ಮಾಧುರಿ ಸೌಂದರ್ಯದ ಸೆಳೆತಕ್ಕೆ ಮೈಮರೆತಿದ್ದ ಸ್ಟಾರ್ ನಟ.. ತುಟಿಯಲ್ಲಿ ರಕ್ತ ಬರುವಂತೆ ಕಚ್ಚಿದ್ದ! ಯಾರು ಗೊತ್ತಾ?

author-image
Gopal Kulkarni
Updated On
ಮಾಧುರಿ ಸೌಂದರ್ಯದ ಸೆಳೆತಕ್ಕೆ ಮೈಮರೆತಿದ್ದ ಸ್ಟಾರ್ ನಟ.. ತುಟಿಯಲ್ಲಿ ರಕ್ತ ಬರುವಂತೆ ಕಚ್ಚಿದ್ದ! ಯಾರು ಗೊತ್ತಾ?
Advertisment
  • ಮಾಧುರಿ ದಿಕ್ಷೀತ್ ತುಟಿಯಲ್ಲಿ ರಕ್ತ ಬರುವಂತೆ ಚುಂಬಿಸಿದ ನಟ ಯಾರು?
  • ಯಾವ ಸಿನಿಮಾದಲ್ಲಿ ಮಾಧುರಿ ಜೀವನದಲ್ಲಿ ಈ ಒಂದು ಕಹಿ ಘಟನೆ ನಡೀತು?
  • ಕ್ಷಮೆ ಕೇಳಿದ ಆ ಸೂಪರ್ ಸ್ಟಾರ್​ಗೆ ಮಾಧುರಿ ದೀಕ್ಷಿತ್ ಹೇಳಿದ್ದೇನು ಗೊತ್ತಾ?

ಮಾಧುರಿ ದೀಕ್ಷಿತ್​, ಎಂದೂ ಮುಗಿದಯ ಸೌಂದರ್ಯದ ಅಮಲು, ಸುಮಾರು ದಶಕಗಳ ಕಾಲ ತನ್ನ ಸೌಂದರ್ಯ ರಾಶಿ ಹಾಗೂ ನಟನಾ ಕೌಶಲ್ಯದಿಂದಲೇ ಬಾಲಿವುಡ್​ನ್ನು ದಶಕಗಳ ಕಾಲ ಆಳಿದ ಅಪರೂಪದ ಸೌಂದರ್ಯದ ಗಣಿ. ಮಾಧುರಿ ದಿಕ್ಷೀತ್​ ಎಂದರೆನೇ ಒಂದು ಕ್ರೇಜ್ ಇದ್ದ ಕಾಲವದು. ಈ ನಟಿಯ ಖ್ಯಾತಿ ಅದ್ಯಾವ ಮಟ್ಟಕ್ಕೆ ಹೋಗಿತ್ತು ಅಂದ್ರೆ ನೀವು ನಮಗೆ ಮಾಧುರಿ ದೀಕ್ಷಿತ್​ರನ್ನು ಬಿಟ್ಟು ಕೊಡಿ ನಾವು ಆಕ್ರಮಿತ ಕಾಶ್ಮೀರ ಬಿಟ್ಟುಕೊಡುತ್ತೇವೆ ಎಂದು ಪಾಕಿಸ್ತಾನಿಯರು ಹೇಳುವಂತಹ ಕ್ರೇಜ್​ನ್ನು ಜಾಗತಿಕವಾಗಿ ಮಾಧುರಿ ಹೊಂದಿದ್ದರು. ಅತ್ಯಂತ ಕಡಿಮೆ ವಿವಾದ ಹಾಗೂ ಹೆಚ್ಚು ಪ್ರಸಿದ್ಧಿ ಪಡೆದ ಬಾಲಿವುಡ್ ನಟಿಯರಲ್ಲಿ ಮಾಧುರಿ ಮೊದಲಿನ ಸಾಲಿನಲ್ಲಿ ಬಂದು ನಿಲ್ಲುತ್ತಾರೆ. ಇಂದಿಗೂ ಕೂಡ ಅವರ ಸೌಂದರ್ಯಕ್ಕೆ ಮುಕ್ಕು ಬಂದಿಲ್ಲ. ಕಣ್ಣಿನ ಮಾದಕತೆಗೆ ಕುಂದು ಬಂದಿಲ್ಲ. ಮೋಹಕ ನಗೆಗೆ ಮಾಸುವಿಕೆ ತಾಗಿಲ್ಲ. ಇಂತಹ ನಟಿಯ ವೃತ್ತಿ ಬದುಕಿನಲ್ಲಿಯೂ ಒಂದು ಕಹಿ ಘಟನೆಯೊಂದು ನಡೆದು ಹೋಗಿತ್ತು.

publive-image

ಅಂದಿನ ಕಾಲದ ಖ್ಯಾತ ನಟ ಮಾಧುರಿ ಸೌಂದರ್ಯಕ್ಕೆ ಮರುಳಾಗಿ ಸಿನಿಮಾದ ಸೀನ್ ಒಂದರಲ್ಲಿ ತನ್ನನ್ನೇ ತಾನು ಮರೆತು ಮಾಧುರಿಯೆಂಬ ಸೌಂದರ್ಯ ರಾಶಿಯೊಳಗೆ ಉನ್ಮತ್ತನಾಗಿ ಕಳೆದು ಹೋಗಿ ಯಡವಟ್ಟೊಂದನ್ನು ಮಾಡಿಕೊಂಡಿದ್ದರು ಆ ನಟನ ಹೆಸರು ವಿನೋದ್​ ಖನ್ನಾ.

publive-image

1988ರಲ್ಲಿ ನಿರ್ಮಾಣವಾದ ದಯಾವಾನ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಹಾಗೂ ವಿನೋದ ಖನ್ನಾ ನಟಿಸಿದ್ದರು. ಈ ವೇಳೆ ಸಿನಿಮಾದ ಒಂದು ಸೀನ್​ನಲ್ಲಿ ನಾಯಕ ಹಾಗೂ ನಾಯಕಿ ಆತ್ಮೀಯವಾಗಿ ಪ್ರಣಯದಲ್ಲಿ ತೊಡಗಬೇಕಿತ್ತು. ವಿನೋದ್ ಖನ್ನಾ ಮಾಧುರಿ ದೀಕ್ಷಿತ್ ಅವರ ತುಟಿಗಳಿಗೆ ದೀರ್ಘವಾಗಿ ಚುಂಬಿಸಬೇಕಿತ್ತು. ಮೊದಲೇ ಸೌಂದರ್ಯದ ರಾಶಿ, ಮೋಹಕ ಮೈಮಾಟ. ಹರೆಯಕ್ಕೆ ಕಳೆದು ಹೋಗಲು ಇನ್ನೇನು ಬೇಕು? ವಿನೋದ ಖನ್ನಾ ಅಕ್ಷರಶಃ ಮಾಧುರಿಯೆಂಬ ಮೋಹಕ ಅಮಲಿನ ಬಾಹುವಿನಲ್ಲಿ ಕರಗಿ ಹೋಗಿದ್ದರು. ತುಟಿಗೆ ತುಟಿ ಬೆರೆಸಿ ನಟಿಸಿದ ಸೀನ್​ನಲ್ಲಿ ಅದ್ಯಾವ ಉನ್ಮತ್ತಕ್ಕೆ ಹೋಗಿದ್ದರು ಅಂದ್ರೆ ಡೈರೆಕ್ಟರ್ ಕಟ್ ಎಂದು ಹೇಳಿದ್ದು ಕೂಡ ಅವರಿಗೆ ಕೇಳಿಸಿರಲಿಲ್ಲ. ಮಾಧುರಿ ಕೊಸರಿಕೊಳ್ಳಲು ಸಹ ಅವಕಾಶ ನೀಡದಂತೆ ಅಮಲೊಂದರಲ್ಲಿ ಮುಳುಗಿದ್ದ ವಿನೋದ್ ಖನ್ನಾ ಮಾಧುರಿ ತುಟಿಯಲ್ಲಿ ರಕ್ತ ಸುರಿಯುವ ಹಾಗೆ ಚುಂಬಿಸಿ ಬಿಟ್ಟಿದ್ದರು.

publive-image

ದಯಾವಾನ್ ಸಿನಿಮಾದ ಈ ಒಂದು ಘಟನೆ ಜಾಗತಿಕವಾಗಿ ಸುದ್ದಿಯಾಗಿತ್ತು. ಮಾಧುರಿ ದೀಕ್ಷಿತ್ ಸಿನಿಮಾ ಕರಿಯರ್​​ನಲ್ಲಿ ಇದೊಂದು ಕಹಿ ಘಟನೆಯಾಗಿ ಉಳಿದು ಹೋಯಿತು.ಮಾಧುರಿ ಚೆಲುವಿನ ಬಾಹುಬಂಧನದಲ್ಲಿ ಮೈಮರೆತು ಹೋಗಿದ್ದ ವಿನೋದ ಖನ್ನಾಗೆ ನಂತರ ತಮ್ಮ ತಪ್ಪಿನ ಅರಿವಾಗಿದೆ. ಕೊನೆಗೆ ಮಾಧುರಿ ಅವರ ಬಳಿ ಬಂದು ಕ್ಷಮೆಯನ್ನೂ ಕೂಡ ಕೇಳಿದರಂತೆ. ಆದರೆ ಮೋಹಕ ನಟಿ ನೀವು ಮಾಡಿದ್ದು ಕ್ಷಮೆಗೆ ಅರ್ಹವಲ್ಲದಂತದ್ದೂ ಎಂದು ಅಲ್ಲಿಂದ ಎದ್ದು ಹೋದರಂತೆ. ಮಾಧುರಿ ದೀಕ್ಷಿತ್​​ ಅವರ ಸಿನಿಮಾ ಕರಿಯರ್​ನಲ್ಲಿಯೇ ಇದೊಂದು ಎಂದಿಗೂ ಆರದ ಗಾಯವಾಗಿ ಉಳಿದುಕೊಂಡು ಹೋಯಿತು. ಈ ಸಿನಿಮಾದ ಬಗ್ಗೆ ವಿನೋದ್ ಖನ್ನಾ ಅಂದು ನಡೆದುಕೊಂಡ ರೀತಿಯ ಬಗ್ಗೆ ಇಂದಿಗೂ ಕೂಡ ಚರ್ಚೆಯಾಗುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment