ಈ ವಿಡಿಯೋ ನೋಡಿದ್ರೆ ಎದೆ ದಸಕ್ ಎನ್ನುತ್ತೆ
ಕೊನೆಗೂ ಬದುಕಿತು ಬಡಪಾಯಿ ಜೀವ
ಹೈದ್ರಾಬಾದ್ನ ಅಟ್ಟಾಪುರದಲ್ಲಿ ಸಿನಿಮೀಯ ಘಟನೆ
ಮುಂಗಾರು ಮಳೆಯ ಆರ್ಭಟ ಮತ್ತು ಅದರಿಂದ ಆಗುತ್ತಿರುವ ಅನಾಹುತಗಳ ಕುರಿತ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿವೆ. ಪ್ರಾಣ ಕಳೆದುಕೊಳ್ತಿರುವ, ಸಂಕಷ್ಟಕ್ಕೆ ಸಿಲುಕುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಅದೇ ರೀತಿ ಯುವಕನೊಬ್ಬ ಸಿಡಿಲಿನ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಹೈದರಾಬಾದ್ನ ಅಟ್ಟಾಪುರದಲ್ಲಿ ನಡೆದಿದೆ. ವೈರಲ್ ಆಗಿರುವ 40 ಸೆಕೆಂಡ್ನ ವಿಡಿಯೋದಲ್ಲಿ, ರಸ್ತೆಯೊಂದು ಖಾಲಿ ಇತ್ತು. ಮಳೆ ಜಿನುಗುತ್ತಿತ್ತು.
ಅದೇ ಸಮಯದಲ್ಲಿ ಇಬ್ಬರು ಬೈಕ್ನಲ್ಲಿ ಹೋಗಿದ್ದಾರೆ. ಅದಾದ ಮೂರ್ನಾಲ್ಕು ಸೆಕೆಂಡ್ಸ್ನಲ್ಲಿ ಬಾಲಕನೊಬ್ಬ ಓಡಿ ಬರುತ್ತಾನೆ. ಓಡಿ ಬಂದ ಬಾಲಕ ಕೆಲವು ಸೆಕೆಂಡ್ಗಳಲ್ಲಿ ಮತ್ತೆ ವಾಪಸ್ ಆಗಿದ್ದಾರೆ. ವಾಪಸ್ ಮನೆಯೊಳಗೆ ಸೇರ್ತಿದ್ದಂತೆಯೇ ಬರಸಿಡಿಲೊಂದು ರಸ್ತೆ ಮೇಲೆ ಬಂದು ಅಪ್ಪಳಿಸಿದೆ. ಬಾಲಕ ಎಸ್ಕೇಪ್ ಆಗಿ ಒಂದು ಸೆಕೆಂಡ್ ಕೂಡ ಆಗಿರಲಿಲ್ಲ. ವಿಡಿಯೋ ನೋಡಲು ಭಯಾನಕವಾಗಿದೆ.
ಸಿಡಿಲಿನಿಂದ ಜಸ್ಟ್ ಮಿಸ್ ಆದ ಬಾಲಕ. ಇದು ನಡೆದಿರುವುದು ಹೈದರಾಬಾದ್ನ ಅಟ್ಟಾಪುರ ಎಂಬ ಪ್ರದೇಶದಲ್ಲಿ. #hyderabad #attapur #lightning #Boy pic.twitter.com/dHGZVhUyix
— Bhima (@Bhima895143) July 27, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಈ ವಿಡಿಯೋ ನೋಡಿದ್ರೆ ಎದೆ ದಸಕ್ ಎನ್ನುತ್ತೆ
ಕೊನೆಗೂ ಬದುಕಿತು ಬಡಪಾಯಿ ಜೀವ
ಹೈದ್ರಾಬಾದ್ನ ಅಟ್ಟಾಪುರದಲ್ಲಿ ಸಿನಿಮೀಯ ಘಟನೆ
ಮುಂಗಾರು ಮಳೆಯ ಆರ್ಭಟ ಮತ್ತು ಅದರಿಂದ ಆಗುತ್ತಿರುವ ಅನಾಹುತಗಳ ಕುರಿತ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿವೆ. ಪ್ರಾಣ ಕಳೆದುಕೊಳ್ತಿರುವ, ಸಂಕಷ್ಟಕ್ಕೆ ಸಿಲುಕುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಅದೇ ರೀತಿ ಯುವಕನೊಬ್ಬ ಸಿಡಿಲಿನ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಹೈದರಾಬಾದ್ನ ಅಟ್ಟಾಪುರದಲ್ಲಿ ನಡೆದಿದೆ. ವೈರಲ್ ಆಗಿರುವ 40 ಸೆಕೆಂಡ್ನ ವಿಡಿಯೋದಲ್ಲಿ, ರಸ್ತೆಯೊಂದು ಖಾಲಿ ಇತ್ತು. ಮಳೆ ಜಿನುಗುತ್ತಿತ್ತು.
ಅದೇ ಸಮಯದಲ್ಲಿ ಇಬ್ಬರು ಬೈಕ್ನಲ್ಲಿ ಹೋಗಿದ್ದಾರೆ. ಅದಾದ ಮೂರ್ನಾಲ್ಕು ಸೆಕೆಂಡ್ಸ್ನಲ್ಲಿ ಬಾಲಕನೊಬ್ಬ ಓಡಿ ಬರುತ್ತಾನೆ. ಓಡಿ ಬಂದ ಬಾಲಕ ಕೆಲವು ಸೆಕೆಂಡ್ಗಳಲ್ಲಿ ಮತ್ತೆ ವಾಪಸ್ ಆಗಿದ್ದಾರೆ. ವಾಪಸ್ ಮನೆಯೊಳಗೆ ಸೇರ್ತಿದ್ದಂತೆಯೇ ಬರಸಿಡಿಲೊಂದು ರಸ್ತೆ ಮೇಲೆ ಬಂದು ಅಪ್ಪಳಿಸಿದೆ. ಬಾಲಕ ಎಸ್ಕೇಪ್ ಆಗಿ ಒಂದು ಸೆಕೆಂಡ್ ಕೂಡ ಆಗಿರಲಿಲ್ಲ. ವಿಡಿಯೋ ನೋಡಲು ಭಯಾನಕವಾಗಿದೆ.
ಸಿಡಿಲಿನಿಂದ ಜಸ್ಟ್ ಮಿಸ್ ಆದ ಬಾಲಕ. ಇದು ನಡೆದಿರುವುದು ಹೈದರಾಬಾದ್ನ ಅಟ್ಟಾಪುರ ಎಂಬ ಪ್ರದೇಶದಲ್ಲಿ. #hyderabad #attapur #lightning #Boy pic.twitter.com/dHGZVhUyix
— Bhima (@Bhima895143) July 27, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ