/newsfirstlive-kannada/media/post_attachments/wp-content/uploads/2025/07/BHARAT-BANDH-1.jpg)
ಸಾರ್ವಜನಿಕರೇ ದಯವಿಟ್ಟು ಗಮನಿಸಿ.. ಇಂದು ಭಾರತ್ ಬಂದ್.. ಕೇಂದ್ರದ ಕಾರ್ಮಿಕ ಹಾಗೂ ರೈತ ನೀತಿ ವಿರೋಧಿಸಿ ಟ್ರೇಡ್ ಯೂನಿಯನ್ಗಳು ಭಾರತ್ ಬಂದ್ಗೆ ಕರೆ ನೀಡಿವೆ. ಸುಮಾರು 25 ಕೋಟಿ ಕಾರ್ಮಿಕರು, ರೈತರು ಹಾಗೂ ಕೃಷಿ ಕಾರ್ಮಿಕರು ಬಂದ್ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಭಾರತ್ ಬಂದ್.. ದೇಶಕ್ಕೆ ಮತ್ತೊಮ್ಮೆ ಬೀಗ ಹಾಕಲಾಗಿದೆ. ಕೇಂದ್ರ ಸರ್ಕಾರದ ರೈತ, ಕಾರ್ಮಿಕ ನೀತಿಗಳ ವಿರುದ್ಧ AITUC ಸೇರಿ 10ಕ್ಕೂ ಹೆಚ್ಚು ಟ್ರೇಡ್ ಯೂನಿಯನ್ಗಳು ಭಾರತ್ ಬಂದ್ಗೆ ಕರೆ ನೀಡಿವೆ. ಕೇಂದ್ರದ ಮೋದಿ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಪರವಾದ ನಿಲುವು ಹೊಂದಿದೆ ಅಂತ ಕಾರ್ಮಿಕ ಸಂಘಟನೆಗಳು ಆರೋಪಿಸಿ ಬೀದಿಗಿಳಿದಿವೆ.
ಇದನ್ನೂ ಓದಿ: ಇವತ್ತು ಭಾರತ್ ಬಂದ್.. ಕಾರ್ಮಿಕ ಸಂಘಟನೆಗಳ ಡಿಮ್ಯಾಂಡ್ ಏನೇನು..?
ಕೇಂದ್ರದ ರೈತ, ಕಾರ್ಮಿಕ ನೀತಿ ವಿರೋಧಿಸಿ ಭಾರತ್ ಬಂದ್
ಇಂದು ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಲಾಗಿದ್ದು ಬ್ಯಾಂಕಿಂಗ್, ಅಂಚೆ, ವಿಮೆ, ಕಲ್ಲಿದ್ದಲು ಗಣಿ ಕಾರ್ಮಿಕರು ಸೇರಿದಂತೆ 25 ಕೋಟಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ. ರೈತರು, ಗ್ರಾಮೀಣ ಭಾಗದ ಕಾರ್ಮಿಕರು ಕೂಡ ಮುಷ್ಕರದಲ್ಲಿ ಭಾಗಿಯಾಗ್ತಾರೆ ಅಂತ AITUC ಜನರಲ್ ಸೆಕ್ರೆಟರಿ ಅಮರ್ಜಿತ್ ಕೌರ್ ತಿಳಿಸಿದ್ದಾರೆ..
ಏನಿರುತ್ತೆ, ಏನಿರಲ್ಲ?
- ಬ್ಯಾಂಕಿಂಗ್, ಪೋಸ್ಟಲ್, ವಿಮಾ ಸೇವೆ, ಕಲ್ಲಿದ್ದಲು ಗಣಿ
- ಕಾರ್ಖಾನೆ, ಟ್ರಾನ್ಸ್ಪೋರ್ಟ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ
- ಸಾರ್ವಜನಿಕ ಸ್ವಾಮ್ಯ, ಸಹಕಾರಿ ಬ್ಯಾಂಕ್ ಸಿಬ್ಬಂದಿ ಭಾಗಿ
- ಶಾಲಾ-ಕಾಲೇಜು, ಯುನಿವರ್ಸಿಟಿಗಳು ಎಂದಿನಂತೆ ಓಪನ್
- ಶಾಲಾ ಬಸ್ ಚಾಲಕರು ಬಂದ್ನಲ್ಲಿ ಭಾಗಿಯಾಗುವ ಸಾಧ್ಯತೆ
- ಬಹುತೇಕ ಎಂದಿನಂತೆ ಸಾರ್ವಜನಿಕ ಸಾರಿಗೆ ಬಸ್ ಸೇವೆ
- ಸಾರಿಗೆ ಬಸ್ಗಳು, ಆಟೋಗಳ ಸೀಮಿತ ಸಂಚಾರ ಸಾಧ್ಯತೆ
- ಆ್ಯಪ್ ಆಧಾರಿತ ಟ್ಯಾಕ್ಸಿ, ಕ್ಯಾಬ್ಗಳ ಸೇವೆಯಲ್ಲೂ ವ್ಯತ್ಯಯ
- ರೈಲ್ವೇ ಯೂನಿಯನ್ಗಳು ಬಂದ್ನಲ್ಲಿ ಭಾಗಿಯಾಗುತ್ತಿಲ್ಲ
ಬಂದ್ ಯಾಕೆ? ಬೇಡಿಕೆಗಳೇನು?
- ಕಳೆದ ವರ್ಷವೇ ಕೇಂದ್ರ ಸರ್ಕಾರಕ್ಕೆ 17 ಅಂಶಗಳ ಬೇಡಿಕೆ ಸಲ್ಲಿಕೆ
- ಆದ್ರೆ ಈ ಅಂಶಗಳ ಬಗ್ಗೆ ಗಂಭೀರ ಪ್ರತಿಕ್ರಿಯೆ ನೀಡದ ಆರೋಪ
- 10 ವರ್ಷಗಳಿಂದ ಭಾರತೀಯ ಕಾರ್ಮಿಕರ ಸಮ್ಮೇಳನ ನಡೆಸಿಲ್ಲ
- ಲೇಬರ್ ಕೋಡ್ಗಳಿಂದ ಯೂನಿಯನ್ಗಳು ದುರ್ಬಲ ಆರೋಪ
- ಗುತ್ತಿಗೆ ನೌಕರಿಗೆ ಪ್ರೋತ್ಸಾಹ, ಖಾಸಗೀಕರಣ ಮಾಡ್ತಿರುವ ಆರೋಪ
- ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ನೇಮಕಾತಿ ಬೇಡಿಕೆ ನಿರ್ಲಕ್ಷ್ಯ
- ಕೂಲಿ ಹೆಚ್ಚಿಸಿಲ್ಲ.. ನಿರುದ್ಯೋಗ ಸಮಸ್ಯೆ ನಿವಾರಿಸದೇ ಇನ್ಸೆಂಟೀವ್
- ನಿರುದ್ಯೋಗ ಹೆಚ್ಚುತ್ತಿದ್ದು, ಅಗತ್ಯ ವಸ್ತುಗಳ ಬೆಲೆಗಳು ಏರಿಕೆ
- ಆರೋಗ್ಯ, ಶಿಕ್ಷಣ, ಕಲ್ಯಾಣ ಯೋಜನೆಗಳ ವೆಚ್ಚ ಕಡಿತಗೊಳಿಸಿದೆ
ಒಟ್ಟಾರೆ ಹತ್ತಾರು ಬೇಡಿಕೆಗಳನ್ನು ಇಟ್ಟುಕೊಂಡು ದೇಶವ್ಯಾಪಿ ಬಂದ್ಗೆ ಕರೆ ನೀಡಲಾಗಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಭಾರತ ಬಂದ್ ಪರಿಣಾಮ ಅಷ್ಟಾಗಿ ಆಗದಿದ್ದರೂ ಉತ್ತರ ಭಾರತದ ಹಲವೆಡೆ ಬಂದ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಇಂದು ಹೈಕಮಾಂಡ್ ಜೊತೆ CM ಸಿದ್ದು 4 ವಿಚಾರ ಚರ್ಚೆ -ರಾಯರೆಡ್ಡಿಗೆ ವಾರ್ನಿಂಗ್ ಕೊಟ್ಟ ಸುರ್ಜೇವಾಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ