ನಟ ದರ್ಶನ್ ಪಾಲಿಗೆ ಇವತ್ತು ಬಿಗ್​ ಡೇ.. ಮೊನ್ನೆ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್​ ಹೇಳಿದ್ದೇನು?

author-image
Ganesh
Updated On
ನಟ ದರ್ಶನ್ ಪಾಲಿಗೆ ಇವತ್ತು ಬಿಗ್​ ಡೇ.. ಮೊನ್ನೆ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್​ ಹೇಳಿದ್ದೇನು?
Advertisment
  • ಇವತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪಾಲಿಗೆ ಬಿಗ್​ ಡೇ
  • ಬೇಲ್​ ರದ್ದಾಗುತ್ತಾ? ಮುಂದುವರಿಯುತ್ತಾ ಸುಪ್ರೀಂನತ್ತ ಎಲ್ಲರ ಚಿತ್ತ
  • ದಿ ಡೆವಿಲ್​ ಶೂಟಿಂಗ್​ನಲ್ಲಿರುವ ನಟ ದರ್ಶನ್​ಗೆ ಢವಢವ

ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪಾಲಿಗೆ ಇವತ್ತು ಬಿಗ್​ಡೇ. ಬರೀ ದರ್ಶನ್ ಮಾತ್ರವಲ್ಲ, ದರ್ಶನ್ ಗೆಳತಿ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೂ ಮಹತ್ವದ ದಿನ.

ದರ್ಶನ್​ ಪಾಲಿಗೆ ಬಿಗ್​ ಡೇ

ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಇತರೆ ಆರೋಪಿಗಳ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಈಗಾಗಲೇ ರಾಜ್ಯ ಸರ್ಕಾರ ಪರ ವಕೀಲರ ವಾದ ಆಲಿಸಿ, ದಾಖಲೆಗಳನ್ನು ಸ್ವೀಕರಿಸಿರುವ ಪೀಠ, ಇವತ್ತು ಆರೋಪಿಗಳ ಪರ ವಕೀಲರ ವಾದ ಮಂಡನೆಯನ್ನು ಕೇಳಲಿದ್ದು, ಬಳಿಕ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಸುಪ್ರೀಂ ಕೋರ್ಟ್​ನಲ್ಲಿ ಕಳೆದ ವಾರ ನಡೆದ ವಿಚಾರಣೆ ವೇಳೆ ಹೈಕೋರ್ಟ್​ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು.

ದರ್ಶನ್​ ಬೇಲ್​ ಬಗ್ಗೆ ಸುಪ್ರೀಂ ಅತೃಪ್ತಿ

  • ನಮಗೆ ಪೊಲೀಸರು ನೀಡಿರುವ ಸಾಕ್ಷ್ಯಗಳು ತೃಪ್ತಿ ತಂದಿವೆ
  • ಬೇಲ್​ ನೀಡಲು ಹೈಕೋರ್ಟ್ ಕಾರಣಗಳು ಸಮಂಜಸವಾಗಿಲ್ಲ
  • ಹೈಕೋರ್ಟ್ ಆದೇಶದಲ್ಲಿ ಚಡಪಡಿಕೆ ಎದ್ದು ಕಾಣುತ್ತಿದೆ
  • ಬೇಲ್​ ನೀಡಲು ಅಂಶ ಸಿಗಲಿ ಎನ್ನುವ ಚಡಪಡಿಕೆ ಕಾಣುತ್ತಿದೆ
  • ಈ ವಿಷ್ಯದಲ್ಲಿ ಹೈಕೋರ್ಟ್ ತನ್ನ ವಿವೇಚನೆ ಸೂಕ್ತವಾಗಿ ಬಳಸಿಲ್ಲ
  • ಜಾಮೀನಿನ ವಿಷ್ಯದಲ್ಲಿ ನಾವೇಕೆ ಮಧ್ಯಪ್ರವೇಶ ಮಾಡಬಾರದೆಂದು
  • ನಟ ದರ್ಶನ್​ ಪರ ವಕೀಲ ಕಪಿಲ್​ ಸಿಬಲ್​ಗೆ ಸುಪ್ರೀಂ ಪ್ರಶ್ನೆ

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಮಹದೇವನ್ ನೇತೃತ್ವದ ದ್ವಿಸದಸ್ಯ ಪೀಠವು ಇವತ್ತು ವಿಚಾರಣೆ ಮುಂದುವರಿಸಲಿದೆ. ಈಗಾಗಲೇ ಸರ್ಕಾರಿ ಪರ ವಕೀಲರ ವಾದ ಮುಗಿದಿದ್ದು, ದರ್ಶನ್ ಪರ ಖ್ಯಾತ ವಕೀಲ ಕಪಿಲ್ ಸಿಬಲ್ ಇವತ್ತು ವಾದ ಮಂಡಿಸಲಿದ್ದಾರೆ. ಕಪಿಲ್​ ಸಿಬಲ್​ ಅವರ ವಾದವನ್ನು ಆಲಿಸಿ ಸುಪ್ರೀಂಕೋರ್ಟ್​ ಬಹುತೇಕ ಇವತ್ತೇ ತನ್ನ ತೀರ್ಪು ಪ್ರಕಟಿಸುವ ಸಾಧ್ಯತೆ ಇದ್ದು ದರ್ಶನ್​ಗೆ ಟೆನ್ಷನ್​ ಹೆಚ್ಚಿಸಿದೆ. ಜೊತೆಗೆ ಸಾಕ್ಷಿ ಜೊತೆ ಕಾಣಿಸಿ ಕೊಳ್ಳುವ ಮೂಲಕ ಜಾಮೀನು ನಿಯಮವನ್ನು ಉಲ್ಲಂಘಿಸಿದ್ದಾರೆ. ರೆಗ್ಯುಲರ್​ ಬೇಲ್​ಗೂ ಮೊದ್ಲು.. ಬೆನ್ನು ನೋವಿಗೆ ಸರ್ಜರಿ ಕಾರಣ ಕೊಟ್ಟು ಜಾಮೀನು ಪಡೆದಿದ್ರು. ಆದ್ರೆ, ದರ್ಶನ್‌ ಬೆನ್ನು ನೋವಿಗೆ ಸರ್ಜರಿ ಮಾಡಿಸಿಕೊಂಡಿಲ್ಲ. ಸದ್ಯ ಹೈಕೋರ್ಟ್‌ ಜಾಮೀನು ನೀಡಿರೋದರ ಬಗ್ಗೆಯೇ ಸುಪ್ರೀಂಕೋರ್ಟ್ ಅತೃಪ್ತಿಯೇ ವ್ಯಕ್ತಪಡಿಸಿರೋದು ಆರೋಪಿ ದರ್ಶನ್‌ಗೆ ಟೆನ್ಶನ್‌ ಹೆಚ್ಚಿಸಿದೆ. ಒಂದ್ವೇಳೆ ಹೈಕೋರ್ಟ್​ ಆದೇಶಕ್ಕೆ ತಡೆ ನೀಡಿದ್ರೆ, ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಸೇರಿದಂತೆ ಏಳು ಆರೋಪಿಗಳೂ ಮತ್ತೆ ಜೈಲು ಪಾಲಾಗುವ ಸಾಧ್ಯತೆ ಇದೆ.

ದಿ ಡೆವಿಲ್​ ಶೂಟಿಂಗ್​ನಲ್ಲಿರುವ ನಟ ದರ್ಶನ್​ಗೆ ಢವಢವ

ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್​ ಸದ್ಯ ದಿ ಡೆವಿಲ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ 30ರವರೆಗೆ ವಿದೇಶದಲ್ಲಿ ಶೂಟಿಂಗ್​ ಅವಕಾಶ ಸಿಕ್ಕಿದ್ದು, ಥೈಲ್ಯಾಂಡ್​ನಲ್ಲಿ ದಿ ಡೆವಿಲ್​ ಶೂಟಿಂಗ್​ ಭರ್ಜರಿ ಆಗಿ ಸಾಗಿದೆ. ಶೂಟಿಂಗ್​ ಬಿಡುವಿನ ವೇಳೆ ದರ್ಶನ್​ ಥೈಲ್ಯಾಂಡ್​ನ ಬೀದಿಗಳಲ್ಲಿ ಸುತ್ತಾಡುತ್ತಾ, ಪಾರ್ಟಿ ಮಾಡುತ್ತಾ ಶೂಟಿಂಗ್​ ಎಂಜಾಯ್​ ಮಾಡ್ತಿದ್ದಾರೆ.

ಇದನ್ನೂ ಓದಿ: ಎಂಜಿನಿಯರ್ ಕನಸು ಕಾಣ್ತಿರೋರಿಗೆ ಬಿಗ್ ಶಾಕ್​.. ಶೇಕಡಾ 83ರಷ್ಟು ಅಭ್ಯರ್ಥಿಗಳಿಗೆ ಕೆಲಸ ಸಿಗ್ತಿಲ್ಲ!

ಒಟ್ಟಾರೆ.. ಇವತ್ತು ನಟ ದರ್ಶನ್​ ಪಾಲಿಗೆ ಮಹತ್ವದ ದಿನ ಅಂದ್ರೂ ತಪ್ಪಾಗೋದಿಲ್ಲ. ಒಂದ್ವೇಳೆ ಸುಪ್ರೀಂಕೋರ್ಟ್​ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಪರಿಗಣಿಸಿದ್ರೆ.. ಸ್ಯಾಂಡಲ್​ವುಡ್​ನ ಸಾರಥಿ ದರ್ಶನ್​ ಮತ್ತೆ ಜೈಲಿಗೆ ಹೋಗುವ ಸಂಭವ ಎದುರಾಗಬಹುದು. ಜೊತೆಗೆ ಮುಂಬರುವ ಡೆವಿಲ್ ಸಿನಿಮಾಕ್ಕೂ ವಿಘ್ನ ಎದುರಾಗಬಹುದು. ಹೀಗಾಗಿ ಇವತ್ತು ಎಲ್ಲರ ಚಿತ್ತ ಸುಪ್ರೀಂಕೋರ್ಟ್​ನತ್ತ ಹರಿದೆ.

ಇದನ್ನೂ ಓದಿ: ಅಚ್ಚರಿ ಮೂಡಿಸಿದ ಧನಕರ್ ದಿಢೀರ್​ ರಾಜೀನಾಮೆ.. ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಏನಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment