/newsfirstlive-kannada/media/post_attachments/wp-content/uploads/2025/02/Bangalore-shoki-theft.jpg)
ಬೆಂಗಳೂರು: ಅಬ್ಬಾ.. ಇವನು ಅಂತಿಂಥ ಕಳ್ಳನಲ್ಲ! ಕಳ್ಳರಲ್ಲೇ ಪಕ್ಕಾ ಪ್ರೊಫೆಷನಲ್ ಕಳ್ಳ. ಹುಟ್ಟಿದ್ದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ. ಇವನ ಗರ್ಲ್ ಫ್ರೆಂಡ್ ಇರೋದು ಕೊಲ್ಕತ್ತಾದಲ್ಲಿ. ಕೊನೆಗೆ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈ ಕುಖ್ಯಾತ ಕಳ್ಳನ ಹೆಸರು ಪಂಚಾಕ್ಷರಿ ಸ್ವಾಮಿ. ಇವನ ಕಾಯಕ ಕಳ್ಳತನ. ಬೀಗ ಹಾಕಿದ್ದ ಮನೆಗಳನ್ನೇ ಇವನು ಟಾರ್ಗೆಟ್ ಮಾಡಿ ಸದ್ದಿಲ್ಲದೇ ಕನ್ನ ಹಾಕುತ್ತಿದ್ದ. ಕಳ್ಳತನ ಮಾಡಿದ ಹಣದಿಂದಲೇ ಜೀವನ ಸಾಗಿಸುತ್ತಿದ್ದ. ಮದುವೆಯಾಗಿದ್ರೂ ಈತನ ಗರ್ಲ್ ಫ್ರೆಂಡ್ಗಾಗಿ ಮನೆ ಕಟ್ಟಲು 3 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ.
ಬೆಂಗಳೂರಲ್ಲೂ ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಕಳ್ಳ ಪಂಚಾಕ್ಷರಿ ಸ್ವಾಮಿಯನ್ನು ಮಡಿವಾಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಖತರ್ನಾಕ್ ಖದೀಮನ ವಿಚಾರಣೆ ನಡೆಸಿದಾಗ ಶಾಕಿಂಗ್ ಸತ್ಯಗಳು ಬಯಲಾಗಿದೆ.
ಈ ಆರೋಪಿ ಪಂಚಾಕ್ಷರಿ ಸ್ವಾಮಿ ತಂದೆ ರೈಲ್ವೆಯಲ್ಲಿ ಕೆಲಸದಲ್ಲಿದ್ದರು. ತಂದೆ ಸಾವಿನ ಬಳಿಕ ಪಂಚಾಕ್ಷರಿ ತಾಯಿಗೆ ಆ ಕೆಲಸ ಸಿಕ್ಕಿತ್ತು. 2003ರಲ್ಲಿ ಅಪ್ರಾಪ್ತನಾಗಿದ್ದಾಗಿಂದಲೇ ಪಂಚಾಕ್ಷರಿ ಕಳ್ಳತನ ಆರಂಭಿಸಿದ್ದಾನೆ. 2009ರಿಂದ ಮನೆಕಳ್ಳತನ ಮಾಡಲು ಆರಂಭಿಸಿದ ಪಂಚಾಕ್ಷರಿ ಸ್ವಾಮಿ, ಕಳ್ಳತನ ಮಾಡಿ ಕೋಟಿ, ಕೋಟಿ ಹಣ ಗಳಿಸಿದ್ದಾನೆ
ಪಂಚಾಕ್ಷರಿಗೆ ಮದುವೆಯಾಗಿದ್ರು ಗರ್ಲ್ ಫ್ರೆಂಡ್ಸ್ ಶೋಕಿ ಹೊಂದಿದ್ದ. ಮದುವೆಯಾಗಿ ಮಗು ಇದ್ದರೂ ಪ್ರಿಯತಮೆಗೆ ಕೊಲ್ಕತ್ತಾದಲ್ಲಿ 3 ಕೋಟಿ ಮೌಲ್ಯದ ಮನೆ ಗಿಫ್ಟ್ ಕೊಟ್ಟಿದ್ದಾನೆ. 2016ರಲ್ಲಿ ಪಂಚಾಕ್ಷರಿ ಕೊಲ್ಕತ್ತಾ ಗರ್ಲ್ ಫ್ರೆಂಡ್ಗೆ ಮನೆ ಗಿಫ್ಟ್ ಕೊಟ್ಟಿದ್ದಾನೆ. ಇಷ್ಟೇ ಅಲ್ಲದೇ ಗರ್ಲ್ ಫ್ರೆಂಡ್ ಬರ್ತ್ ಡೇಗೆ 22 ಲಕ್ಷದ ಅಕ್ವೇರಿಯಂ ಗಿಫ್ಟ್ ಕೊಟ್ಟಿದ್ದ.
ಕಳ್ಳತನದಲ್ಲಿ ಕೋಟಿ, ಕೋಟಿ ದೋಚಿದ್ದರೂ ಪಂಚಾಕ್ಷರಿ ಮಾತ್ರ 400 ಅಡಿಯಲ್ಲಿ ಮನೆಯಲ್ಲಿ ವಾಸವಿದ್ದ. ಆ ಮನೆಯು ತಾಯಿಯ ಹೆಸರಲ್ಲಿ ಇದ್ದು, ಆ ಮನೆಗೆ ಬ್ಯಾಂಕ್ ಲೋನ್ ಕಟ್ಟದೆ ನೋಟಿಸ್ ಜಾರಿಯಾಗಿದೆ. ಸಾಲ ಕಟ್ಟದ ಹಿನ್ನೆಲೆಯಲ್ಲಿ ಬ್ಯಾಂಕ್ನಿಂದ ಆ ಮನೆಯನ್ನ ಸಹ ಹರಾಜಿಗಿಡಲಾಗಿದೆ.
ಇದನ್ನೂ ಓದಿ: ಸೌಂದರ್ಯದ ಸಂಪ್ರದಾಯವನ್ನೇ ಮುರಿದ ಹುಡುಗಿ.. ಬೋಳು ತಲೆಯಲ್ಲಿಯೇ ಹಸೆಮಣೆ ಏರಿದ ವಧು; ವಿಡಿಯೋ ವೈರಲ್
ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಪ್ರೊಫೆಷನಲ್ ಕಳ್ಳ ಪಂಚಾಕ್ಷರಿ 2016ರಲ್ಲಿ ಗುಜರಾತ್ ಪೊಲೀಸರು ಬಂಧಿಸಿದ್ದರು. 6 ವರ್ಷ ಗುಜರಾತ್ನ ಸಬರಮತಿ ಜೈಲಿನಲ್ಲಿದ್ದ ಈತ ಹೊರಬಂದು ಮತ್ತೆ ಕಳ್ಳತನ ಮುಂದುವರೆಸಿದ್ದ. ಮತ್ತೆ ಮಹಾರಾಷ್ಟ್ರ ಪೊಲೀಸರು ಪಂಚಾಕ್ಷರಿಯನ್ನು ಬಂಧಿಸಿದ್ದರು.
ಮಹಾರಾಷ್ಟ್ರದಿಂದ ಬೆಂಗಳೂರಿಗೆ ಶಿಫ್ಟ್!
2024ರಲ್ಲಿ ಜೈಲಿನಿಂದ ರಿಲೀಸ್ ಆದ ಪಂಚಾಕ್ಷರಿ ಬೆಂಗಳೂರಿಗೆ ಬಂದು ಕಳ್ಳತನ ಆರಂಭಿಸಿದ್ದ. ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಇವನು ಸದ್ದಿಲ್ಲದೇ ಕೆಲಸ ಮುಗಿಸಿ ಬಿಡುತ್ತಿದ್ದ. ಇವನು ಎಷ್ಟು ಪ್ರೊಫೆಷನಲ್ ಕಳ್ಳ ಎಂದರೆ ಈತನ ಬಳಿ ಸಣ್ಣದೊಂದು ಫೈರ್ ಗನ್ ಸಹ ಇಟ್ಟುಕೊಂಡಿದ್ದ. ಆ ಗನ್ ಬಳಸಿ ಚಿನ್ನ ಕರಗಿಸುತ್ತಿದ್ದ ಪಂಚಾಕ್ಷರಿ ಖತರ್ನಾಕ್ ಪ್ಲಾನ್ ಮಾಡುತ್ತಿದ್ದ.
ಈ ಪಂಚಾಕ್ಷರಿ ಸ್ವಾಮಿ ಕಳೆದ ಜನವರಿ 9ರಂದು ಮಡಿವಾಳದಲ್ಲಿ ಮನೆಕಳ್ಳತನ ಮಾಡಿದ್ದ. ಇವನು ಕಳ್ಳತನ ಮಾಡಿದ ಬಳಿಕ ರಸ್ತೆಯಲ್ಲೇ ಬಟ್ಟೆ ಬದಲಿಸುತ್ತಿದ್ದ. ಇದೇ ಸುಳಿವಿನ ಮೇಲೆ ಮಡಿವಾಳ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪಂಚಾಕ್ಷರಿ ಮೇಲೆ 180ಕ್ಕೂ ಹೆಚ್ಚು ಕೇಸ್ ಇರೋದು ಬೆಳಕಿಗೆ ಬಂದಿದ್ದು, ಬಂಧಿತನಿಂದ ಚಿನ್ನಾಭರಣ, ಚಿನ್ನ ಕರಗಿಸುವ ಫೈರ್ ಗನ್ ವಶಕ್ಕೆ ಪಡೆಯಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ