/newsfirstlive-kannada/media/post_attachments/wp-content/uploads/2025/04/RCB-VS-PBKS.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ಪ್ರತಿಷ್ಟೆಯ ಪಂದ್ಯವಾಗಿದೆ. ಶತಾಯ ಗತಾಯ ಆರ್ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಲೇಬೇಕಿದೆ. ಈಗಾಗಲೇ ಚಿನ್ನಸ್ವಾಮಿಯಲ್ಲಿ ಸತತ ಎರಡು ಪಂದ್ಯ ಸೋತಿರುವ ಆರ್ಸಿಬಿ, ತವರು ಅಭಿಮಾನಿಗಳ ಮುಂದೆ ಹ್ಯಾಟ್ರಿಕ್ ಸೋಲಿನಿಂದ ಪಾರಾಗಬೇಕಿದೆ. ತವರಿನಲ್ಲಿ ಬೆಂಗಳೂರು ತಂಡಕ್ಕೆ ಲಕ್ ಕೂಡ ಖುಲಾಯಿಸಬೇಕಿದೆ.
ಆರ್ಸಿಬಿ ಪಾಲಿಗೆ ಟಾಸ್ ಪ್ರಮುಖ
ಗುಜರಾತ್ ಮತ್ತು ಡೆಲ್ಲಿ ವಿರುದ್ಧ ಟಾಸ್ ಸೋತ ಆರ್ಸಿಬಿ ಮೊದಲು ಬ್ಯಾಟಿಂಗ್ ನಡೆಸಿತು. ಆ ಎರಡೂ ಪಂದ್ಯಗಳಲ್ಲಿ ಆರ್ಸಿಬಿ, 170 ಸ್ಕೋರ್ ದಾಟಲಿಲ್ಲ. ಹಾಗಾಗಿ ಇಂದು ಬೆಂಗಳೂರು ತಂಡದ ನಾಯಕ ಪಾಟೀದಾರ್, ಮೊದಲು ಟಾಸ್ ಗೆಲ್ಲಬೇಕಿದೆ. ಟಾಸ್ ಗೆದ್ರೆ ಮ್ಯಾಚ್ ಗೆದ್ದಂಗೇ. ಯಾಕೆಂದರೆ ಚೇಸಿಂಗ್ನಲ್ಲಿ ಆರ್ಸಿಬಿ ಬಲಿಷ್ಟವಾಗಿದೆ.
ಪಡಿಕ್ಕಲ್ ‘ಅಟ್ಟರ್ ಫ್ಲಾಪ್’
ಚಿನ್ನಸ್ವಾಮಿಯಲ್ಲಿ ಲೋಕಲ್ ಬಾಯ್ ಪಡಿಕ್ಕಲ್ ಫ್ಲಾಪ್ ಶೋ ನೀಡಿರೋದು ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಗುಜರಾತ್ ವಿರುದ್ಧ 12 ರನ್, ಡೆಲ್ಲಿ ವಿರುದ್ಧ ಕೇವಲ 1 ರನ್ಗಳಿಸಿದ್ದ ಪಡಿಕ್ಕಲ್ ಬ್ಯಾಟಿಂಗ್ನಲ್ಲಿ ತಂಡಕ್ಕೆ ಕೈಕೊಟ್ರು. ಇವತ್ತು ಪಡಿಕ್ಕಲ್ ಸಿಡಿದೇಳಲೇಬೇಕು. ಇಲ್ದಿದ್ರೆ ತವರಿನಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ.
ಇದನ್ನೂ ಓದಿ: ವಿಸ್ಫೋಟಕ ಬ್ಯಾಟರ್ಗಳಿದ್ದರೂ ಅಲ್ಪ ಮೊತ್ತದ ಟಾರ್ಗೆಟ್ ಕೊಟ್ಟ SRH.. ಎಷ್ಟು ರನ್?
ತವರಿನಲ್ಲಿ ಪಾಟೀದಾರ್ ಪರದಾಟ
ಆರ್ಸಿಬಿ ನಾಯಕ AWAY ಮ್ಯಾಚ್ಗಳಲ್ಲಿ ಬ್ಯಾಟಿಂಗ್ನಲ್ಲಿ ಮಿಂಚಿದ್ದಾರೆ. ತವರಿನಲ್ಲಿ ಮಾತ್ರ ಪಟಿದಾರ್ ಪರದಾಡಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ 12 ಎಸೆತಗಳಲ್ಲಿ 12 ರನ್ಗಳಿಸಿದ್ರೆ ಕ್ಯಾಪಿಟಲ್ಸ್ ವಿರುದ್ಧ 23 ಎಸೆತಗಳಲ್ಲಿ 25 ರನ್ ಮಾತ್ರಗಳಿಸಿದ್ದಾರೆ. ಹೋಂ ಗ್ರೌಂಡ್ನಲ್ಲಿ ಪಾಟೀದಾರ್ ಪರದಾಡಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಬೇಕಿಲ್ಲ.
ಟಿಮ್ ಡೇವಿಡ್ ಸ್ಫೋಟ
ಆರ್ಸಿಬಿಗೆ ಸಮಾಧಾನಕರ ವಿಷ್ಯ ಅಂದ್ರೆ ಅದು ಟಿಮ್ ಡೇವಿಡ್ರ ಬ್ಯಾಟಿಂಗ್. ಬೆಂಗಳೂರಿನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಟಿಮ್ ಎದುರಾಳಿ ಬೌಲರ್ಗಳನ್ನ ಚಿಂದಿ ಉಡಾಯಿಸಿದ್ದಾರೆ. ಟೈಟನ್ಸ್ ವಿರುದ್ಧ 178ರ ಸ್ಟ್ರೈಕ್ರೇಟ್ನಲ್ಲಿ 32 ರನ್ ಮತ್ತು ಡೆಲ್ಲಿ ವಿರುದ್ಧ 185ರ ಸ್ಟ್ರೈಕ್ರೇಟ್ನಲ್ಲಿ 37 ರನ್ಗಳಿಸಿರುವ ಟಿಮ್ ಡೇವಿಡ್ ಆರ್ಸಿಬಿಯ ಗ್ರೇಟ್ ಫಿನಿಷರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೇ ರೆಡ್ ಆರ್ಮಿ ತಂಡದ ಬಲ ಹೆಚ್ಚಿಸಿರೋದು.
ಇದನ್ನೂ ಓದಿ: ಬಲಿಷ್ಠ ಹೈದ್ರಾಬಾದ್ ಟೀಮ್ಗೆ ಮುಂಬೈ ಶಾಕ್.. ಬಿಗ್ ಬ್ಯಾಟರ್ಗಳಿದ್ರೂ ಸೋತ SRH
ಭುವಿ ಮತ್ತು ದಯಾಳ್ ಹೋಂ ಪಿಚ್ನಲ್ಲಿ ಡೀಸೆಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಹೇಜಲ್ವುಡ್, ತವರಿನಲ್ಲಿ ಜೋಶ್ ಕಳೆದುಕೊಂಡವರಂತೆ ಬೌಲಿಂಗ್ ಮಾಡ್ತಿದ್ದಾರೆ. ಗುಜರಾತ್ ವಿರುದ್ಧ 3.5 ಓವರ್ ಬೌಲ್ ಮಾಡಿದ್ದ ಹೇಜಲ್ವುಡ್ 11.21ರ ಎಕಾನಮಿಯಲ್ಲಿ 43 ರನ್ ನೀಡಿದ್ರು. ಡೆಲ್ಲಿ ವಿರುದ್ಧ 3 ಓವರ್ ಬೌಲ್ ಮಾಡಿ13.33ರ ಎಕಾನಮಿಯಲ್ಲಿ 40 ರನ್ ನೀಡಿದ್ರು. ಚಿನ್ನಸ್ವಾಮಿಯಲ್ಲಿ ಸೂಪರ್ ಸ್ಪೆಲ್ ಹಾಕೋದೇ ಹೇಜಲ್ವುಡ್ ಮುಂದಿರೋ ಬಿಗ್ ಚಾಲೆಂಜ್. ಒಟ್ಟಿನಲ್ಲಿ ಪಂಜಾಬ್ ಕಿಂಗ್ಸ್, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲಿ ಎಕ್ಸಲೆಂಟ್ ತಂಡವಾಗಿ ಕಾಣ್ತಿದೆ.
ಇದನ್ನೂ ಓದಿ: ಅಭಿಷೇಕ್ ಶರ್ಮಾ ಪ್ಯಾಂಟ್ ಚೆಕ್ ಮಾಡಿದ ಸೂರ್ಯಕುಮಾರ್.. ಪಂದ್ಯದ ಮಧ್ಯೆ ಏನಾಯಿತು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್