/newsfirstlive-kannada/media/post_attachments/wp-content/uploads/2024/12/ALLU_ARJUN-5.jpg)
ಗ್ವಾಲಿಯರ್: ಪುಷ್ಪ 2 ದಿ ರೂಲ್ ಸಿನಿಮಾವನ್ನು ನೋಡುವಾಗ ಥಿಯೇಟರ್ ಕ್ಯಾಂಟೀನ್ ಮಾಲೀಕ, ಪ್ರೇಕ್ಷಕರೊಬ್ಬರ ಕಿವಿ ಕಿಚ್ಚಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ನಗರದ ಇಂದರ್ಗಂಜ್ ಪ್ರದೇಶದ ಕೈಲಾಶ್ ಥಿಯೇಟರ್ನಲ್ಲಿ ಈ ಘಟನೆ ನಡೆದಿದೆ.
ಶಬ್ಬೀರ್ ಎನ್ನುವ ವ್ಯಕ್ತಿ ಪುಷ್ಪ 2 ಮೂವಿ ನೋಡಲೆಂದು ಥಿಯೇಟರ್ಗೆ ಹೋಗಿದ್ದನು. ಸಿನಿಮಾದ ಅರ್ಧದಲ್ಲಿ ವಿರಾಮದ ಸಮಯದಲ್ಲಿ ಥಿಯೇಟರ್ ಕ್ಯಾಂಟೀನ್ಗೆ ಹೋಗಿ ರಾಜುವಿನಿಂದ ಕೆಲ ಸ್ನ್ಯಾಕ್ಸ್ ಖರೀದಿಸಿ ತಂದು ತಿನ್ನುತ್ತಿದ್ದನು. ಆದರೆ ಇದಕ್ಕೆ ಹಣ ಕೊಟ್ಟಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಥಿಯೇಟರ್ ಒಳಗೆ ಬಂದ ರಾಜು ಶಬ್ಬೀರ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಗಲಾಟೆ ಅತಿರೇಕಕ್ಕೆ ಹೋಗಿದ್ದರಿಂದ ರಾಜು ತನ್ನ ಮೂವರು ಸಹಚರರನ್ನು ಕರೆಸಿದ್ದಾನೆ.
ಇದನ್ನೂ ಓದಿ: ಖದೀಮರು ಆನ್ಲೈನ್ ವಂಚನೆ ಹೇಗೆಲ್ಲಾ ಮಾಡುತ್ತಾರೆ.. ಟಾಪ್- 10 ಪಾಯಿಂಟ್ಸ್ ಇಲ್ಲಿವೆ
ಎಲ್ಲರೂ ಸೇರಿ ವ್ಯಕ್ತಿ ಮೇಲೆ ಮನಬಂದಂತೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ರಾಜು ಹಲ್ಲೆ ಮಾಡುವಾಗ ಶಬ್ಬೀರ್ನ ಕಿವಿ ಕಚ್ಚಿದ್ದು ಗಾಯಗೊಂಡು ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು ಎಫ್ಐಆರ್ನಲ್ಲಿ ಕಿವಿ ಕಚ್ಚಿದ್ದಾನೆ ಎಂದು ನಮೂದಿಸಲಾಗಿದೆ.
ಕೇವಲ 6 ದಿನದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ದೀ ರೂಲ್ 1,000 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಇದೊಂದು ದೊಡ್ಡ ಮೈಲುಗಲ್ಲಾಗಿದ್ದು ಹಿಂದಿ ಸಿನಿಮಾಗಳಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾ 2021ರಲ್ಲಿ ಪಾರ್ಟ್- 1 ರಿಲೀಸ್ ಆಗಿತ್ತು. ಇದೀಗ ಭಾಗ-2 ಪ್ರದರ್ಶನ ಕಾಣುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ