Advertisment

ಬ್ರೋಕರ್​ಗಳನ್ನು ನಂಬುವ ಮುನ್ನ ಹುಷಾರ್; ಮದುವೆಯಾದ ಮೇಲೆ ಬ್ರೋಕರ್, ಪತ್ನಿ ಇಬ್ಬರೂ ಎಸ್ಕೇಪ್!

author-image
Gopal Kulkarni
Updated On
ಬ್ರೋಕರ್​ಗಳನ್ನು ನಂಬುವ ಮುನ್ನ ಹುಷಾರ್; ಮದುವೆಯಾದ ಮೇಲೆ ಬ್ರೋಕರ್, ಪತ್ನಿ ಇಬ್ಬರೂ ಎಸ್ಕೇಪ್!
Advertisment
  • ಮಕ್ಕಳ ಮದುವೆಗಾಗಿ ಹೆಣ್ಣು ಹುಡುಕುವ ಪೋಷಕರೇ ಹುಷಾರ್
  • ಸೋಮಶೇಖರ್ ಜೊತೆ ಶಿವಮೊಗ್ಗ ಜಿಲ್ಲೆಯ ಮಂಜುಳಾ ಮದುವೆ
  • ಮದುವೆ ಮಾಡಿಸಿ 4 ಲಕ್ಷ ರೂ. ಪಡೆದು ಬ್ರೋಕರ್, ಪತ್ನಿ ಎಸ್ಕೇಪ್

30 ದಾಟಿದ ಯುವಕರಿಗೆ ಈಗ ಹುಡುಗಿಯರು ಸಿಗೋದೇ ಕಠಿಣವಾಗಿದೆ. ಹೀಗಾಗಿ ಜನರು ಮ್ಯಾರೆಜ್ ಬ್ರೋಕರ್ ಮೊರೆ ಹೋಗುತ್ತಿದ್ದಾರೆ. ಹೀಗೆ ಮ್ಯಾರೆಜ್ ಬ್ರೋಕರ್ ಬಳಿ ಹೋಗಿ ಅವರಿಗೆ ಲಕ್ಷ ಲಕ್ಷ ಹಣ ನೀಡಿ ಯಾಮಾರಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ್​ನಲ್ಲಿ ನಡೆದಿದೆ.

Advertisment

ಮುಧೋಳ್ ತಾಲೂಕಿನ ಸೋಮಶೇಖರ್ ಎಂಬ ವ್ಯಕ್ತಿ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದರು. ಇವರನ್ನೇ ಟಾರ್ಗೆಟ್ ಮಾಡಿದ ಮ್ಯಾರೇಜ್ ಬ್ರೋಕರ್ ಟೀಮ್​ ಹೆಣ್ಣು ಕೊಡಸ್ತೀವಿ ಅಂತ ಹೇಳಿ 4 ಲಕ್ಷ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಇಟ್ಟಿತ್ತು. ಹೆಣ್ಣು ಸಿಗದೆ ಪರದಾಡುತ್ತಿದ್ದ ಸೋಮಶೇಖರ್ ಇದಕ್ಕೆ ಒಪ್ಪಿಕೊಂಡಿದ್ದರು. ಕೊನೆಗೆ ಮುಧೋಳ್​ನ ಕಾಳಿಕಾದೇವಿ ದೇಗುಲದಲ್ಲಿ ವರ್ಷದ ಹಿಂದೆ ಮದುವೆಯೂ ಆಯ್ತು. ಮದುವೆಯ ದಿನವೇ4 ಲಕ್ಷ ರೂಪಾಯಿ ಹಣ ಪಡೆದಿದ್ದ ಬ್ರೋಕರ್. ಮದುವೆಯಾಗಿ ಒಂದೇ ತಿಂಗಳಲ್ಲಿ ಸೋಮಶೇಖರ್ ಪತ್ನಿ ಮನೆಯಿಂದ ಎಸ್ಕೇಪ್ ಆಗಿದ್ದಾಳೆ. ಈ ಬಗ್ಗೆ ಕೇಳೋಣ ಅಂತ ಬ್ರೋಕರ್ ಹತ್ತಿರ ಹೋದ್ರೆ ಆ ಕಡೆ ಅವನು ಎಸ್ಕೇಪ್ ಆಗಿದ್ದಾನೆ.

publive-image

ಇದನ್ನೂ ಓದಿ:ಹಾವೇರಿಯಲ್ಲಿ ರಾಜ್ಯಮಟ್ಟದ ಬಂಡಿ ಓಡಿಸೋ ಸ್ಪರ್ಧೆ; ಪೊಗರದಸ್ತು ಎತ್ತುಗಳ ರೇಸ್ ಹೇಗಿತ್ತು?

ಸೋಮಶೇಖರ್​ಗೆ ಮೋಸವಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು. ಪತ್ನಿಯ ಬಗ್ಗೆ ವಿಚಾರಿಸಲು ಹೋದ ವೇಳೆ ಆಕೆಗೆ ಈ ಮೊದಲೇ ಎರಡು ಮದುವೆಯಾದ ವಿಷಯ ಬೆಳಕಿಗೆ ಬಂದಿದೆ. ಹಣ ಮಾಡಲು ಮಹಿಳೆಯನ್ನು ಮುಧೋಳಕ್ಕೆ ಈ ಗ್ಯಾಂಗ್ ಕರೆತಂದಿತ್ತು ಎಂದು ಹೇಳಲಾಗಿದೆ. ಬ್ರೋಕರ್ ಟೀಮ್​ಗೆ 4 ಲಕ್ಷ ಹಣ ಮರಳಿಸುವಂತೆ ಕೇಳಿಕೊಂಡಿದ್ದಾರೆ ಸೋಮಶೇಖರ್, ಕೊನೆಗೆ ಹಣ ಬಾರದೇ ಇದ್ದಾಗ ಮುಧೋಳ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೋಮಶೇಖರ್ ಜೊತೆ ಶಿವಮೊಗ್ಗಾದ ಮಂಜುಳಾ ಎಂಬುವವಳ ಮದುವೆಯಾಗಿತ್ತು. ಸದ್ಯ ಮುಧೋಳ್ ಪೊಲೀಸ್ ಠಾಣೆಯಲ್ಲಿ ಆರೋಪಿ ಸತ್ಯಪ್ಪ ಮತ್ತು ಮಂಜುಳಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment