ಮುಂಬೈ ತಂಡದಿಂದ ಪಾಂಡ್ಯನನ್ನ ಕಾಪಾಡಿದ್ದ ರೋಹಿತ್ ಶರ್ಮಾ!
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ನ ಸಾರಥಿ ಹಾರ್ದಿಕ್ ಪಾಂಡ್ಯ
ರೋಹಿತ್ ಇಲ್ಲದಿದ್ದರೇ ಪಾಂಡ್ಯ ಕ್ರಿಕೆಟ್ ಲೋಕದಲ್ಲೇ ಇರುತ್ತಿರಲಿಲ್ಲ
ಅಂದು ರೋಹಿತ್ ಒಂದು ಮಾತು ಯೆಸ್ ಅಂದಿದ್ರೆ ಸಾಕಿತ್ತು. ಹಾರ್ದಿಕ್ ಪಾಂಡ್ಯ ಖೇಲ್ ಖತಂ ಆಗ್ತಿತ್ತು. ಆದ್ರೆ, ರೋಹಿತ್ ಬೆಳೆಸಿದ್ರು. ಈಗ ನೋಡಿದ್ರೆ ತಾನೇ ಸಾಕಿದ ಗಿಣಿ ರೋಹಿತ್ ಪಾಲಿಗೆ ಮುಳ್ಳಾಗಿದೆ. ಅಂದು ಹಾರ್ದಿಕ್ ಕರಿಯರ್ನ ರೋಹಿತ್ ಬಚಾವ್ ಮಾಡಿದ್ದೇಗೆ?
ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ನ ಸಾರಥಿ. 10 ಲಕ್ಷದಿಂದ ಕರಿಯರ್ ಆರಂಭಿಸಿದ ಫ್ರಾಂಚೈಸಿಗೇ ಮತ್ತೆ ಬರೋಬ್ಬರಿ 15 ಕೋಟಿಗೆ ಮರಳಿದ್ದಾರೆ. ಆರಂಭದಲ್ಲಿ ಸೋತು, ಬಳಿಕ ಸಕ್ಸಸ್ ಕಂಡ ಹಾರ್ದಿಕ್ ಇದೀಗ ನಾಯಕನ ಪಟ್ಟ ಅಲಂಕರಿಸಿದ್ದಾರೆ.
ಈ ಸೀಸನ್ ಐಪಿಎಲ್ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ನ ನಾಯಕತ್ವ ಬದಲಾವಣೆ ಇಡೀ ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿತ್ತು. ಸಕ್ಸಸ್ಫುಲ್ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕೊಕ್ ಕೊಟ್ಟ ಮುಂಬೈ ಫ್ರಾಂಚೈಸಿ, ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿ ಬಿಡ್ತು. ಒಂದು ಮಾತು ಕೇಳದೆ ಕೊಕ್ ಕೊಟ್ಟಾಗ ತಂಡಕ್ಕಾಗಿ ಎಲ್ಲವನ್ನೂ ಮಾಡಿದ ರೋಹಿತ್ಗೆ ಹೇಗಾಗಿರಬೇಡ.
ತಾನೇ ಸಾಕಿದ ಗಿಣಿ.. ರೋಹಿತ್ಗೆ ಮುಳ್ಳಾಯ್ತು.!
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕಂಡ ಶ್ರೇಷ್ಟ ಕ್ಯಾಪ್ಟನ್. 5 ಬಾರಿ ಟ್ರೋಫಿ ಗೆದ್ದು ಕೊಟ್ಟ ನಾಯಕ. ಭವಿಷ್ಯದ ಸೂಪರ್ ಸ್ಟಾರ್ಗಳನ್ನ ರೂಪಿಸಿದ ಹೀರೋ. ಇಂತಾ ಸಾರಥಿಯನ್ನ ಏಕಾಏಕಿ ಪಟ್ಟದಿಂದ ಕೆಳಗಿಳಿಸಿತು. ಇಲ್ಲಿ ರೋಹಿತ್ಗೆ ಮುಳ್ಳಾಗಿದ್ದು, ತಾನೇ ಸಾಕಿದ ಗಿಣಿ. ಪಾಂಡ್ಯರ ಟ್ಯಾಲೆಂಟ್ ಗುರುತಿಸಿ, ಅವಕಾಶ ಕೊಟ್ಟು, ಐಪಿಎಲ್ ಲೋಕಕ್ಕೆ ಅಂಬೆಗಾಲಿಟ್ಟಾಗ ತಿದ್ದಿ ತೀಡಿ ಬೆಳೆಸಿದ್ದು ಇದೇ ರೋಹಿತ್.
ನಾಯಕತ್ವದ ಷರತ್ತು ಹಾಕಿದ್ದ ಹಾರ್ದಿಕ್ ಪಾಂಡ್ಯ.!
ಈ ಬಾರಿಯ ಐಪಿಎಲ್ಗೂ ಮುನ್ನ ಗುಜರಾತ್ನಿಂದ ಹಾರ್ದಿಕ್ನ ವಾಪಾಸ್ಸು ಕರೆ ತರಲು ಮುಂಬೈ ಫ್ರಾಂಚೈಸಿ ಮುಂದಾದಾಗ ರೋಹಿತ್ ಒಪ್ಪಿರಲಿಲ್ಲ. ಆದ್ರೂ, ಹಾರ್ದಿಕ್ಗೆ ಮುಂಬೈ ಮಣೆ ಹಾಕಿತು. ಇದೇ ಸಂದರ್ಭದಲ್ಲಿ ಹಾರ್ದಿಕ್ ಕೂಡ ಒಂದು ಷರತ್ತನ್ನ ಹಾಕಿದ್ರಂತೆ. ನಾಯಕತ್ವ ಕೊಟ್ಟರೆ ಮಾತ್ರ ಬರೋದು ಅಂತಾ. ಹಾರ್ದಿಕ್ ಷರತ್ತಿಗೆ ಮಣಿದ ಫ್ರಾಂಚೈಸಿ ಕ್ಯಾಪ್ಟನ್ಸಿ ಪಟ್ಟ ಕೊಟ್ಟಿದ್ದು.
ಅಂದು ರೋಹಿತ್ ಇಲ್ಲದಿದ್ರೆ ಹಾರ್ದಿಕ್ ಕಥೆ ಖಲ್ಲಾಸ್.!
ಇಂದು ರೋಹಿತ್ ಶರ್ಮಾ ನಾಯಕತ್ವದಡಿ ಆಡಲು ಇಷ್ಟ ಪಡದ ಹಾರ್ದಿಕ್ ಕೊನೆಗೂ ತಾನು ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ. ಬಹುಷಃ ಹಾರ್ದಿಕ್ ಮರೆತಿರಬಹುದು. ಸತ್ಯ ಏನಪ್ಪಾ ಅಂದ್ರೆ ಈ ರೋಹಿತ್ ಇಲ್ಲದಿದ್ದಿದ್ರೆ, ಹಾರ್ದಿಕ್ ಇಷ್ಟು ದೊಡ್ಡ ಕ್ರಿಕೆಟರ್ ಆಗ್ತಾನೆ ಇರಲಿಲ್ಲ. ಇಂದು ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿರೋ ಫ್ರಾಂಚೈಸಿ ಹಿಂದೊಮ್ಮೆ ಕಿಕೌಟ್ ಮಾಡಲು ಚಿಂತಿಸಿತ್ತು. ಆಗ ತಡೆದಿದ್ದು ಇದೇ ರೋಹಿತ್ ಶರ್ಮಾ.
‘ಆಗ ರೋಹಿತ್ ಬಿಟ್ಟು ಕೊಡಲಿಲ್ಲ’
‘ಹಾರ್ದಿಕ್ ಪಾಂಡ್ಯ 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಸೇರಿಕೊಂಡರು. 2016ರಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಫೇಲ್ ಆದ ಅನ್ಕ್ಯಾಪ್ಡ್ ಆಟಗಾರರನ್ನ ಫ್ರಾಂಚೈಸಿಗಳು ಕೇವಲ 10 ಲಕ್ಷ ಅಲ್ವಾ ಅಂತಾ ರಿಲೀಸ್ ಮಾಡ್ತವೆ. ರಣಜಿ ಹಾಗೂ ಡೊಮೆಸ್ಟಿಕ್ ಕ್ರಿಕೆಟ್ನ ಪ್ರದರ್ಶನ ನೋಡಿ, ಚನ್ನಾಗಿ ಆಡಿದ್ರೆ ಮತ್ತೆ ಚಾನ್ಸ್ ನೀಡುತ್ತವೆ. ಆದ್ರೆ, ಆಗ ನಾಯಕ ರೋಹಿತ್ ಶರ್ಮಾ, ಪಾಂಡ್ಯರನ್ನ ಬಿಟ್ಟುಕೊಡಲಿಲ್ಲ’
ಪಾರ್ಥಿವ್ ಪಟೇಲ್, MI ಮಾಜಿ ಕ್ರಿಕೆಟಿಗ
ಕೇವಲ 10 ಲಕ್ಷಕ್ಕೆ ತಂಡ ಸೇರಿದ್ದ ಹಾರ್ದಿಕ್, ಇಂದು ಕೋಟಿಗಟ್ಟಲೇ ಸಂಪಾದಿಸ್ತಿದ್ದಾರೆ. ಈಗ ಹಣ, ಹೆಸರು ಎಲ್ಲ ಗಳಿಸಿರೋ ಹಾರ್ದಿಕ್, ರೋಹಿತ್ ಶರ್ಮಾಗೆ ಚಿರುಖುಣಿ ಆಗರಲೇಬೇಕು. ನಾಯಕತ್ವದ ಕಥೆ ಈಗ ಮುಗಿದ ಅಧ್ಯಾಯ. ರೋಹಿತ್ರನ್ನ ಅಟ್ಲೀಸ್ಟ್ ಗೌರವದಿಂದಾದ್ರೂ ಹಾರ್ದಿಕ್ ನಡೆಸಿಕೊಳ್ತಾರಾ ಅನ್ನೋದಷ್ಟೇ ಸದ್ಯ ಎಲ್ಲರಲ್ಲೂ ಇರೋ ಕುತೂಹಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಮುಂಬೈ ತಂಡದಿಂದ ಪಾಂಡ್ಯನನ್ನ ಕಾಪಾಡಿದ್ದ ರೋಹಿತ್ ಶರ್ಮಾ!
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ನ ಸಾರಥಿ ಹಾರ್ದಿಕ್ ಪಾಂಡ್ಯ
ರೋಹಿತ್ ಇಲ್ಲದಿದ್ದರೇ ಪಾಂಡ್ಯ ಕ್ರಿಕೆಟ್ ಲೋಕದಲ್ಲೇ ಇರುತ್ತಿರಲಿಲ್ಲ
ಅಂದು ರೋಹಿತ್ ಒಂದು ಮಾತು ಯೆಸ್ ಅಂದಿದ್ರೆ ಸಾಕಿತ್ತು. ಹಾರ್ದಿಕ್ ಪಾಂಡ್ಯ ಖೇಲ್ ಖತಂ ಆಗ್ತಿತ್ತು. ಆದ್ರೆ, ರೋಹಿತ್ ಬೆಳೆಸಿದ್ರು. ಈಗ ನೋಡಿದ್ರೆ ತಾನೇ ಸಾಕಿದ ಗಿಣಿ ರೋಹಿತ್ ಪಾಲಿಗೆ ಮುಳ್ಳಾಗಿದೆ. ಅಂದು ಹಾರ್ದಿಕ್ ಕರಿಯರ್ನ ರೋಹಿತ್ ಬಚಾವ್ ಮಾಡಿದ್ದೇಗೆ?
ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ನ ಸಾರಥಿ. 10 ಲಕ್ಷದಿಂದ ಕರಿಯರ್ ಆರಂಭಿಸಿದ ಫ್ರಾಂಚೈಸಿಗೇ ಮತ್ತೆ ಬರೋಬ್ಬರಿ 15 ಕೋಟಿಗೆ ಮರಳಿದ್ದಾರೆ. ಆರಂಭದಲ್ಲಿ ಸೋತು, ಬಳಿಕ ಸಕ್ಸಸ್ ಕಂಡ ಹಾರ್ದಿಕ್ ಇದೀಗ ನಾಯಕನ ಪಟ್ಟ ಅಲಂಕರಿಸಿದ್ದಾರೆ.
ಈ ಸೀಸನ್ ಐಪಿಎಲ್ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ನ ನಾಯಕತ್ವ ಬದಲಾವಣೆ ಇಡೀ ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿತ್ತು. ಸಕ್ಸಸ್ಫುಲ್ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕೊಕ್ ಕೊಟ್ಟ ಮುಂಬೈ ಫ್ರಾಂಚೈಸಿ, ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿ ಬಿಡ್ತು. ಒಂದು ಮಾತು ಕೇಳದೆ ಕೊಕ್ ಕೊಟ್ಟಾಗ ತಂಡಕ್ಕಾಗಿ ಎಲ್ಲವನ್ನೂ ಮಾಡಿದ ರೋಹಿತ್ಗೆ ಹೇಗಾಗಿರಬೇಡ.
ತಾನೇ ಸಾಕಿದ ಗಿಣಿ.. ರೋಹಿತ್ಗೆ ಮುಳ್ಳಾಯ್ತು.!
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕಂಡ ಶ್ರೇಷ್ಟ ಕ್ಯಾಪ್ಟನ್. 5 ಬಾರಿ ಟ್ರೋಫಿ ಗೆದ್ದು ಕೊಟ್ಟ ನಾಯಕ. ಭವಿಷ್ಯದ ಸೂಪರ್ ಸ್ಟಾರ್ಗಳನ್ನ ರೂಪಿಸಿದ ಹೀರೋ. ಇಂತಾ ಸಾರಥಿಯನ್ನ ಏಕಾಏಕಿ ಪಟ್ಟದಿಂದ ಕೆಳಗಿಳಿಸಿತು. ಇಲ್ಲಿ ರೋಹಿತ್ಗೆ ಮುಳ್ಳಾಗಿದ್ದು, ತಾನೇ ಸಾಕಿದ ಗಿಣಿ. ಪಾಂಡ್ಯರ ಟ್ಯಾಲೆಂಟ್ ಗುರುತಿಸಿ, ಅವಕಾಶ ಕೊಟ್ಟು, ಐಪಿಎಲ್ ಲೋಕಕ್ಕೆ ಅಂಬೆಗಾಲಿಟ್ಟಾಗ ತಿದ್ದಿ ತೀಡಿ ಬೆಳೆಸಿದ್ದು ಇದೇ ರೋಹಿತ್.
ನಾಯಕತ್ವದ ಷರತ್ತು ಹಾಕಿದ್ದ ಹಾರ್ದಿಕ್ ಪಾಂಡ್ಯ.!
ಈ ಬಾರಿಯ ಐಪಿಎಲ್ಗೂ ಮುನ್ನ ಗುಜರಾತ್ನಿಂದ ಹಾರ್ದಿಕ್ನ ವಾಪಾಸ್ಸು ಕರೆ ತರಲು ಮುಂಬೈ ಫ್ರಾಂಚೈಸಿ ಮುಂದಾದಾಗ ರೋಹಿತ್ ಒಪ್ಪಿರಲಿಲ್ಲ. ಆದ್ರೂ, ಹಾರ್ದಿಕ್ಗೆ ಮುಂಬೈ ಮಣೆ ಹಾಕಿತು. ಇದೇ ಸಂದರ್ಭದಲ್ಲಿ ಹಾರ್ದಿಕ್ ಕೂಡ ಒಂದು ಷರತ್ತನ್ನ ಹಾಕಿದ್ರಂತೆ. ನಾಯಕತ್ವ ಕೊಟ್ಟರೆ ಮಾತ್ರ ಬರೋದು ಅಂತಾ. ಹಾರ್ದಿಕ್ ಷರತ್ತಿಗೆ ಮಣಿದ ಫ್ರಾಂಚೈಸಿ ಕ್ಯಾಪ್ಟನ್ಸಿ ಪಟ್ಟ ಕೊಟ್ಟಿದ್ದು.
ಅಂದು ರೋಹಿತ್ ಇಲ್ಲದಿದ್ರೆ ಹಾರ್ದಿಕ್ ಕಥೆ ಖಲ್ಲಾಸ್.!
ಇಂದು ರೋಹಿತ್ ಶರ್ಮಾ ನಾಯಕತ್ವದಡಿ ಆಡಲು ಇಷ್ಟ ಪಡದ ಹಾರ್ದಿಕ್ ಕೊನೆಗೂ ತಾನು ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ. ಬಹುಷಃ ಹಾರ್ದಿಕ್ ಮರೆತಿರಬಹುದು. ಸತ್ಯ ಏನಪ್ಪಾ ಅಂದ್ರೆ ಈ ರೋಹಿತ್ ಇಲ್ಲದಿದ್ದಿದ್ರೆ, ಹಾರ್ದಿಕ್ ಇಷ್ಟು ದೊಡ್ಡ ಕ್ರಿಕೆಟರ್ ಆಗ್ತಾನೆ ಇರಲಿಲ್ಲ. ಇಂದು ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿರೋ ಫ್ರಾಂಚೈಸಿ ಹಿಂದೊಮ್ಮೆ ಕಿಕೌಟ್ ಮಾಡಲು ಚಿಂತಿಸಿತ್ತು. ಆಗ ತಡೆದಿದ್ದು ಇದೇ ರೋಹಿತ್ ಶರ್ಮಾ.
‘ಆಗ ರೋಹಿತ್ ಬಿಟ್ಟು ಕೊಡಲಿಲ್ಲ’
‘ಹಾರ್ದಿಕ್ ಪಾಂಡ್ಯ 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಸೇರಿಕೊಂಡರು. 2016ರಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಫೇಲ್ ಆದ ಅನ್ಕ್ಯಾಪ್ಡ್ ಆಟಗಾರರನ್ನ ಫ್ರಾಂಚೈಸಿಗಳು ಕೇವಲ 10 ಲಕ್ಷ ಅಲ್ವಾ ಅಂತಾ ರಿಲೀಸ್ ಮಾಡ್ತವೆ. ರಣಜಿ ಹಾಗೂ ಡೊಮೆಸ್ಟಿಕ್ ಕ್ರಿಕೆಟ್ನ ಪ್ರದರ್ಶನ ನೋಡಿ, ಚನ್ನಾಗಿ ಆಡಿದ್ರೆ ಮತ್ತೆ ಚಾನ್ಸ್ ನೀಡುತ್ತವೆ. ಆದ್ರೆ, ಆಗ ನಾಯಕ ರೋಹಿತ್ ಶರ್ಮಾ, ಪಾಂಡ್ಯರನ್ನ ಬಿಟ್ಟುಕೊಡಲಿಲ್ಲ’
ಪಾರ್ಥಿವ್ ಪಟೇಲ್, MI ಮಾಜಿ ಕ್ರಿಕೆಟಿಗ
ಕೇವಲ 10 ಲಕ್ಷಕ್ಕೆ ತಂಡ ಸೇರಿದ್ದ ಹಾರ್ದಿಕ್, ಇಂದು ಕೋಟಿಗಟ್ಟಲೇ ಸಂಪಾದಿಸ್ತಿದ್ದಾರೆ. ಈಗ ಹಣ, ಹೆಸರು ಎಲ್ಲ ಗಳಿಸಿರೋ ಹಾರ್ದಿಕ್, ರೋಹಿತ್ ಶರ್ಮಾಗೆ ಚಿರುಖುಣಿ ಆಗರಲೇಬೇಕು. ನಾಯಕತ್ವದ ಕಥೆ ಈಗ ಮುಗಿದ ಅಧ್ಯಾಯ. ರೋಹಿತ್ರನ್ನ ಅಟ್ಲೀಸ್ಟ್ ಗೌರವದಿಂದಾದ್ರೂ ಹಾರ್ದಿಕ್ ನಡೆಸಿಕೊಳ್ತಾರಾ ಅನ್ನೋದಷ್ಟೇ ಸದ್ಯ ಎಲ್ಲರಲ್ಲೂ ಇರೋ ಕುತೂಹಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ