/newsfirstlive-kannada/media/post_attachments/wp-content/uploads/2025/04/muddu-sose.jpg)
ಹೊಸ ಧಾರಾವಾಹಿ ಬರ್ತಿದೆ ಅಂದ್ರೇ ನಿರೀಕ್ಷೆಗಳು ಸಹಜ. ಅದು ಈಗಾಗಲೇ ಜನಪ್ರಿಯತೆ ಉತ್ತಂಗದಲ್ಲಿರೋರು ಮತ್ತೆ ಸೀರಿಯಲ್ ಮಾಡ್ತಾರೆ ಅಂದಾಗ, ಎಲ್ಲರ ಚಿತ್ತ ಅವರ ಮೇಲೆ ನೆಟ್ಟಿರುತ್ತೆ. ಬಿಗ್ಬಾಸ್ ಸೀಸನ್ 11ರ ರನ್ನರ್ ಅಪ್ ಆಗಿದ್ದ ತ್ರಿವಿಕ್ರಮ್ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ:ವಿನಯ್ ಗೌಡ, ರಜತ್ ಪ್ರಕರಣ ಬೆನ್ನಲ್ಲೇ ಮತ್ತೊಂದು ಹುಚ್ಚಾಟ.. ಹೆಂಡ್ತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್..!
ಮುದ್ದು ಸೊಸೆ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರೋದಕ್ಕೆ ಸಜ್ಜಾಗ್ತಿದೆ. ರಿಮೇಕ್ ಸ್ಟೋರಿ ಆದ್ರೂ ಬೆಟ್ಟದಷ್ಟು ನಿರೀಕ್ಷೆ ಇದೆ. ಬಿಗ್ಬಾಸ್ನಲ್ಲಿ ಟಾಪ್ನಲ್ಲಿದ್ದ ತ್ರಿವಿಕ್ರಮ್ಗೆ ಮತ್ತೊಂದು ದೊಡ್ಡಮಟ್ಟದ ಹಿಟ್ ಕೊಡುತ್ತಾ ಸೀರಿಯಲ್ ಎಂಬ ಕುತೂಹಲ ಸಹಜವಾಗಿಯೇ ವೀಕ್ಷಕರಲ್ಲಿದೆ.
ಈಗಾಗಲೇ ಹಲವು ಪ್ರೋಮೋಗಳನ್ನು ರಿಲೀಸ್ ಮಾಡಿರೋ ತಂಡಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ತಿದೆ. ಇದೇ ಬೆನ್ನಲ್ಲೇ ಮತ್ತೊಂದು ಹೊಸ ಪ್ರೊಮೋ ಬಿಡುಗಡೆ ಮಾಡಿದೆ. ಓದು ಅರ್ಧಕ್ಕೆ ನಿಲ್ಲುತ್ತೆ ಎಂಬ ಭಯದಲ್ಲಿ ನಾಯಕಿ ತಾನು ಮೈನರ್ ಅನ್ನೋ ವಿಷ್ಯ ಪೊಲೀಸರಿಗೆ ಮಾಹಿತಿ ನೀಡ್ತಾಳೆ. ಇನ್ನೇನು ನಾಯಕ ತಾಳಿ ಕಟ್ಬೇಕು, ಪೊಲೀಸ್ ಬಂದು ಮದುವೆಯನ್ನು ನಿಲ್ಲಿಸುತ್ತಾರೆ.
ಆದ್ರೇ ಈ ವಿಚಾರ ಯಾರು ಪೊಲೀಸ್ಗೆ ತಿಳಿಸಿದ್ದು ಅನ್ನೋದೇ ನಾಯಕನಿಗೆ ದೊಡ್ಡ ಪ್ರಶ್ನೆ ಆಗಿರುತ್ತೆ. ಜೊತೆಗೆ ನಾಯಕನ ತಂದೆ ಅರೆಸ್ಟ್ ಆಗಿರ್ತಾರೆ. ಈ ಎಲ್ಲಾ ಗೊಂದಲದ ನಡುವೆ ನಾಯಕಿಗೆ 18 ತುಂಬಿದ ತಕ್ಷಣ ಮದುವೆ ಆಗೋ ಶಪತ ಮಾಡ್ತಾನೆ ನಾಯಕ. ಅಲ್ಲಿವರೆಗೂ ಇವರ ಪ್ರೀತಿಯ ಪಯಣ ಸಾಗ್ತಿರುತ್ತೆ.
View this post on Instagram
ಪಕ್ಕಾ ಮಂಡ್ಯ ಸ್ಟೈಲ್ನಲ್ಲಿ ಕಾಣಿಸಿಕೊಂಡಿರೋ ತ್ರಿವಿಕ್ರಮ್, ಧಾರಾವಾಹಿಯಲ್ಲಿ ಪಂಚೆ ಶರ್ಟ್ನಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಪಾತ್ರದ ಹೆಸರು ಭದ್ರೇಗೌಡ. ನಾಯಕಿ ಪ್ರತಿಮಾ ವಿದ್ಯಾ ಪಾತ್ರ ಮಾಡ್ತಿದ್ದಾರೆ. ಪ್ರೋಮೋ ಶೂಟಿಂಗ್ ವೇಳೆ ಧಾರಾವಾಹಿ ಬಗ್ಗೆ ಅನಿಸಿಕೆ ಹಂಚ್ಕೊಂಡಿದ್ದಾರೆ. ಭದ್ರೇಗೌಡ-ವಿದ್ಯಾ ಜರ್ನಿ ಇದೇ ಏಪ್ರಿಲ್ 14 ರಿಂದ ರಾತ್ರಿ 7.30ಕ್ಕೆ ಶುರುವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ