ಇಂದು ರೈತರು ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬವಾಗಿದೆ
ಮಣ್ಣೆತ್ತಿನ ಅಮಾವಾಸ್ಯೆ ದಿನ ಏನೆಲ್ಲಾ ಕಾರ್ಯ ಮಾಡ್ಬಾರ್ದು
ಇಂದು ಎತ್ತುಗಳನ್ನು ಪೂಜಿಸೋದ್ಯಾಕೆ? ವಿಶೇಷತೆ ಏನು?
ಇಂದು ಮಣ್ಣೆತ್ತಿನ ಅಮಾವಾಸ್ಯೆ. ಈ ಅಮವಾಸ್ಯೆಯನ್ನು ಜೇಷ್ಠ, ಹಲಕಾರಿಣಿ, ದರ್ಶ ಅಮಾವಾಸ್ಯೆ ಎಂದು ನಾನಾ ಹೆಸರುಗಳಿಂದ ಕರೆಯುತ್ತಾರೆ. ಅಂದಹಾಗೆಯೇ ಪ್ರತಿ ವರ್ಷ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದಂದು ಅಮಾವಾಸ್ಯೆ ಆಚರಿಸಲಾಗುತ್ತದೆ. ಅದರಂತೆ ಇಂದು ಭಾನುವಾರ ಜೂನ್ 18ರಂದು ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಗುತ್ತದೆ.
ಮಣ್ಣೆತ್ತಿನ ಅಮಾವಾಸ್ಯೆ ಎಂದರೇನು?
ಮಣ್ಣೆತ್ತಿನ ಅಮಾವಾಸ್ಯೆ ಭಾರೀ ವಿಶೇಷವಾಗಿದೆ. ಹಲವರು ಇಂದು ಸಮುದ್ರ ಸ್ನಾನ ಅಥವಾ ನದಿಯಲ್ಲಿ ಸ್ನಾನ ಮಾಡುತ್ತಾರೆ. ಈ ಅಮವಾಸ್ಯೆ ವಿಶೇಷ ಎಂದರೆ ಪೂರ್ವಜರಿಗೆ ನೈವೇದ್ಯ ದಾನ ಮಾಡುವುದಾಗಿದೆ. ಒಂದು ವೇಳೆ ದಾನ ಮಾಡಿದರೆ ಅವರು ಸಂತುಷ್ಟರಾಗುತ್ತಾರೆ ಮತ್ತು ಪಿತೃ ದೋಷದಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ.
ಮಣ್ಣು+ಎತ್ತು= ಮಣ್ಣೆತ್ತು
ಮಣ್ಣಿನಲ್ಲಿ ಎತ್ತುಗಳ ರೂಪವನ್ನು ನಿರ್ಮಿಸಿ ಪೂಜಿಸುವ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ. ರೈತರು ತಮ್ಮ ಜಮೀನಿನಲ್ಲಿ ದುಡಿಯುವ ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬ ಇದಾಗಿದೆ.
ಅಂದಹಾಗೆಯೇ, ಇಂದು ರೈತರು ತಮ್ಮ ಜಮೀನಿಗೆ ತೆರಳಿ ಅಲ್ಲಿರುವ ಹದ ಮಣ್ಣು ತೆಗೆದುಕೊಂಡು ಜೋಡಿ ಎತ್ತುಗಳನ್ನು ತಯಾರಿಸುತ್ತಾರೆ. ಬಳಿಕ ಅದನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜಿಸುತ್ತಾರೆ. ಅಷ್ಟು ಮಾತ್ರವಲ್ಲದೆ, ಕೆಲವು ನೈವೇದ್ಯ ತಯಾರಿಸುತ್ತಾರೆ. ಅಕ್ಕಿ ಪಾಯಸ, ಕಡುಬು ಸೇರಿ ಕೆಲವು ಆಹಾರಗಳನ್ನು ತಯಾರಿಸುತ್ತಾರೆ. ಬಳಿಕ ದೇವರ ಬಳಿ ತಮ್ಮ ಎತ್ತುಗಳಿಗೆ ಯಾವುದೇ ರೋಗ, ತೊಂದರೆ ಬಾರದಂತೆ ಪ್ರಾರ್ಥಿಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದು ರೈತರು ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬವಾಗಿದೆ
ಮಣ್ಣೆತ್ತಿನ ಅಮಾವಾಸ್ಯೆ ದಿನ ಏನೆಲ್ಲಾ ಕಾರ್ಯ ಮಾಡ್ಬಾರ್ದು
ಇಂದು ಎತ್ತುಗಳನ್ನು ಪೂಜಿಸೋದ್ಯಾಕೆ? ವಿಶೇಷತೆ ಏನು?
ಇಂದು ಮಣ್ಣೆತ್ತಿನ ಅಮಾವಾಸ್ಯೆ. ಈ ಅಮವಾಸ್ಯೆಯನ್ನು ಜೇಷ್ಠ, ಹಲಕಾರಿಣಿ, ದರ್ಶ ಅಮಾವಾಸ್ಯೆ ಎಂದು ನಾನಾ ಹೆಸರುಗಳಿಂದ ಕರೆಯುತ್ತಾರೆ. ಅಂದಹಾಗೆಯೇ ಪ್ರತಿ ವರ್ಷ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದಂದು ಅಮಾವಾಸ್ಯೆ ಆಚರಿಸಲಾಗುತ್ತದೆ. ಅದರಂತೆ ಇಂದು ಭಾನುವಾರ ಜೂನ್ 18ರಂದು ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಗುತ್ತದೆ.
ಮಣ್ಣೆತ್ತಿನ ಅಮಾವಾಸ್ಯೆ ಎಂದರೇನು?
ಮಣ್ಣೆತ್ತಿನ ಅಮಾವಾಸ್ಯೆ ಭಾರೀ ವಿಶೇಷವಾಗಿದೆ. ಹಲವರು ಇಂದು ಸಮುದ್ರ ಸ್ನಾನ ಅಥವಾ ನದಿಯಲ್ಲಿ ಸ್ನಾನ ಮಾಡುತ್ತಾರೆ. ಈ ಅಮವಾಸ್ಯೆ ವಿಶೇಷ ಎಂದರೆ ಪೂರ್ವಜರಿಗೆ ನೈವೇದ್ಯ ದಾನ ಮಾಡುವುದಾಗಿದೆ. ಒಂದು ವೇಳೆ ದಾನ ಮಾಡಿದರೆ ಅವರು ಸಂತುಷ್ಟರಾಗುತ್ತಾರೆ ಮತ್ತು ಪಿತೃ ದೋಷದಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ.
ಮಣ್ಣು+ಎತ್ತು= ಮಣ್ಣೆತ್ತು
ಮಣ್ಣಿನಲ್ಲಿ ಎತ್ತುಗಳ ರೂಪವನ್ನು ನಿರ್ಮಿಸಿ ಪೂಜಿಸುವ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ. ರೈತರು ತಮ್ಮ ಜಮೀನಿನಲ್ಲಿ ದುಡಿಯುವ ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬ ಇದಾಗಿದೆ.
ಅಂದಹಾಗೆಯೇ, ಇಂದು ರೈತರು ತಮ್ಮ ಜಮೀನಿಗೆ ತೆರಳಿ ಅಲ್ಲಿರುವ ಹದ ಮಣ್ಣು ತೆಗೆದುಕೊಂಡು ಜೋಡಿ ಎತ್ತುಗಳನ್ನು ತಯಾರಿಸುತ್ತಾರೆ. ಬಳಿಕ ಅದನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜಿಸುತ್ತಾರೆ. ಅಷ್ಟು ಮಾತ್ರವಲ್ಲದೆ, ಕೆಲವು ನೈವೇದ್ಯ ತಯಾರಿಸುತ್ತಾರೆ. ಅಕ್ಕಿ ಪಾಯಸ, ಕಡುಬು ಸೇರಿ ಕೆಲವು ಆಹಾರಗಳನ್ನು ತಯಾರಿಸುತ್ತಾರೆ. ಬಳಿಕ ದೇವರ ಬಳಿ ತಮ್ಮ ಎತ್ತುಗಳಿಗೆ ಯಾವುದೇ ರೋಗ, ತೊಂದರೆ ಬಾರದಂತೆ ಪ್ರಾರ್ಥಿಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ