ಮುಂಬೈನಿಂದ ಹೈದರಾಬಾದ್ಗೆ ಬರುವಾಗ ಅಪಾಯದಿಂದ ಪಾರು
30 ನಿಮಿಷ ಕಾಲ ಜೀವ ಕೈಯಲ್ಲಿಡಿದು ಕುಳಿತ್ತಿದ್ದ ಎಲ್ಲ ಪ್ರಯಾಣಿಕರು
ಶ್ರದ್ಧಾ, ನ್ಯಾಷನಲ್ ಕ್ರಶ್ ಪ್ರಯಾಣಿಸುವಾಗ ಆಘಾತದಿಂದ ಪಾರು.!
ಬ್ಯೂಟಿಫುಲ್ ನಟಿ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳ ಸೂಟಿಂಗ್ನಲ್ಲಿ ಬ್ಯುಸಿ ಇರೋ ಹೀರೋಯಿನ್. ಕೆಲಸದ ನಿಮಿತ್ತ ಮುಂಬೈಯಿಂದ ಹೈದರಾಬಾದ್ಗೆ ಪ್ಲೇನ್ ಅಲ್ಲಿ ತೆರಳುವಾಗ ದೊಡ್ಡ ಆಘಾತದಿಂದ ಪಾರಾಗಿದ್ದಾರೆ. ಸದ್ಯ ಈ ಬಗ್ಗೆ ಇನ್ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿರುವ ನ್ಯಾಷನಲ್ ಕ್ರಶ್ ಸಾವಿನ ದವಡೆಯಿಂದ ಹೇಗೆ ಪಾರಾಗಿದ್ದು ಎನ್ನುವುದನ್ನು ಹೇಳಿದ್ದಾರೆ.
ಫೆಬ್ರವರಿ 17ರಂದು ರಶ್ಮಿಕಾ ಮಂದಣ್ಣ ಹಾಗೂ ಶ್ರದ್ಧಾ ದಾಸ್ ಇಬ್ಬರು ವಿಸ್ತಾರಾ ಏರ್ಲೈನ್ಸ್ನ UK531 ಹೆಸರಿನ ವಿಮಾನದಲ್ಲಿ ಮುಂಬೈಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಿಂದ ಹೈದರಾಬಾದ್ಗೆ ತೆರಳುತ್ತಿದ್ದರು. ಈ ವೇಳೆ UK531 ವಿಮಾನ ಟೇಕ್ ಆಫ್ ಆದ 30 ನಿಮಿಷಗಳ ಬಳಿಕ ಆಕಾಶದಲ್ಲೇ ತಾಂತ್ರಿಕ ದೋಷ ಕಂಡು ಬಂದಿದೆ. ಹೀಗಾಗಿ ಪೈಲಟ್ನ ಚಾಣಕ್ಷತೆಯಿಂದ ವಿಮಾನವನ್ನು ಮತ್ತೆ ವಾಪಸ್ ಮುಂಬೈಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲೇ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು. ಈ ವೇಳೆ ಎಲ್ಲ ಪ್ರಯಾಣಿಕರು ಭಯದಿಂದ ಜೀವ ಕೈಯಲ್ಲಿಡಿದು ಕುಳಿತ್ತಿದ್ದರು. ವಿಮಾನದಲ್ಲಿ ಅನಿರೀಕ್ಷಿತ ಟೆಕ್ನಿಕಲ್ ಸಮಸ್ಯೆಯಿಂದ ಹೇಗೋ ಸೇಫ್ ಆಗಿ ಲ್ಯಾಂಡ್ ಆಗಿದ್ದು ಯಾರಿಗೂ ಏನು ಆಗಿಲ್ಲ ಎಂದು ಹೇಳಲಾಗಿದೆ.
UK531 ಪ್ಲೇನ್ ಲ್ಯಾಂಡ್ ಆದ ಬಳಿಕ ಸ್ವಲ್ಪ ಸಮಯದ ನಂತರ ಮತ್ತೊಂದು ವಿಮಾನವನ್ನ ಹೈದರಾಬಾದ್ಗೆ ತೆರಳಲು ಸಿದ್ಧಪಡಿಸಲಾಯಿತು. ಈ ವೇಳೆ ಪ್ರಯಾಣಿಕರಿಗೆ ಆಹಾರ ಹಾಗೂ ಪಾನೀಯ ನೀಡಲಾಯಿತು. ಪ್ರಯಾಣಕ್ಕೂ ಮೊದಲೇ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡರು ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿದ್ದರಿಂದ ಏರ್ಲೈನ್ಸ್ ಸಿಬ್ಬಂದಿ ಪ್ರಯಾಣಿಕರ ಬಳಿ ಕ್ಷಮೆ ಕೇಳಿದ್ದಾರೆ.
ಇನ್ಸ್ಟಾಲದ ಸ್ಟೇಟಸ್ನಲ್ಲಿ ರಶ್ಮಿಕಾ ಮಂದಣ್ಣ, ಶ್ರದ್ಧಾ ದಾಸ್ ಜೊತೆ ಇರುವ ಫೋಟೋ ಶೇರ್ ಮಾಡಿದ್ದಾರೆ. ಇದರ ಜೊತೆ ಸಾವಿನಿಂದ ಹೇಗೆ ಹೊರ ಬಂದೇವು ಇವತ್ತು ಎಂದು ಬರೆದುಕೊಂಡಿದ್ದಾರೆ. ಸದ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮುಂಬೈನಿಂದ ಹೈದರಾಬಾದ್ಗೆ ಬರುವಾಗ ಅಪಾಯದಿಂದ ಪಾರು
30 ನಿಮಿಷ ಕಾಲ ಜೀವ ಕೈಯಲ್ಲಿಡಿದು ಕುಳಿತ್ತಿದ್ದ ಎಲ್ಲ ಪ್ರಯಾಣಿಕರು
ಶ್ರದ್ಧಾ, ನ್ಯಾಷನಲ್ ಕ್ರಶ್ ಪ್ರಯಾಣಿಸುವಾಗ ಆಘಾತದಿಂದ ಪಾರು.!
ಬ್ಯೂಟಿಫುಲ್ ನಟಿ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳ ಸೂಟಿಂಗ್ನಲ್ಲಿ ಬ್ಯುಸಿ ಇರೋ ಹೀರೋಯಿನ್. ಕೆಲಸದ ನಿಮಿತ್ತ ಮುಂಬೈಯಿಂದ ಹೈದರಾಬಾದ್ಗೆ ಪ್ಲೇನ್ ಅಲ್ಲಿ ತೆರಳುವಾಗ ದೊಡ್ಡ ಆಘಾತದಿಂದ ಪಾರಾಗಿದ್ದಾರೆ. ಸದ್ಯ ಈ ಬಗ್ಗೆ ಇನ್ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿರುವ ನ್ಯಾಷನಲ್ ಕ್ರಶ್ ಸಾವಿನ ದವಡೆಯಿಂದ ಹೇಗೆ ಪಾರಾಗಿದ್ದು ಎನ್ನುವುದನ್ನು ಹೇಳಿದ್ದಾರೆ.
ಫೆಬ್ರವರಿ 17ರಂದು ರಶ್ಮಿಕಾ ಮಂದಣ್ಣ ಹಾಗೂ ಶ್ರದ್ಧಾ ದಾಸ್ ಇಬ್ಬರು ವಿಸ್ತಾರಾ ಏರ್ಲೈನ್ಸ್ನ UK531 ಹೆಸರಿನ ವಿಮಾನದಲ್ಲಿ ಮುಂಬೈಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಿಂದ ಹೈದರಾಬಾದ್ಗೆ ತೆರಳುತ್ತಿದ್ದರು. ಈ ವೇಳೆ UK531 ವಿಮಾನ ಟೇಕ್ ಆಫ್ ಆದ 30 ನಿಮಿಷಗಳ ಬಳಿಕ ಆಕಾಶದಲ್ಲೇ ತಾಂತ್ರಿಕ ದೋಷ ಕಂಡು ಬಂದಿದೆ. ಹೀಗಾಗಿ ಪೈಲಟ್ನ ಚಾಣಕ್ಷತೆಯಿಂದ ವಿಮಾನವನ್ನು ಮತ್ತೆ ವಾಪಸ್ ಮುಂಬೈಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲೇ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು. ಈ ವೇಳೆ ಎಲ್ಲ ಪ್ರಯಾಣಿಕರು ಭಯದಿಂದ ಜೀವ ಕೈಯಲ್ಲಿಡಿದು ಕುಳಿತ್ತಿದ್ದರು. ವಿಮಾನದಲ್ಲಿ ಅನಿರೀಕ್ಷಿತ ಟೆಕ್ನಿಕಲ್ ಸಮಸ್ಯೆಯಿಂದ ಹೇಗೋ ಸೇಫ್ ಆಗಿ ಲ್ಯಾಂಡ್ ಆಗಿದ್ದು ಯಾರಿಗೂ ಏನು ಆಗಿಲ್ಲ ಎಂದು ಹೇಳಲಾಗಿದೆ.
UK531 ಪ್ಲೇನ್ ಲ್ಯಾಂಡ್ ಆದ ಬಳಿಕ ಸ್ವಲ್ಪ ಸಮಯದ ನಂತರ ಮತ್ತೊಂದು ವಿಮಾನವನ್ನ ಹೈದರಾಬಾದ್ಗೆ ತೆರಳಲು ಸಿದ್ಧಪಡಿಸಲಾಯಿತು. ಈ ವೇಳೆ ಪ್ರಯಾಣಿಕರಿಗೆ ಆಹಾರ ಹಾಗೂ ಪಾನೀಯ ನೀಡಲಾಯಿತು. ಪ್ರಯಾಣಕ್ಕೂ ಮೊದಲೇ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡರು ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿದ್ದರಿಂದ ಏರ್ಲೈನ್ಸ್ ಸಿಬ್ಬಂದಿ ಪ್ರಯಾಣಿಕರ ಬಳಿ ಕ್ಷಮೆ ಕೇಳಿದ್ದಾರೆ.
ಇನ್ಸ್ಟಾಲದ ಸ್ಟೇಟಸ್ನಲ್ಲಿ ರಶ್ಮಿಕಾ ಮಂದಣ್ಣ, ಶ್ರದ್ಧಾ ದಾಸ್ ಜೊತೆ ಇರುವ ಫೋಟೋ ಶೇರ್ ಮಾಡಿದ್ದಾರೆ. ಇದರ ಜೊತೆ ಸಾವಿನಿಂದ ಹೇಗೆ ಹೊರ ಬಂದೇವು ಇವತ್ತು ಎಂದು ಬರೆದುಕೊಂಡಿದ್ದಾರೆ. ಸದ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ