/newsfirstlive-kannada/media/post_attachments/wp-content/uploads/2024/09/RINKU_SINGH_1.jpg)
ಇಂಡೋ-ಇಂಗ್ಲೆಂಡ್ 3ನೇ ಚುಟುಕು ಕದನಕ್ಕೆ ವೇದಿಕೆ ಸಜ್ಜಾಗಿದೆ. ಮೊದಲ ಎರಡು ಮ್ಯಾಚ್ ಗೆದ್ದ ಟೀಮ್ ಇಂಡಿಯಾ, ಹ್ಯಾಟ್ರಿಕ್ ಗೆಲುವಿನ ಕನಸು ಕಾಣ್ತಿದ್ರೆ, ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಸೋಲಿನ ಸೇಡಿಗಾಗಿ ಕಾಯ್ತಿದೆ.
ಟೀಮ್ ಇಂಡಿಯಾ ಗೆಲುವಿನ ಕನಸು ಕಾಣ್ತಿದ್ರೆ, ಇತ್ತ ಸತತ 2 ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿರುವ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್, ಟೀಮ್ ಇಂಡಿಯಾದ ನಾಗಲೋಟಕ್ಕೆ ಬ್ರೇಕ್ ಹಾಕಲು ರಣತಂತ್ರ ರೂಪಿಸಿದೆ. ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ಹಠದಲ್ಲಿದೆ. ಸರಣಿಯನ್ನ ಜೀವಂತವಾಗಿರಿಸಿಕೊಳ್ಳೋ ಯತ್ನದಲ್ಲಿದೆ.
ಸೂರ್ಯ, ಸಂಜು ಫಾರ್ಮ್ನದ್ದೇ ಚಿಂತೆ..!
ಕಳೆದ 2 ಪಂದ್ಯಗಳಲ್ಲಿ ಗೆದ್ದರೂ, ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ವೈಫಲ್ಯ ಚಿಂತೆಗೀಡು ಮಾಡಿದೆ. ಇವತ್ತು ಈ ಇಬ್ಬರು ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದ್ದೇ ಇದೆ. ಕ್ಯಾಪ್ಟನ್ ಸೂರ್ಯ, ಮೇಲೆ ಇವತ್ತು ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಸ್ಟೇಡಿಯಂನಲ್ಲಿ ಈ ಹಿಂದಿನ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ್ರು. ಇವತ್ತೂ ಅದೇ ವೈಭವ ಮರುಕಳಿಸುತ್ತಾ ಅನ್ನೋದು ಫ್ಯಾನ್ಸ್ ಮನದ ಕುತೂಹಲವಾಗಿದೆ.
ಇದನ್ನೂ ಓದಿ: ‘ಲವ್ ಯೂ, ಗಿವ್ ಯೂ..’ ಭವ್ಯ ಗೌಡಗೆ Love ಪ್ರಪೋಸ್ ಮಾಡಿದ ಬಗ್ಗೆ ವಿಕ್ಕಿ ಹೇಳಿದ್ದೇನು?
ಮಿಡಲ್ ಆರ್ಡರ್ಗೆ ಅಗ್ನಿಪರೀಕ್ಷೆ..!
ಟೀಮ್ ಇಂಡಿಯಾದ ಮಿಡಲ್ ಅರ್ಡರ್ಗೆ ರಾಜ್ಕೋಟ್ ಟಿ20 ನಿಜಕ್ಕೂ ಅಗ್ನಿಪರೀಕ್ಷೆಯ ಕಣ. ಕಳೆದ 2 ಪಂದ್ಯಗಳಲ್ಲಿ ಸೂರ್ಯ, ಹಾರ್ದಿಕ್ ಪಾಂಡ್ಯ, ಧೃವ್ ಜುರೇಲ್, ಅಕ್ಷರ್ ಪಟೇಲ್, ವಾಷಿಗ್ಟಂನ್ ಸುಂದರ್ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಇವತ್ತಿನ ರಾಜ್ಕೋಟ್ ಕದನದಲ್ಲಿ ಟೀಮ್ ಇಂಡಿಯಾದ ಮಿಡಲ್ ಆರ್ಡರ್ ಜವಾಬ್ದಾರಿಯುತ ಆಟವಾಡಬೇಕಿದೆ.
ಜುರೇಲ್ಗೆ ಮತ್ತೊಂದು ಚಾನ್ಸ್..? ದುಬೆ ಕತೆ ಏನು..?
ರಿಂಕು ಸಿಂಗ್ ಇವತ್ತಿನ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಹೀಗಾಗಿ ರಿಂಕು ಸ್ಥಾನದಲ್ಲಿ ಧ್ರುವ್ ಜರೇಲ್ಗೆ ಮತ್ತೊಂದು ಚಾನ್ಸ್ ಸಿಗೋ ಸಾದ್ಯತೆಯಿದೆ. ಜುರೇಲ್ಗೆ ಪೇಸ್ ಆಲ್ರೌಂಡರ್ ಶಿವಂ ದುಬೆ ಫೈಟ್ ಎದುರಾಗಲಿದೆ. ಬಿಗ್ ಹಿಟ್ಟರ್ ಆಗಿರುವ ದುಬೆ ಮ್ಯಾಚ್ ಫಿನಿಷ್ ಮಾಡೋದ್ರಲ್ಲಿ ಪಂಟರ್ ಕೂಡ ಆಗಿದ್ದಾರೆ. ಹೀಗಾಗಿ ಶಿವಂ ದುಬೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಸ್ಪಿನ್ ಟು ವಿನ್ ಫಾರ್ಮುಲಾ?
ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿ ವಶ ಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿರುವ ಸೂರ್ಯ, ರಾಜಕೋಟ್ನಲ್ಲಿ ಮತ್ತೆ ಸ್ಪಿನ್ ಟು ವಿನ್ ಫಾರ್ಮುಲಕ್ಕೆ ಅಂಟಿಕೊಳ್ಳುವ ನಿರೀಕ್ಷೆ ಇದೆ. ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಲೆಗ್ ಸ್ಪಿನ್ನರ್ ರವಿ ಬಿಷ್ನೋಯಿ ಜೊತೆ ವಾಷಿಗ್ಟಂನ್ ಸುಂದರ್ ಮತ್ತೆ ಇಂಗ್ಲೆಂಡ್ ಲಯನ್ಸ್ ಬೇಟೆಗಿಳಿಯಲಿದ್ದಾರೆ. ರಾಜ್ಕೋಟ್ನ ಪಿಚ್ ರಿಪೋರ್ಟ್ ಬೇರೆಯದ್ದೇ ಕಥೆ ಹೇಳ್ತಿದೆ.
ಇದನ್ನೂ ಓದಿ: ಕೈಲಾಸ ಮಾನಸ ಸರೋವರ ಯಾತ್ರೆ ಇನ್ನೂ ಸುಲಭ; ವಿಮಾನ ಹಾರಾಟಕ್ಕೆ ಒಪ್ಪಿಕೊಂಡ ಚೀನಾ-ಭಾರತ
ರಾಜ್ಕೋಟ್ ಪಿಚ್ ಹೇಗಿದೆ..?
ರಾಜ್ಕೋಟ್ನ ಪಿಚ್ ಪ್ಲಾಟ್ ಟ್ರ್ಯಾಕ್ ಆಗಿದ್ದು, ಇದು ಬ್ಯಾಟ್ಸ್ಮನ್ಗಳ ಪಾಲಿಗೆ ಸ್ವರ್ಗವಾಗಿದೆ. ಹೀಗಾಗಿ ಬಿಗ್ ಟೋಟಲ್ ಕಲೆ ಹಾಕುವುದು ಫಿಕ್ಸ್. ಪೇಸ್ ಹಾಗೂ ಬೌನ್ಸಿಯಾಗಿರುವ ಈ ಪಿಚ್ನಲ್ಲಿ ವೇರಿಯೇಷನ್ಸ್ ಪೇಸರ್ಗಳಿಗೆ ಬಿಗ್ ಅಡ್ವಾಂಟೇಜ್ ಆಗಿದೆ. ಪಂದ್ಯ ಸಾಗುತ್ತಾ ಸ್ಪಿನ್ನರ್ಗಳಿಗೂ ನೆರವಾಗಲಿದೆ. ಕಿರಿದಾದ ಬೌಂಡರಿ ಹೊಂದಿದ್ದು, ಟಾಸ್ ಗೆದ್ದವರು ಬ್ಯಾಟಿಂಗ್ ಆಯ್ದುಕೊಂಡು ಬಿಗ್ ಸ್ಕೋರ್ ಕಲೆಹಾಕುವ ಲೆಕ್ಕಾಚಾರ ಮಾಡೋದು ಫಿಕ್ಸ್.
ಬೆಂಚ್ ಕಾದಿದ್ದ ವೇಗಿ ಮೊಹಮ್ಮದ್ ಶಮಿ ಪೇಸರ್ಗಳಿಗೆ ಅನಕೂಲವಾಗೋ ಈ ಪಿಚ್ನಲ್ಲಿ ಕಣಕ್ಕಿಳಿಯೋ ಸಾಧ್ಯತೆ ಇದೆ. ವಿನ್ನಿಂಗ್ ಕಾಂಬಿನೇಷನ್ ಬದಲಾವಣೆಗೆ ಮ್ಯಾನೇಜ್ಮೆಂಟ್ ಕೈ ಹಾಕುತ್ತಾ ಅನ್ನೋದೆ ಪ್ರಶ್ನೆ. ಟೀಮ್ ಇಂಡಿಯಾ ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ರೆ, ಇಂಗ್ಲೆಂಡ್ ಡು ಆರ್ ಡೈ ಮ್ಯಾಚ್ನಲ್ಲಿ ಗೆದ್ದು ಸರಣಿ ಜೀವಂತವಾಗಿಸಿಕೊಳ್ಳುವ ಕನಸು ಕಾಣ್ತಿದೆ. ಯಾರ್ ಗೆಲ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ: Singer Manjamma: ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್