ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ಮೆರೆದಿದ್ದ ಕೇಸ್
ನಾಡದ್ರೋಹಿಗಳನ್ನು ಅರೆಸ್ಟ್ ಮಾಡಿದ ಕರ್ನಾಟಕ ಪೊಲೀಸ್ರು!
ಕೇಸ್ನಲ್ಲಿ MES ಪುಂಡ ಶುಭಂ ಶಳಕೆ ಸೇರಿ ಮೂವರು ಜೈಲಿಗೆ
ಬೆಳಗಾವಿ: ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ಮೆರೆದಿದ್ದ ಮೂವರು ನಾಡದ್ರೋಹಿಗಳನ್ನು ಕರ್ನಾಟಕ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ. ಬೆಳಗಾವಿ ಪೊಲೀಸರು MES ಪುಂಡ ಶುಭಂ ಶಳಕೆ ಸೇರಿ ಮೂವರನ್ನು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಉದ್ಯಮಿ ಶ್ರೀಕಾಂತ್ ದೇಸಾಯಿ ಅವರ ಕಾರ್ಖಾನೆ ಮೇಲೆ ಈ ಪುಂಡರು ಜೈ ಮಹಾರಾಷ್ಟ್ರ ಎಂದು ಬರೆದಿದ್ದರು. ಈ ಮೂಲಕ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದರು. ಈ ಕೇಸ್ನಲ್ಲಿ ಕೊನೆಗೂ ಜೈಲು ಸೇರಿದ್ದಾರೆ.
ಇತ್ತೀಚೆಗೆ ಕುಸ್ತಿ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು. ಆ ಟೂರ್ನಮೆಂಟ್ನಲ್ಲಿ ಕುಸ್ತಿಪಟು ಓರ್ವ ಜೈ ಮಹಾರಾಷ್ಟ್ರ ಎಂದು ಬರೆದಿದ್ದ. ಇದಕ್ಕೆ ಬುದ್ಧಿವಾದ ಹೇಳಿದ ಶ್ರೀಕಾಂತ್ ಜೈ ಕರ್ನಾಟಕ ಎಂದು ಹೇಳಿಸಿದ್ರು.
ಇನ್ನು, ಈ ಘಟನೆಯನ್ನು ವಿರೋಧಿಸಿದ್ದ ಪುಂಡರು ಶ್ರೀಕಾಂತ್ ಅವರ ಕಾರ್ಖಾನೆ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದರು. ಈ ಕೇಸ್ನಲ್ಲಿ ಮೂವರು ಪುಂಡರನ್ನು ಡಿಸಿಪಿ ರೋಹನ್ ಜಗದೀಶ್ ಸೂಚನೆ ಮೇರೆಗೆ ಬಂಧನ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ಮೆರೆದಿದ್ದ ಕೇಸ್
ನಾಡದ್ರೋಹಿಗಳನ್ನು ಅರೆಸ್ಟ್ ಮಾಡಿದ ಕರ್ನಾಟಕ ಪೊಲೀಸ್ರು!
ಕೇಸ್ನಲ್ಲಿ MES ಪುಂಡ ಶುಭಂ ಶಳಕೆ ಸೇರಿ ಮೂವರು ಜೈಲಿಗೆ
ಬೆಳಗಾವಿ: ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ಮೆರೆದಿದ್ದ ಮೂವರು ನಾಡದ್ರೋಹಿಗಳನ್ನು ಕರ್ನಾಟಕ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ. ಬೆಳಗಾವಿ ಪೊಲೀಸರು MES ಪುಂಡ ಶುಭಂ ಶಳಕೆ ಸೇರಿ ಮೂವರನ್ನು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಉದ್ಯಮಿ ಶ್ರೀಕಾಂತ್ ದೇಸಾಯಿ ಅವರ ಕಾರ್ಖಾನೆ ಮೇಲೆ ಈ ಪುಂಡರು ಜೈ ಮಹಾರಾಷ್ಟ್ರ ಎಂದು ಬರೆದಿದ್ದರು. ಈ ಮೂಲಕ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದರು. ಈ ಕೇಸ್ನಲ್ಲಿ ಕೊನೆಗೂ ಜೈಲು ಸೇರಿದ್ದಾರೆ.
ಇತ್ತೀಚೆಗೆ ಕುಸ್ತಿ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು. ಆ ಟೂರ್ನಮೆಂಟ್ನಲ್ಲಿ ಕುಸ್ತಿಪಟು ಓರ್ವ ಜೈ ಮಹಾರಾಷ್ಟ್ರ ಎಂದು ಬರೆದಿದ್ದ. ಇದಕ್ಕೆ ಬುದ್ಧಿವಾದ ಹೇಳಿದ ಶ್ರೀಕಾಂತ್ ಜೈ ಕರ್ನಾಟಕ ಎಂದು ಹೇಳಿಸಿದ್ರು.
ಇನ್ನು, ಈ ಘಟನೆಯನ್ನು ವಿರೋಧಿಸಿದ್ದ ಪುಂಡರು ಶ್ರೀಕಾಂತ್ ಅವರ ಕಾರ್ಖಾನೆ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದರು. ಈ ಕೇಸ್ನಲ್ಲಿ ಮೂವರು ಪುಂಡರನ್ನು ಡಿಸಿಪಿ ರೋಹನ್ ಜಗದೀಶ್ ಸೂಚನೆ ಮೇರೆಗೆ ಬಂಧನ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ