/newsfirstlive-kannada/media/post_attachments/wp-content/uploads/2025/06/KARUN-NAIR-3.jpg)
ಲಾರ್ಡ್ಸ್ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯವನ್ನ ಸೋತಿರುವ ಟೀಮ್ ಇಂಡಿಯಾ ಪಾಲಿಗೆ ಇಂದಿನಿಂದ ಆರಂಭವಾಗೋ 4ನೇ ಟೆಸ್ಟ್ ಪಂದ್ಯ ಡು ಆರ್ ಡೈ ಆಗಿದೆ. ಸರಣಿ ಜೀವಂತವಾಗಿಸಿರಿಕೊಳ್ಳಬೇಕಂದ್ರೆ ಗೆಲುವು ಅನಿವಾರ್ಯವಾಗಿದೆ. ಶತಾಯಗತಾಯ ಗೆಲ್ಲಲೇಬೇಕಾದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾವನ್ನ ಸೆಲೆಕ್ಷನ್ ತಲೆನೋವು ಕಾಡ್ತಿದೆ. ಪಂದ್ಯದ ಆರಂಭಕ್ಕೆ ಕೆಲವೇ ಗಂಟೆಗಳಿವೆ. ಆದರೂ ಗೊಂದಲ ಬಗೆಹರಿದಿಲ್ಲ.
ಕರುಣ್ ನಾಯರ್ ಔಟ್.. ಸುದರ್ಶನ್ಗೆ ಚಾನ್ಸ್?
8 ವರ್ಷಗಳ ಬಳಿಕ ಕಮ್ಬ್ಯಾಕ್ ಮಾಡಿದ ಕರುಣ್ ನಾಯರ್ ಕಮಾಲ್ ಮಾಡುವಲ್ಲಿ ವಿಫಲರಾಗಿದ್ದಾರೆ. 6 ಇನ್ನಿಂಗ್ಸ್ಗಳಿಂದ ಕೇವಲ 131 ರನ್ಗಳಿಸಿ ನಂಬಿಕೆಯನ್ನ ಹುಸಿಗೊಳಿಸಿದ್ದಾರೆ. ಆಂಗ್ಲರ ನಾಡಲ್ಲಿ ರನ್ಗಳಿಕೆಗೆ ಸ್ಟ್ರಗಲ್ ಮಾಡ್ತಿರೋ ಕರುಣ್, 4ನೇ ಟೆಸ್ಟ್ನಲ್ಲಿ ಬೆಂಚ್ ಕಾಯೋ ಸಾಧ್ಯತೆ ದಟ್ಟವಾಗಿದೆ. ಕರುಣ್ ಬದಲಾಗಿ ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್ ಇಬ್ಬರಲ್ಲಿ ಯಾರನ್ನ ಕಣಕ್ಕಿಳಿಸೋದು ಅನ್ನೋದು ಸದ್ಯ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಕ್ರೀಡಾಪಟುಗಳಿಗೆ ಗುಡ್ನ್ಯೂಸ್; ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದರೆ ಕೋಟಿ ಕೋಟಿ ಹಣ.. ಸರ್ಕಾರಿ ಉದ್ಯೋಗ
ಪ್ಲೇಯಿಂಗ್-XIಗೆ ದೃವ್ ಜುರೇಲ್ ಎಂಟ್ರಿ?
ಲಾರ್ಡ್ಸ್ ಟೆಸ್ಟ್ನಲ್ಲಿ ಬೆರಳಿನ ಗಾಯಕ್ಕೆ ತುತ್ತಾದ ರಿಷಭ್ ಪಂತ್ ಇಂಜುರಿ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. 5 ದಿನಗಳ ಕಾಲ ಕೀಪಿಂಗ್ ಮಾಡುವಷ್ಟು ಪಂತ್ ಫಿಟ್ ಆಗಿಲ್ಲ ಅನ್ನೋ ಮಾಹಿತಿಯಿದೆ. ಹೀಗಾಗಿ ದೃವ್ ಜುರೇಲ್ ಕೀಪರ್ ಕೋಟಾದಲ್ಲಿ ಆಡುವ ಸಾಧ್ಯತೆಯಿದೆ. ಜುರೇಲ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ರೆ, ಪಂತ್ನ ಸ್ಪೆಷಲಿಸ್ಟ್ ಬ್ಯಾಟರ್ ಆಗಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಸೋ ಚರ್ಚೆಗಳು ನಡೆದಿವೆ. ಫೈನಲ್ ಡಿಶಿಷನ್ನ ಇಂದು ಮ್ಯಾನೇಜ್ಮೆಂಟ್ ತೆಗೆದುಕೊಳ್ಳಲಿದೆ.
ನಿತೀಶ್ ರೆಡ್ಡಿ ಸ್ಥಾನದಲ್ಲಿ ಯಾರಿಗೆ ಚಾನ್ಸ್.?
ಗಾಯಗೊಂಡಿರುವ ನಿತೀಶ್ ರೆಡ್ಡಿ ಟೆಸ್ಟ್ ಸರಣಿಯಿಂದಲೇ ರೂಲ್ಡ್ ಔಟ್ ಆಗಿದ್ದಾರೆ. ನಿತೀಶ್ ಸ್ಥಾನದಲ್ಲಿ ಯಾರಿಗೆ ಚಾನ್ಸ್ ನೀಡೋದು ಅನ್ನೋದು ಸದ್ಯ ಗೊಂದಲ ಮೂಡಿಸಿದೆ. ಆಲ್ರೌಂಡರ್ ಶಾರ್ದೂಲ್ ಠಾಕೂರ್ ಇಂಪ್ರೆಸ್ ಮಾಡುವಲ್ಲಿ ಫೇಲ್ ಆಗಿದ್ರೆ ಹೊಸದಾಗಿ ಎಂಟ್ರಿ ಕೊಟ್ಟಿರೋ ಅನ್ಯುಲ್ ಕಾಂಬೋಜ್ ನೆಟ್ಸ್ನಲ್ಲಿ ಇಂಪ್ರೆಸ್ ಮಾಡಿದ್ದಾರೆ. ಇದ್ರ ಹೊರತಾಗಿ ನಿತೀಶ್ ರೆಡ್ಡಿ ಸ್ಥಾನ ಸ್ಪೆಷಲಿಸ್ಟ್ ಬ್ಯಾಟರ್ನ ಕಣಕ್ಕಿಳಿಸೋ ಬಗ್ಗೆ ಮಾತುಕತೆ ನಡೆದಿದೆ.
ಆಕಾಶ್ ದೀಪ್ ಅಲಭ್ಯರಾದ್ರೆ 3ನೇ ವೇಗಿ ಯಾರು?
ಇಂಜುರಿಗೆ ತುತ್ತಾಗಿರೋ ಆಕಾಶ್ದೀಪ್ ಫುಲ್ ಫಿಟ್ ಆಗಿಲ್ಲ. ಆಡ್ತಾರಾ? ಇಲ್ವಾ? ಅನ್ನೋದ್ರ ಬಗ್ಗೆ ಕ್ಲಾರಿಟಿ ಇಲ್ಲ. ಒಂದು ವೇಳೆ ಆಕಾಶ್ದೀಪ್ ಅಲಭ್ಯರಾದ್ರೆ, 3ನೇ ವೇಗಿಯಾಗಿ ಯಾರು ಆಡಲಿದ್ದಾರೆ ಎಂಬ ಪ್ರಶ್ನೆಯಿದೆ. ಪ್ರಸಿದ್ಧ್ ಕೃಷ್ಣ ಕಮ್ಬ್ಯಾಕ್ ಮಾಡ್ತಾರಾ? ಅಥವಾ ಅನ್ಶುಲ್ ಕಾಂಬೋಜ್ ಚಾನ್ಸ್ ಗಿಟ್ಟಿಸಿಕೊಳ್ತಾರಾ? ಅನ್ನೋದು ಸದ್ಯ ಕುತೂಹಲ ಮೂಡಿಸಿದೆ. ಕಾಂಬೋಜ್ ಇಂಡಿಯಾ ಎ ಪರ ಮಿಂಚಿದ್ರೆ, ಪ್ರಸಿದ್ಧ್ಗೆ ಅನುಭವದ ಬಲವಿದೆ.
ಇದನ್ನೂ ಓದಿ: ವೀರಶೈವ ಲಿಂಗಾಯತ ಪಂಚ ಪೀಠಾಧೀಶರ ಸಮ್ಮೇಳನ; 12 ನಿರ್ಣಯ ಘೋಷಿಸಿದ ಶ್ರೀಗಳು
ಕಾದ ಕುಲ್ದೀಪ್ ಯಾದವ್ಗೆ ಚಾನ್ಸ್ ಸಿಗುತ್ತಾ.?
ಓಲ್ಡ್ ಟ್ರಾಫರ್ಡ್ನ ಪಿಚ್ ಸ್ವಲ್ಪ ಸ್ಲೋ ಇರಲಿದೆ ಎನ್ನಲಾಗ್ತಿದೆ. ಹಾಗೇನಾದ್ರೂ ಆದ್ರೆ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಕೈಚಳಕ ಮಾಡಬಲ್ಲರು. ಕುಲ್ದೀಪ್ಗೆ ಸ್ಥಾನ ಬಿಟ್ಟು ಕೊಡೋದ್ಯಾರು ಅನ್ನೋದು ಪ್ರಶ್ನೆ? ಜಡೇಜಾ ಸಾಲಿಡ್ ಬ್ಯಾಟಿಂಗ್ನಿಂದ ಮಿಂಚಿದ್ರೆ, ವಾಷಿಂಗ್ಟನ್ ಸುಂದರ್ ಬಾಲ್ ಹಿಡಿದು ಮ್ಯಾಜಿಕ್ ಮಾಡಿದ್ದಾರೆ. ವಾಸ್ತವ ಹೀಗಿರೋವಾಗ ಕುಲ್ದೀಪ್ಗೆ ಸ್ಥಾನ ನೀಡಬೇಕಾ? ಸ್ಥಾನ ನೀಡೋದಾದ್ರೆ ಸುಂದರ್-ಜಡೇಜಾ ಇಬ್ಬರಲ್ಲಿ ಯಾರನ್ನ ಕೂರಿಸೋದು? ಎಂಬ ಬಗ್ಗೆ ಚರ್ಚೆ ನಡೆದಿದೆ.
ಪ್ಲೇಯಿಂಗ್ ಇಲೆವೆನ್ ಅಯ್ಕೆಗೆ ಸಂಭಂದಿಸಿದಂತೆ ಟೀಮ್ ಮ್ಯಾನೇಜ್ಮೆಂಟ್ ವಲಯದಲ್ಲಿ ಸಾಕಷ್ಟು ಚರ್ಚೆಗಳಂತೂ ನಡೆದಿವೆ. ಫೈನಲ್ ತಂಡ ಫಿಕ್ಸ್ ಆಗಿಲ್ಲ. ಇಂದು ಪಿಚ್ ನೋಡಿ ಕ್ಯಾಪ್ಟನ್ ಗಿಲ್, ಕೋಚ್ ಗಂಭೀರ್ ರನ್ಭೂಮಿಗೆ ಯಾವೆಲ್ಲಾ ಕಲಿಗಳಿನ್ನ ಕಣಕ್ಕಿಳಿಸ್ತಾರೆ ಕಾದು ನೋಡೋಣ.
ಇದನ್ನೂ ಓದಿ:ಆಯೋಗದ ವರದಿಯಿಂದ ಬಿಗ್ ಶಾಕ್.. ಮತದಾರರ ಪಟ್ಟಿಯಿಂದ 52 ಲಕ್ಷ ವೋಟರ್ಸ್ ಔಟ್
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ