ವಿದ್ಯೆ-ಬುದ್ಧಿಗೂ ಮೀರಿದ ಹಲವು ಅವಕಾಶಗಳು ಈ ದಿನ ನಿಮ್ಮದಾಗುತ್ತವೆ.. ಇಲ್ಲಿದೆ ಇಂದಿನ ರಾಶಿಭವಿಷ್ಯ..!

author-image
Bheemappa
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ನೌಕರಿಗೆ ಹೋಗೋದು ಬಿಟ್ಟು ಸಂತಸದಿಂದ ಕಾಲ ಕಳೆಯುತ್ತೀರಿ
  • ಸರಿಯಾದ ಉಪಯೋಗ ಮಾಡಿಕೊಂಡು ಲಾಭ ಪಡೆಯಬಹುದು
  • ಕಾನೂನಿಗೆ ಸಂಬಂಧಿಸಿದ ವಿಚಾರದಲ್ಲಿ ಜಾಗ್ರತೆ ವಹಿಸಬೇಕಾಗುತ್ತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲಪಕ್ಷ, ಚತುರ್ದಶಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ದಿನಚರಿ ಸಾಯಂಕಾಲದ ವೇಳೆಗೆ ಸ್ವಲ್ಪ ಅಸ್ತವ್ಯಸ್ತವಾಗಬಹುದು
  • ವ್ಯವಹಾರದ ಜೊತೆಗೆ ಘರ್ಷಣೆ ಆಗಬಹುದು
  • ಮನೆಗೆ ಅತಿಥಿಗಳ ಆಗಮನದಿಂದ ಸ್ವಲ್ಪ ಸಮಾಧಾನ ಸಿಗುತ್ತದೆ
  • ನೌಕರಿಗೆ ಹೋಗುವುದನ್ನು ಬಿಟ್ಟು ಮನೆಯಲ್ಲಿ ಆನಂದವಾಗಿ ಕಾಲ ಕಳೆಯುತ್ತೀರಿ
  • ಮಧ್ಯಾಹ್ನದ ನಂತರ ನಿಮಗೆ ಕೋಪ ಹೆಚ್ಚಾಗಿ ಬಹಳ ಒರಟಾಗಿ ವರ್ತಿಸುವ ಸಾಧ್ಯತೆ
  • ವ್ಯವಹಾರದ ಜೊತೆಗೆ ಘರ್ಷಣೆ ಆಗಬಹುದು
  • ನಿಮ್ಮ ವಿದ್ಯೆ-ಬುದ್ಧಿಗೂ ಮೀರಿದ ಹಲವು ಅವಕಾಶಗಳು ಈ ದಿನ ನಿಮ್ಮದಾಗುತ್ತದೆ
  • ವಿಕಲ ಚೇತನರು ರಸ್ತೆಯಲ್ಲಿ ಹೋಗುವಾಗ ಜಾಗ್ರತೆವಹಿಸಿ
  • ಹರಹರ ಶಂಕರ ಎಂದು ಪರಮೇಶ್ವರನನ್ನು ಪ್ರಾರ್ಥಿಸಿ

ವೃಷಭ

publive-image

  • ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಶುಭದಿನ
  • ನಿಮ್ಮ ವಿದ್ಯೆ-ಬುದ್ಧಿಗೂ ಮೀರಿದ ಹಲವು ಅವಕಾಶಗಳು ಈ ದಿನ ನಿಮ್ಮದಾಗುತ್ತದೆ
  • ಮನಸ್ಸಿಗೆ ಆನಂದ ಉಂಟಾಗುವ ದಿನವಾಗಿರುತ್ತದೆ
  • ಮಧ್ಯಾಹ್ನದ ನಂತರ ಸ್ವಲ್ಪ ಆಲಸ್ಯ ಕಾಡಬಹುದು
  • ಹಣದ ವಿಚಾರದಲ್ಲಿ ಸ್ವಲ್ಪ ಚಿಂತೆಯಿರುತ್ತದೆ
  • ಅನಿವಾರ್ಯ ಕಾರಣಗಳಿಗೆ ಸಾಲವನ್ನು ಮಾಡಬೇಕಾಗಬಹುದು
  • ಮನೆಗೆ ಅತಿಥಿಗಳ ಆಗಮನದಿಂದ ಸ್ವಲ್ಪ ಸಮಾಧಾನ ಸಿಗುತ್ತದೆ
  • ಆದರೂ ನಿಮಗೆ ಆತಂಕ ತಪ್ಪಿದ್ದಲ್ಲ
  • ಚಿಕ್ಕ ಮಕ್ಕಳು ಸಂತೋಷದಿಂದ ಕಾಲ ಕಳೆಯುವ ಸಮಯವಾಗಿರುತ್ತೆ
  • ಧರ್ಮಸ್ಥಳ ಮಂಜುನಾಥನನ್ನು ಆರಾಧಿಸಿ

ಮಿಥುನ

publive-image

  • ಈ ದಿನ ಸಂತೋಷದಿಂದ ಆರಂಭವಾಗುತ್ತದೆ
  • ಮಿಥುನ ರಾಶಿಯಲ್ಲಿ ಜನಿಸಿದವರಿಗೆ ತಂದೆ-ತಾಯಿಯವರ ಕಡೆಯಿಂದ ಶುಭ ಸುದ್ಧಿ ಬರಬಹುದು
  • ಇಂದು ಅವಿವಾಹಿತರಿಗೆ ಉತ್ತಮ ದಿನ
  • ಈ ದಿನ ವಿವಾಹ ವಿಚಾರಗಳು ಕೈಗೂಡಬಹುದು
  • ಮನೆಯ ವಾತಾವರಣ ಉತ್ತಮವಾಗಿರುವ ದಿನವಾಗಿದೆ
  • ಒಟ್ಟಾರೆ ಈ ದಿನ ನಿಮಗೆ ಶುಭದಿನ
  • ನೌಕರಿಗೆ ಹೋಗುವುದನ್ನು ಬಿಟ್ಟು ಮನೆಯಲ್ಲಿ ಆನಂದವಾಗಿ ಕಾಲ ಕಳೆಯುತ್ತೀರಿ
  • ವಿದ್ಯಾರ್ಥಿಗಳು ತಮ್ಮ ವಿದ್ಯಾ ಚಟುವಟಿಕೆಗಳನ್ನು ಬದಿಗೊತ್ತಿ ತುಂಬಾ ಆನಂದದಲ್ಲಿರುವ ದಿನ
  • ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರಿಗೆ ಈ ದಿನ ಸ್ವಲ್ಪ ತೊಂದರೆಯಾಗಬಹುದು ಜಾಗ್ರತೆ
  • ಕಾರ್ತಿಕೇಯನನ್ನು ಆರಾಧಿಸಿ

ಕಟಕ

publive-image

  • ಸರಿಯಾದ ಉಪಯೋಗ ಮಾಡಿಕೊಂಡು ಲಾಭವನ್ನು ಪಡೆಯಬಹುದು
  • ದಿನಚರಿ ಸಾಯಂಕಾಲದ ವೇಳೆಗೆ ಸ್ವಲ್ಪ ಅಸ್ತವ್ಯಸ್ತವಾಗಬಹುದು
  • ಮನೆಯವರು ನಿಮ್ಮ ಪ್ರಗತಿಯ ವಿಚಾರವನ್ನು ಕೇಳಿ ಬಹಳ ಸಂತೋಷ ಪಡುತ್ತಾರೆ
  • ಈಗಾಗಲೇ ಆರಂಭಿಸಿದ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಿ
  • ಆಲಸ್ಯವನ್ನು ಕಡಿಮೆ ಮಾಡಿ ಚುರುಕಾಗಬೇಕಾಗುತ್ತದೆ
  • ಯಾವುದೇ ಕೆಲಸಗಳನ್ನು ನಾಳೆಗೆ ಮುಂದೂಡಬೇಡಿ ನಷ್ಟ ಅನುಭವಿಸಬೇಕಾಗಬಹುದು
  • ತಂದೆ-ತಾಯಿಗೆ ಆರೋಗ್ಯ ಸಮಸ್ಯೆ ಕಾಡಬಹುದು ಜಾಗ್ರತೆ
  • ಅಣ್ಣ ತಮ್ಮಂದಿರೊಂದಿಗೆ ಮಾತಿನ ಘರ್ಷಣೆ ನಡೆಯಬಹುದು
  • ಜಗಳ ಬೇಡ ಮೌನಕ್ಕೆ ಶರಣಾಗಿ
  • ಕುಲದೇವತಾ ಆರಾಧನೆ ಮಾಡಿ

ಸಿಂಹ

publive-image

  • ಕಾನೂನಿಗೆ ಸಂಬಂಧಿಸಿದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕಾಗುತ್ತದೆ
  • ವ್ಯಾಪಾರಸ್ಥರಿಗೆ ಆದಾಯ ಹೆಚ್ಚಾಗುವ ಸೂಚನೆಗಳಿವೆ
  • ಹಲವು ವಸ್ತುಗಳ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ವಡಂಬಡಿಕೆಗಳನ್ನ ಮಾಡಿಕೊಳ್ಳುವ ಸಾಧ್ಯತೆ
  • ಈ ದಿನ ತುಂಬಾ ಓಡಾಟ,ಒತ್ತಡಗಳಿರುತ್ತದೆ
  • ವ್ಯಾವಹಾರಿಕವಾಗಿ ಜರುಗುವ ಕೆಲವು ಸಂಘರ್ಷಗಳನ್ನು ಬಗೆಹರಿಸಬೇಕಾಗಬಹುದು
  • ಸ್ವಂತ ಜಾಗದ ಖರೀದಿಯ ಬಗ್ಗೆ ಹೆಚ್ಚು ಒಲವು ತೋರಬಹುದಾದ ದಿನ
  • ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಜಾಗ್ರತೆ ವಹಿಸಿ
  • ಕಾಲಭೈರವನನ್ನು ಆರಾಧನೆ ಮಾಡಿ

ಕನ್ಯಾ

publive-image

  • ವ್ಯವಹಾರದ ದೃಷ್ಠಿಯಿಂದ ದೂರ ಪ್ರಯಾಣ ಮಾಡಬಹುದು
  • ನೌಕರರಿಗೆ ಮೇಲಾಧಿಕಾರಿಗಳ ಬೆಂಬಲ ದೊರೆತು ಕೆಲಸದಲ್ಲಿ ಉತ್ಸಾಹ ಹೆಚ್ಚಾಗುವ ದಿನ
  • ಆದರೆ ತಾವು ಮಾಡದೇ ಇರುವ ತಪ್ಪಿಗೆ ಬೇಸರ ಪಡಬೇಕಾಗಬಹುದು ಜಾಗ್ರತೆ
  • ನಿಮ್ಮ ಕೆಲಸದಲ್ಲಿ ನಿಮಗೆ ಜಾಗ್ರತೆಯಿದ್ದರೂ ಮತ್ತೆ ಮತ್ತೆ ಅದನ್ನು ಸಾಬೀತು ಪಡಿಸಬೇಕಾಗುತ್ತದೆ
  • ಭಾಷಾ ಪ್ರವೀಣರಿಗೆ ಶುಭ ದಿನ
  • ಧನಾಗಮನದಿಂದ ನಿಮ್ಮ ಯೋಜನೆ ಬೇರೆ ರೂಪ ಪಡೆದುಕೊಳ್ಳಬಹುದು
  • ಇವರಿಗೆ ಗೌರವ,ಸನ್ಮಾನ,ಪುರಸ್ಕಾರಗಳು ಸಿಗುವ ದಿನ
  • ವೈದ್ಯಕೀಯ ವಿದ್ಯಾರ್ಥಿಗಳು ಬೇಸರ ಮಾಡಿಕೊಳ್ಳದೆ ತಮ್ಮ ವ್ಯಾಸಂಗದಲ್ಲಿ ಪರಿಶ್ರಮ ಪಡಬೇಕಾದ ದಿನ
  • ಆಂಜನೇಯನನ್ನು ಪ್ರಾರ್ಥಿಸಿ

ತುಲಾ

publive-image

  • ಮನೆ ಮತ್ತು ನೌಕರಿಯಲ್ಲಿ ಹಲವು ವಿಶೇಷ ಗೌರವ, ಪುರಸ್ಕಾರಗಳಿಗೆ ಭಾಜನರಾಗುತ್ತೀರಿ
  • ಇಂದು ಮಧ್ಯಾಹ್ನದ ನಂತರ ಉತ್ತಮವಾದ ದಿನ
  • ನೌಕರರು ತಮ್ಮ ಕೆಲಸ ಮುಗಿಸಿ ಮನೆಯ ಕೆಲಸವನ್ನು ನಿರ್ವಹಿಸುವ ಸಂದರ್ಭ ಬರಬಹುದು
  • ಮಾರ್ಕೆಟಿಂಗ್ ಮಾಡುವವರಿಗೆ ಲಾಭದ ದಿನ
  • ಇಂದು ಬೇರೆಯವರ ಸಹಾಯ ದೊರೆಯುತ್ತದೆ
  • ಹಣದ ಸಮಸ್ಯೆಗಳಿದ್ದರೆ ಈ ದಿನ ಬಗೆಹರಿಯುವ ಸಾಧ್ಯತೆ
  • ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸದ ಬಗ್ಗೆ ಮನಸ್ಸಿರುವುದಿಲ್ಲ
  • ತಾವು ಕಲಿತ ವಿದ್ಯೆ ಸಾಕು ಎಂಬ ಮನೋಭಾವ ಬರಬಹುದು ಗಮನವಿರಲಿ
  • ಅಯ್ಯಪ್ಪ ಸ್ವಾಮಿ ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ತಮ್ಮ ಕೆಲಸದ ಬಗ್ಗೆ ಆತ್ಮ ವಿಶ್ವಾಸ ಮೂಡುತ್ತದೆ
  • ತಮ್ಮ ಬಗ್ಗೆ ಸಮರ್ಥನೆ ಮಾಡಿಕೊಳ್ಳಬೇಕಾದ ಪ್ರಸಂಗ ಬರಬಹುದು
  • ಇಂದು ಕಾಲಿನ ಸಮಸ್ಯೆ ಕಾಡಬಹುದು
  • ಈ ದಿನ ಸಮಸ್ಯೆಯ ದಿನವೆಂದೇ ಹೇಳಬಹುದು
  • ನೀವು ಹವ್ಯಾಸವನ್ನು ವೃತ್ತಿಯಾಗಿ ಸ್ವೀಕರಿಸುವ ಸಾಧ್ಯತೆ
  • ಯಾವುದೇ ಕಾರಣಕ್ಕೂ ಗಲಾಟೆ ಬೇಡ, ತಾಳ್ಮೆ ಪರೀಕ್ಷೆಯ ಸಮಯವಾಗಿರುತ್ತದೆ
  • ಪ್ರಮುಖ ವ್ಯಕ್ತಿ ಎಂದು ಬಿಂಬಿತವಾದ್ರು ಕೂಡ ನಿಮ್ಮ ಕಷ್ಟಕ್ಕೆ, ಸಮಸ್ಯೆಗೆ ಯಾರ ಸಹಾಯ ಸಿಗುವುದಿಲ್ಲ
  • ಜಾಗ್ರತೆಯಿಂದ ವರ್ತಿಸಿ ಶಾಂತಿ, ಸಮಾಧಾನಗಳೇ ಈ ದಿನಕ್ಕೆ ದಿವ್ಯ ಔಷಧಿ
  • ಮಹಾಕಾಳಿಯನ್ನು ಆರಾಧಿಸಿ

ಧನಸ್ಸು

publive-image

  • ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ
  • ಯಾವುದಾದರು ಮಹತ್ತರ ಕೆಲಸಗಳಿದ್ದರೆ ಮಧ್ಯಾಹ್ನ 3.30 ರಿಂದ 6.00 ಗಂಟೆಯೊಳಗೆ ಮುಗಿಸಿಕೊಳ್ಳಿ
  • ಸಮಯಕ್ಕೆ ತಕ್ಕಂತೆ ನಿಮ್ಮ ಸ್ವಭಾವ, ನಡವಳಿಕೆಗಳನ್ನು ಬದಲಾಯಿಸಿಕೊಂಡರೆ ಒಳ್ಳೆಯದು
  • ನಿಮಗೆ ಲಾಭದ ದಿನ ಆದರೆ ಮನೆಯ ಹಿರಿಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
  • ಎಲ್ಲರಿಗೂ ಬೇಸರದ ವಾತಾವರಣ ಸೃಷ್ಟಿಯಾಗಬಹುದು ಜಾಗ್ರತೆವಹಿಸಿ
  • ವಿದ್ಯಾರ್ಥಿಗಳಿಗೆ ವಿಶೇಷವಾಗಿ ಮಾನಸಿಕವಾಗಿ ಸಮಾಧಾನವಿರುವುದಿಲ್ಲ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ

ಮಕರ

publive-image

  • ನಿಮ್ಮ ಕುಟುಂಬ, ಮಕ್ಕಳು ಹಾಗೂ ನಿಮ್ಮ ಪ್ರಗತಿಯ ಬಗ್ಗೆ ಬೇರೆಯವರ ಮುಂದೆ ಹೇಳಿಕೊಳ್ಳಬೇಡಿ
  • ಬೇರೆಯವರ ದೃಷ್ಟಿ ನಿಮಗೆ ತಗುಲಬಹುದು ಜಾಗ್ರತೆವಹಿಸಿ
  • ಇಂದು ನಿಮ್ಮ ಭಾವನೆಗಳಿಗೆ ಸಮಯ ಕೊಡಿ
  • ಏನೇ ಸಮಸ್ಯೆಗಳಿದ್ದರೂ ಬಹಳ ನಿಧಾನವಾಗಿ ಆಲೋಚಿಸಿ ಬುದ್ಧಿವಂತಿಕೆಯಿಂದ ಬಗೆಹರಿಸಿಕೊಳ್ಳಿ
  • ಒಂದೇ ಸಂದರ್ಭದಲ್ಲಿ ಎರಡೆರಡು ಕೆಲಸಗಳನ್ನು ಮಾಡುವ ಅವಕಾಶ ಒದಗಿಬರಬಹುದು
  • ಎರಡು ದೊಡ್ಡ ಕೆಲಸಗಳನ್ನು ಒಂದೇ ಸಮಯದಲ್ಲಿ ನಿರ್ವಹಿಸುವ ಅವಕಾಶ ಬರಬಹುದು
  • ನಿಮ್ಮ ಸಾಮರ್ಥ್ಯಕ್ಕೆ ಹಾನಿಯನ್ನುಂಟು ಮಾಡುವ ಕೆಲಸ ಮಾಡಬೇಡಿ
  • ಬೇರೆಯವರ ಕೆಟ್ಟ ದೃಷ್ಟಿ ನಿಮ್ಮ ಕುಟುಂಬಕ್ಕೆ ತಗುಲದಂತೆ ಎಚ್ಚರಿಕೆವಹಿಸಿ
  • ಇಂದು ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥಿಸಿ

ಕುಂಭ

publive-image

  • ಇಂದು ನೌಕರರಿಗೆ ಮಧ್ಯಮ ಫಲದ ದಿನ
  • ಹಳೆಯ ಸಾಲ ಅಥವಾ ಬಾಕಿ ತೀರಿಸಲು ಕೂಡಿಟ್ಟ ಹಣ ಖರ್ಚಾಗಬಹುದು
  • ವೃತ್ತಿಯನ್ನು ಬಹಳ ಗಂಭೀರವಾಗಿ ಪರಿಗಣಿಸದೇ ಇದ್ದರೆ ಸಂಕಷ್ಟಕ್ಕೆ ಸಿಲುಕಬಹುದು
  • ನಿಮ್ಮ ಸ್ನೇಹಿತರ ಸಹಾಯ ಈ ದಿನ ಸಿಗುವುದಿಲ್ಲ
  • ಇಂದು ಬೇರೆ ಯಾರಿಂದಲೂ ಸಹಾಯ ನಿರೀಕ್ಷಿಸಬೇಡಿ
  • ಶಾಸ್ತ್ರೀಯ ಸಂಗೀತ ಕೇಳಿ ಮನಸ್ಸಿಗೆ ಸಮಾಧಾನ ತಂದುಕೊಳ್ಳಿ
  • ಸಾಯಿಬಾಬಾರನ್ನು ಪ್ರಾರ್ಥಿಸಿ

ಮೀನ 

publive-image

  • ಹಣವನ್ನು ಹೂಡಿಕೆ ಮಾಡಲು ಹೊಸ ಆಲೋಚನೆಗಳು ನಿಮ್ಮನ್ನು ಹುಡುಕಿಕೊಂಡು ಬರುವ ದಿನ
  • ಮನೆಯಲ್ಲಿ ಮಕ್ಕಳ ಅಭ್ಯುದಯ ಬಹಳ ಚೆನ್ನಾಗಿರುವುದರಿಂದ ತೃಪ್ತಿ ಸಿಗುತ್ತದೆ
  • ಸರಿಯಾದ ಉಪಯೋಗ ಮಾಡಿಕೊಂಡು ಲಾಭವನ್ನು ಪಡೆಯಬಹುದು
  • ಇಂದು ನಿರೀಕ್ಷೆ ಮಾಡಿದ ಕೆಲವು ಕೆಲಸಗಳು ನಿಧಾನವಾಗಿ ಸಾಗುತ್ತದೆ
  • ಆಪ್ತರು ಮತ್ತು ಬಂಧುಗಳ ಜೊತೆ ಸಮಯವನ್ನು ಕಳೆಯುತ್ತೀರಿ
  • ಇಂದಿನ ವಾತಾವರಣ ಸರಿಯಾಗಿರುವುದಿಲ್ಲ
  • ನಿಮ್ಮ ತಪ್ಪಿಗೆ ಬೇರೆಯವರನ್ನು ದೂಷಿಸಬಾರದು
  • ಪರಮೇಶ್ವರನನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment