/newsfirstlive-kannada/media/post_attachments/wp-content/uploads/2025/03/RCB_VS_CSK-1.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ಕಿಂಗ್ಸ್ ಹೈವೋಲ್ಟೇಜ್ ಪಂದ್ಯಕ್ಕೆ ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಐಪಿಎಲ್ನ ಬದ್ಧವೈರಿಗಳ ಫೈಟ್ ನೋಡೋಕೆ, ಕ್ರಿಕೆಟ್ ಜಗತ್ತೇ ಕಾಯ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಬ್ಯಾಟಲ್ ಫೀಲ್ಡ್ನಲ್ಲಿ ನಡೆಯಲಿರೋ ಸೌತ್ ಇಂಡಿಯನ್ ಡರ್ಬಿ ಅಭಿಮಾನಿಗಳ ಕುತೂಹಲ ಕೆರಳಿಸಿದೆ.
10 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು ಪ್ಲೇ ಆಫ್ ಎಂಟ್ರಿಗೆ ತುದಿಗಾಲಲ್ಲಿ ನಿಂತಿರೋ ಆರ್ಸಿಬಿ. ಕೇವಲ 2 ಪಂದ್ಯ ಗೆದ್ದು ಟೂರ್ನಿಯಿಂದ ಹೊರ ಬಿದ್ದಿರೋ ಚೆನ್ನೈ ಸೂಪರ್ ಕಿಂಗ್ಸ್. ಈ ಸೀಸನ್ನಲ್ಲಿ ಡಿಫರೆಂಟ್ ಆಟವಾಡಿರೂ ಎರಡೂ ತಂಡಗಳ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ - ಸಿಎಸ್ಕೆ ಮುಖಾಮುಖಿಯಾಗ್ತಿದ್ದು, ಕ್ರಿಕೆಟ್ ವಲಯದಲ್ಲಿ ಹೈವೋಲ್ಟೆಜ್ ಕದನದ ಫೀವರ್ ಜೋರಾಗಿದೆ.
ಇದನ್ನೂ ಓದಿ: RCB vs CSK ಹೈವೋಲ್ಟೇಜ್ ಪಂದ್ಯ ನಡೆಯುತ್ತಾ.. ವೆದರ್ ರಿಪೋರ್ಟ್ ಏನ್ ಹೇಳುತ್ತೆ?
ಚಿನ್ನಸ್ವಾಮಿ ಅಂಗಳದಲ್ಲಿ ಚೆನ್ನೈ-ಆರ್ಸಿಬಿ ಸಮರ
ಈ ಸೀಸನ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಜೋಷ್ ಇದೆ. ಆರ್ಸಿಬಿ ತಂಡಕ್ಕೆ ಎದುರಾಳಿಗಳನ್ನ ಉಡಾಯಿಸೋ ತಾಖತ್ತಿದೆ. ತವರಿನ ಹೊರಗೆ ಅಜೇಯ ಓಟ ನಡೆಸ್ತಿರೋ ಆರ್ಸಿಬಿ, ತವರಿನಲ್ಲಿ ಸರಣಿ ಸೋಲಿಗೆ ಫುಲ್ ಸ್ಟಾಫ್ ಇಟ್ಟಿದೆ. ರಾಜಸ್ಥಾನ್ ಎದುರು ಹೋಮ್ಗ್ರೌಂಡ್ನಲ್ಲಿ ಮೊದಲ ಜಯ ಸಾಧಿಸಿರೋ ಬೋಲ್ಡ್ ಆರ್ಮಿಯಲ್ಲಿ ಗೆಲ್ಲೋ ಉತ್ಸಾಹ ಹೆಚ್ಚಿದೆ. ಹ್ಯಾಟ್ರಿಕ್ ಪಂದ್ಯ ಗೆದ್ದಿರುವ ಆತ್ಮವಿಶ್ವಾಸದಲ್ಲಿ ಇಂದು ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ಕಣಕ್ಕಿಳಿತಿರೋ ಆರ್ಸಿಬಿ ಗೆಲುವಿಗೆ ಪಣತೊಟ್ಟಿದೆ.
ಪ್ಲೇಆಫ್ ಎಂಟ್ರಿಯ ತವಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫುಲ್ ಕಾನ್ಫಿಡೆಂಟ್ ಆಗಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರೂ ವಿಭಾಗದಲ್ಲಿ ಫಸ್ಟ್ ಕ್ಲಾಸ್ ಪರ್ಫಾಮೆನ್ಸ್ ನೀಡ್ತಿದೆ. ಪಂದ್ಯದಿಂದ ಪಂದ್ಯಕ್ಕೆ ತಂಡದಲ್ಲಿ ಹೊಸ ಹೊಸ ಆಟಗಾರರು ಮ್ಯಾಚ್ ವಿನ್ನರ್ಗಳಾಗಿ ಹೊರ ಹೊಮ್ಮುತ್ತಿದ್ದಾರೆ. ಕೊಹ್ಲಿ, ಫಿಲ್ ಸಾಲ್ಟ್, ಪಡಿಕ್ಕಲ್, ಹೇಜಲ್ವುಡ್, ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ಕನ್ಸಿಸ್ಟೆನ್ಸಿ ಕಾಯ್ದುಕೊಂಡಿದ್ದಾರೆ. ಕಳೆದ ಮೂರೂ ಪಂದ್ಯ ಗೆದ್ದು ಬೀಗಿರೋ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡೋ ತವಕದಲ್ಲಿದೆ.
ಕಳೆದುಕೊಳ್ಳೋದು ಏನೂ ಇಲ್ಲ..
ಈ ಸೀಸನ್ನಲ್ಲಿ ಅತ್ಯಂತ ಹೀನಾಯ ಪರ್ಫಾಮೆನ್ಸ್ ನೀಡಿರೋ ಚೆನ್ನೈ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಮೊದಲ ತಂಡವಾಗಿ ಸೀಸನ್ನಿಂದ ಔಟ್ ಆಗಿರೋ ಚೆನ್ನೈಗೆ ಈಗ ಕಳೆದುಕೊಳ್ಳೋದು ಏನೂ ಇಲ್ಲ. ಆರ್ಸಿಬಿಗೆ ಡ್ಯಾಮೇಜ್ ಮಾಡೋ ಅವಕಾಶವಿದೆ. ಕಳೆದ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ-ಸಿಎಸ್ಕೆ ಇದೇ ಚಿನ್ನಸ್ವಾಮಿ ಮೈದಾನದಲ್ಲಿ ಮೇ 18ರಂದು ಮುಖಾಮುಖಿಯಾಗಿದ್ವು. ಪ್ಲೇ ಆಫ್ ಎಂಟ್ರಿಗೆ ಉಭಯ ತಂಡಗಳು ಗೆಲ್ಲಲೇಬೇಕಾದ ಪಂದ್ಯ ಅದು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ಆರ್ಸಿಬಿ 218 ರನ್ಗಳ ಬಿಗ್ ಸ್ಕೋರ್ ಕಲೆ ಹಾಕಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಸಿಎಸ್ಕೆ 27 ರನ್ ಅಂತರದಲ್ಲಿ ಸೋಲುಂಡಿತ್ತು. ಚೆನ್ನೈ ತಂಡವನ್ನ ಹೊರಗಾಕಿ ಪ್ಲೇ ಆಫ್ಗೆ ರಾಯಲ್ ಎಂಟ್ರಿ ಕೊಟ್ಟಿತ್ತು.
ಇದನ್ನೂ ಓದಿ: ಹೈದ್ರಾಬಾದ್ ಪ್ಲೇ ಆಫ್ ಕನಸು ಭಗ್ನ..? ಬೃಹತ್ ಟಾರ್ಗೆಟ್ ನೀಡಿದ್ದ ಗಿಲ್ ಪಡೆಗೆ ಗೆಲುವು
ಆರ್ಸಿಬಿ ಅಭಿಮಾನಿಗಳಂತೂ ಯುದ್ಧ ಗೆದ್ದಂತೆ ಅಂದು ಸಂಭ್ರಮಿಸಿದ್ರು. RCBಯ ಗೆಲುವು, ಆಟಗಾರರ ಸಂಭ್ರಮ, ಅಭಿಮಾನಿಗಳ ಸೆಲಬ್ರೇಷನ್ ಈ ಎಲ್ಲವೂ ಇಂದು ಸಿಎಸ್ಕೆ ಪಾಳಯದಲ್ಲಿ ಕಿಚ್ಚು ಹತ್ತಿಸಿದೆ. ಅಂದಾದ ಅವಮಾನಕ್ಕೆ ಇಂದು ಸೇಡು ತೀರಿಸಿಕೊಳ್ಳೋ ಲೆಕ್ಕಾಚಾರ ಚೆನ್ನೈ ಕ್ಯಾಂಪ್ನಲ್ಲಿದೆ.
ಹೈವೋಲ್ಟೆಜ್ ಕದನಕ್ಕೆ ಕಾಡ್ತಿದೆ ಮಳೆ ಭೀತಿ
ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆಯ ಕಾಟ ಜೋರಾಗಿದೆ. ನಿನ್ನೆಯಂತೂ ಸಿಡಿಲು-ಗುಡುಗು ಸಹಿತ ಭಾರೀ ಮಳೆಯಾಗಿದೆ. ಇಂದೂ ಕೂಡ ಮಳೆಯ ಸುರಿಯೋ ಸಾಧ್ಯತೆಯಿದ್ದು, ಹೈವೋಲ್ಟೆಜ್ ಕದನದ ಮೇಲೆ ಕಾರ್ಮೋಡ ಆವರಿಸಿದೆ. ಒಂದೆಡೆ ಚೆನ್ನೈ ಸೇಡು ತೀರಿಸಿಕೊಳ್ಳೋ ತವಕದಲ್ಲಿದ್ರೆ, ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿಕೊಡೋಕೆ ತುದಿಗಾಲಲ್ಲಿ ನಿಂತಿದೆ. ಅಭಿಮಾನಿಗಳ ವಲಯದಲ್ಲಂತೂ ಪಂದ್ಯದ ಮೇಲೆ ಕ್ರೇಜ್ ಹೆಚ್ಚಾಗಿದೆ. ಒಂದು ರಣರೋಚಕ ಪಂದ್ಯದ ನಿರೀಕ್ಷೆ ಕ್ರಿಕೆಟ್ ಲೋಕದಲ್ಲಿದೆ.
ಇದನ್ನೂ ಓದಿ: ಪ್ರಸಿದ್ಧ ಕೃಷ್ಣ ಅದ್ಭುತ ಸ್ಪೆಲ್.. ಗೆಲುವಿನೊಂದಿಗೆ SRH ಮನೆಗೆ ಕಳುಹಿಸಿದ ಗಿಲ್ ಪಡೆ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್