/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣಪಕ್ಷ, ಚತುರ್ದಶಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಚರ್ಮ ಸಂಬಂಧ ತೊಂದರೆಗಳಿದ್ದವರು ಇಂದು ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ
- ನಾಗಶಾಪ, ನಾಗದೋಷ, ಸರ್ಪ ಹತ್ಯೆ,ಹುತ್ತವನ್ನು ನಾಶ ಮಾಡಿದ ದೋಷ ಇರುವವರು
- ಸುಬ್ರಹ್ಮಣ್ಯನನ್ನ ಆರಾಧನೆ ಮಾಡಿ
- ಆಶ್ಲೇಷಾ ನಕ್ಷತ್ರದಲ್ಲಿ ಜನನ, ಜಾತಕದಲ್ಲಿ ಆಶ್ಲೇಷಾ ಬಲಿ, ನಾಗ ಪ್ರತಿಷ್ಠೆ, ಸರ್ಪ ಸಂಸ್ಕಾರ ಇತ್ಯಾದಿಗಳನ್ನು ಮಾಡಿಕೊಳ್ಳಬೇಕಾದ ಸೂಚನೆ ಇರುವವರು ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ
- ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ
ವೃಷಭ
- ಅದೃಷ್ಟದ ಕೊರತೆಯಿಂದ ಕೆಲವು ದುಷ್ಪರಿಣಾಮಗಳು ಬೀರಬಹುದು
- ದೈಹಿಕವಾಗಿ ತುಂಬಾ ಪ್ರಯಾಸವಾಗಲಿದೆ ವಿಶ್ರಾಂತಿ ಪಡೆಯಿರಿ
- ವಿನಾಕಾರಣ ಬೇರೆಯವರೊಂದಿಗೆ ವಾಗ್ವಾದ ಮಾಡಬೇಡಿ
- ತಾಳ್ಮೆ ಮುಖ್ಯ, ತಾಳ್ಮೆಯನ್ನು ಕಳೆದುಕೊಂಡಾಗ ಕೆಲಸಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ
- ವ್ಯಾವಹಾರಿಕ ದೋಷದಿಂದ ಆರ್ಥಿಕ ನಷ್ಟ ಅನುಭವಿಸುತ್ತೀರಿ
- ಪ್ರಯಾಣದ ಸಮಯದಲ್ಲಿ ಸಮಸ್ಯೆ ಉಂಟಾಗಲಿದೆ ಎಚ್ಚರವಹಿಸಿ
- ಶ್ರೀಕೃಷ್ಣನನ್ನು ಅರ್ಚನೆ ಮಾಡಿ
ಮಿಥುನ
- ಆಧ್ಯಾತ್ಮಿಕ ವಿಚಾರದಲ್ಲಿ ಹೆಚ್ಚಿನ ಮನಸ್ಸನ್ನು ಕೊಡುತ್ತೀರಿ
- ಕುಟುಂಬ ಸದಸ್ಯರು ಮತ್ತು ಬಂಧುಗಳ ಜೊತೆ ಹಲವು ವಿಷಯಗಳನ್ನು ಚರ್ಚೆ ಮಾಡುತ್ತೀರಿ
- ಕಾರ್ಯಕ್ಷೇತ್ರದಲ್ಲಿ ಉನ್ನತ ಸ್ಥಾನ ದೊರೆಯಲಿದೆ
- ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆ ಇರುತ್ತದೆ
- ಮಾತು ಮಾಧುರ್ಯವಾಗಿರುವುದರಿಂದ ಎಲ್ಲರನ್ನೂ ನಿಮ್ಮ ಕಡೆ ಆಕರ್ಷಣೆ ಮಾಡುವ ಶಕ್ತಿ ನಿಮಗಿದೆ
- ಆಸಕ್ತಿ, ಉತ್ಸಾಹಗಳು ಹೆಚ್ಚಾಗಿ ದಾಂಪತ್ಯದಲ್ಲಿ ಬೇಸರವಾಗಲಿದೆ
- ಧ್ಯಾನಕ್ಕೆ ಶರಣು ಹೋಗಿ
ಕಟಕ
- ಮನೆಯಲ್ಲಿ ಉತ್ಸಾಹದ ವಾತಾವರಣವಿರುತ್ತದೆ
- ಉದ್ಯಮಿಗಳು ಮಾತ್ರ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬಾರದು
- ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ, ಸಭೆ ನಡೆಯಬಹುದು
- ಶಿಸ್ತು ಬದ್ಧವಾದ ನಡವಳಿಕೆಯಿಂದ ಜಯವಾಗಲಿದೆ
- ಸ್ನೇಹಿತರ ಬೆಂಬಲವಿದೆ ಆದರೆ ನಿಮ್ಮ ತೀರ್ಮಾನ ಸರಿ ಇರಬೇಕು
- ವೆಚ್ಚಗಳನ್ನು ನಿಯಂತ್ರಿಸಲು ಬೇರೆ ಬೇರೆ ಕೆಲಸಗಳನ್ನು ಮಾಡಬೇಕಾಗುತ್ತದೆ
- ಮಹಾವಿಷ್ಣುವನ್ನು ಪ್ರಾರ್ಥಿಸಿ
ಸಿಂಹ
- ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಉತ್ತಮ ದಿನ
- ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಲು ಅವಕಾಶವಿದೆ
- ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಸುಸಮಯ
- ಉದ್ದೇಶ ಒಳಿತಾಗಿಟ್ಟುಕೊಂಡು ಪ್ರಯತ್ನ ಪಟ್ಟರೆ ಖಂಡಿತ ಶುಭದಿನ
- ಇಂದು ಆರೋಗ್ಯ ಸುಧಾರಣೆಯಾಗಲಿದೆ
- ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವುದನ್ನು ನಿಲ್ಲಿಸಬೇಕಾಗುತ್ತದೆ
- ಸ್ವಲ್ಪ ದೂರ ಪ್ರಯಾಣದ ಯೋಗವಿದೆ
- ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ
ಕನ್ಯಾ
- ಬೇರೆಯವರಿಗೆ ಸಹಾಯ ಮಾಡಲು ಮುಂದಾಗುತ್ತೀರಿ
- ಈ ದಿನ ಸಾಲ ಮಾಡುವ ಪರಿಸ್ಥಿತಿ ಅಥವಾ ಹಣ ನಷ್ಟವಾಗಬಹುದು ಎಚ್ಚರ
- ನಿಮ್ಮ ಸ್ವಭಾವ ವರ್ತನೆಯಿಂದ ಸಂಬಂಧಿಕರಿಗೆ ಕೋಪ ಬರಬಹುದು
- ಬೇರೆಯವರೊಂದಿಗೆ ಜಗಳ ಮಾಡುವ ಬದಲು ವಿಷಯ ಅರ್ಥಮಾಡಿಕೊಳ್ಳಬೇಕು
- ಗುಪ್ತಶತ್ರುಗಳು ನಿಮಗೆ ತೊಂದರೆ ಮಾಡಲು ಕಾಯುತ್ತಿರುತ್ತಾರೆ ಜಾಗ್ರತೆ
- ಕೆಲವರು ನಿಮಗೆ ನಂಬಿಕೆ ದ್ರೋಹ ಮಾಡಬಹುದು ಹುಷಾರಾಗಿರಿ
- ಗಾಯತ್ರಿ ದೇವಿಯನ್ನು ಉಪಾಸನೆ ಮಾಡಿ
ತುಲಾ
- ವಿದ್ಯಾರ್ಥಿಗಳಿಗೆ ಈ ದಿನ ಫಲಪ್ರದಾಯಕವಾಗಿರುತ್ತದೆ
- ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶವಿದೆ
- ಸಣ್ಣ-ಪುಟ್ಟ ಕನಸುಗಳು ನನಸಾಗುವ ಸಮಯ
- ಉದ್ಯೋಗದಲ್ಲಿ ಪ್ರಗತಿ ಏನೋ ಸಾಧಿಸಿದ ಆತ್ಮತೃಪ್ತಿ ಸಿಗಲಿದೆ
- ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ
- ತಾಯಿ,ಅಕ್ಕ ತಂಗಿ,ಹೆಂಡತಿ ಯಾರಿಗಾದರೂ ಅನಾರೋಗ್ಯ ಕಾಡುವುದರಿಂದ ಬೇಸರದ ದಿನ
- ಧನ್ವಂತರಿ ದೇವತೆಯನ್ನು ಪ್ರಾರ್ಥಿಸಿ
ವೃಶ್ಚಿಕ
- ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡುವವರಿಗೆ ಈ ದಿನ ಜನಪ್ರಿಯತೆ ಸಿಗುವಂತ ದಿವಸ
- ಇಂದು ಮಕ್ಕಳೊಂದಿಗೆ ಕಾಲ ಕಳೆಯುತ್ತೀರಿ
- ಕಲೆಗಳನ್ನು ನೋಡಿ ಆನಂದಿಸುತ್ತೀರಿ
- ಇಂದು ಕುಟುಂಬ ಸಾಮರಸ್ಯ ಚೆನ್ನಾಗಿರುತ್ತದೆ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ
- ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ಬೇಸರವಾಗಲಿದೆ
- ನವಗ್ರಹರನ್ನು ಪ್ರಾರ್ಥಿಸಿ
ಧನಸ್ಸು
- ಅಧೀನ ಉದ್ಯೋಗಸ್ಥರು ನಿಮ್ಮೊಂದಿಗೆ ಸಂತೋಷದಿಂದ ಇರುತ್ತಾರೆ
- ನಿಮ್ಮ ಧೈರ್ಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ
- ನಿಮ್ಮ ಆರ್ಥಿಕ ಸ್ಥಿತಿ ಅನುಕೂಲವಾಗುತ್ತದೆ
- ಸಣ್ಣ-ಪುಟ್ಟ ಸಮಸ್ಯೆಗಳು ದೂರವಾಗುವ ದಿನ
- ವಿದೇಶದಿಂದ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆಗಳಿವೆ
- ಮನೆಯಲ್ಲಿ ಚಿಕ್ಕಮಕ್ಕಳಿಗೆ ತೊಂದರೆಯಾಗಲಿದೆ ಜಾಗ್ರತೆವಹಿಸಿ
- ಗಣಪತಿಯ ಅನುಗ್ರಹ ಪಡೆದುಕೊಳ್ಳಿ
ಮಕರ
- ಹೊಸ ಹೊಸ ವಿಚಾರ ತಿಳಿಯಲು ಉತ್ಸುಕರಾಗಿರುತ್ತೀರಿ
- ನೀವು ಉಪಯೋಗಿಸುವ ವಾಹನದಲ್ಲಿ ಸಮಸ್ಯೆ ಕಾಣಬಹುದು ಎಚ್ಚರ ಇರಲಿ
- ಹಣದ ಕೊರತೆಯಿಂದ ನೀವು ಮಾಡಬೇಕಾದ ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ
- ಕಾನೂನಿನ ವಿಷಯಗಳಲ್ಲಿ ಬಹಳ ಗೊಂದಲವಿರುತ್ತದೆ
- ಅನುಭವಿಗಳ ಭೇಟಿ ಮತ್ತು ಸಲಹೆ ಸಿಕ್ಕಿದರೂ ಕೂಡ ಪ್ರಯೋಜನವಿಲ್ಲ
- ಸರಿಯಾದ ವ್ಯವಸ್ಥೆ ಮಾಡಿಕೊಂಡು ಕಾರ್ಯಪ್ರವುತ್ತರಾದರೆ ಕೆಲಸದಲ್ಲಿ ಜಯಶೀಲರಾಗುತ್ತೀರಿ
- ದುರ್ಗಾರಾಧನೆ ಮಾಡಿ
ಕುಂಭ
- ಇಂದು ಬಹಳ ಉತ್ತಮವಾದ ದಿನ
- ವ್ಯಾಪಾರ, ವ್ಯವಹಾರ, ಅಧ್ಯಯನ ಸಂಬಂಧಿಸಿದ ವಿಚಾರಗಳಿಗೆ ಶುಭದಿನ
- ಹಿಂದೆ ಮಾಡಿದ ವ್ಯಾಪಾರ, ವ್ಯವಹಾರದ ನಷ್ಟಗಳಿದ್ದರೆ ಈ ದಿನ ಸರಿದೂಗಿಸಬಹುದು
- ಸಾಹಿತ್ಯ - ತತ್ವಶಾಸ್ತ್ರಗಳ ಕಡೆ ಮನಸ್ಸು ಹರಿಸಬಹುದು
- ಆತ್ಮೀಯರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶಗಳಿವೆ
- ಸರ್ಕಾರಿ ನೌಕರರಿಗೆ ಒತ್ತಡ ಕಡಿಮೆ ಆದರೆ ಆಲಸ್ಯ ಬೇಡ
- ರೋಗಿಗಳಿಗೆ ಹಣ್ಣನ್ನು ನೀಡಿ
ಮೀನ
- ಈ ದಿನ ಕೆಲಸದ ಒತ್ತಡದಿಂದ ಪ್ರಾರಂಭವಾಗುವ ಸಾಧ್ಯತೆ
- ದಿನಪೂರ್ತಿ ಕಷ್ಟಪಟ್ಟು ಕೆಲಸ ಮಾಡಿ, ಸಂಜೆ ವೇಳೆಗೆ ವಿಶ್ರಾಂತಿ ಸಿಗಬಹುದು
- ಇಂದು ಮಾನಸಿಕವಾಗಿ ತುಂಬಾ ತೊಳಲಾಟ, ನೋವು ಅನುಭವಿಸುವ ಸಾಧ್ಯತೆ
- ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸುವ ಸಾಧ್ಯತೆ
- ಕುಟುಂಬದ ಕೆಲಸಗಳಿಗೆ ಹೆಚ್ಚು ಒತ್ತಡಗಳು ಬರುವ ಸಾಧ್ಯತೆಯಿದೆ
- ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸಬಹುದು
- ಆತ್ಮವಿಶ್ವಾಸ ಹೆಚ್ಚುತ್ತದೆ ಆದರೆ ತುಂಬಾ ತಾಳ್ಮೆ ಇರಲಿ
- ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ