/newsfirstlive-kannada/media/post_attachments/wp-content/uploads/2025/04/kannada-rajyotsava1.jpg)
ಕಳೆದ ಏಪ್ರಿಲ್ 22ರಂದು ಮಿನಿ ಸ್ವಿಜರ್ಲೆಂಡ್ ಎಂದೇ ಖ್ಯಾತವಾಗಿದ್ದ ಪಹಲ್ಗಾಮ್ನ ಸುಂದರವಾದ ಕಣಿವೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗಳು ಬಂದಿದ್ದರು. ಅದೇ ಸಮಯ ನೋಡಿಕೊಂಡು ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು.
ಇದನ್ನೂ ಓದಿ:ಕೋಲ್ಕತ್ತ ಹೋಟೆಲ್ನಲ್ಲಿ ಭೀಕರ ಬೆಂಕಿ ಅವಘಡ.. 14 ಮಂದಿ ಸಜೀವ ದಹನ
ಈ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರು ಬಲಿಯಾಗಿದ್ದರು. ಅದರಲ್ಲೂ ಹೆಂಡತಿ, ಮಕ್ಕಳ ಮುಂದೆಯೇ ಪತಿಯನ್ನು ಹತ್ಯೆ ಮಾಡಿದ್ದು, ಇಡೀ ದೇಶವೇ ಉಗ್ರರ ವಿರುದ್ಧ ಕೆಂಡ ಕಾರುತ್ತಿದೆ. ಮತ್ತೊಂದು ಕಡೆ ಉಗ್ರರನ್ನು ಸದೆಬಡಿಯಲು ಹಾಗೂ ಪಾಕ್ ಮೇಲೆ ಹಗೆ ತೀರಿಸಿಕೊಳ್ಳಲು ಮುಂದಾಗಿದೆ. ಯಾವ ಸಮಯದಲ್ಲಾದರೂ ಪಾಕ್ ಮೇಲೆ ಭಾರತೀಯ ಸೇನೆ ಯುದ್ಧ ಮಾಡಬಹುದಾಗಿದೆ.
ಇದರ ಮಧ್ಯೆ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ಕನ್ನಡಿಗರು ನೆತ್ತರು ಚೆಲ್ಲಿದ ನೆಲದಲ್ಲಿಯೇ ಆಚರಿಸಬೇಕು ಅಂತ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭೀವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಹೇಳಿದ್ದಾರೆ. ಉಗ್ರ ಕೃತ್ಯ ನಡೆದ ಪಹಲ್ಗಾಮ್ನಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 22ರಂದು ಆಚರಣೆ ಮಾಡಬೇಕು ಅಂತ ಈಗಾಗಲೇ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ 700 ಜನರು ಭಾಗಿ ಸಾಧ್ಯತೆ ಇದೆ.
ಈ ಹಿಂದೆ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವವನ್ನ ನೇಪಾಳ, ಕಾಶಿಯಲ್ಲಿ ಆಚರಣೆ ಮಾಡಲಾಗಿತ್ತು. ಹೀಗಾಗಿ ಈ ವರ್ಷ ಪಹಲ್ಗಾಮ್ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಮಾಡೋದಕ್ಕೆ ತಯಾರಿ ನಡೆಸಲಾಗುತ್ತಿದೆ. ಈ ವೇಳೆ ನಿವೃತಿ ಹೊಂದಿರುವ ಕಾಶ್ಮೀರದ ಯೋಧರಿಗೆ ಸನ್ಮಾನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಇಷ್ಟೇ ಅಲ್ಲದೇ ಮೃತರ ಕುಟುಂಬಸ್ಥರಿಗೆ ಹಣಕಾಸಿನ ನೆರವು ನೀಡಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ