೂ ಅತ್ಯಧಿಕ ತಾಪಮಾನ ಬೆಂಗಳೂರನ್ನು ಆವರಿಸಲಿದೆ. ಪ್ರತಿದಿನ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಅಲರ್ಟ್ ನೀಡಿದೆ.
ಸಿಲಿಕಾನ್ ಸಿಟಿಯಲ್ಲದೇ ಇಡೀ ಕರುನಾಡಲ್ಲಿ ತಾಪಮಾನ ಏರುಪೇರಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಮಳೆ ಬಂದಿದ್ರೂ ಬೆಂಗಳೂರಿನಲ್ಲಿ ಮಳೆ ಸುಳಿವು ನೀಡಿಲ್ಲ. ಹೀಗಾಗಿ ಬೆಂಗಳೂರಲ್ಲಿ ಇನ್ನೊಂದು ವಾರ ಉಷ್ಣಾಂಶ ಹೆಚ್ಚಾಗಲಿದೆ.

ಬೆಂದಕಾಳೂರಿಗೆ ಕಾರಣವೇನು?
ಉದ್ಯಾನನಗರಿ ಬೆಂಗಳೂರಲ್ಲಿ ಇಷ್ಟು ಬಿಸಿಲಿನ ಶಾಖ ಹೆಚ್ಚಾಗಲು ಕಾರಣ ಏನು ಅಂತ ನೋಡೋದಾದ್ರೆ, ಅತಿಯಾದ ತಾಪಮಾನ, ಮಳೆ ಕೊರತೆ, ಅಂತರ್ಜಲ ಕುಸಿತವೇ ಪ್ರಮುಖವಾಗಿದೆ. ಬೆಂಗಳೂರಲ್ಲಿ ಹಸಿರು ಹೊದಿಕೆ ಹೆಚ್ಚಿಸುವುದರ ಜೊತೆಗೆ ಕೆರೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಿದೆ.

ಮಳೆ ನೀರು ಹರಿದು ಹೋಗದಂತೆ ತಡೆಯಲು ಇಂಗುಗುಂಡಿ ನಿರ್ಮಾಣ ಮಾಡಬೇಕು. ಮಳೆ ನೀರು ಕೊಯ್ಲು ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು, ಪರಿಸರವಾದಿಗಳು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಫ್ರಿಡ್ಜ್​ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನಬೇಡಿ.. ಯಾಕಂದ್ರೆ ಈ ಸ್ಟೋರಿ ಓದಿ  

ಕರ್ನಾಟಕದ ಜೊತೆ ಗುಜರಾತ್‌, ರಾಜಸ್ಥಾನಕ್ಕೂ ಅಲರ್ಟ್‌!
ಬಿಸಿಲಿನ ವಾತಾವರಣ ಬರೀ ಬೆಂಗಳೂರಿಗೆ ಮಾತ್ರವಲ್ಲ. ದಕ್ಷಿಣ, ಉತ್ತರ ಕರ್ನಾಟಕ ಸೇರಿದಂತೆ ಗುಜರಾತ್, ರಾಜಸ್ಥಾನದಲ್ಲೂ 40 ಡಿಗ್ರಿ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಾರ್ಚ್‌ 27 ರಿಂದ ಮಾರ್ಚ್ 29ರವರೆಗೂ ಕರ್ನಾಟಕ, ಗುಜರಾತ್ ರಾಜಸ್ಥಾನದಲ್ಲಿ ಭೀಕರ ಬಿಸಿಲಿನ ವಾತಾವರಣ ಕಾಣಿಸಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಒಂದು ವಾರ ಭೀಕರ ಬಿಸಿಲು; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯೇನು?

https://newsfirstlive.com/wp-content/uploads/2024/03/heat-wave-2.jpg

    ಈ ವರ್ಷ ಬೆಂಗಳೂರು ಬಹುದಿನಗಳ ಕಾಲ ಸಖತ್‌ ಹಾಟ್ ಸಿಟಿ ಆಗುತ್ತೆ

    ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 40 ಡಿಗ್ರಿ ಉಷ್ಣಾಂಶ ದಾಖಲಾಗೋ ಸಾಧ್ಯತೆ

    ಮುಂದಿನ 2 ತಿಂಗಳು ಬಿಸಿಲ ಬೇಗೆಯಿಂದ ಬಳಲುವ ವಾತಾವರಣ ಗ್ಯಾರಂಟಿ

ಸಿಲಿಕಾನ್ ಸಿಟಿ ಬೆಂಗಳೂರು ವರ್ಷ ಪೂರ್ತಿ ಒಂದೇ ರೀತಿಯ ವಾತಾವರಣ ಇರುವ ಸುಂದರ ನಗರ. ಅದಕ್ಕೆ ಇದನ್ನ ಗಾರ್ಡನ್ ಸಿಟಿ ಅಂತ ಕರೆಯಲಾಗುತ್ತೆ. ಆದ್ರೀಗ ಉದ್ಯಾನನಗರಿ ಸಖತ್‌ ಹಾಟ್ ಸಿಟಿಯಾಗಿ ಬದಲಾಗುತ್ತಿದೆ. ಈ ವರ್ಷ ಬೆಂಗಳೂರು ಬಹುದಿನಗಳ ನಿರಂತರ ಶಾಖದ ಅಲೆಗೆ ಸಾಕ್ಷಿಯಾಗುತ್ತಿದೆ. ಹವಾಮಾನ ಇಲಾಖೆ ಬೆಂಗಳೂರಿನ ಭಾರೀ ಬಿಸಿಲಿನ ವಾತಾವರಣದ ಬಗ್ಗೆ ಎಚ್ಚರಿಕೆ ನೀಡಿದೆ.

ಮುಂದಿನ ಒಂದು ವಾರ ರಾಜಧಾನಿ ಬೆಂಗಳೂರಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇಷ್ಟು ದಿನ ಬಿಸಿಲ ವಾತಾವರಣ ಇರುವ ನಗರಿಗೆ ಇನ್ಮುದೆ ಬಿಸಿ ಗಾಳಿ ಸೃಷ್ಟಿಯಾಗುತ್ತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬರೀ ಒಂದು ವಾರ ಅಷ್ಟೇ ಅಲ್ಲ ಮುಂದಿನ ಎರಡು ತಿಂಗಳು ಬಿಸಿಲ ಬೇಗೆಯಿಂದ ಬಳಲು ಸಿಲಿಕಾನ್ ಸಿಟಿಯ ಜನ ಸಿದ್ಧರಾಗಬೇಕು ಎನ್ನಲಾಗಿದೆ.

ಮುಂದಿನವಾರ ಹೇಗಿರಲಿದೆ ಉಷ್ಣಾಂಶ?
ಮಾರ್ಚ್ 28ರ ಗುರುವಾರ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಬೆಂಗಳೂರಿನಲ್ಲಿತ್ತು. ಮಾರ್ಚ್‌ 29ರ ಶುಕ್ರವಾರ 35 ಡಿಗ್ರಿಯಷ್ಟು ಬಿಸಿಲು ಮುಂದುವರಿಯಲಿದೆ. ಶನಿವಾರ ಮಾರ್ಚ್ 30ರಿಂದ ಏಪ್ರಿಲ್ 02ರವರೆಗೂ ಅತ್ಯಧಿಕ ತಾಪಮಾನ ಬೆಂಗಳೂರನ್ನು ಆವರಿಸಲಿದೆ. ಪ್ರತಿದಿನ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಅಲರ್ಟ್ ನೀಡಿದೆ.
ಸಿಲಿಕಾನ್ ಸಿಟಿಯಲ್ಲದೇ ಇಡೀ ಕರುನಾಡಲ್ಲಿ ತಾಪಮಾನ ಏರುಪೇರಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಮಳೆ ಬಂದಿದ್ರೂ ಬೆಂಗಳೂರಿನಲ್ಲಿ ಮಳೆ ಸುಳಿವು ನೀಡಿಲ್ಲ. ಹೀಗಾಗಿ ಬೆಂಗಳೂರಲ್ಲಿ ಇನ್ನೊಂದು ವಾರ ಉಷ್ಣಾಂಶ ಹೆಚ್ಚಾಗಲಿದೆ.

ಬೆಂದಕಾಳೂರಿಗೆ ಕಾರಣವೇನು?
ಉದ್ಯಾನನಗರಿ ಬೆಂಗಳೂರಲ್ಲಿ ಇಷ್ಟು ಬಿಸಿಲಿನ ಶಾಖ ಹೆಚ್ಚಾಗಲು ಕಾರಣ ಏನು ಅಂತ ನೋಡೋದಾದ್ರೆ, ಅತಿಯಾದ ತಾಪಮಾನ, ಮಳೆ ಕೊರತೆ, ಅಂತರ್ಜಲ ಕುಸಿತವೇ ಪ್ರಮುಖವಾಗಿದೆ. ಬೆಂಗಳೂರಲ್ಲಿ ಹಸಿರು ಹೊದಿಕೆ ಹೆಚ್ಚಿಸುವುದರ ಜೊತೆಗೆ ಕೆರೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಿದೆ.

ಮಳೆ ನೀರು ಹರಿದು ಹೋಗದಂತೆ ತಡೆಯಲು ಇಂಗುಗುಂಡಿ ನಿರ್ಮಾಣ ಮಾಡಬೇಕು. ಮಳೆ ನೀರು ಕೊಯ್ಲು ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು, ಪರಿಸರವಾದಿಗಳು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಫ್ರಿಡ್ಜ್​ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನಬೇಡಿ.. ಯಾಕಂದ್ರೆ ಈ ಸ್ಟೋರಿ ಓದಿ  

ಕರ್ನಾಟಕದ ಜೊತೆ ಗುಜರಾತ್‌, ರಾಜಸ್ಥಾನಕ್ಕೂ ಅಲರ್ಟ್‌!
ಬಿಸಿಲಿನ ವಾತಾವರಣ ಬರೀ ಬೆಂಗಳೂರಿಗೆ ಮಾತ್ರವಲ್ಲ. ದಕ್ಷಿಣ, ಉತ್ತರ ಕರ್ನಾಟಕ ಸೇರಿದಂತೆ ಗುಜರಾತ್, ರಾಜಸ್ಥಾನದಲ್ಲೂ 40 ಡಿಗ್ರಿ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಾರ್ಚ್‌ 27 ರಿಂದ ಮಾರ್ಚ್ 29ರವರೆಗೂ ಕರ್ನಾಟಕ, ಗುಜರಾತ್ ರಾಜಸ್ಥಾನದಲ್ಲಿ ಭೀಕರ ಬಿಸಿಲಿನ ವಾತಾವರಣ ಕಾಣಿಸಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More