ಜನರ ಕೆಟ್ಟ ದೃಷ್ಟಿಯಿಂದ ನಿಮಗೆ ಸಮಸ್ಯೆಯಾಗಬಹುದು
ಸರ್ಕಾರಿ ಉದ್ಯೋಗದಿಂದ ಲಾಭ, ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ;
ನಿಮ್ಮ ಸ್ತಿರಾಸ್ಥಿ ವಿಚಾರದಲ್ಲಿ ಸ್ವಲ್ಪ ತಕರಾರು ಉಂಟಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12:00 ರವರೆಗೆ ಇರಲಿದೆ.
ಮೇಷ ರಾಶಿ

- ಮನಸ್ಸು ಬಹಳ ತೃಪ್ತ ಭಾವನೆಯಲ್ಲಿ ಇರುತ್ತದೆ
- ಗೌರವಕ್ಕೆ ಧಕ್ಕೆ ಬರುವ ಯಾವುದೇ ಕೆಲಸ ಮಾಡಬೇಡಿ
- ಉನ್ನತ ಶಿಕ್ಷಣದ ಬಗ್ಗೆ ಉತ್ಸುಕರಾಗಿರುತ್ತೀರಿ
- ವ್ಯಾಪಾರದಲ್ಲಿ ನಿರೀಕ್ಷೆಗಿಂತ ಧನ ಲಾಭವಾಗಬಹುದು
- ಹೊಸ ಜವಾಬ್ದಾರಿಗಳು ಹೊರೆಯಾಗಬಹುದು
- ಹಣದ ಖರ್ಚಿನ ಬಗ್ಗೆ ಗಮನಿಸಿಕೊಳ್ಳಿ
- ಮನ್ಯುಸೂಕ್ತ ಮಂತ್ರವನ್ನ ಶ್ರವಣ ಮಾಡಿ
ವೃಷಭ

- ರಾಜಕೀಯ ವಿಚಾರಗಳು ಮುನ್ನೆಲೆಗೆ ಬರಬಹುದು
- ಕೆಲಸದ ಸ್ಥಳಗಳಲ್ಲಿ ತುಂಬಾ ಶ್ರಮ, ಒತ್ತಡ ಇರಬಹುದು
- ಸಾಕು ಪ್ರಾಣಿಗಳ ಬಗ್ಗೆ ಕಾಳಜಿವಹಿಸಬಹುದು
- ಸಹೋದ್ಯೋಗಿಗಳಿಗೆ ನಿಮ್ಮಿಂದ ಅನುಕೂಲ
- ಶಾಂತವಾಗಿದಷ್ಟು ಎಲ್ಲರ ಸಹಕಾರ ನಿಮಗೆ ದೊರೆಯುತ್ತದೆ
- ಬೇರೆಯವರ ವಿಚಾರಗಳು ಬೇಡ ಆದಷ್ಟು ಅಂತರ ಕಾಯ್ದುಕೊಳ್ಳಿ
- ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಮಿಥುನ

- ನಿಮ್ಮ ಶಕ್ತಿ ಮೀರಿ ಕೆಲಸ ಮಾಡಬಹುದು ಆದರೂ ಕೂಡ ಪ್ರಯೋಜನಕ್ಕೆ ಬರುವುದಿಲ್ಲ
- ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು
- ವೃತ್ತಿಯಲ್ಲಿ ಸಮಸ್ಯೆಗಳನ್ನ ಎದುರಿಸಬಹುದು
- ನಿಮ್ಮ ಸ್ತಿರಾಸ್ಥಿ ವಿಚಾರದಲ್ಲಿ ಸ್ವಲ್ಪ ತಕರಾರು ಉಂಟಾಗಬಹುದು
- ವಾಹನದಿಂದ ಲಾಭವಿದೆ
- ದೃಢ ನಿರ್ಧಾರಗಳಿಂದ ಭವಿಷ್ಯ ನಿರ್ಧಾರವಾಗಬಹುದು
- ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ
ಕಟಕ

- ಸ್ನೇಹಿತರಿಗೆ ಉಪದೇಶದಿಂದ ನಿಮಗೆ ಸಹಾಯವಾಗಬಹುದು
- ಬಂಧುಗಳು ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬಹುದು
- ಉದ್ಯೋಗ ಕೈ ಹಿಡಿಯುತ್ತದೆ ಅದರಿಂದ ಲಾಭವಾಗಬಹುದು
- ಉನ್ನತ ವ್ಯಾಸಂಗ, ವಿದೇಶಿ ಪ್ರಯಾಣದ ಯೋಗವಿದೆ
- ಮನೆಯವರ ಸಹಕಾರ ಪೂರ್ಣ ಪ್ರಮಾಣದಲ್ಲಿ ಸಿಗಬಹುದು
- ಇಂದು ಹಣ, ವಸ್ತ್ರಗಳಿಂದ ಮನಸಾರೆ ಸಂತೋಷ ಪಡುತ್ತೀರಿ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಸಿಂಹ

- ಇಂದು ಆತ್ಮಪ್ರಶಂಸೆ ಮತ್ತು ಪರನಿಂದೆ ಎರಡನ್ನೂ ಬಿಡಬೇಕು
- ನಿಮ್ಮ ಮಾನಸಿಕ ಆರೋಗ್ಯ ಸರಿಯಾಗಿರುವುದಿಲ್ಲ
- ಕೋಪದಿಂದ ಮಕ್ಕಳು ದೂರವಾಗಬಹುದು
- ನಕಾರಾತ್ಮಕವಾದ ಆಲೋಚನೆಗಳಿಂದ ಹಿನ್ನಡೆ ಸಾಧ್ಯತೆ
- ಜನರ ಕೆಟ್ಟ ದೃಷ್ಠಿಯಿಂದ ನಿಮಗೆ ಸಮಸ್ಯೆಯಾಗಬಹುದು
- ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳಬೇಡಿ
- ಕುಲದೈವ ಆರಾಧನೆ ಮಾಡಿ
ಕನ್ಯಾ

- ಅನುಭವಿ ವ್ಯಕ್ತಿಗಳ ಸಲಹೆಯನ್ನು ಪಡೆಯಿರಿ
- ಆರೋಗ್ಯದ ಬಗ್ಗೆ ಚಿಂತನೆಯನ್ನು ಮಾಡಿ
- ಕೋಪದಿಂದ ದಿನಚರಿ ಹಾಳಾಗಬಹುದು
- ನರಕ್ಕೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡಬಹುದು
- ಜನರ ಮೇಲೆ ನಿಮಗೆ ದ್ವೇಷ ಒಳ್ಳೆಯದಲ್ಲ
- ಮನೆಯಲ್ಲಿ ಉತ್ತಮವಾದ ವಾತಾವರಣವನ್ನು ಕಾಪಾಡಬೇಕು
- ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ತುಲಾ

- ನಂಬಿದವರಿಂದ ಮೋಸದ ಯೋಚನೆ ಆದರೆ ಸಿಕ್ಕಿ ಬೀಳುತ್ತಾರೆ
- ಗ್ರಹಗತಿ ಚೆನ್ನಾಗಿರುವ ಕಾಲ ಅದರ ಸದ್ವಿನಿಯೋಗ ಆಗಲಿ
- ದೊಡ್ಡ ಅನಾಹುತದಿಂದ ಪಾರಾಗುತ್ತೀರಿ
- ಕಲ್ಯಾಣದ ಬಗ್ಗೆ ಆಸೆ ಇರುವವರಿಗೆ ನಿರಾಸೆಯಾಗಬಹುದು
- ಕುಟುಂಬದಲ್ಲಿ ಹಲವಾರು ಯೋಜನೆಗಳು ಸಾಕಾರವಾಗಬಹುದು
- ಮಕ್ಕಳ ಪ್ರಗತಿಯಿಂದ ಸಂತಸ
- ಗೋಪಾಲಕೃಷ್ಣನನ್ನ ಪ್ರಾರ್ಥನೆ ಮಾಡಿ
ವೃಶ್ಚಿಕ

- ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗದೇ ಬೇಸರವಾಗಬಹುದು
- ಗೆಳೆಯರಿಂದಲೇ ನಿಮಗೆ ಹಿನ್ನಡೆಯಾಗಬಹುದು
- ಮಾನಸಿಕವಾಗಿ ಕೊರಗಿ ಹತಾಶರಾಗಬಹುದು
- ತಾಯಿಯಿಂದ ಕಿರುಕುಳ ಉಂಟಾಗಬಹುದು
- ಕೆಲಸದಲ್ಲಿ ನಿಮಿಷ್ಟದಂತೆ ಯಾವುದೂ ನೆರವೇರುವುದಿಲ್ಲ
- ಹಣ, ವಸ್ತ್ರ ಇದರ ಅಗತ್ಯತೆಗಾಗಿ ಪರದಾಟ ಮಾಡಬಹುದು
- ಪಾರಿಜಾತ ಸರಸ್ವತಿಯನ್ನ ಆರಾಧನೆ ಮಾಡಿ
ಧನುಸ್ಸು

- ನೀತಿ, ನಿಯಮಗಳನ್ನು ಪಾಲನೆ ಮಾಡಿ
- ನಿಮ್ಮ ಕೆಲಸಗಳ ಮೇಲೆ ತುಂಬಾ ನಿಗಾಯಿರಲಿ
- ನಿಮ್ಮ ಅನಿಸಿಕೆ ಸಾಕಾರಗೊಳ್ಳಲು ಪ್ರಯತ್ನ ಮಾಡಿ
- ಕೆಲಸದ ಸ್ಥಳದಲ್ಲಿ ನಿಮಗೆ ಗೌರವ ಸಿಗುವುದಿಲ್ಲ
- ಮಕ್ಕಳು, ಮೊಮ್ಮಕ್ಕಳಿಂದ ಅನುಕೂಲವಾಗಬಹುದು
- ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ
- ಗಣಪತಿಯನ್ನ ಪ್ರಾರ್ಥನೆ ಮಾಡಿ
ಮಕರ

- ವೃತ್ತಿ, ಉದ್ಯೋಗದಲ್ಲಿ ತುಂಬಾ ಕಷ್ಟದ ಸಮಯ
- ಬೇರೆಯವರ ಮೇಲಿನ ಕೋಪ ಕೆಲಸದ ಮೇಲೆ ಹಾಕಬಹುದು
- ಸಕಾಲದಲ್ಲಿ ನಿಮ್ಮ ಕಾರ್ಯವನ್ನ ಮಾಡಿ ಮುಗಿಸಿ
- ನಿಮ್ಮ ಸಾಮರ್ಥ್ಯ, ಬುದ್ಧಿ ಇಂದು ಕೆಲಸಕ್ಕೆ ಬರುವುದಿಲ್ಲ
- ತಂದೆಯವರಿಗೆ ಅಪಘಾತವಾಗುವ ಸೂಚನೆಯಿದೆ
- ಗಂಡ, ಹೆಂಡತಿ ತಮ್ಮ ಪರಸ್ಪರ ಆರೋಗ್ಯ ಗಮನಿಸಿಕೊಳ್ಳಿ
- ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ
ಕುಂಭ

- ದುಷ್ಟರೊಂದಿಗೆ ನಿಮ್ಮ ಸ್ನೇಹ ಗಟ್ಟಿಯಾಗಿ ಅಪಾಯ ಉಂಟಾಗಬಹುದು
- ಸರ್ಕಾರಿ ಉದ್ಯೋಗದಿಂದ ಲಾಭವಿದೆ
- ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬಹುದು
- ಮಾತೆಯರಿಗೆ ಧನಲಾಭ ಆದರೆ ಭಯ ಇರುತ್ತದೆ
- ವಿವಾಹ ವಿಚಾರದಲ್ಲಿ ಹಣಕ್ಕಾಗಿ ಜಗಳವಾಗಬಹುದು
- ಇಂದು ಹಿರಿಯರ ಮಾರ್ಗದರ್ಶನದ ಮೇರೆಗೆ ಮುನ್ನೆಡೆಯಿರಿ
- ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಸೂರ್ಯನನ್ನ ಪ್ರಾರ್ಥನೆ ಮಾಡಿ
ಮೀನಾ

- ಮನೆಯಲ್ಲಿ ಮಾದರಿಯಾಗಿರಿ ಅದರಿಂದ ಗೌರವ ಹೆಚ್ಚಾಗಬಹುದು
- ಮಕ್ಕಳು ದೂರದ ದೇಶ, ಊರಿಗೆ ಕಾರ್ಯ ನಿಮ್ಮತ್ತ ಹೋಗಬಹುದು
- ಇಂದು ನಿಮಗೆ ಒಂಟಿತನದ ನೋವು ಉಂಟಾಗಬಹುದು
- ಹಲವಾರು ಯೋಜನೆಗಳಿದ್ದರು ನಿರಾಸಕ್ತಿ
- ಹಣವಿದೆ ಆದರೆ ಭದ್ರತೆಯಿಲ್ಲ, ನೆಮ್ಮದಿಯಿಲ್ಲ
- ಸಮಾಜ ಮುಖಿ ಕೆಲಸ ಮಾಡಿ ನೆಮ್ಮದಿಯನ್ನ ಪಡೆದುಕೊಳ್ಳಿ
- ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ