/newsfirstlive-kannada/media/post_attachments/wp-content/uploads/2025/04/Tilak-verma-1.jpg)
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲ್ಲಲು ಮುಂಬೈ ಇಂಡಿಯನ್ಸ್ಗೆ 7 ಬಾಲ್ಗೆ 24 ರನ್ಗಳ ಅಗತ್ಯವಿದ್ದಾಗ ತಿಲಕ್ ವರ್ಮಾ ರಿಟೈರಿಂಗ್ ಔಟ್ ಆದರು. ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಅವರನ್ನು ವಾಪಸ್ ಪೆವಿಲಿಯನ್ಗೆ ಕರೆಸಿಕೊಂಡಿತು. ಬೆನ್ನಲ್ಲೇ, ಮುಂಬೈ 12 ರನ್ಗಳ ಅಂತರದಿಂದ ಸೋಲನ್ನು ಕಂಡಿತು. ಇದೀಗ ತಿಲಕ್ ವರ್ಮಾರನ್ನು ಮಧ್ಯದಲ್ಲೇ ಕರೆಸಿಕೊಂಡಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Retired out! ತಿಲಕ್ ವರ್ಮಾಗೆ ದೊಡ್ಡ ಅವಮಾನ.. ಕ್ರೀಸ್ನಿಂದ ವಾಪಸ್ ಕರೆಸಿದ ಮುಂಬೈ ಇಂಡಿಯನ್ಸ್..!
ಪಾಂಡ್ಯ ವಿರುದ್ಧ ಆಕ್ರೋಶ..
ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಹಾರ್ದಿಕ್ ಪಾಂಡ್ಯರತ್ತ ಬೊಟ್ಟು ಮಾಡಿದರು. ಕ್ಯಾಪ್ಟನ್ ಪಾಂಡ್ಯ ಸೂಚನೆ ಮೇರಿಗೆ ತಿಲಕ್ ವರ್ಮಾ ಮೈದಾನದಿಂದ ನಿವೃತ್ತಿಯಾದರು ಎಂದು ಟೀಕಿಸಿದರು. ಆದರೆ ನಿಜವಾಗಿಯೂ ಪಾಂಡ್ಯ, ತಿಲಕ್ ವರ್ಮಾಗೆ ರಿಟೈರ್ಡ್ ಔಟ್ ಆಗುವಂತೆ ಸೂಚನೆ ನೀಡಲಿಲ್ಲ. ಅದು ತಂಡದ ಮ್ಯಾನೇಜ್ಮೆಂಟ್ ನಿರ್ಧಾರವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೋಚ್ ಜಯವರ್ಧನೆ, ‘ತಿಲಕ್ ರನ್ ಗಳಿಸಲು ಬಯಸಿದ್ದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ. ಕ್ರೀಸ್ನಲ್ಲಿ ಸ್ವಲ್ಪ ಸಮಯ ಸ್ಟ್ಯಾಂಗ್ ಆಗಿದ್ದರಿಂದ ಅವರ ಬ್ಯಾಟ್ನಿಂದ ದೊಡ್ಡ ದೊಡ್ಡ ಹೊಡೆತಗಳನ್ನು ನಿರೀಕ್ಷೆ ಮಾಡಿದ್ದೇವು. ಆದರೆ ಅದು ಅವರಿಗೆ ಸಾಧ್ಯವಾಗಲಿಲ್ಲ. ಕೇವಲ 7 ಬಾಲ್ ಇರುವಾಗ ನಾನೇ ನಿರ್ಧರಿಸಿದೆ. ಹೊಸ ಬ್ಯಾಟ್ಸ್ಮನ್ಗಳು ಕೊನೆಯಲ್ಲಿ ಆಡಲು ಬರಬೇಕು ಅಂತಾ. ಯಾಕೆಂದರೆ ತಿಲಕ್ ವರ್ಮಾ ತುಂಬಾ ಕಷ್ಟಪಡುತ್ತಿದ್ದರು ಎಂದು ಜಯವರ್ಧನೆ ಹೇಳಿದ್ದಾರೆ.
ಇದನ್ನೂ ಓದಿ: CSK ತಂಡದಲ್ಲಿ ಬಿಗ್ ಚೆಂಜ್; ಇಂದು ಚೆನ್ನೈ ಸೂಪರ್ ಕಿಂಗ್ಸ್ಗೆ ಧೋನಿ ಕ್ಯಾಪ್ಟನ್..!
ಪಂದ್ಯ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ ಕೂಡ ಉತ್ತರ ನೀಡಿದ್ದಾರೆ. ಅದು ಸ್ಪಷ್ಟವಾಗಿದೆ. ನಮಗೆ ಕೆಲವು ಹಿಟ್ಗಳ ಅಗತ್ಯ ಇತ್ತು. ಕ್ರಿಕೆಟ್ನಲ್ಲಿ ಕೆಲವು ದಿನಗಳು ಬರುತ್ತೆ. ನೀವು ಪ್ರಯತ್ನಿಸಿದಾಗ ಅದು ಬರುವುದಿಲ್ಲ. ನೀವು ಒಳ್ಳೆಯ ಕ್ರಿಕೆಟ್ ಆಡಿ. ನಾನು ಅದನ್ನು ಸರಳವಾಗಿಡಲು ಇಷ್ಟಪಡುತ್ತೇನೆ. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಿ. ಸ್ಮಾರ್ಟ್ ಆಗಿ ಬೌಲಿಂಗ್ ಮಾಡಿ. ಬ್ಯಾಟಿಂಗ್ನಲ್ಲಿ ಅವಕಾಶಗಳನ್ನು ಪಡೆದುಕೊಳ್ಳಿ. ಕೆಲವು ಅಗ್ರೆಸನ್ ಜೊತೆ ಸಿಂಪಲ್ಲಾಗಿ ಕ್ರಿಕೆಟ್ ಆಡಿ. ದೀರ್ಘ ಪಂದ್ಯಾವಳಿಗಳ ಮೂಲಕ ಕೆಲವು ಗೆಲುವುಗಳನ್ನು ಪಡೆಯುತ್ತೀರಿ. ನೀವೂ ಲಯಕ್ಕೆ ಬರುತ್ತೀರಿ ಎಂದಿದ್ದಾರೆ.
ನಿನ್ನೆಯ ಆಟ ಹೇಗಿತ್ತು..?
ಸ್ಫೋಟಕ ಬ್ಯಾಟಿಂಗ್ಗೆ ಹೆಸರು ಆಗಿರುವ ತಿಲಕ್ ವರ್ಮಾ, ನಿನ್ನೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರು. ಆದರೆ ಕ್ರೀಸ್ನಲ್ಲಿ ರನ್ ಗಳಿಸಲು ಅವರು ಪರದಾಡಿದರು. 23 ಎಸೆತದಲ್ಲಿ ಕೇವಲ 2 ಬೌಂಡರಿ ಬಾರಿಸಿ 25 ರನ್ಗಳಿಸಿ ಅಚ್ಚರಿ ಮೂಡಿಸಿದರು. ಕೊನೆ ಕ್ಷಣದಲ್ಲಿ ಅಂದರೆ ಮುಂಬೈ ಇಂಡಿಯನ್ಸ್ಗೆ ಗೆಲ್ಲಲು 7 ಬಾಲ್ನಲ್ಲಿ 24 ರನ್ಗಳ ಅಗತ್ಯ ಇತ್ತು. ಆಗ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್, ತಿಲಕ್ ವರ್ಮಾ ರಿಟೈರ್ಡ್ ಔಟ್ ಎಂದು ಘೋಷಣೆ ಮಾಡಿತು. ಈ ವಿಚಾರ ದೊಡ್ಡ ಚರ್ಚೆ ಆಗ್ತಿದೆ.
ಇದನ್ನೂ ಓದಿ: ರಿಟೈರ್ಡ್ ಔಟ್ ಗಲಾಟೆ ಮಧ್ಯೆ ರೋಹಿತ್ರನ್ನ ಹೊರಗಿಟ್ಟಿದ್ದ ಅಸಲಿ ಕಾರಣವೂ ರಿವೀಲ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್