Advertisment

Bigg Boss​​ ಮನೆಮಂದಿ ಬಾಯಲ್ಲಿ ಈ ಸ್ಪರ್ಧಿಯದ್ದೇ ಮಾತು.. ಗೌರವ, ಅಗೌರವದ ಬಗ್ಗೆ ಭಾರೀ ಚರ್ಚೆ

author-image
AS Harshith
Updated On
Bigg Boss​​ ಮನೆಮಂದಿ ಬಾಯಲ್ಲಿ ಈ ಸ್ಪರ್ಧಿಯದ್ದೇ ಮಾತು.. ಗೌರವ, ಅಗೌರವದ ಬಗ್ಗೆ ಭಾರೀ ಚರ್ಚೆ
Advertisment
  • ಭಾರೀ ಕುತೂಹಲದಿಂದ ಸಾಗುತ್ತಿದೆ BBK11
  • ಸದ್ದು ಮಾಡುತ್ತಿದೆ ಸ್ಪರ್ಧಿಗಳ ನಡುವಿನ ಭಾರೀ ಜಗಳ
  • ಮನೆಯ ಮರದ ಕಟ್ಟೆ, ಸೋಫಾ ಮೇಲೆ ಈ ಸ್ಪರ್ಧಿಯದ್ದೇ ಚರ್ಚೆ

ಬಿಗ್​ ಬಾಸ್​​ ಸೀಸನ್​​ 11 ಭಾರೀ ಕುತೂಹಲದಿಂದ ಸಾಗುತ್ತಿದೆ. ಸ್ಪರ್ಧಿಗಳ ನಡುವಿನ ಜಗಳ ಭಾರೀ ಸದ್ದು ಮಾಡುತ್ತಿದೆ. ಲಾಯರ್​ ಜಗದೀಶ್​ ವರ್ತನೆ ಈಗ ಮನೆಮಂದಿ ತಲೆನೋವಾಗಿದ್ದು, ಸದ್ಯ ಎಲ್ಲರೂ ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ.

Advertisment

ಜಗದೀಶ್​ ಮನೆ ಮಂದಿಯ ಜೊತೆಗೆ ಸಿಕ್ಕ ಸಿಕ್ಕ ವಿಚಾರಕ್ಕೆ ಜಗಳವೆತ್ತುತ್ತಿದ್ದಾರೆ. ಈ ಕಾರಣದಿಂದ ಉಳಿದ ಸ್ಪರ್ಧಿಗಳಿಗೆ ಅವರ ವರ್ತನೆ ಬೇಸರ ತರಿಸಿದೆ. ಮಾತ್ರವಲ್ಲದೆ ಈ ವಿಚಾರವಾಗಿ ಜಗದೀಶ್​ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ಇದನ್ನೂ ಓದಿ: BBK11: ನನಗೆ ಇರೋಕೆ ಇಷ್ಟವಿಲ್ಲ, ಬಿಗ್​ ಬಾಸ್​ನಿಂದ ಹೊರ ಹೋಗುತ್ತೇನೆಂದ ಸ್ಪರ್ಧಿ!

ಮನೆಯ ಮರದ ಕಟ್ಟೆ ಬಳಿ ಅನುಷಾ, ಮೋಕ್ಷಿತಾ, ಚೈತ್ರಾ, ಗೋಲ್ಡ್​ ಸುರೇಶ್​ ಮತ್ತು ಶಿಶಿರ್​ ಚರ್ಚೆ ನಡೆಸುತ್ತಿದ್ದಾರೆ. ಗೌರವ ಕೊಟ್ಟರು ಗೌರವ ಉಳಿಸಿಕೊಳ್ಳುತ್ತಿಲ್ಲ ಎಂದು ಜಗದೀಶ್​ ಬಗ್ಗೆ ಮಾತನಾಡುತ್ತಿದ್ದಾರೆ.

Advertisment

ಇದನ್ನೂ ಓದಿ: BBK11: ಬಿಗ್​ ಬಾಸ್​​ಗೇ ​ಅವಾಜ್​​! ಪ್ರೋಗ್ರಾಂ ಹಾಳು ಮಾಡ್ತೀನಿ ಎಂದ ಲಾಯರ್! ವೀಕೆಂಡ್​ನಲ್ಲಿ​ ಇದೆಯಾ ಮಾರಿ ಹಬ್ಬ

ಅತ್ತ ಹಂಸಾ ಮತ್ತು ಗೌತಮಿ ಕೂಡ ಸೋಫಾ ಮೇಲೆ ಕೂಡ ಜಗದೀಶ್​ ಬಗ್ಗೆ ಚರ್ಚಿಸುತ್ತಿದ್ದಾರೆ. ಒಟ್ಟಿನಲ್ಲಿ ಲಾಯರ್​ ಜಗದೀಶ್​ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮನೆಮಂದಿಯ ಕಣ್ಣಿರಿಗೂ ಕಾರಣರಾಗಿದ್ದಾರೆ. ಸದ್ಯ ವಾರದ ಕತೆಯಲ್ಲಿ ಜಗದೀಶ್​ ಚರ್ಚೆಗೆ​ ಮುಖ್ಯ ವಿಷಯವಾಗಲಿದ್ದಾರೆ ಎಂಬ ಅನುಮಾನ ಬಿಗ್​ ಬಾಸ್​ ಅಭಿಮಾನಿಗಳನ್ನು ಕಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment