/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣಪಕ್ಷ, ತೃತೀಯಾ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ವ್ಯಾಪಾರ-ವ್ಯವಹಾರ, ನೌಕರಿ ಮತ್ತು ವಿದ್ಯಾರ್ಥಿ ವರ್ಗದವರು ಹೆಚ್ಚು ಶ್ರಮ ಪಡಬೇಕಾದ ದಿವಸ
- ಖರ್ಚು ಹೆಚ್ಚಾಗಿ ಕೆಲವು ದುಷ್ಪರಿಣಾಮಗಳು ನಿಮ್ಮ ಮೇಲೆ ಬೀರುವ ಸಾಧ್ಯತೆ
- ಸ್ವಲ್ಪ ಮಟ್ಟಿಗೆ ನಿಮ್ಮ ದುರಾಸೆಯನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು
- ಸಂಬಂಧಿಕರ, ಸ್ನೇಹಿತರ ಸಂಬಂಧ ಚೆನ್ನಾಗಿದ್ದರು ಬೆಂಬಲ ದೊರೆಯುವುದು ಕಷ್ಟ ಸಾಧ್ಯ
- ಪ್ರೇಮಿಗಳಿಗೆ ಉತ್ತಮ ದಿನ
- ಪ್ರೇಮ ವಿಚಾರ ಕುಟುಂಬಕ್ಕೆ ತಿಳಿಸಲು ಉತ್ತಮ ದಿನ
- ನಿಮ್ಮ ಸಹೋದರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಜಾಗ್ರತೆ
- ಕುಲದೇವರನ್ನು ಸ್ಮರಿಸಿ
ವೃಷಭ
- ರಾಜಕೀಯ ವ್ಯಕ್ತಿಗಳಿಗೆ ಶುಭವಾಗುವ ದಿನವೆಂದು ಹೇಳಬಹುದು
- ಕುಂಭರಾಶಿಯ ಶಿಕ್ಷಕರಿಗೆ ಅಪವಾದ ಬರುವಂತಹ ದಿನ
- ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು ತಾಳ್ಮೆ ಇರಲಿ
- ರಸ್ತೆ ಬದಿಯ ವ್ಯಾಪಾರಿಗಳಿಗೆ ಲಾಭವಿದೆ, ಹಣವನ್ನು ಜಾಗ್ರತೆಯಿಂದ ಇಟ್ಟುಕೊಳ್ಳಿ
- ಮನೆಯ ಹೊರಗೆ ಮತ್ತು ಒಳಗೆ ನೆಮ್ಮದಿ ಕಡಿಮೆಯಿರುವ ದಿನವಾಗಿದೆ
- ಜಾತವೇದಾಗ್ನಿಯನ್ನು ಪ್ರಾರ್ಥಿಸಿ
ಮಿಥುನ
- ನಿಮಗಿರುವ ಗೌರವ ಸ್ಥಾನ ದುರುಪಯೋಗವಾಗುವ ಸಾಧ್ಯತೆ
- ಯಾವುದಾದರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಕೆ ಸಾಧ್ಯತೆ
- ಬೆಲೆಬಾಳುವ ಪದಾರ್ಥಗಳು ನಷ್ಟವಾಗಬಹುದು
- ಮಾತೆಯರೊಂದಿಗೆ ಸಭ್ಯವಾಗಿ ವರ್ತಿಸಿ ಇಲ್ಲದಿದ್ದರೆ ಅವಮಾನ ಸಾಧ್ಯತೆ
- ದೀರ್ಘಕಾಲದ ಅನಾರೋಗ್ಯದ ಸೂಚನೆಯಿದೆ, ವೈದ್ಯರ ಸಲಹೆ ಪಡೆಯಿರಿ
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಕಟಕ
- ನಿಮ್ಮ ಕೆಲಸದ ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇದೆ
- ಆಡಳಿತ ವರ್ಗ ಮತ್ತು ಪ್ರಬಲ ವ್ಯಕ್ತಿಗಳ ಮನಸ್ಸಿಗೆ ಬೇಸರ ಉಂಟಾಗಬಹುದು
- ಜೊತೆಯಲ್ಲಿ ಕೆಲಸ ಮಾಡುವವರ ಸಹಕಾರ ದೊರೆಯುತ್ತದೆ
- ಆಹಾರದ ಬಗ್ಗೆ ಗಮನವಿರಲಿ, ಶೀತ ಸಂಬಂಧಿ ತೊಂದರೆ ಕಾಣಬಹುದು
- ಕೋಪ ಅನರ್ಥಕ್ಕೆ ಕಾರಣವಾಗುತ್ತೆ ಕೋಪದ ಕೈಗೆ ಬುದ್ಧಿಯನ್ನು ಕೊಡಬೇಡಿ
- ಸ್ನೇಹಿತರೊಂದಿಗೆ ಜಗಳ ಆಗುವ ಸಂದರ್ಭವಿದೆ
- ಭಗವತಿ ದುರ್ಗೆಯನ್ನು ನೀಲಿ ಹೂಗಳಿಂದ ಅರ್ಚಿಸಿ
ಸಿಂಹ
- ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಶುಭ ವಾರ್ತೆಗಳನ್ನು ಕೇಳಬಹುದು
- ಮನಸ್ಸಿಗೆ ಮತ್ತು ವ್ಯವಹಾರದಲ್ಲಿ ಬಹಳ ಸಂತೋಷ ಸಿಗುವ ದಿನ
- ಸ್ನೇಹಿತರ ಸಂಬಂಧಗಳು ಹೆಚ್ಚಾಗಬಹುದು ಅವರ ಜೊತೆ ಬಹಳ ಜಾಗರೂಕರಾಗಿ ವರ್ತಿಸಿ
- ಸಾಯಂಕಾಲಕ್ಕೆ ಹೊಸ ಸಂಬಂಧದಲ್ಲಿ ಮಾನಸಿಕ ಬೇಸರ ಕಾಣುವ ಸಾಧ್ಯತೆ
- ಶಾಂತಿಪ್ರದ ದುರ್ಗಾದೇವಿಯನ್ನು ಆರಾಧಿಸಿ
ಕನ್ಯಾ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಗುರಿ ಸಾಧಿಸುವ ಮೂಲಕ ಮನಸ್ಸಿಗೆ ಸಂತೋಷ
- ವ್ಯಾಪಾರ, ವ್ಯವಹಾರದಲ್ಲಿ ಆರ್ಥಿಕ ಲಾಭವಾಗುವ ಸಾಧ್ಯತೆಯಿದೆ
- ಎಲ್ಲ ಕೆಲಸ ಕಾರ್ಯಗಳಲ್ಲಿ ಉತ್ಸಾಹ, ಬಿಡುವಿಲ್ಲದ ಕಾರ್ಯಗೌರವ
- ಹಿರಿಯರು ಮತ್ತು ಸಹೋದರರು ಮಾತಿನ ವೈಮನಸ್ಯ ಬೆಳಸಿಕೊಳ್ಳಬಹುದು
- ಸಮಾಜದಲ್ಲಿ ಹಲವರಿಗೆ ನಿಮ್ಮ ಕಾರ್ಯದಕ್ಷತೆ ಬಗ್ಗೆ ಉತ್ತಮ ಅಭಿಪ್ರಾಯವಿರುತ್ತದೆ
- ನಿಮ್ಮ ಖುಷಿಗಾಗಿ ಹೆಚ್ಚು ಹಣ ಖರ್ಚು ಮಾಡುವ ದಿನ
- ವೈರೋಚಿನೀ ಶಕ್ತಿಯನ್ನು ಆರಾಧಿಸಿ
ತುಲಾ
- ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ನೌಕರಿಯ ಚಿಂತೆ ಕಾಡಬಹುದು
- ಇಂದು ಅಜೀರ್ಣ ಸಮಸ್ಯೆ ಅಥವಾ ಹೊಟ್ಟೆ ನೋವು ಕಾಣಬಹುದು
- ನಿಮ್ಮ ಕೆಟ್ಟ ಅಭ್ಯಾಸಗಳಿದ್ದರೆ ನಿಧಾನವಾಗಿ ಬಿಡುವುದು ಒಳಿತು
- ರಹಸ್ಯ ಶತ್ರುಗಳ ಬಗ್ಗೆ ಎಚ್ಚರವಿರಲಿ
- ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಚ್ಚರಿಕೆ
- ವಾಹನ ಚಾಲನೆ ಮತ್ತು ಪ್ರಯಾಣ ಬೇಡ
- ವಾಯುವ್ಯಾಸ್ತ ಮಂತ್ರ ಶ್ರವಣ ಮಾಡಿ
ವೃಶ್ಚಿಕ
- ಸರ್ಕಾರಿ ನೌಕರರಿಗೆ ಸಿಹಿಸುದ್ದಿ
- ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಈ ದಿನ ಜಯ ಸಿಗಲಿದೆ
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ವಸ್ತು ರೂಪದಲ್ಲಿ ಉಡುಗೊರೆ ಸಿಗಬಹುದು
- ಹಳದಿ ಬಟ್ಟೆಯನ್ನು ಧರಿಸಿ ಪ್ರಯಾಣ ಮಾಡಿ ಶುಭವಿದೆ
- ಮಕ್ಕಳಿಗೆ ಮಧ್ಯಾಹ್ನದ ನಂತರ ಕಿರಿಕಿರಿಯಾಗಬಹುದು
- ನಾರಾಯಣೇ ದುರ್ಗಾ ಶಕ್ತಿಯನ್ನು ಆರಾಧಿಸಿ
ಧನಸ್ಸು
- ಹೊಸ ಹೊಸ ವಿಚಾರಕ್ಕಾಗಿ ಹಣವನ್ನು ಕೂಡಿಡುವ ಆಲೋಚನೆ ನಿಮ್ಮ ಮನಸ್ಸಿಗೆ ಬರುತ್ತದೆ
- ವಿರೋಧಿಗಳು ನಿಮ್ಮನ್ನು ಸೋಲಿಸಲು ಬಹಳ ಕಾತುರವಾಗಿ ಕಾಯ್ತಾ ಇರುತ್ತಾರೆ ಜಾಗ್ರತೆ
- ಗಮನವಿಲ್ಲದೆ ಮಾಡಿರುವ ಕೆಲಸಗಳಿಂದ ತಪ್ಪಿಗೆ ಸಿಲುಕುವ ಸಾಧ್ಯತೆಗಳಿವೆ
- ಇಂದು ಆಕಾಶಮಾರ್ಗದಲ್ಲಿ ಹೋಗುವ ಪ್ರಯಾಣ ಶುಭವಲ್ಲ
- ಸೋದರ ಮಾವನಿಗೆ ತೊಂದರೆ ಕಾಡಬಹುದು ಜಾಗ್ರತೆವಹಿಸಿ
- ಅಲುಪ್ತ ಶಕ್ತಿಯನ್ನು ಆರಾಧಿಸಿ
ಮಕರ
- ಸ್ನೇಹಿತರು ಮತ್ತು ಸಂಬಂಧಿಕರ ಮಧ್ಯೆ ಜಗಳ ಉಂಟಾಗುವ ಸಾಧ್ಯತೆ
- ರಾಜಕಾರಣಿಗಳಿಗೆ ಹಿನ್ನಡೆಯಾಗುವ ದಿನವಾಗಿದೆ
- ಮನಸ್ಸಿನ ಉದ್ವೇಗ ನಿಮ್ಮೆಲ್ಲಾ ಕೆಲಸಗಳನ್ನು ಹಾಳು ಮಾಡಬಹುದು
- ಮಹಿಳೆಯರಿಗೆ ಸಿಹಿ ಸುದ್ದಿ ಸಿಗುವ ದಿನವಾಗಿದೆ
- ಮರಣದ ವಾರ್ತೆ ಕೇಳಿ ಮನಸ್ಸಿನ ಮೇಲೆ ಪ್ರಭಾವ ಬೀರುವಂತದಾಗಿರುತ್ತದೆ
- ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡಿ
ಕುಂಭ
- ಆಸ್ತಿ ವಿವಾದಗಳೇನೆ ಇದ್ದರು ಈ ದಿನ ಬಗೆಹರಿಯುವ ಸಾಧ್ಯತೆಗಳಿವೆ
- ಈ ದಿನ ಚೆನ್ನಾಗಿದೆ ಅಂದುಕೊಳ್ಳುವ ಹೊತ್ತಿಗೆ ಮಾನಸಿಕ ಬೇಸರ, ಸಮಸ್ಯೆ ಉದ್ಧವವಾಗುವ ದಿನ
- ನಿಮ್ಮ ತತ್ವ ಸಿದ್ಧಾಂತಗಳಿಂದ ಬೇರೆಯವರು ಪ್ರಭಾವಿತರಾಗುವ ಸಾಧ್ಯತೆ
- ಕುಟುಂಬದಲ್ಲಿ ವಾಗ್ವಾದ ನಡೆಯುತ್ತದೆ, ಬೇಸರ ಉಂಟಾಗಬಹುದು
- ಮಾತಿನ ಸರಮಾಲೆಯಿಂದ ನಿಮ್ಮ ನಂಬಿಕೆಯನ್ನು ಕಡಿಮೆ ಮಾಡಿಕೊಳ್ಳುತ್ತೀರಿ
- ಮಾತಿನ ಬಗ್ಗೆ ನಿಗಾ ಇದ್ದರೆ ಒಳ್ಳೆಯದು
- ನಿಮ್ಮ ಮಗುವಿನ ಭವಿಷ್ಯದ ಬಗ್ಗೆ ಚಿಂತನೆ ಮಾಡಿ
- ಮಕ್ಕಳನ್ನು ಬಯಸುವವರಿಗೆ ಉತ್ತಮವಾದ ದಿನ
- ಮಹಾಶೂಲಿನಿಯನ್ನು ಪ್ರಾರ್ಥಿಸಿ
ಮೀನ
- ಶಕ್ತಿಮೀರಿ ಕೆಲಸ ಮಾಡಬೇಕಾದ ಅಗತ್ಯತೆ ಕಾಣುತ್ತದೆ
- ಪ್ರಯಾಣದಿಂದ ಲಾಭ ಸಾಧ್ಯತೆ ಆದರೆ ದೂರದ ಪ್ರಯಾಣ ಬೇಡ
- ಸಹೋದ್ಯೋಗಿಗಳ ಜೊತೆಯಲ್ಲಿ ಸೌಹಾರ್ದಯುತ ಮನೋಭಾವವಿರುತ್ತದೆ
- ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ ಇರುವಂತಹ ದಿನ
- ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಕಾಣುವ ಸಾಧ್ಯತೆ
- ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಯರಿಗೆ, ಹೆಣ್ಣು ಮಕ್ಕಳಿಗೆ ಅಗ್ನಿಯಿಂದ ತೊಂದರೆಯಾಗುವ ಸಾಧ್ಯತೆ ಎಚ್ಚರವಹಿಸಿ
- ಪಂಚಮುಖಿ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ