ಜಮೀನಿಗೆ ಸಂಬಂಧಿಸಿದ ಹಳೆ ವಿವಾದಗಳಿಗೆ ಮುಕ್ತಿ.. ವ್ಯವಹಾರಕ್ಕೆ ಪ್ರಗತಿ; ಇಲ್ಲಿದೆ ಇಂದಿನ ಭವಿಷ್ಯ..!

author-image
Bheemappa
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಕುಟುಂಬದಲ್ಲಿ ಪ್ರಾಬಲ್ಯದಿಂದಲೇ ಎಲ್ಲ ಸಮಸ್ಯೆ ನಿವಾರಣೆಯಾಗಲಿದೆ
  • ವ್ಯವಹಾರ ವಿಷಯ ಬದಿಗಿಟ್ಟು ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳಿ
  • ಅನಗತ್ಯ ಗೊಂದಲದಲ್ಲಿ ಸಿಲುಕಬಹುದು, ಸ್ಥಿರ ಮನಸ್ಸಿನಿಂದ ಎಲ್ಲ ಎದುರಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣಪಕ್ಷ, ಷಷ್ಟೀ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ನೀವು ಮನೆಯಿಂದ ಹೊರಗೆ ಹೋಗುವುದರಿಂದ ಮನೆಯವರಿಗೆ ಬೇಸರವಾಗುವ ಸಾಧ್ಯತೆ
  • ಕುಟುಂಬದ ಜವಾಬ್ದಾರಿಗಳು ಹೆಚ್ಚಿನ ಒತ್ತಡ ತರಬಹುದು
  • ವ್ಯಾಪಾರ, ವ್ಯವಹಾರ, ಉದ್ಯೋಗ, ವಿದ್ಯೆ ವಿಚಾರಗಳಲ್ಲಿ ಮಂದಗತಿಯಿರುತ್ತದೆ
  • ಹಳೆಯ ಕೇಸುಗಳಿದ್ದರೆ ತೀರ್ಮಾನವಾಗಿ ಜಯಶೀಲರಾಗುವ ಯೋಗವಿದೆ
  • ಮಾನಸಿಕ ಬೇಸರವು ನಿಮಗೆ ದಿನಪೂರ್ತಿ ಕಾಡಬಹುದು
  • ಬೇರೆ ವ್ಯವಹಾರಗಳನ್ನು ಬದಿಗಿಟ್ಟು ಕಾನೂನಿನ ಚೌಕಟ್ಟಿನೊಳಗೆ ಬರುವ ಕೆಲಸಕ್ಕೆ ಹೆಚ್ಚು ಗಮನಕೊಡಿ
  • ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳಿ
  • ದೇವಿಯನ್ನು ಆರಾಧಿಸಿ

ವೃಷಭ

publive-image

  • ಭವಿಷ್ಯದ ಯೋಜನೆಗಳನ್ನು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಾ ತುಂಬಾ ಆಕರ್ಷಿತರಾಗಬಹುದು
  • ವ್ಯರ್ಥವಾಗಿ ಸಮಯ ಹೋಗಲು ಬಿಡಬೇಡಿ
  • ನಿಮ್ಮ ಕೌಶಲ್ಯ ಹೊರಗಡೆ ಪ್ರಚಾರ ಆಗದೆ ಇರೋದಕ್ಕೆ ನಿಮ್ಮ ಆಲಸ್ಯ ಕಾರಣ
  • ವಿವಾದಿತ ವಿಷಯಗಳು ಇತ್ಯರ್ಥವಾಗುತ್ತದೆ
  • ಆಟಗಾರರಿಗೆ ಅದರಲ್ಲೂ ಕ್ರಿಕೆಟ್​ ಆಟಗಾರರಿಗೆ ತುಂಬಾ ಒಳ್ಳೆಯ ದಿನ
  • ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಿರಿ
  • ಹಿರಿಯರ ಆಶೀರ್ವಾದ ಪಡೆಯಿರಿ

ಮಿಥುನ

publive-image

  • ಅಹಂಕಾರವು ನಿಮಗೆ ಗೊತ್ತಿಲ್ಲದೆ ನಿಮ್ಮನ್ನು ಆವರಿಸಿ ಎಲ್ಲಾ ಕೆಲಸಗಳಿಗೆ ಅಡಚಣೆಯಾಗಬಹುದು
  • ಜಟಿಲ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗಬಹುದು
  • ನಿಮ್ಮ ಆರೋಗ್ಯದ ವಿಚಾರದಲ್ಲಿ ಗಮನ ಕೊಡಿ
  • ಕುಟುಂಬದಲ್ಲಿ ಉತ್ತಮ ಸಮಯ ಕಳೆಯುತ್ತೀರಿ
  • ನಿಮ್ಮ ಮಾರ್ಗದರ್ಶನ ಪಡೆಯುವ ಹಲವರ ಸಮಸ್ಯೆಗಳು ಬಗೆಹರಿಯುತ್ತವೆ
  • ಹಣಕಾಸಿನ ವಿಚಾರದಲ್ಲಿ ಏರುಪೇರಾಗಬಹುದು
  • ಯಾವುದಾದರು ವ್ಯವಹಾರದಿಂದ ಬರಬೇಕಾದ ಬಾಕಿ ಹಣ ಇಂದು ಕೈ ಸೇರಬಹುದು
  • ನಿಮ್ಮ ಪ್ರತಿಭೆ ಮತ್ತು ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಉತ್ತಮ ದಿನ
  • ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯನ್ನು ಪಾರ್ಥಿಸಿ

ಕಟಕ

publive-image

  • ಕಾನೂನಿನ ದೃಷ್ಟಿಯಿಂದ ಮಾನಸಿಕವಾಗಿ ಬೇಸತ್ತವರಿಗೆ ಸಣ್ಣದೊಂದು ತಿರುವು ಸಮಾಧಾನ ನೀಡಬಹುದು
  • ಗಂಟಲಿಗೆ ಸಂಬಂಧಿಸಿದ ಸೋಂಕು ತಗಲುವ ಸಾಧ್ಯತೆಯಿದೆ
  • ನಿಮ್ಮ ಕೋರ್ಟ್​ ಕೆಲಸಕ್ಕೆ ಇಂದು ವಿಶೇಷ ತಿರುವು ಸಿಗುವ ಸಾಧ್ಯತೆ
  • ವ್ಯಾಪಾರ ಮತ್ತು ವ್ಯವಹಾರ ದೃಷ್ಟಿಯಿಂದ ಪ್ರಯಾಣಕ್ಕೆ ಅನುಕೂಲಕರ ದಿನ
  • ಸಕಾಲಕ್ಕೆ ಸೂಕ್ತ ಔಷಧೋಪಚಾರ ಮಾಡಿಕೊಂಡರೆ ಒಳ್ಳೆಯದು
  • ಇಂದು ಪ್ರಭಾವಿ ವ್ಯಕ್ತಿಗಳು ಮನೆಗೆ ಬರಬಹುದು
  • ನೌಕರರು ತಮ್ಮ ಉದ್ಯೋಗವನ್ನು ಬದಲಾಯಿಸಲು ಈ ದಿನ ಶುಭವಾಗಿದೆ
  • ನಾಗದೇವತೆಗಳನ್ನು ಆರಾಧಿಸಿ

ಸಿಂಹ

publive-image

  • ವೈವಾಹಿಕ ಜೀವನದ ಒತ್ತಡ ದೂರವಾಗುವ ಸಾಧ್ಯತೆಯಿದೆ
  • ನೌಕರಿಯ ವಿಚಾರದಲ್ಲಿ ಹಲವಾರು ಸವಾಲುಗಳು ಎದುರಾಗಬಹುದು
  • ಈ ದಿನ ಪೂರ್ತಿ ಕುಟುಂಬದ ಸದಸ್ಯರೊಂದಿಗೆ ವಿರಸ ಮುಂದುವರೆಯುವ ಸಾಧ್ಯತೆ
  • ಬೇರೆಡೆ ಉದ್ಯೋಗ ಅವಕಾಶ ದೊರಕಬಹುದು
  • ಮಕ್ಕಳು ಕೊಟ್ಟ ಸಲಹೆಯನ್ನು ನಿರ್ಲಕ್ಷಿಸಬೇಡಿ
  • ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ಸಿಗಲಿದೆ
  • ಹಾಗೂ ಆಲೋಚನೆಯ ವಿಚಾರಗಳು ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ
  • ಮೃತ್ಯುಂಜಯನನ್ನು ಆರಾಧಿಸಿ

ಕನ್ಯಾ

publive-image

  • ಇಂದು ಪ್ರೇಮಿಗಳಿಗೆ ಉತ್ತಮ ದಿನ
  • ಮನಸ್ಸು ನಿಮ್ಮ ಹಿಡಿತಕ್ಕೆ ಸಿಗದೆ ಹಲವು ತೊಂದರೆಗಳಿಗೆ ನೀವೇ ಕಾರಣರಾಗಬಹುದು
  • ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಂಪೂರ್ಣ ಪ್ರಯತ್ನವಿರಲಿ
  • ವಿದೇಶ ಪ್ರಯಾಣವು ಕೂಡ ಸಂತೋಷ ತರಲಿದೆ
  • ನಿಮ್ಮ ವ್ಯಾಪಾರಿ ಬುದ್ಧಿಯಿಂದ ಹೊರಬಂದು ಮಾನಸಿಕ ಸಮಾಧಾನ ಪಡೆದುಕೊಳ್ಳಿ
  • ನಿಮ್ಮ ಹಠದ ಸ್ವಭಾವದಿಂದ ವೃತ್ತಿ, ನೌಕರಿ, ವಿದ್ಯಾಕ್ಷೇತ್ರದಲ್ಲಿ ಹಿನ್ನಡೆ ಸಾಧ್ಯತೆ
  • ಅಧಿಕಾರಿ ವರ್ಗದಿಂದ ಕೆಲವು ತೊಂದರೆಗಳಾಗಬಹುದು, ತಾತ್ಸಾರ ಮಾಡಬೇಡಿ
  • ಆದಿತ್ಯ ಹೃದಯ ಸ್ತೋತ್ರವನ್ನು ಪಠಣೆ ಮಾಡಿ

ತುಲಾ

publive-image

  • ಕುಟುಂಬದ ಸದಸ್ಯರಿಗಾಗಿ ಹಣವ್ಯಯ ಮಾಡುವ ಸಾಧ್ಯತೆ
  • ಕ್ಷೇತ್ರಗಳಿಗೆ ಹೋದಾಗ ನಿಮ್ಮ ಮನಸ್ಸು ಶುದ್ಧವಾಗಿರಲಿ
  • ಕೆಲಸದಲ್ಲಿ ಹಲವು ಅಡಚಣೆ ತೋರಬಹುದು
  • ಆಲಸ್ಯವಿಲ್ಲದ ಮನಸ್ಸಿನಲ್ಲಿ, ಭಯದಿಂದಲೂ ಮುಕ್ತರಾಗಿ ಉತ್ತಮವಾದ ವಾತಾವರಣ ಸೃಷ್ಟಿಸಿಕೊಳ್ಳಿ
  • ಯಾವುದೇ ಒಪ್ಪಂದಗಳಿಗೆ ಸಹಿ ಮಾಡುವ ಮುನ್ನ ಸ್ವಲ್ಪ ಆಲೋಚಿಸಿ ತೀರ್ಮಾನ ಮಾಡಿ
  • ಅಪರಿಚಿತರು ನಿಮ್ಮ ವಿಷಯದಲ್ಲಿ ತಲೆ ಹಾಕಿ ಮಾನಸಿಕ ಬೇಸರ ಉಂಟು ಮಾಡುವ ಸಾಧ್ಯತೆಯಿದೆ
  • ಕ್ಷೇತ್ರ ದೇವತೆಗೆ ಸೇವೆ ಮಾಡಿ

ವೃಶ್ಚಿಕ

publive-image

  • ನಿಮ್ಮ ಉಪಕಾರ ಪಡೆದವರು ಸದಾ ನಿಮ್ಮನ್ನು ಗೌರವಿಸುತ್ತಾರೆ
  • ಇಂದು ಆಲಸ್ಯವನ್ನು ದೂರಮಾಡಿ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ
  • ಸಂಬಂಧಿಕರು ಹಾಗೂ ಸ್ನೇಹಿತರೊಂದಿಗಿನ ನಿಮ್ಮ ಸಂಬಂಧವನ್ನು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬೇಡಿ
  • ಇಂದಿನ ದಿನಚರಿ ಬಹಳ ವ್ಯವಸ್ಥಿತವಾಗಿರುತ್ತದೆ ಅದನ್ನೇ ಪಾಲಿಸಿ ಯಶಸ್ಸು ಸಿಗುತ್ತದೆ
  • ಇಂದು ಕುಟುಂಬದವರ ಜೊತೆ ಸಮಯ ಕಳೆಯಿರಿ
  • ಕುಟುಂಬದವರು ಬೇಸರವನ್ನು ವ್ಯಕ್ತಪಡಿಸಬಹುದು
  • ತಾಪಸ ಮನ್ಯುವನ್ನು ಸ್ಮರಿಸಿ

ಧನಸ್ಸು

publive-image

  • ಮಧ್ಯಾಹ್ನದ ನಂತರ ಸಮಯ ಚೆನ್ನಾಗಿರುವುದಿಲ್ಲ ಎಚ್ಚರವಹಿಸಿ
  • ಅನಗತ್ಯ ಗೊಂದಲಗಳಲ್ಲಿ ಸಿಲುಕಬಹುದು, ಸ್ಥಿರ ಮನಸ್ಸಿನಿಂದ ಎಲ್ಲವನ್ನು ಎದುರಿಸಿ
  • ಕುಟುಂಬದವರ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ನಾನು ಎಂಬ ಅಹಂಕಾರ ನಿಮಗೆ ಹಿನ್ನಡೆ ಉಂಟು ಮಾಡಬಹುದು
  • ನಿಮ್ಮ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಬೇಡಿ
  • ಮಹಾವಿಷ್ಣುವನ್ನು ಸ್ಮರಿಸಿ

ಮಕರ

publive-image

  • ವ್ಯವಹಾರ ವಿಷಯವನ್ನು ಬದಿಗಿಟ್ಟು ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳಿ
  • ಕುಟುಂಬ ಸದಸ್ಯರ ನಿರೀಕ್ಷೆಗಳನ್ನು, ಆಸೆಗಳನ್ನು ಪೂರೈಸಲು ಇಂದು ಉತ್ತಮ ಅವಕಾಶ
  • ಈ ದಿನ ಲಾಭದ ಅವಕಾಶಗಳು ಹೆಚ್ಚಾಗುವ ಸಾಧ್ಯತೆಗಳಿವೆ
  • ಉದ್ಯೋಗದಲ್ಲಿ ನಿರೀಕ್ಷಿತ ಫಲತಾಂಶಗಳಿಂದ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ
  • ದೂರದ ಪ್ರಯಾಣಕ್ಕೆ ಅವಕಾಶ ಸಿಗುವ ಸೂಚನೆಯಿದೆ
  • ಕುಟುಂಬದ ಸದಸ್ಯರು, ಬಂಧುಗಳು ಸೌಹಾರ್ದಯುತವಾಗಿ ಮಾತುಕತೆ ನಡೆಸುವ ಉತ್ತಮ ವಾತಾವರಣವಿರುತ್ತದೆ
  • ಮೂಲದೇವರನ್ನು ಪ್ರಾರ್ಥಿಸಿ

ಕುಂಭ

publive-image

  • ಇಂದು ಮನೆಗೆ ಹೊಸ ಅತಿಥಿ ಬರುವ ಸಾಧ್ಯತೆಯಿದೆ
  • ಭೂಮಿ ಅಥವಾ ಜಮೀನಿಗೆ ಸಂಬಂಧಿಸಿದ ಹಳೆಯ ವಿವಾದಗಳಿಗೆ ಮುಕ್ತಿ ಸಿಗುವ ಸಾಧ್ಯತೆ
  • ವ್ಯವಹಾರದ ದೃಷ್ಟಿಯಿಂದ ಉ್ತತಮ ದಿನ, ಪ್ರಗತಿ ಸಾಧ್ಯತೆ
  • ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯದಿಂದಲೇ ಎಲ್ಲ ಸಮಸ್ಯೆ ನಿವಾರಣೆಯಾಗಲಿದೆ
  • ದೂರದಿಂದ ಬರುವ ಅತಿಥಿಗಳ ಬಗ್ಗೆ ಜಾಗ್ರತೆವಹಿಸಿ
  • ಆಂಜನೇಯ ಸ್ವಾಮಿಯ ಅಷ್ಟೋತ್ತರವನ್ನು ಪಠಿಸಿ

ಮೀನ 

publive-image

  • ಅನಗತ್ಯ ವಾದ-ವಿವಾದಗಳಲ್ಲಿ ಭಾಗಿಯಾಗಬಾರದು
  • ವೃಥಾ ಹಣದ ಖರ್ಚು, ಮಾನಸಿಕ ಸಮಾಧಾನವಿರುವುದಿಲ್ಲ
  • ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಕಿರಿಕಿರಿಯಾಗಬಹುದು
  • ಅವರನ್ನು ಸಮಾಧಾನ ಮಾಡಲು ನಿಮ್ಮ ಬಳಿ ಸಮಯವಿರುವುದಿಲ್ಲ
  • ನಿಮ್ಮ ಯೋಚನೆಯಲ್ಲಿಯೇ ನೀವು ಹೆಚ್ಚು ಮಗ್ನರಾಗಿರುತ್ತೀರಿ
  • ಐಕ್ಯಮತ್ಯ ಮಂತ್ರ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment