ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗುವ ಮುನ್ನ ಇರಲಿ ಸ್ವಲ್ಪ ಎಚ್ಚರ
ಪ್ರವಾಸಿಗರೆ ಈ ಕಡೆಯೆಲ್ಲಾ ಪ್ರವಾಸಕ್ಕೆ ಹೋಗುವ ಸಾಹಸ ಬೇಡ
ಎಲ್ಲೆಲ್ಲಿ ಮಳೆರಾಯ ಅಪಾಯದ ಗೆರೆ ಎಳೆದಿದ್ದಾನೆ ಗೊತ್ತಾ?
ಮುಂಗಾರು ಚುರುಕಾಗಿದೆ.. ರಾಜ್ಯದ ಮೂಲೆ ಮೂಲೆಯಲ್ಲಿಯೂ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಭೀಕರ ಮಳೆಗೆ ಎಲ್ಲ ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಲಪಾತಗಳೆಲ್ಲಾ ರೌದ್ರಾವತಾರ ತಾಳಿವೆ. ಮಳೆಗಾಲ ಅಂದಾಗ ಪ್ರಮುಖವಾಗಿ ಸೆಳೆಯುವುದೇ ಈ ಜಲಪಾತಗಳು ನದಿಗಳು. ಮುಂಗಾರು ಮಳೆಯ ವೇಳೆ ದಕ್ಷಿಣ ಕನ್ನಡ, ಉತ್ತರಕನ್ನಡ ಜಿಲ್ಲೆಗಳಿಗೆ ಕೊಡಗು ಹಾಸನ ಜಿಲ್ಲೆನಗಳಿಗೆ ಮಲೆನಾಡುಗಳಿಗೆ ಬೇರೆಯದ್ದೇ ಒಂದು ಕಳೆ ಬಂದು ಬಿಡುತ್ತದೆ. ಹಚ್ಚ ಹಸಿರ ಕಾಡು, ಬೆಟ್ಟಗಳು ರಮಣೀಯ ಜಲಪಾತಗಳು.
ಹಸಿರು ಹೊದ್ದುಕೊಂಡು ನಿಂತಿರುವ ಮಲೆಗಳು ಇವೆಲ್ಲವೂ ಕೂಡ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಆದ್ರೆ ನೆನಪಿರಲಿ, ಸೌಂದರ್ಯದ ಹಿಂದೆ ಸಾವಿನ ನೆರಳು ಕೂಡ ಸರಿಯುತ್ತಿರುತ್ತದೆ. ದೂರದ ಬೆಟ್ಟ ಕಣ್ಣಿಗೆ ಚೆಂದ ಅನ್ನುವ ರೀತಿಯಲ್ಲಿ ಸೌಂದರ್ಯ ಹೊದ್ದುಕೊಂಡು ನಿಂತಿರುವ ರಾಜ್ಯದ ಪ್ರವಾಸಿ ತಾಣಗಳಿಗೆ ವರುಣ ಕೇವಲ ಸೌಂದರ್ಯವನ್ನಷ್ಟೇ ಹೊದಿಸಿ ನಿಂತಿಲ್ಲ. ಭೂಕುಸಿತದಂತ ಅವಘಡಗಳು, ಪ್ರವಾಹದ ಭೀತಿ, ನದಿಗೆ ಬೇರೆಯದ್ದೇ ಕಸುವು ತಂದಿದ್ದಾನೆ ಹೀಗಾಗಿ ಈ ಎಲ್ಲಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮುನ್ನ ಸ್ವಲ್ಪ ಎಚ್ಚರವಿರಲಿ. ಸದ್ಯ ಪ್ರವಾಸವನ್ನು ಮುಂದೂಡಿದರೆ ಇನ್ನೂ ಒಳ್ಳೆಯದೆ.
ಇದನ್ನೂ ಓದಿ: ರಾಜ್ಯದ 6 ಜಿಲ್ಲೆಗಳಿಗೆ ನಾಳೆಯೂ ರೆಡ್ ಅಲರ್ಟ್; ಶಾಲೆ-ಕಾಲೇಜಿಗೆ ರಜೆ ಘೋಷಣೆ
ಧರ್ಮಸ್ಥಳ, ಸುಬ್ರಮಣ್ಯ ಮಡಿಕೇರಿ ಕಡೆಗೆ ಸದ್ಯಕ್ಕೆ ಬೇಡ ಪ್ರವಾಸ
ಮಡಿಕೇರಿ ಈ ಭಾಗಕ್ಕೆ ಯಾರು ಬರಬೇಡಿ, ತುಂಬಾ ಮಳೆ ಆಗುತ್ತಿದೆ, ಹಾಗು ರಸ್ತೆ ಬದಿಯ ಬೆಟ್ಟಗಳು ಕುಸಿಯಲಾರಂಬಿಸಿವೆ. ಹಾಗು ರಾತ್ರಿ 8 ಗಂಟೆ ಇಂದ ಬೆಳಿಗ್ಗೆ 6 ಗಂಟೆವರಗೆ ಮಡಿಕೇರಿ ಹಾಗು ಸಕಲೇಶಪುರದಲ್ಲಿ ರಸ್ತೆಗಳನ್ನು ಬಂದ್ ಮಾಡಲಾಗಿದೆ, ಬಂದು ಕಷ್ಟ ಅನುಭವಿಸಬೇಡಿ. ಈ ಮೆಸ್ಸೇಜ್ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬಸ್ಥರಿಗೆ ತಿಳಿಸಿ. ಪ್ರಕೃತಿ ಸೌಂದರ್ಯವೆನೋ ನಿಮ್ಮನ್ನು ಕೈಬೀಸಿ ಕರೆಯುತ್ತಿರಬಹುದು ಆದ್ರೆ ಅಪಾಯದ ಗಂಟೆಯನ್ನೂ ಕೂಡ ಇನ್ನೊಂದು ಕೈಯಲ್ಲಿ ಹಿಡಿದು ನಿಂತಿದೆ ಪ್ರಕೃತಿಯ ಸಿರಿ. ಕೊಡಗಿನ ಕುಶಾಲನಗರದಲ್ಲಿ ಭಾರಿ ಮಳೆಗೆ ಈಗಾಗಲೇ ರೊಂಡೆ ಕೆರೆ ಕೋಡಿ ಬಿದ್ದಿದೆ, ಕೆರೆಯ ನೀರು ನುಗ್ಗಿ ಬಡಾವಣೆಯ ಕೆಲ ಮನೆಗಳು ಜಲಾವೃತಗೊಂಡಿವೆ. ಕುಶಾಲನಗರದ ಬಳಿಯ ಗೊಂಧಿಬಸವನಹಳ್ಳಿಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಕೆರೆ ಕೋಡಿ ಬಿದ್ದಿದ್ದು ಕೃಷಿ ಪ್ರದೇಶಕ್ಕೂ ಜನವಸತಿ ಪ್ರದೇಶಕ್ಕೂ ನೀರು ಹರಿದು ಅವಾಂತರ ಸೃಷ್ಟಿಸಿದೆ.
ಮಂಗಳೂರಿನ ಕಡೆ ಸದ್ಯ ಮುಖಮಾಡಬೇಡಿ
ಮಂಗಳೂರಿನಲ್ಲೂ ಕೂಡ ಭೀಕರ ಮಳೆಯಾಗುತ್ತಿದೆ. ಮರವೂರು ಡ್ಯಾಂ ತುಂಬಿ ತುಳುಕುತ್ತಿದ್ದು ಕೃತಕ ನೆರೆ ಬರೋದಾಗಿ ಈಗಾಗಲೇ ಗ್ರಾಮಸ್ಥರು ಹೇಳಿದ್ದಾರೆ. ಈಗಾಗಲೇ ನೆರೆ ಪೀಡಿತ ಅದ್ಯಪಾಡಿ ಗ್ರಾಮಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಮಂಗಳೂರು ಕಡೆಗೆ ಪ್ರಯಾಣ ಬೆಳೆಸುವ ಮುನ್ನ ಹಲವು ಬಾರಿ ಯೋಚನೆ ಮಾಡಿ
ಉಡುಪಿಯಲ್ಲೂ ಬಿಡದೆ ಜರಿಯುತ್ತಿದ್ದಾನೆ ಮಳೆರಾಯ
ಉಡುಪಿಯತ್ತ ಪ್ರಯಾಣ ಬೆಳೆಸುವ ಇರಾದೆಯಿದ್ದವರು ದಯವಿಟ್ಟು ಈ ವರದಿಯನ್ನೊಮ್ಮೆ ಓದಿ ಆಮೇಲೆ ನಿರ್ಧಾರಕ್ಕೆ ಬನ್ನಿ. ಉಡುಪಿಯಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಣೆಯಾಗಿದೆ. ಮಳೆಯ ಅಬ್ಬರದ ಜೊತೆ ಕಡಲ ತೀರದಲ್ಲಿ ಗಾಳಿಯ ತೀವ್ರತೆಗೂ ಭೀಮ ಕಸುವು ಬಂದಿದೆ.ನಾವುಂದ ಪರಿಸದರಲ್ಲಿ ಸಮುದ್ರ ಉಕ್ಕೇರಿ ಹರಿಯುತ್ತಿದ್ದು ಕಡಲಬ್ಬರದ ಹೊಡೆತಕ್ಕೆ ತಡೆಗೋಡೆಗಳು ಕುಸಿದು ಬೀಳುವ ಭೀತಿಯೂ ಎದುರಾಗಿದೆ
ಇದನ್ನೂ ಓದಿ:21 ಹಗರಣಗಳ ಬಾಂಬ್.. ವಾಲ್ಮೀಕಿ, ಮುಡಾ ಬಿಜೆಪಿ ಹೋರಾಟಕ್ಕೆ ಸಿಎಂ ಸಿದ್ದು ಕೌಂಟರ್ ಅಟ್ಯಾಕ್!
ಶಿರಸಿ ಹೆದ್ದಾರಿಯಲ್ಲಿ ಭೂ ಕುಸಿತ
ಇತ್ತ ಶಿರಸಿಯಲ್ಲಿಯೂ ಕೂಡ ಮಳೆರಾಯ ಬಿಡುವು ಕೊಡದೆ ರಚ್ಚೆ ಹಿಡಿದವರಂತೆ ಸುರಿಯುತ್ತಿದ್ದಾನೆ. ರಾಷ್ಟ್ರೀಯ ಹೆದ್ದಾರಿ 766E ಗುಡ್ಡ ಕುಸಿದಿದೆ ಉತ್ತರ ಕನ್ನಡ ಜಿಲ್ಲೆ ವರುಣನ ಆರ್ಭಟಕ್ಕೆ ಭಾಗಶಃ ತತ್ತರಿಸಿ ಹೋಗಿದೆ. ಮಳೆರಾಯನ ಉಗ್ರಾವತಾರಕ್ಕೆ ಜಿಲ್ಲೆಯಲ್ಲಿ ಹಲವಾರು ಭಾಗಗಳಲ್ಲಿ ಭೂಕುಸಿತ ಸಂಭವಿಸುತ್ತಿದೆ. ನದಿ, ಹೊಳೆಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ರಾಗಿಹೊಸಳ್ಳಿ ಬಳಿ ಗುಡ್ಡಕುಸಿತವಾಗಿದ್ದು, ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಕಳೆದ 4 ದಿನಗಳಿಂದ ಬಂದ್ ಆಗಿದೆ. ಹೆದ್ದಾರಿಯ ಅಲ್ಲಲ್ಲಿ ಗುಡ್ಡ ಮತ್ತೆ ಕುಸಿಯುತ್ತಿದ್ದು ಸಂಚಾರ ದುಸ್ತರವಾಗಿದೆ.
ಇದನ್ನೂ ಓದಿ: ‘ನನ್ನ ಮದುವೆಗೆ ದರ್ಶನ್ ರಿಲೀಸ್ ಆಗಿ ಬರ್ತಾರೆ’- ಕಾಟೇರನ ಭೇಟಿಯಾದ ತರುಣ್ ಸುಧೀರ್; ಹೇಳಿದ್ದೇನು?
ಮತ್ತೊಂದು ಕಡೆ ಶಿರೂರು ಗುಡ್ಡ ಕುಸಿತದ ಪ್ರಕರಣದಲ್ಲಿ ಮಣ್ಣಿನ ಅಡಿಯಲ್ಲಿ ಸಿಲುಕಿರುವ ಲಾರಿಗಾಗಿ ಇನ್ನೂ ತೀವ್ರ ಹುಡುಕಾಟ ನಡೆದಿದೆ. ಇಂದು ರಾತ್ರಿ ವೇಳೆಗೆ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆಗೆಯುವ ಸಾಧ್ಯತೆ ಇದ್ದು ನಾಳೆಯಿಂದ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಸೂಚನೆಯೂ ಇದೆ. ಸತತ ಮಳೆಯ ನಡುವೆಯೇ ನಿರಂತರ ಕಾರ್ಯಾಚರಣೆ ಮುಂದುವರಿದಿದ್ದು ಒಂದು ರಸ್ತೆಯ ಭಾಗಕ್ಕೆ ಮಣ್ಣು ಕಲ್ಲು ಹಾಕಿ ಸಿಬ್ಬಂದಿ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಇಷ್ಟೆಲ್ಲಾ ಅಪಾಯಗಳು ಸದ್ಯ ಈ ಪ್ರವಾಸಿ ತಾಣಗಳಲ್ಲಿ ಇವೆ. ಇತ್ತ ಪ್ರಯಾಣ ಬೆಳೆಸುವ ಮುನ್ನ ಸಾವಿರ ಬಾರಿ ಯೋಚನೆ ಮಾಡಿ. ಮುಂಗಾರು ಕೊಂಚ ತಣ್ಣಗಾದ ಬಳಿಕ ಈ ಪ್ರವಾಸಿ ಜಿಲ್ಲೆಗಳತ್ತ ಬಂದು ನೀವು ಪ್ರವಾಸವನ್ನು ಎಂಜಾಯ್ ಮಾಡಬಹುದು. ಸದ್ಯಕ್ಕೆ ಅಪಾಯಗಳು ಹೆಜ್ಜೆ ಹೆಜ್ಜೆಗೂ ಮೈಚೆಲ್ಲಿ ಕುಳಿತಿರುವುದುರಿಂದ ಪ್ರವಾಸ ಕೈಗೊಳ್ಳುವ ನಿರ್ಧಾರ ಬೇಡ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗುವ ಮುನ್ನ ಇರಲಿ ಸ್ವಲ್ಪ ಎಚ್ಚರ
ಪ್ರವಾಸಿಗರೆ ಈ ಕಡೆಯೆಲ್ಲಾ ಪ್ರವಾಸಕ್ಕೆ ಹೋಗುವ ಸಾಹಸ ಬೇಡ
ಎಲ್ಲೆಲ್ಲಿ ಮಳೆರಾಯ ಅಪಾಯದ ಗೆರೆ ಎಳೆದಿದ್ದಾನೆ ಗೊತ್ತಾ?
ಮುಂಗಾರು ಚುರುಕಾಗಿದೆ.. ರಾಜ್ಯದ ಮೂಲೆ ಮೂಲೆಯಲ್ಲಿಯೂ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಭೀಕರ ಮಳೆಗೆ ಎಲ್ಲ ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಲಪಾತಗಳೆಲ್ಲಾ ರೌದ್ರಾವತಾರ ತಾಳಿವೆ. ಮಳೆಗಾಲ ಅಂದಾಗ ಪ್ರಮುಖವಾಗಿ ಸೆಳೆಯುವುದೇ ಈ ಜಲಪಾತಗಳು ನದಿಗಳು. ಮುಂಗಾರು ಮಳೆಯ ವೇಳೆ ದಕ್ಷಿಣ ಕನ್ನಡ, ಉತ್ತರಕನ್ನಡ ಜಿಲ್ಲೆಗಳಿಗೆ ಕೊಡಗು ಹಾಸನ ಜಿಲ್ಲೆನಗಳಿಗೆ ಮಲೆನಾಡುಗಳಿಗೆ ಬೇರೆಯದ್ದೇ ಒಂದು ಕಳೆ ಬಂದು ಬಿಡುತ್ತದೆ. ಹಚ್ಚ ಹಸಿರ ಕಾಡು, ಬೆಟ್ಟಗಳು ರಮಣೀಯ ಜಲಪಾತಗಳು.
ಹಸಿರು ಹೊದ್ದುಕೊಂಡು ನಿಂತಿರುವ ಮಲೆಗಳು ಇವೆಲ್ಲವೂ ಕೂಡ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಆದ್ರೆ ನೆನಪಿರಲಿ, ಸೌಂದರ್ಯದ ಹಿಂದೆ ಸಾವಿನ ನೆರಳು ಕೂಡ ಸರಿಯುತ್ತಿರುತ್ತದೆ. ದೂರದ ಬೆಟ್ಟ ಕಣ್ಣಿಗೆ ಚೆಂದ ಅನ್ನುವ ರೀತಿಯಲ್ಲಿ ಸೌಂದರ್ಯ ಹೊದ್ದುಕೊಂಡು ನಿಂತಿರುವ ರಾಜ್ಯದ ಪ್ರವಾಸಿ ತಾಣಗಳಿಗೆ ವರುಣ ಕೇವಲ ಸೌಂದರ್ಯವನ್ನಷ್ಟೇ ಹೊದಿಸಿ ನಿಂತಿಲ್ಲ. ಭೂಕುಸಿತದಂತ ಅವಘಡಗಳು, ಪ್ರವಾಹದ ಭೀತಿ, ನದಿಗೆ ಬೇರೆಯದ್ದೇ ಕಸುವು ತಂದಿದ್ದಾನೆ ಹೀಗಾಗಿ ಈ ಎಲ್ಲಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮುನ್ನ ಸ್ವಲ್ಪ ಎಚ್ಚರವಿರಲಿ. ಸದ್ಯ ಪ್ರವಾಸವನ್ನು ಮುಂದೂಡಿದರೆ ಇನ್ನೂ ಒಳ್ಳೆಯದೆ.
ಇದನ್ನೂ ಓದಿ: ರಾಜ್ಯದ 6 ಜಿಲ್ಲೆಗಳಿಗೆ ನಾಳೆಯೂ ರೆಡ್ ಅಲರ್ಟ್; ಶಾಲೆ-ಕಾಲೇಜಿಗೆ ರಜೆ ಘೋಷಣೆ
ಧರ್ಮಸ್ಥಳ, ಸುಬ್ರಮಣ್ಯ ಮಡಿಕೇರಿ ಕಡೆಗೆ ಸದ್ಯಕ್ಕೆ ಬೇಡ ಪ್ರವಾಸ
ಮಡಿಕೇರಿ ಈ ಭಾಗಕ್ಕೆ ಯಾರು ಬರಬೇಡಿ, ತುಂಬಾ ಮಳೆ ಆಗುತ್ತಿದೆ, ಹಾಗು ರಸ್ತೆ ಬದಿಯ ಬೆಟ್ಟಗಳು ಕುಸಿಯಲಾರಂಬಿಸಿವೆ. ಹಾಗು ರಾತ್ರಿ 8 ಗಂಟೆ ಇಂದ ಬೆಳಿಗ್ಗೆ 6 ಗಂಟೆವರಗೆ ಮಡಿಕೇರಿ ಹಾಗು ಸಕಲೇಶಪುರದಲ್ಲಿ ರಸ್ತೆಗಳನ್ನು ಬಂದ್ ಮಾಡಲಾಗಿದೆ, ಬಂದು ಕಷ್ಟ ಅನುಭವಿಸಬೇಡಿ. ಈ ಮೆಸ್ಸೇಜ್ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬಸ್ಥರಿಗೆ ತಿಳಿಸಿ. ಪ್ರಕೃತಿ ಸೌಂದರ್ಯವೆನೋ ನಿಮ್ಮನ್ನು ಕೈಬೀಸಿ ಕರೆಯುತ್ತಿರಬಹುದು ಆದ್ರೆ ಅಪಾಯದ ಗಂಟೆಯನ್ನೂ ಕೂಡ ಇನ್ನೊಂದು ಕೈಯಲ್ಲಿ ಹಿಡಿದು ನಿಂತಿದೆ ಪ್ರಕೃತಿಯ ಸಿರಿ. ಕೊಡಗಿನ ಕುಶಾಲನಗರದಲ್ಲಿ ಭಾರಿ ಮಳೆಗೆ ಈಗಾಗಲೇ ರೊಂಡೆ ಕೆರೆ ಕೋಡಿ ಬಿದ್ದಿದೆ, ಕೆರೆಯ ನೀರು ನುಗ್ಗಿ ಬಡಾವಣೆಯ ಕೆಲ ಮನೆಗಳು ಜಲಾವೃತಗೊಂಡಿವೆ. ಕುಶಾಲನಗರದ ಬಳಿಯ ಗೊಂಧಿಬಸವನಹಳ್ಳಿಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಕೆರೆ ಕೋಡಿ ಬಿದ್ದಿದ್ದು ಕೃಷಿ ಪ್ರದೇಶಕ್ಕೂ ಜನವಸತಿ ಪ್ರದೇಶಕ್ಕೂ ನೀರು ಹರಿದು ಅವಾಂತರ ಸೃಷ್ಟಿಸಿದೆ.
ಮಂಗಳೂರಿನ ಕಡೆ ಸದ್ಯ ಮುಖಮಾಡಬೇಡಿ
ಮಂಗಳೂರಿನಲ್ಲೂ ಕೂಡ ಭೀಕರ ಮಳೆಯಾಗುತ್ತಿದೆ. ಮರವೂರು ಡ್ಯಾಂ ತುಂಬಿ ತುಳುಕುತ್ತಿದ್ದು ಕೃತಕ ನೆರೆ ಬರೋದಾಗಿ ಈಗಾಗಲೇ ಗ್ರಾಮಸ್ಥರು ಹೇಳಿದ್ದಾರೆ. ಈಗಾಗಲೇ ನೆರೆ ಪೀಡಿತ ಅದ್ಯಪಾಡಿ ಗ್ರಾಮಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಮಂಗಳೂರು ಕಡೆಗೆ ಪ್ರಯಾಣ ಬೆಳೆಸುವ ಮುನ್ನ ಹಲವು ಬಾರಿ ಯೋಚನೆ ಮಾಡಿ
ಉಡುಪಿಯಲ್ಲೂ ಬಿಡದೆ ಜರಿಯುತ್ತಿದ್ದಾನೆ ಮಳೆರಾಯ
ಉಡುಪಿಯತ್ತ ಪ್ರಯಾಣ ಬೆಳೆಸುವ ಇರಾದೆಯಿದ್ದವರು ದಯವಿಟ್ಟು ಈ ವರದಿಯನ್ನೊಮ್ಮೆ ಓದಿ ಆಮೇಲೆ ನಿರ್ಧಾರಕ್ಕೆ ಬನ್ನಿ. ಉಡುಪಿಯಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಣೆಯಾಗಿದೆ. ಮಳೆಯ ಅಬ್ಬರದ ಜೊತೆ ಕಡಲ ತೀರದಲ್ಲಿ ಗಾಳಿಯ ತೀವ್ರತೆಗೂ ಭೀಮ ಕಸುವು ಬಂದಿದೆ.ನಾವುಂದ ಪರಿಸದರಲ್ಲಿ ಸಮುದ್ರ ಉಕ್ಕೇರಿ ಹರಿಯುತ್ತಿದ್ದು ಕಡಲಬ್ಬರದ ಹೊಡೆತಕ್ಕೆ ತಡೆಗೋಡೆಗಳು ಕುಸಿದು ಬೀಳುವ ಭೀತಿಯೂ ಎದುರಾಗಿದೆ
ಇದನ್ನೂ ಓದಿ:21 ಹಗರಣಗಳ ಬಾಂಬ್.. ವಾಲ್ಮೀಕಿ, ಮುಡಾ ಬಿಜೆಪಿ ಹೋರಾಟಕ್ಕೆ ಸಿಎಂ ಸಿದ್ದು ಕೌಂಟರ್ ಅಟ್ಯಾಕ್!
ಶಿರಸಿ ಹೆದ್ದಾರಿಯಲ್ಲಿ ಭೂ ಕುಸಿತ
ಇತ್ತ ಶಿರಸಿಯಲ್ಲಿಯೂ ಕೂಡ ಮಳೆರಾಯ ಬಿಡುವು ಕೊಡದೆ ರಚ್ಚೆ ಹಿಡಿದವರಂತೆ ಸುರಿಯುತ್ತಿದ್ದಾನೆ. ರಾಷ್ಟ್ರೀಯ ಹೆದ್ದಾರಿ 766E ಗುಡ್ಡ ಕುಸಿದಿದೆ ಉತ್ತರ ಕನ್ನಡ ಜಿಲ್ಲೆ ವರುಣನ ಆರ್ಭಟಕ್ಕೆ ಭಾಗಶಃ ತತ್ತರಿಸಿ ಹೋಗಿದೆ. ಮಳೆರಾಯನ ಉಗ್ರಾವತಾರಕ್ಕೆ ಜಿಲ್ಲೆಯಲ್ಲಿ ಹಲವಾರು ಭಾಗಗಳಲ್ಲಿ ಭೂಕುಸಿತ ಸಂಭವಿಸುತ್ತಿದೆ. ನದಿ, ಹೊಳೆಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ರಾಗಿಹೊಸಳ್ಳಿ ಬಳಿ ಗುಡ್ಡಕುಸಿತವಾಗಿದ್ದು, ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಕಳೆದ 4 ದಿನಗಳಿಂದ ಬಂದ್ ಆಗಿದೆ. ಹೆದ್ದಾರಿಯ ಅಲ್ಲಲ್ಲಿ ಗುಡ್ಡ ಮತ್ತೆ ಕುಸಿಯುತ್ತಿದ್ದು ಸಂಚಾರ ದುಸ್ತರವಾಗಿದೆ.
ಇದನ್ನೂ ಓದಿ: ‘ನನ್ನ ಮದುವೆಗೆ ದರ್ಶನ್ ರಿಲೀಸ್ ಆಗಿ ಬರ್ತಾರೆ’- ಕಾಟೇರನ ಭೇಟಿಯಾದ ತರುಣ್ ಸುಧೀರ್; ಹೇಳಿದ್ದೇನು?
ಮತ್ತೊಂದು ಕಡೆ ಶಿರೂರು ಗುಡ್ಡ ಕುಸಿತದ ಪ್ರಕರಣದಲ್ಲಿ ಮಣ್ಣಿನ ಅಡಿಯಲ್ಲಿ ಸಿಲುಕಿರುವ ಲಾರಿಗಾಗಿ ಇನ್ನೂ ತೀವ್ರ ಹುಡುಕಾಟ ನಡೆದಿದೆ. ಇಂದು ರಾತ್ರಿ ವೇಳೆಗೆ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆಗೆಯುವ ಸಾಧ್ಯತೆ ಇದ್ದು ನಾಳೆಯಿಂದ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಸೂಚನೆಯೂ ಇದೆ. ಸತತ ಮಳೆಯ ನಡುವೆಯೇ ನಿರಂತರ ಕಾರ್ಯಾಚರಣೆ ಮುಂದುವರಿದಿದ್ದು ಒಂದು ರಸ್ತೆಯ ಭಾಗಕ್ಕೆ ಮಣ್ಣು ಕಲ್ಲು ಹಾಕಿ ಸಿಬ್ಬಂದಿ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಇಷ್ಟೆಲ್ಲಾ ಅಪಾಯಗಳು ಸದ್ಯ ಈ ಪ್ರವಾಸಿ ತಾಣಗಳಲ್ಲಿ ಇವೆ. ಇತ್ತ ಪ್ರಯಾಣ ಬೆಳೆಸುವ ಮುನ್ನ ಸಾವಿರ ಬಾರಿ ಯೋಚನೆ ಮಾಡಿ. ಮುಂಗಾರು ಕೊಂಚ ತಣ್ಣಗಾದ ಬಳಿಕ ಈ ಪ್ರವಾಸಿ ಜಿಲ್ಲೆಗಳತ್ತ ಬಂದು ನೀವು ಪ್ರವಾಸವನ್ನು ಎಂಜಾಯ್ ಮಾಡಬಹುದು. ಸದ್ಯಕ್ಕೆ ಅಪಾಯಗಳು ಹೆಜ್ಜೆ ಹೆಜ್ಜೆಗೂ ಮೈಚೆಲ್ಲಿ ಕುಳಿತಿರುವುದುರಿಂದ ಪ್ರವಾಸ ಕೈಗೊಳ್ಳುವ ನಿರ್ಧಾರ ಬೇಡ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ